ಬೆಂಗಳೂರು (ಜೂ.27): ಸಚಿವ ಕೆ.ಎನ್. ರಾಜಣ್ಣ ರಾಜಕೀಯ ಬೆಳವಣಿಗೆ ಆಗಬಹುದು ಎಂದು ಹೇಳಿದ್ದಾರೆಯೇ ಹೊರತು ಹೀಗೆಯೇ ಆಗುತ್ತದೆ ಎಂದು ಹೇಳಿಲ್ಲ. ನೀವು ಊಹೆ ಮಾಡಿಕೊಂಡು ಏನೇನೋ ಸುದ್ದಿ ಮಾಡಿದರೆ ಹೇಗೆ? ರಾಜಣ್ಣ ಅವರ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡುವುದು ಉತ್ತಮ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕೀಯದಲ್ಲಿ ಕಾಂಗ್ರೆಸ್ ಹಾಗೂ ಸರ್ಕಾರದಲ್ಲಿ ಆಗಬಹುದಾದದ ಬದಲಾವಣೆಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
11:27 PM (IST) Jun 28
ಜಿಲ್ಲೆಯ ಕೆಲವು ಕೆಪಿಎಸ್ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಮುಖ್ಯ ಶಿಕ್ಷಕರು ಲಂಚಕ್ಕೆ ಕೈಯೊಡ್ಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.
11:10 PM (IST) Jun 28
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 57 ಟಿಎಂಸಿ ನೀರಿನ ಸಂಗ್ರಹವಿದ್ದು ಜು. 2ರಿಂದ ನ. 30ರ ವರೆಗೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
10:55 PM (IST) Jun 28
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಅಮೆರಿಕಗೆ ತೆರಳುತ್ತಿದ್ದಾರೆ. ನ್ಯೂಯಾರ್ಕ್ ತೆರಳು ಟಿಕೆಟ್ ಬುಕ್ ಆಗಿದೆ. ಆ ಸಂತಸದ ಹಾಗೂ ಹೆಮ್ಮೆ ಕ್ಷಣಕ್ಕೆ ಸಾಕ್ಷಿಯಾಗಲು ಇನ್ನು ಕೆಲವೇ ದಿನ ಮಾತ್ರ ಬಾಕಿ ಇದೆ.
10:35 PM (IST) Jun 28
ಜಿಲ್ಲಾದ್ಯಂತ ನಡೆಯುತ್ತಿರುವ ಕಲ್ಲು, ಗ್ರಾವೆಲ್ ಮತ್ತು ಮರಳು ಗಣಿಗಾರಿಕೆ ಶೇ. 90ರಷ್ಟು ಸಕ್ರಮವಾಗಿಯೇ ಇದ್ದು, ಉಳಿದ ಶೇ. 10ರಷ್ಟು ವಿವಿಧ ಕಾರಣಗಳಿಂದ ಅಕ್ರಮವಾಗಿರಬಹುದು.
10:16 PM (IST) Jun 28
ಚಾಮರಾಜನಗರದಲ್ಲಿ ನಡೆದ ಐದು ಹುಲಿಗಳ ಸಾವು ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಇಂದು ಕೋರ್ಟ್ಗೆ ಹಾಜರುಪಡಿಸಿದದ ಅರಣ್ಯಾಧಿಕಾರಿಗಳು ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
09:36 PM (IST) Jun 28
ಯಾವುದೇ ಧರ್ಮದಲ್ಲಾದರೂ ವ್ಯಕ್ತಿ ಸತ್ತ ಬಳಿಕ ಸಾವಿಗೂ ಗೌರವ ಸಲ್ಲಿಸಬೇಕೆಂಬ ದೃಷ್ಟಿಯಿಂದ ಗೌರವಯುತವಾದ ಶವ ಸಂಸ್ಕಾರ ಮಾಡಬೇಕು ಎನ್ನುವ ನಿಯಮವಿದೆ.
09:23 PM (IST) Jun 28
ಶೆಫಾಲಿ ಜರಿವಾಲ ಹಠಾತ್ ನಿಧನ ಹಲವರನ್ನು ಬೆಚ್ಚಿ ಬೀಳಿಸಿದೆ. ಆದರೆ 10 ತಿಂಗಳ ಹಿಂದೆ ಶೆಫಾಲಿ ಕುಂಡಲಿ ನೋಡಿ ಇದೇ ಭವಿಷ್ಯ ನುಡಿಯಲಾಗಿತ್ತು. ಅದು ಕೂಡ ಆಕೆಯ ಎದುರಿನಲ್ಲೇ ಈ ಭವಿಷ್ಯ ಹೇಳಲಾಗಿತ್ತು. ಇದೀಗ ಈ ಭವಿಷ್ಯ ನಿಜವಾಗಿದೆ.
