Published : May 25, 2025, 05:41 AM ISTUpdated : May 25, 2025, 09:30 PM IST

Karnataka news Live: ಬಿಜೆಪಿ 18 ಶಾಸಕರ ಅಮಾನತು ರದ್ದು; ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಆದೇಶ!

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಅನಾರೋಗ್ಯ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೋನಾ ಸೋಂಕಿತ ವೃದ್ದರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಕೊರೋನಾಗೆ ರಾಜ್ಯದಲ್ಲಿ ಮೊದಲ ಬಲಿ ಆದಂತಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 38 ಮಂದಿಗೆ ಸೋಂಕು ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ನಗರದಲ್ಲೇ 32 ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಹಾಗೆಯೇ ಮಹಾರಾಷ್ಟ್ರದ ಥಾಣೆಯಲ್ಲಿ ಷುಗರ್‌ನಿಂದಲೂ ಬಳಲುತ್ತಿದ್ದ 21 ವರ್ಷದ ಯುವಕ ಬಲಿಯಾಗಿದ್ದಾನೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಹೊಸ ಕೊರೋನಾಗೆ ಮಹಾರಾಷ್ಟ್ರದಲ್ಲಿ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ.

UT Khader 18 BJP MLAs

09:30 PM (IST) May 25

ಬಿಜೆಪಿ 18 ಶಾಸಕರ ಅಮಾನತು ರದ್ದು; ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಆದೇಶ!

ಕರ್ನಾಟಕ ವಿಧಾನಸಭೆಯಲ್ಲಿ ಅಶಿಸ್ತಿನ ಆಧಾರದ ಮೇಲೆ ಅಮಾನತುಗೊಂಡಿದ್ದ 18 ಬಿಜೆಪಿ ಶಾಸಕರ ಅಮಾನತು ಆದೇಶವನ್ನು ಸ್ಪೀಕರ್ ಯು.ಟಿ. ಖಾದರ್ ಹಿಂಪಡೆದಿದ್ದಾರೆ. ವಿಪಕ್ಷ ನಾಯಕರ ಮನವಿ ಮೇರೆಗೆ ಸಿಎಂ, ಡಿಸಿಎಂ, ಕಾನೂನು ಮತ್ತು ಸಂಸದೀಯ ಸಚಿವರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Read Full Story

08:56 PM (IST) May 25

ಕರ್ನಾಟಕದಲ್ಲಿ ಇಂದು 9 ಹೊಸ ಕೋವಿಡ್-19 ಪ್ರಕರಣಗಳು, ಸಕ್ರಿಯ ಕೇಸ್‌ಗಳ ಸಂಖ್ಯೆ 47ಕ್ಕೆ ಏರಿಕೆ!

ಕರ್ನಾಟಕದಲ್ಲಿ ಇಂದು 9 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. 46 ಜನರು ಹೋಮ್ ಐಸೋಲೇಷನ್‌ನಲ್ಲಿದ್ದರೆ, ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಹೊಸ ಮರಣ ವರದಿಯಾಗಿಲ್ಲ.
Read Full Story

08:03 PM (IST) May 25

ಶಾರುಖ್ ಸೇರಿ ಸ್ಟಾರ್‌ಗಳ ಜತೆ ನಟಿಸಲು ಐಶ್ವರ್ಯಾ ರೈ ತಿರಸ್ಕರಿಸಿದ 8 ಸಿನಿಮಾಗಳು ಸೂಪರ್ ಹಿಟ್!

ಐಶ್ವರ್ಯಾ ರೈ ಇತ್ತೀಚೆಗೆ 78 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಐಶ್ವರ್ಯಾ ಬಾಲಿವುಡ್‌ನ ಸುಂದರ ನಟಿ ಮತ್ತು ಹಲವು ಚಿತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಐಶ್ವರ್ಯಾ ಹಲವು ಸೂಪರ್‌ಹಿಟ್ ಚಿತ್ರಗಳನ್ನು ತಿರಸ್ಕರಿಸಿದ್ದಾರೆ. ಅಂತಹ 8 ಚಿತ್ರಗಳನ್ನು ನೋಡೋಣ...

Read Full Story

07:49 PM (IST) May 25

ಐಫೋನ್ ಉತ್ಪಾದನೆ; ಭಾರತದಲ್ಲಿ ಚೀಪ್ ರೇಟ್, ಅಮೇರಿಕಾದಲ್ಲಿ ಭಾರೀ ದುಬಾರಿ!

