Published : Jun 23, 2025, 06:57 AM ISTUpdated : Jun 23, 2025, 11:53 PM IST

Karnataka News Live: ಮಧ್ಯಪ್ರಾಚ್ಯದಲ್ಲಿ ಅಮೆರಿಕದ 36 ಸೇನಾ ನೆಲೆಗಳಿದ್ದರೂ, ಅಲ್ ಉದೈದ್ ಮೇಲೇ ಇರಾನ್‌ ದಾಳಿ ಮಾಡಿದ್ದೇಕೆ?

ಸಾರಾಂಶ

ಬೆಂಗಳೂರು ನಗರದಲ್ಲಿ ಇಂದು (ಜೂ.23) ವಿದ್ಯುತ್ ವ್ಯತ್ಯಯವಾಗುತ್ತಿದೆ. ತ್ರೈಮಾಸಿಕ ನಿರ್ವಹಣಾ ಕಾಮಾಗಾರಿಯಿಂದ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ರಾಜಾಜಿನಗರ ,ಗಾಯಿತ್ರಿನಗರ ಸುಬ್ರಮಣ್ಯನಗರ, ಕುಂಬಳಗೋಡು, ಮಂಜುನಾಥನಗರ, ಮೋದಿ ಹಾಸ್ಪಿಟಲ್, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್ 1ನೇ ರಸ್ತೆ, ದೇಯಯ್ಯ ಪಾರ್ಕ್, ನಾಗಪ್ಪ ಬ್ಲಾಕ್, ಲಿಂಕ್ ರೋಡ್, ಶನಿಮಹಾತ್ಮಾ ಟೆಂಪಲ್, ಪ್ರಕಾಶನಗರ, ಗಾಯತ್ರಿ ನಗರ, ಸುಬ್ರಹ್ಮಣ್ಯನಗರ, ರಾಜಕುಮಾರ್ ರೋಡ್, ದಯಾನಂದ ಸಾಗರ, ಸಾಯಿ ಮಂದಿರ, ಹರಿಶ್ಚಂದ್ರ ಘಾಟ್ ಸೇರಿದಂತೆ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

11:53 PM (IST) Jun 23

ಮಧ್ಯಪ್ರಾಚ್ಯದಲ್ಲಿ ಅಮೆರಿಕದ 36 ಸೇನಾ ನೆಲೆಗಳಿದ್ದರೂ, ಅಲ್ ಉದೈದ್ ಮೇಲೇ ಇರಾನ್‌ ದಾಳಿ ಮಾಡಿದ್ದೇಕೆ?

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕತಾರ್‌ನಲ್ಲಿರುವ ಅಮೆರಿಕದ ಅಲ್-ಉದೈದ್ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಯು ಅಮೆರಿಕದ ಪರಮಾಣು ಸೌಲಭ್ಯಗಳ ವಿರುದ್ಧದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ನಡೆದಿದೆ ಎನ್ನಲಾಗಿದೆ.

 

Read Full Story

11:26 PM (IST) Jun 23

ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ, ಇರಾನ್‌ ಕ್ಷಿಪಣಿ ದಾಳಿಗೆ ಕಿಡಿಕಿಡಿಯಾದ ಕತಾರ್‌!

ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಕತಾರ್‌ನಲ್ಲಿರುವ ಅಲ್ ಉದೈದ್ ನೆಲೆಯ ಮೇಲಿನ ದಾಳಿಯನ್ನು ಕತಾರ್ ಖಂಡಿಸಿದೆ. ತನ್ನ ಸಾರ್ವಭೌಮತ್ವದ ಉಲ್ಲಂಘನೆ ಎಂದು ಕತಾರ್ ಆರೋಪಿಸಿದೆ.
Read Full Story

11:16 PM (IST) Jun 23

ಇರಾನ್​ಗೆ ಮಹಿಳಾ ನಾಯಕಿ, ಭಾರತಕ್ಕೆ... ಹೇಳಿದ್ದೆಲ್ಲಾ ಸತ್ಯವಾಗ್ತಿರೋ ಇಮ್ರಾನಿ ಭವಿಷ್ಯವಾಣಿಯಲ್ಲಿ ಇರೋದೇನು?

ಇರಾನ್​ ಯುದ್ಧ, ಇಸ್ರೇಲ್​ ಕಾಳಗ, ಅಮೆರಿಕದ ಬಾಂಬ್​ ಸೇರಿದಂತೆ ಇಲ್ಲಿಯವರೆಗಿನ ಎಲ್ಲಾ ಭವಿಷ್ಯದ ಬಗ್ಗೆ 2023ರಲ್ಲಷ್ಟೇ ತಿಳಿಸಿದ್ದ ಖ್ಯಾತ ಜ್ಯೋತಿಷಿ ಅಫ್ಶಿನ್ ಇಮ್ರಾನಿ ಭಾರತದ ಬಗ್ಗೆ ಹೇಳಿದ್ದೇನು?

