ಧಾರವಾಡದಲ್ಲಿ ಕೈಪಡೆ ಹರಸಾಹಸ ; ಮುಂದುವರಿದ ಟಿಕೆಟ್‌ ರಹಸ್ಯ

Apr 2, 2019, 7:23 PM IST

ದಾವಣಗೆರೆ ಹಾಗೂ ಧಾರವಾಡ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಆಖೈರುಗೊಳಿಸಲು ಕಾಂಗ್ರೆಸ್‌ ಹೈಕಮಾಂಡ್‌ ಸೋಮವಾರ ರಾಜ್ಯ ನಾಯಕರ ವೈಯಕ್ತಿಕ ಅಭಿಪ್ರಾಯವನ್ನು ಸೋಮವಾರ ಸಂಗ್ರಹಿಸಿದೆ. ಮಂಗಳವಾರ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ಇದೆಯೆನ್ನಲಾಗಿತ್ತು, ಆದರೆ ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜಪ್ಪ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದ್ದು, ಧಾರವಾಡದಲ್ಲಿ ಪ್ರೊ| ಐ.ಜಿ. ಸನದಿ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಮಧ್ಯೆ ಇನ್ನೂ ಪೈಪೋಟಿ ನಡೆದಿದೆ.