Suvarna FIR; ಕುಳಿತು ಒಂದು ಮಾತನಾಡಿದ್ದರೆ ಕೊಲೆಯೇ ಆಗ್ತಿರಲಿಲ್ಲ.. ಗದಗದ ಘೋರ ಕತೆ

Nov 7, 2021, 3:58 PM IST

ಗದಗ(ನ. 07)  ಎರಡು ಕುಟುಂಬ ಕೃಷಿಯಲ್ಲಿ (Agriculture) ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಇದ್ದವರು. ಇವರ ಈ ಬಾಂಧವ್ಯದ ಮೇಲೆ  ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಅಣ್ಣ-ತಮ್ಮಂದಿರಂತೆ ಇದ್ದವರು ಬದ್ಧ ವೈರಿಗಳಾದರು. ಕೊಲೆ ಮಾಡುವ ಹಂತಕ್ಕೂ ಹೋದರು.

ಮಾಯಾಂಗನೆ ಮೆಸೇಜ್ ಗೆ ಕಳೆದುಕೊಂಡಿದ್ದು ಐದು ಲಕ್ಷ ರೂ!

ಗದಗ (Gadag) ಜಿಲ್ಲೆಯನ್ನು ಬೆಚ್ಚಿ  ಬೀಳಿಸಿದ ಅಪರಾಧ ಸ್ಟೋರಿ (Suvarna FIR) ಇದು. ಎರಡು ಕುಟುಂಬಗಳ ನಡುವಿನ ಕಿತ್ತಾಟ..  ಅದೊಂದು ಅಕ್ರಮ ಸಂಬಂಧದ ಅನುಮಾನ ಹುಟ್ಟಿಕೊಂಡಿದ್ದು ದೊಡ್ಡ ಅನಾಹುತಕ್ಕೆ ಕಾರಣವಾಗಿ ಹೋಯಿತು.   ಈ ಘೋರ ದುರಂತದ ಪರಿಣಾಮ ಎರಡು ಕುಟುಂಬದವರು ಆಸರೆ ಕಳೆದುಕೊಂಡಂತೆ ಆಗಿದೆ.