 

Read Full Story

10:38 PM (IST) Jun 23

Breaking - ಕತಾರ್‌, ಇರಾಕ್‌ನ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ಮಾಡಿದ ಇರಾನ್‌

ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಅಮೆರಿಕ ಭಾಗಿಯಾಗಿರುವುದಕ್ಕೆ ಪ್ರತೀಕಾರವಾಗಿ ಇರಾನ್, ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ದೋಹಾದಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಅಮೆರಿಕ ತನ್ನ ನೆಲೆಗಳಿಂದ ವಿಮಾನಗಳನ್ನು ತೆಗೆದುಹಾಕಿದೆ.
Read Full Story

10:29 PM (IST) Jun 23

ಅಲ್ಲಿ ಮೀನಮ್ಮಾ ಮಳೆಯಲ್ಲಿ ನೆನಿತಿದ್ರೆ… ಇಲ್ಲಿ ಎಲ್ಲಾ ಬಿಟ್ಟು ಸನ್ಯಾಸಿ ಆಗ್ಬಿಟ್ರಾ ಸೂರ್ಯ ?

ಆಸೆ ಧಾರಾವಾಹಿ ನಟಿ ಪ್ರಿಯಾಂಕಾ ಕಾಡು ಮೇಡು ಅಲೆಯುತ್ತಿದ್ದರೆ, ನಟ ನಿನಾದ್ ಹರಿತ್ಸ ಸೀರಿಯಲ್ ಗೆ ಬ್ರೇಕ್ ಕೊಟ್ಟು ಹೆಂಡ್ತಿ ಜೊತೆ ಶಾಂತಿ ಹರಸಿ ಹೊರಟಂತಿದೆ.

 

Read Full Story

10:11 PM (IST) Jun 23

ಮುಗಿಯತಾ ತೈಲ ಸಂಪತ್ತು, ಮೊದಲ ಬಾರಿಗೆ ಆದಾಯ ತೆರಿಗೆ ವಿಧಿಸಲು ಮುಂದಾದ ಪ್ರಮುಖ ಗಲ್ಫ್‌ ದೇಶ!

ಒಮಾನ್ ತನ್ನ ನಾಗರಿಕರ ಮೇಲೆ ಆದಾಯ ತೆರಿಗೆ ವಿಧಿಸುವ ಮೊದಲ ಗಲ್ಫ್ ರಾಷ್ಟ್ರವಾಗುವ ಯೋಜನೆಯನ್ನು ಪ್ರಕಟಿಸಿದೆ. ಜಿಸಿಸಿ ರಾಷ್ಟ್ರವು 42,000 ರಿಯಾಲ್‌ಗಳು ($109,000) ಅಥವಾ ಅದಕ್ಕಿಂತ ಹೆಚ್ಚಿನ ಆದಾಯದ ಮೇಲೆ 5% ತೆರಿಗೆ ವಿಧಿಸಲು ಯೋಜಿಸಿದೆ.

 

Read Full Story

10:00 PM (IST) Jun 23

ಟೆಲಿಗ್ರಾಮ್​ ಸಂಸ್ಥಾಪಕನಿಗೆ 12 ದೇಶದಲ್ಲಿ 100 ಮಕ್ಕಳು - ಅಪ್ಪನೇ ಗೊತ್ತಿಲ್ಲದರಿಗೂ 13 ಲಕ್ಷ ಕೋಟಿ ಆಸ್ತಿ!

12 ದೇಶಗಳಲ್ಲಿ ನೂರಕ್ಕೂ ಅಧಿಕ ಮಕ್ಕಳನ್ನು ಪಡೆದಿರುವ ಟೆಲಿಗ್ರಾಮ್​ ಸಂಸ್ಥಾಪಕ ಪಾವೆಲ್ ಡುರೋವ್ ಅಷ್ಟೂ ಮಕ್ಕಳಿಗೆ 13 ಲಕ್ಷ ಕೋಟಿ ಆಸ್ತಿ ಹಂಚಲು ನಿರ್ಧರಿಸಿದ್ದಾರೆ. ಏನಿದು ನೋಡಿ!