ಆ್ಯಪಲ್ ಕಂಪನಿ ಭಾರತದಲ್ಲಿ ಐಫೋನ್ (iPhone) ಫ್ಯಾಕ್ಟರಿಗಳನ್ನು ಸ್ಥಾಪಿಸಿದೆ. ಅಮೆರಿಕಕ್ಕಿಂತ ಭಾರತದಲ್ಲಿ ಐಫೋನ್ ತಯಾರಿಸುವ ವೆಚ್ಚ ತುಂಬಾ ಕಡಿಮೆ. ಜಿಟಿಆಆರ್‌ಐ ವರದಿಯ ಪ್ರಕಾರ, ಭಾರತದಲ್ಲಿ ಒಂದು ಐಫೋನ್ ಜೋಡಿಸಲು ಸುಮಾರು $30 ವೆಚ್ಚವಾಗುತ್ತದೆ. ಆದರೆ ಅಮೆರಿಕದಲ್ಲಿ $390 ವೆಚ್ಚವಾಗುತ್ತದೆ.

Read Full Story

07:28 PM (IST) May 25

ಯಾದಗಿರಿ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣ; ಪತಿರಾಯನ ತಪ್ಪಿಗೆ ಪತ್ನಿಗೆ ಕಾಂಗ್ರೆಸ್ ನಿಂದ ಶಿಕ್ಷೆ!

ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕಾಂಗ್ರೆಸ್ ನಾಯಕಿ ಮಂಜುಳಾ ಗೂಳಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

Read Full Story

07:10 PM (IST) May 25

ಕೊಡಗಿನಲ್ಲಿ ಮಳೆಯ ಅಬ್ಬರ - ರಸ್ತೆ ಬಂದ್, ವಿದ್ಯುತ್ ಕಡಿತ, ಭೂಕುಸಿತ ಭೀತಿಯಿಂದ ಜನಜೀವನ ಅಸ್ತವ್ಯಸ್ತ

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.  ತ್ರಿವೇಣಿ ಸಂಗಮ ಸ್ನಾನಘಟ್ಟ, ಪಕ್ಕದ ಉದ್ಯಾನ ಮುಳುಗಿದೆ.

Read Full Story

06:37 PM (IST) May 25

ಆಸ್ಪತ್ರೆಯಲ್ಲಿ ಗ್ರಾಜುವೇಶನ್ ಫೋಟೋ ತೆಗೆದುಕೊಂಡ ಗೆಳೆಯರು, ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿ ಸಾವು!

ಪ್ರೀತಿಯ ಗೆಳೆಯನ ಜೊತೆ ಫೋಟೋ ತೆಗೆದುಕೊಂಡು ಸಂತೋಷದಿಂದ ವಿದಾಯ ಹೇಳಿದರು. ಆದರೆ ಅದು ಶಾಶ್ವತ ವಿದಾಯ ಎಂದು ಯಾರೂ ಊಹಿಸಿರಲಿಲ್ಲ.

Read Full Story

05:31 PM (IST) May 25

ರಾಯರ ಮಠದ ಒಳಗೆ ಚಪ್ಪಲಿ ಎಸೆದ ಮಹಿಳೆ!

ಬೆಂಗಳೂರಿನ ಇಂದಿರಾನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಪರಿಚಿತ ಮಹಿಳೆಯೊಬ್ಬರು ಚಪ್ಪಲಿ ಎಸೆದ ಘಟನೆ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಕ್ತರು ಮತ್ತು ಸ್ಥಳೀಯರು ಈ ಕೃತ್ಯವನ್ನು ಖಂಡಿಸಿದ್ದಾರೆ.
Read Full Story

04:50 PM (IST) May 25

ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ; ಪ್ರತಿನಿತ್ಯ 200 ಕೋವಿಡ್‌ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಆದೇಶ

ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ ಮೊದಲ ಕೋವಿಡ್ ಸಾವು ದಾಖಲಾಗಿದೆ. 85 ವರ್ಷದ ವೃದ್ಧರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 38 ಸಕ್ರಿಯ ಪ್ರಕರಣಗಳಿದ್ದು, ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ತೆಗೆದುಕೊಂಡಿದೆ.

