ಟ್ರೋಲ್ ಆದ ಜವಾನ್ ಡೈರೆಕ್ಟರ್ ಅಟ್ಲಿ..! ಹಾಗಾದ್ರೆ ಯಾರು ನಿಜವಾದ ಪ್ಯಾನ್ ಇಂಡಿಯಾ ಸ್ಟಾರ್..?

ಟ್ರೋಲ್ ಆದ ಜವಾನ್ ಡೈರೆಕ್ಟರ್ ಅಟ್ಲಿ..! ಹಾಗಾದ್ರೆ ಯಾರು ನಿಜವಾದ ಪ್ಯಾನ್ ಇಂಡಿಯಾ ಸ್ಟಾರ್..?

Published : Feb 27, 2024, 10:23 AM ISTUpdated : Feb 27, 2024, 10:24 AM IST

ತಮಿಳು ಡೈರೆಕ್ಟರ್ ಶಾರುಖ್‌ ಖಾನ್ ಜವಾನ್ ಸಿನಿಮಾ ನಿರ್ದೇಶಕ ಅಟ್ಲಿ ಯಶ್, ಅಲ್ಲು ಅರ್ಜುನ್, ವಿಜಯ್ ಹೆಸರನ್ನು ತೆಗೆದುಕೊಂಡಿದ್ದಕ್ಕಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಇತ್ತೀಚೆಗೆ  ನಿರ್ದೇಶಕ ಅಟ್ಲಿ ABP ವಾಹಿನಿ ಸಮಿಟ್‌ನಲ್ಲಿ ಭಾಗವಹಿಸಿ ಚಿತ್ರರಂಗದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಹಾಲಿವುಡ್ ಸಿನಿಮಾ ಮಾಡುತ್ತೀನಿ ಎಂದು ಭರವಸೆಯಿಂದ ಹೇಳಿದ್ದಾರೆ. ಬಾಲಿವುಡ್ ಸಿನಿಮಾ ಮಾಡಲು 10 ವರ್ಷ ಸಮಯ ಬೇಕಾಯಿತು. ಅದೇ ರೀತಿ ಹಾಲಿವುಡ್ ಸಿನಿಮಾ ಮಾಡಲು ಇನ್ನೈದು ವರ್ಷ ಬೇಕಾಗಬಹುದು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಯಶ್(Yash), ಅಲ್ಲು ಅರ್ಜುನ್(Allu Arjun) ಹಾಗೂ ದಳಪತಿ ವಿಜಯ್(Dalapathy Vijay) ಹೆಸರುಗಳನ್ನು ಅಟ್ಲಿ(Director Atlee) ಪ್ರಸ್ತಾಪಿಸಿದ್ದಾರೆ. 'KGF' ಎಲ್ಲಾ ಕಡೆ ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾ ಬರುವವರೆಗೂ ಯಶ್ ಯಾರು ಎಂದು ಹಿಂದಿ ಭಾಷಿಕರಿಗೆ ಗೊತ್ತಿರಲಿಲ್ಲ. 'KGF' ಬಳಿಕ ಯಶ್ ಇಂಡಿಯನ್ ಸೂಪರ್ ಸ್ಟಾರ್ ಆಗಿದ್ದಾರೆ. ಅದೇ ರೀತಿ 'ಪುಷ್ಪ' ಸಿನಿಮಾ ಮೂಲಕ ಅಲ್ಲು ಅರ್ಜುನ್ ಹಾಗೂ 'ಲಿಯೋ' ಸಿನಿಮಾ ಮಾಡಿ ವಿಜಯ್ ಸರ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ಸ್ ಆಗಿದ್ದಾರೆ ಎಂದು ಅಟ್ಲಿ ಹೇಳಿದ್ದಾರೆ. ಯಶ್ ಹಾಗೂ ಅಲ್ಲು ಅರ್ಜುನ್ ಓಕೆ  ವಿಜಯ್ ಯಾಕೆ ..? ದಳಪತಿ ವಿಜಯ್ ಕಾಲಿವುಡ್‌ನಲ್ಲಿ ದೊಡ್ಡ ಸ್ಟಾರ್ ಇರಬಹುದು. ಆದರೆ ಪ್ಯಾನ್ ಇಂಡಿಯಾ ಸ್ಟಾರ್ ಇನ್ನು ಆಗಿಲ್ಲ. ಅದರಲ್ಲೂ 'ಲಿಯೋ' ಸಿನಿಮಾ ಉತ್ತರ ಭಾರತದಲ್ಲಿ ಗೆಲ್ಲಲೇಯಿಲ್ಲ. ಅದು ಹೇಗೆ ವಿಜಯ್ನ ನ್ಯಾಷನಲ್ ಸ್ಟಾರ್ ಲಿಸ್ಟ್ನಲ್ಲಿ ಸೇರಿಸಿದೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Mandya: ಮತ್ತೆ ಶುರುವಾಯ್ತು ಸಕ್ಕರೆ ನಾಡು ಚುನಾವಣೆ ಹೀಟು..! ಈ ಭಾರಿ ಮತ್ತೆ ಮಂಡ್ಯಕ್ಕೆ ಬರುತ್ತಾರಾ ಜೋಡೆತ್ತು..?

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more