 

Read Full Story

09:21 PM (IST) Jun 23

ಸಿನಿಮಾಕ್ಕಾಗಿ ಹೆಸರನ್ನೆ ಬದಲಾಯಿಸಿ ಸ್ಟಾರ್ ಪಟ್ಟಕ್ಕೇರಿದ ನಟಿಯರಿವರು

ಚಂದನವನದ ಹಲವು ನಟಿಯರು ತಮ್ಮ ಹುಟ್ಟು ಹೆಸರನ್ನು ಬದಲಾಯಿಸಿ ಸಿನಿಮಾಕ್ಕಾಗಿ ಬೇರೆ ಹೆಸರನ್ನಿಟ್ಟರು, ಹೀಗೆ ಹೆಸರು ಬದಲಾಯಿಸಿಕೊಂಡವರಲ್ಲಿ ಗೆದ್ದವರೇ ಹೆಚ್ಚು.

 

Read Full Story

08:45 PM (IST) Jun 23

ಎಂಎಸ್‌ ಧೋನಿಯಿಂದಲೂ ಮಾಡಲಾಗದ ಐತಿಹಾಸಿಕ ಸಾಧನೆ ಮಾಡಿದ ರಿಷಭ್‌ ಪಂತ್‌!

ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 4 ನೇ ದಿನದಂದು ಅವರು ಈ ಸಾಧನೆ ಮಾಡಿದರು.

 

Read Full Story

08:43 PM (IST) Jun 23

ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು ಬಂದು ರಾತ್ರೋರಾತ್ರಿ ಸ್ಟಾರ್‌ ಆಗೋದ್ಲು ಈ ಮಹಿಳೆ!

 

ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು ಪ್ರತಿನಿತ್ಯವೂ ಸಾವಿರಾರು ಜನ ಕ್ಯೂನಲ್ಲಿ ಇರುತ್ತಾರೆ. ಆದರೆ ಈ ಮಹಿಳೆ ಮಾತ್ರ ರಾತ್ರೋರಾತ್ರಿ ಸಕತ್​ ಫೇಮಸ್​ ಆಗೋದ್ರು. ಕಾರಣ ಕೇಳಿದ್ರೆ ನೀವೂ ಶಾಕ್​ ಆಗ್ತೀರಾ!

 

Read Full Story

08:29 PM (IST) Jun 23

ನಾಸಾ ಪ್ರೋಗ್ರಾಮ್‌ ಮುಗಿಸಿದ ಮೊದಲ ಭಾರತೀಯ ಮಹಿಳೆ ದಂಗೆಟಿ ಜಾಹ್ನವಿ, 2029ಕ್ಕೆ ಬಾಹ್ಯಾಕಾಶಕ್ಕೆ ಪ್ರಯಾಣ!

ಆಂಧ್ರಪ್ರದೇಶದ ದಂಗೆಟಿ ಜಾಹ್ನವಿ 2029 ರಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ನಾಸಾದ ಅಂತರರಾಷ್ಟ್ರೀಯ ವಾಯು ಮತ್ತು ಬಾಹ್ಯಾಕಾಶ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ.

 

Read Full Story

08:21 PM (IST) Jun 23

ಬೆಂಗಳೂರಿನಲ್ಲಿ ಗಾಂಜಾ ಗ್ಯಾಂಗ್ ಅಟ್ಟಹಾಸ; ನಡುರಸ್ತೆಯಲ್ಲೇ ಮಹಿಳೆ ಅಡ್ಡಗಟ್ಟಿ ಕಿರುಕುಳ, ಮನಸೋ ಇಚ್ಛೆ ಹಲ್ಲೆ!

ಬನ್ನೇರುಘಟ್ಟದಲ್ಲಿ ಗಾಂಜಾ ಸೇವಿಸಿದ ಯುವಕರ ಗುಂಪೊಂದು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಸಹಾಯಕ್ಕೆ ಬಂದ ಸ್ನೇಹಿತನನ್ನೇ ಪೊಲೀಸರು ಬಂಧಿಸಿರುವುದು ವಿವಾದಕ್ಕೆ ಕಾರಣವಾಗಿದೆ.
Read Full Story

07:52 PM (IST) Jun 23

ನಮ್ಮ ದೇಶದಲ್ಲಿ ಬುದ್ಧ ಬೇಕೋ? ಯುದ್ಧ ಬೇಕೋ? ಮಲ್ಲಿಕಾರ್ಜುನ ಖರ್ಗೆ

ರಾಯಚೂರಿನಲ್ಲಿ ನಡೆದ ಬುಡಕಟ್ಟು ಸಾಂಸ್ಕೃತಿಕ ಉತ್ಸವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 371(ಜೆ) ಜಾರಿಗೆ ಬರಲು ತಮ್ಮ ಪಾತ್ರವನ್ನು ಸ್ಮರಿಸಿಕೊಂಡ ಅವರು, ಪ್ರಧಾನಿ ಮೋದಿ ಅವರನ್ನು ತೀವ್ರವಾಗಿ ಟೀಕಿಸಿದರು.
Read Full Story

07:49 PM (IST) Jun 23

ಅಯ್ಯೋ ವಿಧಿಯೇ... ಕ್ಯಾನ್ಸರ್ ಪೀಡಿತ ಅಜ್ಜಿಯನ್ನು ಕಸದ ರಾಶಿಯಲ್ಲಿ ಎಸೆದ ಮೊಮ್ಮಗ

 ಕ್ಯಾನ್ಸರ್ ಪೀಡಿತ ಅಜ್ಜಿಯನ್ನು ಮೊಮ್ಮಗನೊಬ್ಬ ಕಸದ ರಾಶಿಯಲ್ಲಿ ಎಸೆದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.

