ಸುತ್ತೂರು ಶ್ರೀಗಳ ಎದುರಲ್ಲಿ ಅಶೋಕ್-ಸೋಮಣ್ಣ ಟಾಕ್ ಫೈಟ್!

Mar 17, 2019, 1:29 PM IST

ಬೆಂಗಳೂರು(ಮಾ.17): ಸುತ್ತೂರು ಶ್ರೀಗಳ ಎದುರಲ್ಲೇ ಬಿಜೆಪಿ ನಾಯಕರಾದ ಆರ್ ಅಶೋಕ್ ಮತ್ತು ವಿ ಸೋಮಣ್ಣ ನಡುವೆ ಟಾಕ್ ಫೈಟ್ ನಡೆದಿದೆ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ತೇಜಸ್ವಿನಿ ಅನಂತ ಕುಮಾರ್ ಶ್ರೀಗಳ ಆಶೀರ್ವಾದ ಪಡೆಯಲು ಮಠಕ್ಕೆ ಬಂದಿದ್ದರು. ಈ ವೇಳೆ ಶ್ರೀಗಳ ಮುಂದೆ ಹೆಗ್ಗಳಿಕೆ ಪಡೆಯಲು ಮುಂದಾದ ಸೋಮಣ್ಣ, ಈ ಬಾರಿ ಚಕ್ರವರ್ತಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆರ್. ಅಶೋಕ್, ಎಲ್ಲರೂ ನಮ್ಮನ್ನು ಯೂಸ್ ಮಾಡ್ಕೋತಾರೆ ಆದರೆ ಕೆಟ್ಟದ್ದಾದರೆ ನಮ್ಮ ತಲೆಗೆ ಕಟ್ತಾರೆ ಎಂದು ಅಸಮಾಧಾನ ಹೊರಹಾಕಿದರು. ಇದರಿಂದ ಪೇಚಿಗೆ ಸಿಲುಕಿದ ಸೋಮಣ್ಣ, ಅಶೋಕ್ ಅವರ ಹೃದಯ ತುಂಬ ಒಳ್ಳೆಯದು ಎಂದು ಸಮಾಧಾನಪಡಿಸಲು ಯತ್ನಿಸಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..