08:42 PM (IST) Jun 28
ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆಯೇ 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
08:34 PM (IST) Jun 28
ಖುಷಿ ಮುಖರ್ಜಿ ಡ್ರೆಸ್ ಇದೀಗ ಭಾರಿ ಟ್ರೆಂಡ್ ಆಗಿದೆ. ಕಾರಿನಿಂದ ಇಳಿಯುತ್ತಿದ್ದಂತೆ ಬೀಸಿದ ಗಾಳಿ ಹಲವರ ಕಣ್ಣು ತಂಪಾಗಿಸಿದೆ. ಖುಷಿ ಮುಖರ್ಜಿಯ ಹೊಸ ವಿಡಿಯೋ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಹಲವರು ಸೂಪರ್ ಎಂದರೆ, ಕೆಲ ಸೆಲೆಬ್ರೆಟಿಗಳು ಇವರಿಗೆ ದಂಡ ಹಾಕಿ ಎಂದು ಸೂಚಿಸಿದ್ದಾರೆ.
08:17 PM (IST) Jun 28
ನಮ್ಮಲ್ಲಿ ಕ್ರಾಂತಿಗಳು ಎಲ್ಲಾ ನಡೆಯಲ್ಲ, ಕಾಂಗ್ರೆಸ್ ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗವಹಿಸಿದೆ. ಪಕ್ಷದಲ್ಲಿ ಏನೇ ಇದ್ರೂ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
07:53 PM (IST) Jun 28
ರಾಜ್ಯ ರಾಜಕಾರಣದಲ್ಲಿ ಅಥವಾ ಪಕ್ಷದಲ್ಲಿ ಸೆಪ್ಟೆಂಬರ್ ಕ್ರಾಂತಿ ಆಗುತ್ತದೆ ಎನ್ನುವ ಸಚಿವ ರಾಜಣ್ಣ ಹೇಳಿಕೆಗೆ ಬೋಸರಾಜು ಪ್ರತಿಕ್ರಿಯಿಸಿದ್ದಾರೆ.
07:44 PM (IST) Jun 28
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 195 ಆಶಾ ಮೆಂಟರ್ಸ್ನ್ನು ಸರ್ಕಾರ ಕೆಲಸದಿಂದ ಮುಕ್ತಗೊಳಿಸಿದೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ನೀಡಿದ್ದ ವಚನವನ್ನು ಕಾಂಗ್ರೆಸ್ ತಾನೇ ಮರೆತಂತಾಗಿದೆ.
07:30 PM (IST) Jun 28
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಕ್ಷೇತ್ರದ ಎಲ್ಲ ವರ್ಗಗಳ ಜನರೇ ತಮ್ಮ ಭವಿಷ್ಯವಾಗಿದ್ದು ಅವರಿಗೆ ಮೂಲಭೂತ ಸೌಲಭ್ಯ ಒದಗಿಸುವುದೇ ತಮ್ಮ ಗುರಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
07:25 PM (IST) Jun 28
ಬೆಂಗಳೂರಿನಲ್ಲಿ ಆಟೋ ಚಾಲಕರು ಹೆಚ್ಚಿನ ದರ ಕೇಳುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
07:02 PM (IST) Jun 28
ನಟಿ, ಮಾಡೆಲ್ ಶೆಫಾಲಿ ಜರಿವಾಲ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶೆಫಾಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡಿದ್ದಾರೆ. ಆದರೆ ಆಕೆಯ ಕಿರಿಯ ತಂಗಿ ಶಿವಾನಿ ಜರಿವಾಲ ಸಿನಿಮಾದಿಂದ ದೂರವಿದ್ದಾರೆ. ಶೆಫಾಲಿ ತಂಗಿ ಏನು ಮಾಡುತ್ತಿದ್ದಾರೆ?
06:20 PM (IST) Jun 28
ಪ್ರಿಯಕರನ ಜೊತೆ ಸೇರಿ ಪತ್ನಿಯೊಬ್ಬಳು ಗಂಡನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಶವವನ್ನು ಗೋಣಿ ಚೀಲದಲ್ಲಿ ತುಂಬಿ 30 ಕಿ.ಮೀ. ದೂರ ಸಾಗಿಸಿ ಬಾವಿಗೆ ಎಸೆದಿದ್ದಾರೆ. ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಬಯಲಾಗಿದೆ.
06:07 PM (IST) Jun 28
06:04 PM (IST) Jun 28
ನಟಿ ಶೆಫಾಲಿ ಜರಿವಾಲ ನಿಧನ ಸುದ್ದಿ ಸಿನಿ ರಂಗ ಮಾತ್ರವಲ್ಲ ಭಾರತವನ್ನೇ ಬೆಚ್ಚಿ ಬೀಳಿಸಿದೆ. 42ರ ಹರೆಯದ ನಟಿ ಫಿಟ್ ಆಗಿದ್ದರೂ ಹಠಾತ್ ನಿಧನ ಆತಂಕ ಹೆಚ್ಚಿಸಿದೆ. ಇದೀಗ ಈಕೆಯ ತನ್ನ ಬಹುದೊಡ್ಡ ಕನಸು, ಆಸೆಯನ್ನು ಹೇಳಿಕೊಂಡಿದ್ದಳು.
05:31 PM (IST) Jun 28
ಆರ್ಜೆಡಿ ಟಾಟಾ ಅವರು ಹುಟ್ಟುಹಾಕಿರುವ ಭಾರತದ ಮೊದಲ ಸ್ವದೇಶಿ ಬ್ಯೂಟಿ ಬ್ರ್ಯಾಂಡ್ ಲ್ಯಾಕ್ಮೆಗೂ, ಲಕ್ಷ್ಮೀಗೂ, ಆಗಿನ ಪ್ರಧಾನಿ ಜವಾಹರ್ಲಾಲ್ ನೆಹರೂ ಇದೆ ಸಂಬಂಧ. ಇದರ ಕುತೂಹಲದ ಸ್ಟೋರಿ ಇಲ್ಲಿದೆ...
05:07 PM (IST) Jun 28
2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವಕಪ್ ಗೆದ್ದ ರೋಚಕ ಕ್ಷಣಗಳನ್ನು ಈ ಲೇಖನವು ವಿವರಿಸುತ್ತದೆ.
04:56 PM (IST) Jun 28
ಪುರುಷನ ಸಂಪತ್ತಿನ ಶೇಕಡಾ 80 ಅವನ ಹೆಂಡತಿಯ ನಗುವಿನಲ್ಲಿ ಅಡಗಿದೆ ಎಂಬ ಮಾತೊಂದು ಇದೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಏನು ಈ ಮಾತಿನ ಅರ್ಥ?
04:41 PM (IST) Jun 28
ಮಲೆನಾಡಿನ ಕಾಡುಗಳಲ್ಲಿನ ಕಾಳಿಂಗ ಸರ್ಪಗಳ ಸಂರಕ್ಷಣೆಗೆಂದು ಬಂದ ರೀಸರ್ಚ್ ತಂಡವೊಂದು ತಿಮ್ಮನಿಗೆ ಮುಖಾಮುಖಿಯಾಗುತ್ತದೆ. ಕಾಳಿಂಗ ಸರ್ಪದ ಮೊಟ್ಟೆಗಳನ್ನು ತೋರಿಸುವ ಟಾಸ್ಕ್ ಕೊಡುತ್ತದೆ.
04:27 PM (IST) Jun 28
ಟಿವಿಎಸ್ ಅಪಾಚೆ ಹಲವರ ನೆಚ್ಚಿನ ಬೈಕ್, ಸ್ಪೋರ್ಟ್ ಬೈಕ್ ಇಷ್ಟುಪಡುವ ಮಂದಿ ಟಿವಿಎಸ್ ಅಪಾಚೆ ಖರೀದಿಸಲು ಬಯಸುತ್ತಾರೆ. ಇದೀಗ ಹೊಸ ಫೀಚರ್ನೊಂದಿಗೆ ಟಿವಿಎಸ್ ಅಪಾಚೆ 160 ಬೈಕ್ ಬಿಡುಗಡೆಯಾಗಿದೆ. ಕೈಗೆಟುಕುವ ದರದಲ್ಲಿ ಬೈಕ್ ಲಾಂಚ್ ಮಾಡಲಾಗಿದೆ.