Read Full Story

07:46 PM (IST) Jun 23

ಡಿಸಿಸಿ ಬ್ಯಾಂಕ್ ನೌಕರರಿಗೆ 15 ವರ್ಷದ ಕರಾರು ಕಿರಿಕಿರಿ; 14 ಜನ ರಾಜೀನಾಮೆ, ಸಹಿ ಹಾಕದವರಿಗೆ ಬಾಗಿಲು ಕಾಯೋ ಶಿಕ್ಷೆ!

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 15 ವರ್ಷಗಳ ಬಾಂಡ್ ಬರೆಸಿಕೊಳ್ಳಲು ಒತ್ತಾಯಿಸಿ ನೌಕರರಿಗೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲಸಕ್ಕೆ ಹಾಜರಾದರೂ ಕೆಲಸ ನೀಡದೆ, ಹೊರಗೆ ಕೂರಿಸಲಾಗುತ್ತಿದೆ ಎಂದು ನೊಂದ ಉದ್ಯೋಗಿಗಳು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

Read Full Story

07:44 PM (IST) Jun 23

ಅಮೆರಿಕದಲ್ಲಿ 'ಡ್ರೈವರ್‌ಲೆಸ್‌' ರೋಬೋಟ್ಯಾಕ್ಸಿ ಸೇವೆ ಆರಂಭಿಸಿದ ಎಲೋನ್‌ ಮಸ್ಕ್‌, ಪ್ರತಿ ರೈಡ್‌ಗೆ 364 ರೂಪಾಯಿ!

ಎಲಾನ್ ಮಸ್ಕ್‌ರ ಟೆಸ್ಲಾ, ಚಾಲಕರಿಲ್ಲದ ರೋಬೋಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ. ಪ್ರಸ್ತುತ ಆಸ್ಟಿನ್‌ನಲ್ಲಿ ಪ್ರಾಯೋಗಿಕವಾಗಿ ಲಭ್ಯವಿರುವ ಈ ಸೇವೆ, ಭವಿಷ್ಯದ ಸಾರಿಗೆಯನ್ನು ಸೂಚಿಸುತ್ತದೆ.
Read Full Story

07:32 PM (IST) Jun 23

ಖ್ಯಾತ ಸಾಹಿತಿ ಡಾ.ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕವಿ, ಸಾಹಿತಿ ಹಾಗೂ ಚಲನಚಿತ್ರ ಗೀತರಚನೆಕಾರರಾಗಿ ಪ್ರಸಿದ್ಧರಾಗಿರುವ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ.
Read Full Story

07:29 PM (IST) Jun 23

ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ ಕಾರು ಅಪಘಾತ, ಬೆಂಬಲಿಗರಿಂದ ವ್ಯಕ್ತಿಯ ಮೇಲೆ ಹಲ್ಲೆ!

ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರು ಅಪಘಾತಕ್ಕೀಡಾಗಿದ್ದು, ಓವರ್‌ಟೇಕ್ ವಿಚಾರದಲ್ಲಿ ಗಲಾಟೆ ನಡೆದಿದೆ. ಹೆಗಡೆ ಅವರ ಗನ್‌ಮ್ಯಾನ್ ಮತ್ತು ಚಾಲಕ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ನೆಲಮಂಗಲದಲ್ಲಿ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Read Full Story

07:21 PM (IST) Jun 23

ಇರಾನ್-ಅಮೆರಿಕ ಸಂಘರ್ಷ - ಡಾಲರ್ ಮೌಲ್ಯ ಹಾಗೂ ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ,

ಇರಾನ್ ಪರಮಾಣು ಕೇಂದ್ರದ ಮೇಲಿನ ಅಮೆರಿಕ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಡಾಲರ್ ಬಲಗೊಂಡು 5 ತಿಂಗಳ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ತೈಲ ಬೆಲೆಯಲ್ಲೂ ಏರಿಳಿತ ಕಂಡುಬಂದಿದೆ.