Read Full Story

04:12 PM (IST) May 25

ಈ ರೈಲಿನಲ್ಲಿ ಕೇವಲ 25 ರೂ.ನಲ್ಲಿ ಭಾರತದಾದ್ಯಂತ ಪ್ರಯಾಣಿಸಿ; ಯಾವಾಗ, ಎಲ್ಲಿಂದ ಹೊರಡುತ್ತದೆ?

ನೀವು ಪ್ರಯಾಣವನ್ನು ಇಷ್ಟಪಡುವವರಾಗಿದ್ದರೆ ಪ್ರಯಾಣ ಮಾಡುವಾಗ ನೀವು ಅನೇಕ ವಿಷಯಗಳನ್ನು ಕಲಿಯಬಹುದಾದ ರೈಲಿನ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.  ಈ ರೈಲು ವರ್ಷಕ್ಕೊಮ್ಮೆ 500 ಜನರಿಗೆ ಕೇವಲ ₹25 ರಲ್ಲಿ 8000 ಕಿ.ಮೀ. ಭಾರತದಾದ್ಯಂತ ಪ್ರಯಾಣಿಸುವ ಅವಕಾಶ ನೀಡುತ್ತದೆ.  

Read Full Story

04:11 PM (IST) May 25

ಶ್ರೀಷ್ಠಿ 2025 - ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಉತ್ಸವ ಭವ್ಯ ಉದ್ಘಾಟನೆ

ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಶ್ರೀಷ್ಠಿ 2025 ಕಾರ್ಯಕ್ರಮವು ವಿಜೃಂಭಣೆಯಿಂದ ಆರಂಭವಾಯಿತು. ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಈ ಉತ್ಸವದಲ್ಲಿ ವಿವಿಧ ಗಣ್ಯರು ಭಾಗವಹಿಸಿದ್ದರು.
Read Full Story

03:33 PM (IST) May 25

ಅಯೋಧ್ಯೆಯಲ್ಲಿ ಹನುಮಾನ್ ದರ್ಶನ ಪಡೆದ ವಿರುಷ್ಕಾ ಜೋಡಿ!

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಯೋಧ್ಯೆಯ ಹನುಮಾನ್ ಗಢಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಜೋಡಿಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ದೇವಸ್ಥಾನದ ಅರ್ಚಕರು ಅವರಿಗೆ ಹಾರ ಮತ್ತು ಶಾಲುಗಳನ್ನು ನೀಡಿದರು.
Read Full Story

03:15 PM (IST) May 25

ಬಿಜೆಪಿ 18 ಶಾಸಕರ ಅಮಾನತು ಹಿಂಪಡೆಯಲು ಮಹತ್ವದ ಸಭೆ ಕರೆದ ಸ್ಪೀಕರ್ ಯು.ಟಿ. ಖಾದರ್!

ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ 18 ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ಕುರಿತು ಇಂದು ಸಂಜೆ ಮಹತ್ವದ ಸಭೆ ನಡೆಯಲಿದೆ. ಸ್ಪೀಕರ್ ಯು.ಟಿ. ಖಾದರ್, ಸಿಎಂ, ಡಿಸಿಎಂ ಮತ್ತು ವಿಪಕ್ಷ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
Read Full Story

03:01 PM (IST) May 25

ರೊನಾಲ್ಡೋ ಕ್ಲಬ್ ವರ್ಲ್ಡ್ ಕಪ್‌ನಲ್ಲಿ ಆಡ್ತಾರಾ? ಫಿಫಾ ಅಧ್ಯಕ್ಷರಿಂದ ಗುಡ್‌ ನ್ಯೂಸ್?

ಫಿಫಾ ಅಧ್ಯಕ್ಷ ಜಿಯಾನ್ನಿ ಇನ್ಫಾಂಟಿನೋ, ರೊನಾಲ್ಡೋ ಅವರು ಕ್ಲಬ್ ವರ್ಲ್ಡ್ ಕಪ್‌ನಲ್ಲಿ ಆಡುವ ಸಾಧ್ಯತೆಯನ್ನು ಸೂಚಿಸಿದ್ದಾರೆ. ಅಲ್ ನಸರ್ ತಂಡ ಟೂರ್ನಿಗೆ ಅರ್ಹತೆ ಪಡೆಯದಿದ್ದರೂ, ರೊನಾಲ್ಡೋ ಬೇರೆ ತಂಡದಿಂದ ಆಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

