ಕೊಪ್ಪಳ: ಒಬ್ಬ ವಿದ್ಯಾರ್ಥಿನಿಯ ಪರೀಕ್ಷೆಗಾಗಿ ಹತ್ತು ಸಿಬ್ಬಂದಿ ಪರೀಕ್ಷಾ ಕೇಂದ್ರದಲ್ಲಿ ಸಿದ್ಧವಾಗಿದ್ದರು, ಆದರೆ ವಿದ್ಯಾರ್ಥಿನಿ ಪರೀಕ್ಷೆಗೆ ಬರಲೇ ಇಲ್ಲ. ಇದರಿಂದ ಸಿಬ್ಬಂದಿ ಸಮಯ ಮುಗಿಯುವವರೆಗೂ ಕಾದು ಪರೀಕ್ಷಾ ಕೇಂದ್ರ ಬಂದ್ ಮಾಡಿಕೊಂಡು, ವಾಪಸ್ಸಾದರು. ಹಿರೇಸಿಂದೋಗಿ ಮೊರಾರ್ಜಿ ವಸತಿ ಶಾಲೆಯ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಅಲಿಯಾ ಬುಧವಾರ ಉರ್ದು ವಿಷಯ ಪರೀಕ್ಷೆ ಬರೆಯಬೇಕಾಗಿತ್ತು.
ಓರ್ವ ವಿದ್ಯಾರ್ಥಿನಿಯ ಪರೀಕ್ಷೆ ಬರೆಯಲು ಹತ್ತು ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಪರೀಕ್ಷಾ ಸಮಯ ಹತ್ತು ಗಂಟೆಗೆ ಇದ್ದರೂ ವಿದ್ಯಾರ್ಥಿನಿ ಹತ್ತುವರೆಯಾದರೂ ಬರಲೇ ಇಲ್ಲ. ನಿಯಮಾನುಸಾರ ಅರ್ಧಗಂಟೆ ಮೀರಿದ ಮೇಲೆ ಪರೀಕ್ಷೆಗೆ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹತ್ತುವರೆ ಗಂಟೆಯವರೆಗೂ ಕಾಯ್ದು ಪರೀಕ್ಷಾ ಕೇಂದ್ರ ಬಂದ್ ಮಾಡಲಾಯಿತು.
09:50 AM (IST) Mar 05
ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಹಿರಿಯ ಇಂಜಿನಿಯರ್ಗಳು ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.
09:44 AM (IST) Mar 05
ಅಡುಗೆ ಮನೆಯಲ್ಲಿ ಗೃಹಿಣಿಯರು ಎದುರಿಸುವ ತೆಂಗಿನಕಾಯಿ ಒಡೆಯುವ ಕಷ್ಟದ ಕೆಲಸಕ್ಕೆ ಈ ಲೇಖನದಲ್ಲಿ ಸುಲಭ ಪರಿಹಾರ ನೀಡಲಾಗಿದೆ. ತೆಂಗಿನಕಾಯಿಯನ್ನು ಸುಲಭವಾಗಿ ಒಡೆದು, ಚಿಪ್ಪಿನಿಂದ ಕೊಬ್ಬರಿಯನ್ನು ಬೇರ್ಪಡಿಸುವ ಸರಳ ಕಿಚನ್ ಹ್ಯಾಕ್ ಅನ್ನು ಇಲ್ಲಿ ವಿವರಿಸಲಾಗಿದೆ.
09:33 AM (IST) Mar 05
ನರಗುಂದ ತಾಲೂಕಿನ ಮೂಗನೂರು ಗ್ರಾಮಕ್ಕೆ 15 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬನಹಟ್ಟಿ ಮತ್ತು ಮೂಗನೂರು ಗ್ರಾಮಗಳಿಗೆ ಒಂದೇ ನೀರಿನ ಟ್ಯಾಂಕ್, ಪೈಪ್ಲೈನ್ ಹಾನಿ ಮತ್ತು ಸಾಂಪ್ರದಾಯಿಕ ಕೆರೆಗಳ ನಿರ್ಲಕ್ಷ್ಯದಿಂದಾಗಿ ಈ ಸಮಸ್ಯೆ ಉಲ್ಬಣಗೊಂಡಿದೆ.