Read Full Story

07:15 PM (IST) Jun 23

ಮಲ್ಲಿ ತಂಟೆಗೆ ಬಂದ ಜೈ ದೇವ್ ಎದುರು ಬೆಂಕಿ ಚೆಂಡಾದ ಭೂಮಿಕಾ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಕೆನ್ನೆಗೆ ಹೊಡೆಯೋದಕ್ಕೆ ಬಂದ ಜೈದೇವ್ ಗೆ ಕಪಾಳ ಮೋಕ್ಷ ಮಾಡಿ ಚೆನ್ನಾಗಿ ಬೆಂಡೆತ್ತಿದ್ದಾಳೆ ಭೂಮಿಕಾ.

Read Full Story

07:15 PM (IST) Jun 23

ಅನ್ಯಧರ್ಮದ ಹುಡುಗನ ಜೊತೆ ಓಡಿ ಹೋದ ಪುತ್ರಿಗೆ ತಿಥಿ ಮಾಡಿದ ಬೆಂಗಾಲಿ ಕುಟುಂಬ

ಅನ್ಯಧರ್ಮದ ಯುವಕನೊಂದಿಗೆ ಓಡಿಹೋದ ಯುವತಿಗೆ ಕುಟುಂಬಸ್ಥರು ತಿಥಿ ಮಾಡಿದ್ದಾರೆ. 

Read Full Story

07:03 PM (IST) Jun 23

ಕರ್ನಾಟಕದ ಈ ಜಿಲ್ಲೆಯಲ್ಲಿ ಮುಂದಿನ 4 ದಿನ ಭಾರೀ ಮಳೆ, ತಮಿಳುನಾಡಿನಲ್ಲಿ 6 ದಿನ ಮಳೆ

ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿದ್ದ ಭಾರೀ ಮಳೆ ತಗ್ಗುತ್ತಿದ್ದು, ಮುಂಗಾರು ತಾತ್ಕಾಲಿಕ ವಿರಾಮಕ್ಕೆ ಸಿದ್ಧವಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ ಮಳೆಯಾಗಲಿದ್ದರೂ, ಒಳನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ.
Read Full Story

06:54 PM (IST) Jun 23

ಕೊಲಂಬಿಯಾದಲ್ಲಿ ಯೋಗ ದಿನ - ಶಾಂತಿ ಕಾರ್ಯಕ್ಕೆ ರವಿಶಂಕರ ಗುರೂಜಿಗೆ ಉನ್ನತ ನಾಗರೀತ ಗೌರವ

ಕೊಲಂಬಿಯಾದಲ್ಲಿ ಶಾಂತಿ ಸ್ಥಾಪನೆಯ 10ನೇ ವಾರ್ಷಿಕೋತ್ಸವದಂದು ರವಿಶಂಕರ್ ಗುರೂಜಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಶಾಂತಿ ಸಂಧಾನದಲ್ಲಿ ಗುರೂಜಿಗಳ ಪಾತ್ರವನ್ನು ಸ್ಮರಿಸಲಾಯಿತು ಹಾಗೂ ಯೋಗದ ಮಹತ್ವವನ್ನು ಒತ್ತಿ ಹೇಳಲಾಯಿತು.

Read Full Story

06:44 PM (IST) Jun 23

ನಮ್ಮ ಪಾಲಿನ ನೀರು ಸಿಗದಿದ್ದರೆ, ಭಾರತದ ಜೊತೆ ಯುದ್ಧ ಮಾಡುತ್ತೇವೆ - ಬಿಲಾವಲ್‌ ಭುಟ್ಟೋ

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತ 1960ರ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸಿತು.

 

Read Full Story

06:04 PM (IST) Jun 23

ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ - ಎಲ್ಲಿ ಯಾರಿಗೆ ಗೆಲುವು - ಇಲ್ಲಿದೆ ಡಿಟೇಲ್

Five state By election result: ಐದು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಗುಜರಾತ್‌ನ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಬಿಜೆಪಿ ಮತ್ತು ಇನ್ನೊಂದರಲ್ಲಿ ಎಎಪಿ ಗೆಲುವು ಸಾಧಿಸಿದೆ. 

Read Full Story

05:58 PM (IST) Jun 23

ಮೇಕಪ್ ಸರಿಯಾಗಿ ತೊಳೆಯದೇ ಅಲರ್ಜಿ; ಮುಖದ ಮೇಲೆ ಸಾವಿರಾರು ಇರುವೆ ಓಡಾಡಿದಂತೆ ಭಾಸ!