Read Full Story

02:29 PM (IST) May 25

ಏಷ್ಯಾನೆಟ್‌ ಸುವರ್ಣ ಶಿಕ್ಷಣ ಮೇಳ - ವಿದ್ಯಾರ್ಥಿಗಳಿಗೆ ದಾರಿದೀಪ

ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವಿದ್ಯಾರ್ಥಿಗಳಿಗಾಗಿ 'ಸುವರ್ಣ ಶಿಕ್ಷಣ ಮೇಳ'ವನ್ನು ಆಯೋಜಿಸಿದೆ. ಈ ಮೇಳದಲ್ಲಿ 50 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಭಾಗವಹಿಸಲಿದ್ದು, ವಿದ್ಯಾರ್ಥಿಗಳಿಗೆ ಕೋರ್ಸ್ ಮತ್ತು ಕಾಲೇಜು ಆಯ್ಕೆ, ಅಡ್ಮಿಷನ್ ಪ್ರಕ್ರಿಯೆ ಮಾಹಿತಿ ನೀಡಲಾಗುವುದು.

Read Full Story

01:58 PM (IST) May 25

IPL 2025 - ಟಾಪ್-2 ಅಲ್ಲ, ಟಾಪ್-4ಗೆ ಕುಸಿಯುವ ಭೀತಿಗೆ ಸಿಲುಕಿದ ಗುಜರಾತ್ ಟೈಟಾನ್ಸ್! ಬದಲಾಯ್ತು ಲೆಕ್ಕಾಚಾರ

ಐಪಿಎಲ್‌ನಲ್ಲಿ ನಾಲ್ಕು ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಗುಜರಾತ್ ಟೈಟಾನ್ಸ್ ಸೋತರೆ ಟಾಪ್ 2 ಸ್ಥಾನದಿಂದ ಕೆಳಗೆ ಬೀಳುವ ಸಾಧ್ಯತೆಯಿದೆ. ಪಂಜಾಬ್ ಕಿಂಗ್ಸ್, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ಗೆ ಟಾಪ್ 2 ಸ್ಥಾನ ಪಡೆಯುವ ಅವಕಾಶವಿದೆ.
Read Full Story

01:56 PM (IST) May 25

ಒಳ ಮೀಸಲಾತಿ - ಜೂನ್‌ನಲ್ಲಿ ಘೋಷಣೆ?

ಜಾತಿ ಗಣತಿ ಮೇ ಅಂತ್ಯಕ್ಕೆ ಮುಗಿಯುವ ನಿರೀಕ್ಷೆಯಿದ್ದು, ಜೂನ್‌ನಲ್ಲಿ ಒಳಮೀಸಲಾತಿ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
Read Full Story

01:16 PM (IST) May 25

5 ನಿಮಿಷದಲ್ಲಿ ₹51 ಕೋಟಿ ಚಿನ್ನದ ಟಾಯ್ಲೆಟ್ ಕಳ್ಳತನ! 5 ವರ್ಷದ ಬಳಿಕ ನಾಲ್ವರ ಬಂಧನ

ಯುಕೆ ಬ್ಲೆನ್‌ಹೈಮ್ ಅರಮನೆಯಲ್ಲಿ 51 ಕೋಟಿ ರೂ. ಮೌಲ್ಯದ ಚಿನ್ನದ ಟಾಯ್ಲೆಟ್ ಕಳ್ಳತನವಾಗಿದೆ. ಮೂವರು ಕಳ್ಳರು ಕೇವಲ 5 ನಿಮಿಷಗಳಲ್ಲಿ ಈ ಕೃತ್ಯ ಎಸಗಿದ್ದಾರೆ

Read Full Story

12:53 PM (IST) May 25

ರೈತರಿಗೆ ಬಂಪರ್ - ಭತ್ತದ ಡಿಎನ್​ಎ ಬದಲಿಸಿ ವಿಜ್ಞಾನಿಗಳಿಂದಲೇ ಹೊಸ ತಳಿ ರೆಡಿ! ವಿಶ್ವದಲ್ಲೇ ಮೊದಲು...

ಭಾರತದ ವಿಜ್ಞಾನಿಗಳು ಜೀನೋಮ್ ಆಧರಿತ ಅಕ್ಕಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ತಳಿಗಳು ರೋಗ ನಿರೋಧಕ, ಹೆಚ್ಚು ಇಳುವರಿ ನೀಡುತ್ತವೆ ಮತ್ತು ನೀರು ಸಂರಕ್ಷಣೆಗೆ ನೆರವಾಗುತ್ತವೆ.