04:15 PM (IST) Jun 28
03:44 PM (IST) Jun 28
29 ವರ್ಷದ ಯುವತಿ ಪ್ರತಿಷ್ಠಿತ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿ ತಂಗಿದ್ದ ಪಿಜಿ ಕೋಣೆಯಲ್ಲಿ ಯುವತಿ ಶವ ಪತ್ತೆಯಾಗಿದೆ.
03:40 PM (IST) Jun 28
ತಮಿಳುನಾಡಿನ ರಂಜಿತ್ ಎಂಬ ಅಭಿಮಾನಿಯ ಬಯಕೆಯನ್ನು ಈಡೇರಿಸಿದ ನೀರಜ್ ಚೋಪ್ರಾ, ಬೆಂಗಳೂರಿನಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಎಸೆತ ಸ್ಪರ್ಧೆಗೆ ವಿಐಪಿ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಜುಲೈ 5 ರಂದು ನಡೆಯಲಿರುವ ಈ ಕ್ರೀಡಾಕೂಟ.
02:03 PM (IST) Jun 28
ಬರ್ಮಿಂಗ್ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ಮಾರಕ ವೇಗಿ ಜೋಫ್ರಾ ಆರ್ಚರ್ ತಂಡ ಕೂಡಿಕೊಂಡಿದ್ದಾರೆ. ಆದರೆ ಆರ್ಚರ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವುದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
02:02 PM (IST) Jun 28
ಮುಂಗಾರು ಹಂಗಾಮಿನ ಬೆಳೆ ವಿಮೆ ಪಾವತಿಗೆ ತೋಟಗಾರಿಕಾ ಇಲಾಖೆ ನೀಡಿರುವ ಕಡಿಮೆ ಅವಧಿಯಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂ. 30 ಕೊನೆಯ ದಿನವಾಗಿರುವುದರಿಂದ ಅವಧಿ ವಿಸ್ತರಣೆಗೆ ಒತ್ತಾಯಿಸಿದ್ದಾರೆ.
01:45 PM (IST) Jun 28
01:44 PM (IST) Jun 28
ಬ್ರೇಕಪ್ ಆದ್ಮೇಲೆ ತನ್ನ ಬಾಯ್ಫ್ರೆಂಡ್ ಇನ್ನೊಂದು ಹುಡುಗಿ ಜೊತೆ ಚೆನ್ನಾಗಿರೋದು ನೋಡಿ ಈ ಬಿಗ್ ಬಾಸ್ ಸ್ಪರ್ಧಿ ಖುಷಿಪಟ್ಟಿದ್ದರು.
01:43 PM (IST) Jun 28
ಪ್ರಖ್ಯಾತ ಟಿವಿ ನಿರೂಪಕಿತಮ್ಮ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಅವರು ತಾಯಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
01:32 PM (IST) Jun 28
01:22 PM (IST) Jun 28
01:12 PM (IST) Jun 28
ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕುವಂತೆ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.
12:59 PM (IST) Jun 28
12:55 PM (IST) Jun 28
ಹಿಂದೂಗಳ ಧರ್ಮಗ್ರಂಥ ಭಗವದ್ಗೀತೆಗೆ ಅದೆಂಥ ಶಕ್ತಿಯಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ದೇವಾಲಯದಿಂದ ಕದ್ದ ಆಭರಣಗಳನ್ನು 9 ವರ್ಷಗಳ ಬಳಿಕ ಮರಳಿಸಿರುವ ಕಳ್ಳತನ ರೋಚಕ ಸ್ಟೋರಿ ಇಲ್ಲಿದೆ...
12:51 PM (IST) Jun 28
12:34 PM (IST) Jun 28
ಬಾಲಿವುಡ್ ನಟಿ ಹಾಗೂ 'ಹುಡುಗರು' ಚಿತ್ರದ ಖ್ಯಾತ 'ಪಂಕಜ' ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುನೀತ್ ರಾಜ್ಕುಮಾರ್ ಅವರೊಂದಿಗೆ ನಟಿಸಿದ್ದ ಈ ನಟಿ, ಪುನೀತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು.
12:25 PM (IST) Jun 28
11:37 AM (IST) Jun 28
ಸಾರ್ವಜನಿಕ ಶೌಚಾಲಯಗಳಲ್ಲಿ ಕೈ ಒಣಗಿಸಲು ಹ್ಯಾಂಡ್ ಡ್ರೈಯರ್ಗಳನ್ನು ಬಳಸುವುದು ಅನುಕೂಲಕರವೆನಿಸಿದರೂ, ಅವು ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ಹರಡುವ ಮೂಲಕ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.