ಮೇಕಪ್ ಬಳಸಿ ಸರಿಯಾಗಿ ತೊಳೆಯದೆ 22 ವರ್ಷಗಳ ಕಾಲ ಸಮಸ್ಯೆ ಅನುಭವಿಸಿದ ಮಹಿಳೆಯ ಕಥೆ. ಮುಖದ ಮೇಲೆ ಇರುವೆಗಳು ಓಡಾಡಿದಂತೆ ಭಾಸವಾಗುತ್ತಿದ್ದ ನೋವಿನ ಅನುಭವವನ್ನು ವಿವರಿಸಿದ್ದಾರೆ. ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ ಎಂಬ ಎಚ್ಚರಿಕೆ ನೀಡಿದ್ದಾರೆ.
Read Full Story

05:52 PM (IST) Jun 23

ಅಮೆರಿಕದ ಬಿ-2 ಬಾಂಬರ್ - ವಿಶ್ವದ ಅತ್ಯಂತ ರಹಸ್ಯ ಯುದ್ಧವಿಮಾನದ ಬಗ್ಗೆ ಇಲ್ಲಿದೆ ಇಂಚಿಂಚೂ ಮಾಹಿತಿ..

ಅಮೆರಿಕದ ಬಿ-೨ ಸ್ಪಿರಿಟ್ ಸ್ಟೆಲ್ತ್ ಬಾಂಬರ್, ವಿಶ್ವದ ಅತ್ಯಂತ ದುಬಾರಿ ಮತ್ತು ರಹಸ್ಯಮಯ ಯುದ್ಧವಿಮಾನಗಳಲ್ಲಿ ಒಂದು. ಇದರ ಸ್ಟೆಲ್ತ್ ತಂತ್ರಜ್ಞಾನ, ಬೃಹತ್ ಗಾತ್ರ, ಮತ್ತು ದಾಳಿ ಸಾಮರ್ಥ್ಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಇರಾನ್ ಮೇಲಿನ ದಾಳಿಯಲ್ಲಿ ಬಳಸಲಾದ ಈ ವಿಮಾನದ ಬಗ್ಗೆ ಇನ್ನಷ್ಟು ತಿಳಿಯಿರಿ.
Read Full Story

05:51 PM (IST) Jun 23

₹170 ಕಟ್ಟಿದಾತನಿಗೆ ದೋಷಪೂರ್ಣ ದಾಖಲೆ ಕೊಟ್ಟ ಬೆಂಗಳೂರು ಕಚೇರಿ, ಕೋರ್ಟ್‌ನಿಂದ ಸಿಕ್ತು ₹10,000 ಪರಿಹಾರ

ಪೀಣ್ಯದ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ತಪ್ಪಾದ ಇಸಿ ನೀಡಿದ್ದಕ್ಕೆ ವಕೀಲ ಪ್ರವೀಣ್ ಕುಮಾರ್ ₹10,000 ಪರಿಹಾರ ಪಡೆದಿದ್ದಾರೆ. ದೋಷಪೂರ್ಣ ದಾಖಲೆಯಿಂದಾಗಿ ಅವರ ವೃತ್ತಿಪರ ವಿಶ್ವಾಸಾರ್ಹತೆಗೆ ಧಕ್ಕೆಯಾಗಿತ್ತು.
Read Full Story

05:21 PM (IST) Jun 23

ಸರ್ಕಾರದ ವಿರುದ್ಧ ಮತ್ತೊಬ್ಬ ಶಾಸಕನ ಆಕ್ರೋಶ; 2 ದಿನದಲ್ಲಿ ರಾಜೀನಾಮೆ ಕೊಡೋದಾಗಿ ರಾಜು ಕಾಗೆ ಎಚ್ಚರಿಕೆ!

ಕಾಗವಾಡ ಶಾಸಕ ರಾಜು ಕಾಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನುದಾನ ವಿಳಂಬ ಹಾಗೂ ಆಡಳಿತ ವೈಫಲ್ಯದಿಂದ ಬೇಸತ್ತಿರುವ ಅವರು, ಶೀಘ್ರವಾಗಿ ಎರಡು ದಿನಗಳಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Read Full Story

05:15 PM (IST) Jun 23

ಪಿಚ್ ಮಧ್ಯದಲ್ಲೇ.. ರಿತಿಕಾಗೆ ಸಿನಿಮಾ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡಿದ್ದ ರೋಹಿತ್ ಶರ್ಮಾ! ಇಂಟ್ರಿಸ್ಟಿಂಗ್ ಸಂಗತಿ ಬಿಚ್ಚಿಟ್ಟ ಹಿಟ್‌ಮ್ಯಾನ್

ಬೆಂಗಳೂರು: ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಲವ್‌ ಸ್ಟೋರಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಜತೆಗೆ ರಿತಿಕಾ ಸಜ್ದೇಗೆ ಸಿನಿಮಾ ರೀತಿಯಲ್ಲಿ ಲವ್ ಪ್ರಪೋಸ್ ಮಾಡಿದ ಬಗ್ಗೆಯೂ ಹೇಳಿದ್ದಾರೆ.

