ಶಿಕಾರಿಪುರ: ರಾಜಕೀಯ ಜೀವನದಲ್ಲಿ 50 ವಸಂತಗಳನ್ನು ಪೂರೈಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅದ್ಧೂರಿಯಾಗಿ ಅಭಿನಂದನೆ ಸಲ್ಲಿಸಲು ಚಿತ್ರದುರ್ಗದಲ್ಲಿ ಬರುವ ಮೇ ತಿಂಗಳಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಮಾವೇಶದ ಸಿದ್ಧತೆಗೆ ಚಾಲನೆ ದೊರೆತಿದೆ. ಇದಕ್ಕಾಗಿ ಸ್ವಾಗತ ಸಮಿತಿ ರಚಿಸಲಾಗಿದ್ದು, ಕೆಎಲ್ಇ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಅವರನ್ನು ಅಧ್ಯಕ್ಷರನ್ನಾಗಿ, ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಾರ್ಯಾಧ್ಯಕ್ಷರನ್ನಾಗಿ, ಸಂಸದ ಗೋವಿಂದ ಕಾರಜೋಳ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

08:14 AM (IST) Feb 28
ಬೆಳಗಾವಿಯ ಜಿಎಸ್ಟಿ ಗುಪ್ತಚರ ಇಲಾಖೆಯು ಸುಮಾರು ₹593 ಕೋಟಿ ಮೌಲ್ಯದ ನಕಲಿ ಬಿಲ್ ಆಧಾರಿತ ಇನ್ಪುಟ್ ತೆರಿಗೆ ಕ್ರೆಡಿಟ್ ಹಗರಣವನ್ನು ಭೇದಿಸಿದೆ. ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆಯಿಲ್ಲದೆ, ನಕಲಿ ಬಿಲ್ಗಳನ್ನು ಸೃಷ್ಟಿಸಿ ಅಕ್ರಮವಾಗಿ ತೆರಿಗೆ ಕ್ರೆಡಿಟ್ ವರ್ಗಾಯಿಸುತ್ತಿದ್ದ ಜಾಲದ ಸೂತ್ರಧಾರ ಬಂಧನ.
07:44 AM (IST) Feb 28
ಪರಿತ್ಯಕ್ತ ಲಿವ್-ಇನ್ ಸಂಗಾತಿಯ ಹೆಸರನ್ನು ತನ್ನ ಮಗುವಿನ ಜನನ ಪ್ರಮಾಣಪತ್ರದಿಂದ ತೆಗೆದುಹಾಕಲು ಕೋರಿದ್ದ ತಾಯಿಯ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ತಾಯಿಯೇ ಮಗುವಿನ ಏಕೈಕ ನೈಸರ್ಗಿಕ ಪೋಷಕರಾಗಿದ್ದು, ಉಪನಾಮ ಸೇರಿಸಲು ಯಾವುದೇ ಸಾಂವಿಧಾನಿಕ ಅಡ್ಡಿಯಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
07:38 AM (IST) Feb 28
ಬೆಂಗಳೂರನ್ನು ದೇಶದ ಟ್ಯಾಲೆಂಟ್ ಹಬ್ ಎಂದು ಕರೆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದೇಶದಲ್ಲೇ ಅತಿ ಹೆಚ್ಚು ವೇತನ ಕರ್ನಾಟಕದಲ್ಲಿದೆ ಎಂದು ಹೇಳಿದ್ದಾರೆ. ಅಂಗವಿಕಲರಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯೋಗದಾತ ಮತ್ತು ಉದ್ಯೋಗಿಗಳ ನಡುವೆ ಸಮತೋಲನ ಕಾಪಾಡಬೇಕು ಎಂದರು.
06:50 AM (IST) Feb 28
ಬೆಂಗಳೂರಿನಲ್ಲಿ, ಸೋಶಿಯಲ್ ಮೀಡಿಯಾ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು, ಪಾರ್ಟಿಗಳಿಗೆ ಆಹ್ವಾನಿಸಿ, ಅವರಿಗೆ ಡ್ರಗ್ಸ್ ನೀಡಿ ಲೈಂ*ಗಿಕ ದೌರ್ಜನ್ಯ ಎಸಗಲಾಗುತ್ತಿತ್ತು. ನಂತರ ಆ ಕೃತ್ಯದ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಜಾಲವನ್ನು ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
06:17 AM (IST) Feb 28
ಬೆಂಗಳೂರು ಜಿಎಎಫ್ಎಕ್ಸ್ ಸಮ್ಮೇಳನದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರಧಾನಿ ಈಗ ಹೇಳುತ್ತಿರುವ ಆರೆಂಜ್ ಆರ್ಥಿಕತೆಗೆ ಕರ್ನಾಟಕ 2016ರಲ್ಲೇ ಎವಿಜಿಸಿ ನೀತಿ ಮೂಲಕ ಅಡಿಪಾಯ ಹಾಕಿತ್ತು ಎಂದಿದ್ದಾರೆ.