Read Full Story

12:52 PM (IST) May 25

ರೆಸಾರ್ಟ್‌ಗೆ ಪ್ರವಾಸ ಹೋದ ಪ್ರಿಯತಮೆ ಸಾವು, ಪ್ಲಾನ್ ಮಾಡಿ ಕೊಂದೇ ಬಿಟ್ನಾ ಪ್ರಿಯಕರ?

ಪಾಲ್ಘರ್ ಜಿಲ್ಲೆಯ ರೆಸಾರ್ಟ್‌ನಲ್ಲಿ ಯುವತಿಯೊಬ್ಬಳು ಸಂಶಯಾಸ್ಪದವಾಗಿ ಮೃತಪಟ್ಟಿದ್ದಾಳೆ. ಪ್ರಿಯಾಂಕಾ ಪವಾರ್ ತನ್ನ ಪ್ರಿಯಕರನ ಜೊತೆ ರಿಸಾರ್ಟ್‌ನಲ್ಲಿದ್ದಾಗ, ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿ ಮೃತಪಟ್ಟಳು. ಕುಟುಂಬಸ್ಥರು ಹತ್ಯೆಯ ಶಂಕೆ ವ್ಯಕ್ತಪಡಿಸಿದ್ದಾರೆ.

Read Full Story

12:21 PM (IST) May 25

ಬಾಗಲಕೋಟೆ - ಮುಸುಕುಧಾರಿ ಕಳ್ಳರಿಂದ ಸರಣಿ ಮನೆಗಳ್ಳತನ!

ಬಾಗಲಕೋಟೆಯಲ್ಲಿ ಮುಸುಕುಧಾರಿ ಕಳ್ಳರು ಸರಣಿ ಮನೆಗಳ್ಳತನ ಮಾಡಿದ್ದಾರೆ. ಪಾಂಡವಪುರದಲ್ಲಿ ವಿದ್ಯುತ್ ಸ್ಪರ್ಶದಿಂದ ರೈತ ಮೃತಪಟ್ಟಿದ್ದಾರೆ. ಮಂಡ್ಯದಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read Full Story

12:02 PM (IST) May 25

ಈ 5 ಟ್ರಾನ್ಸ್‌ಪರ್ ಮ್ಯಾಂಚೆಸ್ಟರ್ ಯುನೈಟೆಡ್ ಗೆ ದೊಡ್ಡ ಹೊಡೆತ ನೀಡಬಹುದು!

ಚಾಂಪಿಯನ್ಸ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಸೋತಿದ್ದರಿಂದ, ವಿಕ್ಟರ್ ಗ್ಯೋಕೆರೆಸ್ ಮತ್ತು ವಿಕ್ಟರ್ ಒಸಿಮ್ಹೆನ್ ಸೇರಿದಂತೆ 5 ಪ್ರಮುಖ ಆಟಗಾರರನ್ನು ಈ ಬೇಸಿಗೆಯಲ್ಲಿ ಕಳೆದುಕೊಳ್ಳಬಹುದು.

Read Full Story

11:55 AM (IST) May 25

ಈಗ ಎಲೆಕ್ಷನ್‌ ನಡೆದರೆ ಬಿಜೆಪಿಗೆ 150-160 ಸ್ಥಾನ - ಬಿ.ವೈ.ವಿಜಯೇಂದ್ರ

ರಾಜ್ಯ ವಿಧಾನಸಭೆಗೆ ಈಗ ಚುನಾವಣೆ ನಡೆದರೆ ಬಿಜೆಪಿ 150-160 ಸ್ಥಾನ ಗೆಲ್ಲುತ್ತೆ ಎಂದು ಖಾಸಗಿ ಸಮೀಕ್ಷೆಯೊಂದು ಹೇಳಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Read Full Story

11:34 AM (IST) May 25

ನನಗೆ ಬೈದು ಛಲವಾದಿ ನಾರಾಯಣಸ್ವಾಮಿ ಅವರೇ ಅಳುತ್ತಿದ್ದಾರೆ - ಸಚಿವ ಪ್ರಿಯಾಂಕ್‌ ಖರ್ಗೆ

ಆರ್ಥಿಕ, ಸಾಮಾಜಿಕ, ಬುಡಕಟ್ಟು ಸೇರಿ ಯಾವುದೇ ವಿಚಾರವಾಗಿ ಯಾವುದೇ ವೇದಿಕೆಯಲ್ಲೂ ನಾನು ಚರ್ಚೆಗೆ ಸಿದ್ಧನಿದ್ದೇನೆ. ನನ್ನೊಂದಿಗೆ ಚರ್ಚೆ ನಡೆಸಲು ಅವರು ತಯಾರಿದ್ದಾರೆಯೇ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ.

