LIVE NOW
Published : Mar 26, 2026, 08:11 AM ISTUpdated : Mar 26, 2026, 10:49 AM IST

Karnataka Latest News: ಟೀಕಿಸಿದವರ ಎದುರೇ 450 ಕೋಟಿಯಿಂದ 16,500 ಕೋಟಿಗೆ ಬೆಳೆದ ಆರ್‌ಸಿಬಿ ನನ್ನ ಡಿಎನ್‌ಎ ಭಾಗ, ರಾಯಲ್ ಚಾಲೆಂಜರ್ಸ್ ಹುಚ್ಚುತನ ಇಂದು 37 ಪಟ್ಟು ಬೆಳೆದಿದೆ - ವಿಜಯ್‌ ಮಲ್ಯ ಟ್ವೀಟ್

ಸಾರಾಂಶ

ಸ್ಪೀಕರ್‌ ಯು.ಟಿ.ಖಾದರ್‌ ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಾಲಿ ವಿಧಾನಸಭೆಯ ಎಲ್ಲಾ ಶಾಸಕರ ಗ್ರೂಫ್‌ ಫೋಟೋ ಸೆಷನ್‌ ಆಯೋಜಿಸಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Vijay Mallya

10:49 AM (IST) Mar 26

ಟೀಕಿಸಿದವರ ಎದುರೇ 450 ಕೋಟಿಯಿಂದ 16,500 ಕೋಟಿಗೆ ಬೆಳೆದ ಆರ್‌ಸಿಬಿ ನನ್ನ ಡಿಎನ್‌ಎ ಭಾಗ, ರಾಯಲ್ ಚಾಲೆಂಜರ್ಸ್ ಹುಚ್ಚುತನ ಇಂದು 37 ಪಟ್ಟು ಬೆಳೆದಿದೆ - ವಿಜಯ್‌ ಮಲ್ಯ ಟ್ವೀಟ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ₹16,500 ಕೋಟಿ ಮೌಲ್ಯಕ್ಕೆ ಮಾರಾಟವಾಗಿದೆ. ಈ ಹಿನ್ನೆಲೆಯಲ್ಲಿ, ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು 2008ರಲ್ಲಿ ₹450 ಕೋಟಿಗೆ ತಂಡ ಖರೀದಿಸಿದ್ದನ್ನು ಮತ್ತು ತಮ್ಮ ನಿರ್ಧಾರವನ್ನು ಟೀಕಿಸಿದ್ದವರನ್ನು ನೆನಪಿಸಿಕೊಂಡಿದ್ದಾರೆ. ತಂಡದ ಮೌಲ್ಯ 37 ಪಟ್ಟು ಹೆಚ್ಚಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಹೊಸ ಮಾಲೀಕರಿಗೆ ಶುಭ ಕೋರಿದ್ದಾರೆ.
Read Full Story

09:54 AM (IST) Mar 26

ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪ್ರಾಧ್ಯಾಪಕನ ಕೆಟ್ಟ ಪ್ರಪೋಸ್‌, ಕಾಲೇಜಾಯ್ತು ರಣರಂಗ!

ನೆಲಮಂಗಲದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ, ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಗೆ ಅಸಭ್ಯವಾಗಿ ಪ್ರಪೋಸ್ ಮಾಡಿದ್ದಾರೆಂಬ ಆರೋಪದ ಮೇಲೆ ದೊಡ್ಡ ಗಲಾಟೆ ನಡೆದಿದೆ. ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿ ಪ್ರಾಧ್ಯಾಪಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಗೃಹ ಸಚಿವ ಜಿ. ಪರಮೇಶ್ವರ್ ಅವರ ಒಡೆತನದ ಕಾಲೇಜಿನಲ್ಲಿ ನಡೆದ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story

09:53 AM (IST) Mar 26

ಮೋಟಾರು ವಾಹನಗಳ ತೆರಿಗೆ ಬಿಲ್‌ಗೆ ಚರ್ಚೆ ಇಲ್ಲದೆ ಅಂಗೀಕಾರ; ಹೊಸ ತಿದ್ದುಪಡಿಯಿಂದ ವಾಹನ ಮಾಲೀಕರಿಗೆ ಆಗುವ ಲಾಭವೇನು?

ಕರ್ನಾಟಕ ಸರ್ಕಾರವು ಸ್ಲೀಪರ್‌ ಕೋಚ್‌ ಮತ್ತು 12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಒಪ್ಪಂದದ ವಾಹನಗಳ ಮೇಲಿನ ಪ್ರತಿ ಆಸನದ ತೆರಿಗೆಯನ್ನು ಗಣನೀಯವಾಗಿ ಇಳಿಕೆ. ಹೊರ ರಾಜ್ಯಗಳಲ್ಲಿ ಕಡಿಮೆ ತೆರಿಗೆಯಿಂದಾಗಿ ಅಲ್ಲಿ ನೋಂದಣಿಯಾಗುತ್ತಿದ್ದ ವಾಹನಗಳನ್ನು ರಾಜ್ಯಕ್ಕೆ ಮರಳಿ ಸೆಳೆಯುವ ಮಾಸ್ಟರ್ ಪ್ಲಾನ್

Read Full Story

08:45 AM (IST) Mar 26

ಮಹಿಳಾ ರೌಡಿ ಶೀಟರ್‌ ಗೆ ಇನ್ಸ್‌ಪೆಕ್ಟರ್ ಪಾಪಣ್ಣ ಲೈಂಗಿಕ ಕಿರುಕುಳ, ತನಿಖೆಗೆ ಆದೇಶಿಸಿದ ಬೆಂಗಳೂರು ಪೊಲೀಸ್ ಆಯುಕ್ತ

ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳಾ ರೌಡಿ ಶೀಟರ್ ಯಶಸ್ವಿನಿ ದೂರು ನೀಡಿದ್ದಾರೆ. ಆಡಿಯೋ ಸಾಕ್ಷ್ಯಗಳ ಸಹಿತ ದೂರು ನೀಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಈ ಪ್ರಕರಣದ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
Read Full Story

08:35 AM (IST) Mar 26

ತಾಕತ್ತಿದ್ದರೆ ಪ್ರದೀಪ ಈಶ್ವರ ದಾವಣಗೆರೆ ಜಿಲ್ಲೆಗೆ ಬರಲಿ - ಬಿಜೆಪಿ ನಾಯಕ ನೇರ ಸವಾಲು!

ಬಿಜೆಪಿಯವರನ್ನು ಅಯೋಗ್ಯರು ಎಂದಿದ್ದಲ್ಲದೆ, ಮುಸ್ಲಿಂ ಮಹಿಳೆಯರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ್ ವಿರುದ್ಧ ಬಿಜೆಪಿ ಮುಖಂಡ ಬಿ.ಜಿ.ಅಜಯಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಕತ್ತಿದ್ದರೆ ದಾವಣಗೆರೆಗೆ ಬರಲಿ ಎಂದು ಸವಾಲು.

Read Full Story

More Trending News