09:21 AM (IST) Mar 05
Actress Mansa Manohar: ಲಕ್ಷ್ಮೀ ನಿವಾಸ, ಜೊತೆ ಜೊತೆಯಲಿ ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಮೊದಲ ಮದುವೆ ಯಾಕೆ ಮುರಿದು ಬಿತ್ತು ಎಂದು ಕನ್ನಡ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
09:10 AM (IST) Mar 05
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ACI) ನಿಂದ ಸತತ ನಾಲ್ಕನೇ ವರ್ಷವೂ 'ಅತ್ಯುತ್ತಮ ಆಗಮಸ್ಥಾನ' ಪ್ರಶಸ್ತಿಗೆ ಪಾತ್ರವಾಗಿದೆ. ವೇಗ, ಸೌಕರ್ಯ ಮತ್ತು ಉತ್ತಮ ಅನುಭವ ನೀಡಲು ಸಿಬ್ಬಂದಿ ಹಾಗೂ ಪಾಲುದಾರರ ಸಾಮೂಹಿಕ ಬದ್ಧತೆ
08:55 AM (IST) Mar 05
08:18 AM (IST) Mar 05
ಹಾಸನ ಮತ್ತು ಬಾಗಲಕೋಟೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಪಾಲಿಕೆ ಇಂಜಿನಿಯರ್ ಬಾಗಿಲು ತೆರೆಯಲು ನಿರಾಕರಿಸಿದರೆ, ಬಾಗಲಕೋಟೆಯಲ್ಲಿ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ.
08:01 AM (IST) Mar 05
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಬಜೆಟ್ನಲ್ಲಿ ಗಣಿ ಜಿಲ್ಲೆ ಬಳ್ಳಾರಿಗೆ 7 ಯೋಜನೆಗಳನ್ನು ಘೋಷಿಸಿದ್ದರು. ಏಳು ಯೋಜನೆಗಳ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
07:41 AM (IST) Mar 05
ಕಳೆದ ಬಜೆಟ್ನಲ್ಲಿ ರಾಮನಗರ ಜಿಲ್ಲೆಗೆ ಘೋಷಿಸಲಾದ 6 ಯೋಜನೆಗಳ ಪೈಕಿ, ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾಗಡಿ ಆಸ್ಪತ್ರೆ ನವೀಕರಣ ಮತ್ತು ಹಾರೋಹಳ್ಳಿ ಪ್ರಜಾಸೌಧ ನಿರ್ಮಾಣ ಸೇರಿದಂತೆ 3 ಯೋಜನೆಗಳು ಪ್ರಗತಿಯಲ್ಲಿವೆ.
07:36 AM (IST) Mar 05
ಲೋಕಾಯುಕ್ತ ದಾಳಿಗೊಳಗಾಗಿದ್ದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕೆಆರ್ಇಐಎಸ್) ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರು ಒಂದು ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಒತ್ತಾಯಿಸಿ ಕೆಆರ್ಎಸ್ ಪಕ್ಷವು ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
07:25 AM (IST) Mar 05
ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ವೈದ್ಯಕೀಯ ವರದಿ ಇಲ್ಲದೆ ಮನೆ ಊಟಕ್ಕೆ ಅನುಮತಿಸಲಾಗದು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಜೈಲಿನ ಆಹಾರದ ಗುಣಮಟ್ಟ ಪರಿಶೀಲನೆ ಮತ್ತು ಪಾರದರ್ಶಕತೆಗೆ ಸರ್ಕಾರಕ್ಕೆ ಹಲವು ನಿರ್ದೇಶನ ನೀಡಿದೆ.
07:15 AM (IST) Mar 05
ಯುವಕನೊಬ್ಬ ತನ್ನ ಸೋದರಮಾವನನ್ನು ಹತ್ಯೆ ಮಾಡಿದ್ದಾನೆ. ನಂತರ ಇದನ್ನು ಅಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆಗೆ ಯತ್ನಿಸಿದಾಗ, ವಿವೇಕನಗರ ಪೊಲೀಸರು ಮಧ್ಯಪ್ರವೇಶಿಸಿ ಮರಣೋತ್ತರ ಪರೀಕ್ಷೆಯ ಮೂಲಕ ಸತ್ಯವನ್ನು ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ.
06:57 AM (IST) Mar 05
ಕಳೆದ ನಾಲ್ಕು ತಿಂಗಳಿನಿಂದ ಬೃಹತ್ ಮೊತ್ತದ ಹಣ ಬೆಂಗಳೂರಿನ ಸಿದ್ಧಾಪುರ ಠಾಣೆಯಲ್ಲಿಯೇ ಇದ್ದು, ಪೊಲೀಸರು ಹದ್ದಿನ ಕಣ್ಣು ಇಟ್ಟು ಅದನ್ನು ಕಾವಲು ಕಾಯುತ್ತಿದ್ದಾರೆ. ಇನ್ನು ನೈಟ್ ಬೀಟ್ ಮಾಡುವ ಸಿಬ್ಬಂದಿ ಬಹಳ ಎಚ್ಚರದಿಂದ ಕೆಲಸ ಮಾಡುತ್ತಿದ್ದಾರೆ.