 

Read Full Story

10:59 AM (IST) May 25

ಟೆಸ್ಟ್ ಕ್ರಿಕೆಟ್‌ನಲ್ಲಿ ಮುಗಿಯಿತಾ ಈ ಸ್ಟಾರ್ ಕ್ರಿಕೆಟಿಗನ ವೃತ್ತಿಬದುಕು?

ಫಿಟ್‌ನೆಸ್ ಸಮಸ್ಯೆಯಿಂದಾಗಿ ವೇಗಿ ಮೊಹಮ್ಮದ್ ಶಮಿ ಭಾರತ ತಂಡದಿಂದ ಹೊರಗುಳಿದಿದ್ದಾರೆ. 64 ಟೆಸ್ಟ್‌ಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. ಹಲವು ಯುವ ಬೌಲರ್‌ಗಳು ತಂಡದ ಆಯ್ಕೆ ರೇಸ್‌ನಲ್ಲಿರುವುದರಿಂದ ಶಮಿ ಇನ್ನು ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

Read Full Story

10:16 AM (IST) May 25

ಸತ್ಯ ನಾಡೆಲ್ಲಾ ಭಾಷಣಕ್ಕೆ ಅಡ್ಡಿಪಡಿಸಿ ಧ್ವನಿ ಎತ್ತಿದ ಮೈಕ್ರೋಸಾಫ್ಟ್‌ ಉದ್ಯೋಗಿ ವಜಾ!

ಮೈಕ್ರೋಸಾಫ್ಟ್‌ನ 'ಬಿಲ್ಡ್ 2025' ಸಮ್ಮೇಳನದಲ್ಲಿ ಪ್ಯಾಲೆಸ್ಟೀನ್ ಪರ ಘೋಷಣೆ ಕೂಗಿದ ಉದ್ಯೋಗಿಯನ್ನು ವಜಾಗೊಳಿಸಲಾಗಿದೆ. ಈ ಘಟನೆ ಕಂಪನಿಯೊಳಗೆ ಆಂತರಿಕ ಪ್ರತಿಭಟನೆ ಮತ್ತು ಚರ್ಚೆಗೆ ಕಾರಣವಾಗಿದೆ. ಇಸ್ರೇಲಿ ಸೇನೆಗೆ ತಂತ್ರಜ್ಞಾನ ನೆರವು ನೀಡುವ ಕಂಪನಿಯ ನಿಲುವನ್ನು ಪ್ರಶ್ನಿಸಲಾಗುತ್ತಿದೆ.
Read Full Story

09:59 AM (IST) May 25

ಸೋತಿದ್ದು ಒಳ್ಳೆಯದ್ದೇ ಆಯ್ತು ಎಂದ ಜಿತೇಶ್ ಶರ್ಮಾ; ಬಿಸಿ ಮುಟ್ಟಿಸಿದ ಆರ್‌ಸಿಬಿ ಫ್ಯಾನ್ಸ್

ಆರ್‌ಸಿಬಿ ನಾಯಕ ಜಿತೇಶ್ ಶರ್ಮಾ, "ಸೋಲು ಕೆಲವೊಮ್ಮೆ ಒಳ್ಳೆಯದು" ಅಂತ ಹೇಳಿದ್ದಕ್ಕೆ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.
Read Full Story

09:31 AM (IST) May 25

ಮಂಡ್ಯದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ - ಪೊಲೀಸರಿಗೆ ದೂರು

ಜಿಲ್ಲೆಯ ಕೆರಗೋಡು ಮತ್ತು ಶ್ರೀರಂಗಪಟ್ಟಣದಲ್ಲಿ ಎರಡು ಬಾಲ್ಯ ವಿವಾಹಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಈ ಬಾಲ್ಯ ವಿವಾಹಗಳು ಆಯಾ ಭಾಗದ ದೇವಸ್ಥಾನಗಳಲ್ಲಿ ನಡೆದಿವೆ. ಈ ಸಂಬಂಧ ಮಂಡ್ಯ ತಾಲೂಕಿನ ಬಸರಾಳು ಮತ್ತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.