 

Read Full Story

05:08 PM (IST) Jun 23

ಗಾಳಿಪಟದ ಮೂಲಕ ಕನ್ನಡಿಗರ ಹೃದಯ ಕದ್ದ ಸೌಮ್ಯ ಟೀಚರ್… ಈಗ ಬೈಕ್ ರೇಸರ್

ಗಾಳಿಪಟದ ಚೆಲುವೆ ಡೈಸಿ ಬೋಪಣ್ಣ, ನಟನೆಯಿಂದ ದೂರ ಇದ್ದು ವರ್ಷಗಳೇ ಕಳೆದಿದೆ. ಇದೀಗ ಬೈಕ್ ರೇಸಿಂಗ್ ಸಾಹಸಕ್ಕೆ ಕೈ ಹಾಕಿದ್ದು, ಅದರ ಜಲಕ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

 

Read Full Story

05:07 PM (IST) Jun 23

'ಪುರುಷೋತ್ತಮನ ಪ್ರಸಂಗ'ದ ನಾಯಕಿ ನಟಿ ರವೀಕ್ಷಾ ಶೆಟ್ಟಿ 'ಐಟಿ' ಉದ್ಯೋಗದ ಬಗ್ಗೆ ಹೇಳಿದ್ದೇನು?

ಮಂಗಳೂರಿನವರಾದ ರವೀಕ್ಷಾ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ನಟನೆಯ ಮೇಲಿನ ಆಸಕ್ತಿಯಿಂದ 'ಅ..ಆ..ಇ..ಈ' ಎಂಬ ತುಳು ಚಿತ್ರದಲ್ಲಿ ನಟಿಸಿದರೂ, ಆ ಚಿತ್ರವು ಬಿಡುಗಡೆಯಾಗಲಿಲ್ಲ. ಬಳಿಕ 'ಜೀವ' ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. 'ಪುರುಷೋತ್ತಮನ ಪ್ರಸಂಗ' ಅವಕಾಶ ಸಿಕ್ಕಿದ್ದು ಆಕಸ್ಮಿಕ.

Read Full Story

04:59 PM (IST) Jun 23

Kaliganj Bomb Blast - ಬಂಗಾಳ ಉಪಚುನಾವಣೆ ಮತ ಎಣಿಕೆ ವೇಳೆ ಬಾಂಬ್ ಸ್ಪೋಟ - 9 ವರ್ಷದ ಬಾಲಕಿ ಸಾವು

West Bengal By Election: ಪಶ್ಚಿಮ ಬಂಗಾಳದಲ್ಲಿ ಉಪಚುನಾವಣಾ ಮತ ಎಣಿಕೆ ವೇಳೆ ಬಾಂಬ್ ಸ್ಫೋಟ ಸಂಭವಿಸಿ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. 

Read Full Story

04:48 PM (IST) Jun 23

ಮಧ್ಯಪ್ರಾಚ್ಯ ಬಿಕ್ಕಟ್ಟು, ಬಂದರಿನಲ್ಲೇ ಉಳಿದ 1 ಲಕ್ಷ ಟನ್‌ ಬಾಸ್ಮತಿ, ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ದರ ಭಾರೀ ಕುಸಿತ!

ಗುಜರಾತ್‌ನ ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳಲ್ಲಿ ಸಾಗಣೆಗಳು ಪ್ರಾಥಮಿಕವಾಗಿ ಸಿಲುಕಿಕೊಂಡಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಇರಾನ್‌ಗೆ ಹೋಗುವ ಸರಕುಗಳಿಗೆ ಹಡಗುಗಳಿಗೆ ಯಾವುದೇ ವಿಮೆ ಲಭ್ಯವಾಗುತ್ತಿಲ್ಲ.

 

Read Full Story

04:33 PM (IST) Jun 23

ಕೊತ್ತಂಬರಿ ಸೊಪ್ಪು - ಫ್ರಿಡ್ಜ್‌ ಇಲ್ಲದೇ ಒಂದು ವರ್ಷಪೂರ್ತಿ ಸ್ಟೋರ್ ಮಾಡುವ ವಿಧಾನ!

ಬೇಸಿಗೆ ಮತ್ತು ಮಳೆಗಾಲದಲ್ಲಿ ಕೊತ್ತಂಬರಿ ಸೊಪ್ಪು ಸಿಗುವುದು ಕಡಿಮೆ ಮತ್ತು ಬೇಗ ಹಾಳಾಗುತ್ತದೆ. ಈ ಲೇಖನದಲ್ಲಿ, ಕೊತ್ತಂಬರಿ ಸೊಪ್ಪನ್ನು ಫ್ರಿಡ್ಜ್ ಇಲ್ಲದೆ ಒಂದು ವರ್ಷ ಸ್ಟೋರ್ ಮಾಡುವ ಸರಳ ವಿಧಾನಗಳನ್ನು ವಿವರಿಸಲಾಗಿದೆ.

