ಹಬ್ಬಕ್ಕೆ ಊರಿಗೆ ಬಂದವನು ಮಟಾಷ್..! ಭೀಮಾ ತೀರದಲ್ಲಿ ಮತ್ತೆ ಚಿಮ್ಮಿತು ಹಸಿ ಹಸಿ ರಕ್ತ..!

ಹಬ್ಬಕ್ಕೆ ಊರಿಗೆ ಬಂದವನು ಮಟಾಷ್..! ಭೀಮಾ ತೀರದಲ್ಲಿ ಮತ್ತೆ ಚಿಮ್ಮಿತು ಹಸಿ ಹಸಿ ರಕ್ತ..!

Published : Oct 24, 2023, 02:36 PM IST

ನಟ್ಟ ನಡು ಊರಿನಲ್ಲಿ ಕುರಿ ಕತ್ತರಿಸಿದಂತೆ ಕತ್ತರಿಸಿದ ಹಂತಕರು
ಆ ಕೊಲೆ ಹಿಂದಿತ್ತು ವರ್ಷದ ಹಿಂದೆ ನಡೆದ ಮರ್ಡರ್ ಮಿಸ್ಟ್ರಿ
ಹೆಣ ಹಾಕಿ ಜೈಲಿಗೆ ಹೋದವನಿಗಾಗಿ 1 ವರ್ಷ ಕಾದಿದ್ದರು..!

ಭೀಮಾ ತೀರವೇ ಹಾಗೆ. ಇಲ್ಲಿ ಒಂದು ನೆತ್ತರಿನ ಕಲೆ ಮಾಸುವ ಮುನ್ನವೇ ಹಸಿ ಹಸಿ ರಕ್ತ ಚಿಮ್ಮಿಬಿಡುತ್ತೆ. ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು.. ರಕ್ತಕ್ಕೆ ರಕ್ತದಿಂದಲೇ ಉತ್ತರ. ಈ ರಿವೇಂಜ್ ಭೀಮಾ ತೀರದಲ್ಲಿ ಕಾಮನ್. ಇತ್ತಿಚಿಗಷ್ಟೇ ಗ್ರಾಮ ಪಂಚಾಯತಿ ಅಧ್ಯಕ್ಷನೊಬ್ಬನ ಬರ್ಬರ ಹತ್ಯೆ ಮಾಸುವ ಮುನ್ನವೇ ಇಲ್ಲಿ ಇನ್ನೊಂದು ಹೆಣ ಬಿದ್ದಿದೆ. ಈ ಬಾರಿ ಹಂತಕರು ಯುವಕನೊಬ್ಬನನ್ನು ನಟ್ಟ ನಡು ಊರಿನಲ್ಲಿ ಕುರಿ ಕಡಿದಂತೆ ಕತ್ತರಿಸಿ ಹಾಕಿದ್ದಾರೆ. ಕಳೆದ ವಾರವಷ್ಟೇ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಪ್ರಭಾವಿ ಕಾಂಗ್ರೆಸ್(Congress) ಮುಖಂಡರೊಬ್ಬರನ್ನು ಚೌಡಾಪೂರದ ಬಸ್ ನಿಲ್ದಾಣದ ಬಳಿ ಹಾಡು ಹಗಲೇ ಇದೇ ರೀತಿ ಕೊಚ್ಚಿ ಕೊಚ್ಚಿ ಕೊಲೆ(Murder) ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಅದೇ ಥರದ ಇನ್ನೊಂದು ಘಟನೆ ಅದೇ ಭೀಮಾ ತೀರದ ಸಿದನೂರು ಗ್ರಾಮದಲ್ಲಿ ನಡೆದಿದೆ. ಈ ಬಾರಿ ಕೊಲೆ ನಡೆದಿದ್ದು ಕಲಬುರಗಿ(Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ, ಸಿದನೂರು ಎನ್ನುವ ಪುಟ್ಟ ಗ್ರಾಮದಲ್ಲಿ. ಅದೇ ಗ್ರಾಮದ ಯುವಕ ಬಲಭೀಮ ಸಗರ್ ಎನ್ನುವ 23 ವರ್ಷದ ಯುವಕ ದಸರಾ ಹಬ್ಬದ ನಿಮಿತ್ಯ ಸಿದನೂರು ಗ್ರಾಮಕ್ಕೆ  ಆಗಮಿಸಿದ್ದಾನೆ. ಕಲಬುರಗಿ ನಗರದಲ್ಲಿ ತನ್ನ ಅಕ್ಕಳ ಮನೆಯಲ್ಲಿ ವಾಸವಿರುವ ಈ ಯುವಕ, ಹಬ್ಬದ ನಿಮಿತ್ಯ ಎರಡು ದಿನಗಳ ಹಿಂದಷ್ಟೇ ಊರಿಗೆ ಆಗಮಿಸಿದ್ದಾನೆ. ತನ್ನ ಕುಟುಂಬದ ಜೊತೆಗೆ ಹಯಬ್ಬ ಆಚರಿಸುವ ಕನಸ್ಸು ಕಂಡಿದ್ದ ಆತ ಹಬ್ಬಕ್ಕೂ ಮೊನ್ನವೇ ಮಸಣ ಸೇರಿದ್ದಾನೆ. ನಿನ್ನೆ ಅಂದ್ರೆ ಅಕ್ಟೋಬರ್ 20ನೇ ತಾರಿಖು ರಾತ್ರಿ 9 ಗಂಟೆಯ ಸುಮಾರಿಗೆ ಊರಿನ ಬೀದಿಯಲ್ಲಿ ನಾಲ್ವರು ಈತನಿಗೆ ಸುತ್ತುವರಿದು, ತಲವಾರ ಮತ್ತು ಕೊಡಲಿಯಿಂದ ಮನಬಂದಂತೆ ಕೊಚ್ಚಿ ಹಾಕಿದ್ದಾರೆ. ಹಂತಕರ ಆಕ್ರೋಶಕ್ಕೆ ಈತನ ಕತ್ತು ದೇಹದಿಂದ ಬೇರ್ಪಟ್ಟು ಹೋಗಿದೆ. 

ಇದನ್ನೂ ವೀಕ್ಷಿಸಿ:  ಒಂದು ಸೇನೆ.. ಒಂದೇ ಟಾರ್ಗೆಟ್.. ಕಿಲ್ ಹಮಾಸ್..? ಏನದು NILI ಹುಲಿಗಳ ರಹಸ್ಯ..?

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more