Read Full Story

04:26 PM (IST) Jun 23

ಡಿಕೆಶಿ ಟ್ವೀಟ್ ಬೆನ್ನಲ್ಲೇ ಬೆಂಗಳೂರು ಸುರಂಗ ರಸ್ತೆ ವಿವಾದ, ಈ ಹಣದಲ್ಲಿ ಮೆಟ್ರೋನೇ ಮಾಡಬಹುದು!

ಹೆಬ್ಬಾಳ-ಸಿಲ್ಕ್ ಬೋರ್ಡ್ ಭೂಗತ ರಸ್ತೆ ಯೋಜನೆ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಲಿದೆಯೇ ಅಥವಾ ಹೊಸ ವಿವಾದಕ್ಕೆ ಕಾರಣವಾಗಲಿದೆಯೇ? ದ್ವಿಚಕ್ರ ವಾಹನ ನಿಷೇಧ, ಭಾರಿ ಟೋಲ್, ಮತ್ತು ಸಾರ್ವಜನಿಕ ಹಣದ ವ್ಯಯದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.
Read Full Story

04:21 PM (IST) Jun 23

RCB Stampede Tragedy - ಇನ್ಮುಂದೆ ಐಪಿಎಲ್‌ ವಿಜಯೋತ್ಸವ ಮಾಡೋಕೆ 10 ರೂಲ್ಸ್‌ ಹೇರಿದ BCCI

ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. 10 ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಬೆಂಗಳೂರು ಘಟನೆಯ ತನಿಖೆ ಮತ್ತು ರಾಜಕೀಯ ಆರೋಪಗಳು ಮುಂದುವರೆದಿವೆ.

Read Full Story

04:18 PM (IST) Jun 23

ನಾಲ್ಕು ತಿಂಗಳುಗಳಿಂದ ಡಾ. ಬ್ರೋ‌ ನಾಪತ್ತೆ... ಎಲ್ಲಿದ್ಯಾ ದೇವ್ರು… ವಿಡಿಯೋ ಯಾಕೆ ಮಾಡ್ತಿಲ್ಲ ಕೇಳ್ತಿದ್ದಾರೆ ಅಭಿಮಾನಿಗಳು!

ಕನ್ನಡದ ಖ್ಯಾತ ಟ್ರಾವೆಲ್ ಯೂಟ್ಯೂಬರ್ ಡಾ. ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಕಳೆದ ನಾಲ್ಕು ತಿಂಗಳಿಂದ ಹೊಸ ವಿಡಿಯೋ ಅಪ್ ಲೋಡ್ ಮಾಡಿಲ್ಲ, ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

 

Read Full Story

04:17 PM (IST) Jun 23

ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಅಂತ ಥಳಿಸಿದ ಅಪ್ಪ - ಮಗಳು ಸಾವು

NEET Examination: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ತಂದೆ ಹಿಗ್ಗಾಮುಗ್ಗಾ ಕೋಲಿನಲ್ಲಿ ಥಳಿಸಿದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿ(Maharashtra’s Sangli) ಜಿಲ್ಲೆಯಲ್ಲಿ ನಡೆದಿದೆ.

Read Full Story

04:00 PM (IST) Jun 23

'ಚಪ್ಪಲಿ ಹೊಲಿಯೋಕೆ ಲಾಯಕ್ಕು ನೀನು..' ಬೆಂಗಳೂರಿನ ಇಂಡಿಗೋ ಟ್ರೇನಿ ಪೈಲಟ್‌ಗೆ ಜಾತಿ ನಿಂದನೆ!

ಬೆಂಗಳೂರು ಮೂಲದ ಟ್ರೇನಿ ಪೈಲಟ್‌ ಶರಣ್‌ ಕುಮಾರ್‌, ಇಂಡಿಗೋ ಏರ್‌ಲೈನ್ಸ್‌ನ ಮೂವರು ಅಧಿಕಾರಿಗಳ ವಿರುದ್ಧ ಜಾತಿ ಆಧಾರಿತ ಕಿರುಕುಳದ ಆರೋಪ ಮಾಡಿದ್ದಾರೆ. ಈ ಘಟನೆ ಗುರಗಾಂವ್‌ನಲ್ಲಿರುವ ಇಂಡಿಗೋ ಕಂಪನಿಯ ಕೇಂದ್ರ ಕಚೇರಿಯಲ್ಲಿ ನಡೆದಿದೆ.

Read Full Story

More Trending News