Read Full Story

09:18 AM (IST) May 25

ಹಿಂದುಳಿದ ತಾಲೂಕು ಪತ್ತೆಗೆ ರಾಜ್ಯದಲ್ಲಿ ಸಮೀಕ್ಷೆ - ನಂಜುಂಡಪ್ಪ ವರದಿ ಜಾರಿಗೆ 4 ಸಾವಿರ ಕೋಟಿ ವೆಚ್ಚ

ಅಭಿವೃದ್ಧಿಯ ಅಸಮಾನತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ. ಆದರೆ, ಹೈದರಾಬಾದ್ ಕರ್ನಾಟಕದಲ್ಲಿ ಅತೀ ಹೆಚ್ಚು ಅಸಮಾನತೆ ಕಂಡುಬಂದಿದೆ. ರಾಜ್ಯದ 175 ತಾಲೂಕುಗಳಲ್ಲಿ 114 ತಾಲೂಕುಗಳು ಹಿಂದುಳಿದಿವೆ ಎಂದು ಸಮಿತಿ ಹೇಳಿತ್ತು.

Read Full Story

09:06 AM (IST) May 25

ಬೆಳ್ಳಂಬೆಳಗ್ಗೆ ಗುಡ್‌ ನ್ಯೂಸ್ ಕೊಟ್ಟ ಆರ್‌ಸಿಬಿ; ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ. ಇದೀಗ ಪ್ಲೇ ಆಫ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಗುಡ್ ನ್ಯೂಸ್ ಸಿಕ್ಕಿದೆ. ಏನದು ಎನ್ನುವುದನ್ನು ನೋಡೋಣ ಬನ್ನಿ.

 

Read Full Story

09:04 AM (IST) May 25

ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರ - ಭಾರತದ ನಿಯೋಗಗಳ ವಿದೇಶ ಪ್ರವಾಸ

ಪಾಕ್ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಭಾರತದ ಮತ್ತೆರಡು ಸರ್ವಪಕ್ಷ ನಿಯೋಗಗಳು ವಿದೇಶ ಪ್ರವಾಸ ಆರಂಭಿಸಿವೆ.

Read Full Story

08:52 AM (IST) May 25

ಜಪಾನನ್ನು ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

ಭಾರತವು ಜಪಾನ್ ಅನ್ನು ಮೀರಿಸಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಮುಂದಿನ 2.5 ರಿಂದ 3 ವರ್ಷಗಳಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ನುಡಿದಿದ್ದಾರೆ.

Read Full Story

08:41 AM (IST) May 25

ಪಾಕ್‌ ಉಗ್ರವಾದಕ್ಕೆ 4 ದಶಕದಲ್ಲಿ 20,000 ಬಲಿ - ವಿಶ್ವಸಂಸ್ಥೆಯಲ್ಲಿ ಭಾರತದ ವಾಗ್ದಾಳಿ

 ಕಳೆದ ನಾಲ್ಕು ದಶಕಗಳಲ್ಲಿ 20,000 ಭಾರತೀಯರು ಪಾಕಿಸ್ತಾನದ ಭಯೋತ್ಪಾದನೆಗೆ ಬಲಿಯಾಗಿದ್ದಾರೆ ಎಂದು ಭಾರತದ ಪ್ರತಿನಿಧಿ ವಿಶ್ವಸಸ್ಥೆಯಲ್ಲಿ ಹೇಳಿದ್ದಾರೆ. 

Read Full Story

08:40 AM (IST) May 25

ನೀಟ್‌ ರಿಸಲ್ಟ್ ಬಳಿಕ ಸೀಟು ಹಂಚಿಕೆಗೆ ಏಕೀಕೃತ ಕೌನ್ಸೆಲಿಂಗ್ - ಸಚಿವ ಡಾ.ಎಂ.ಸಿ.ಸುಧಾಕರ್‌

ನೀಟ್‌ ಫಲಿತಾಂಶ ಹಾಗೂ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಎಂಜಿನಿಯರಿಂಗ್‌, ವೈದ್ಯಕೀಯ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆಗೂ ಏಕೀಕೃತ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

Read Full Story

08:33 AM (IST) May 25

ಕೆಂಪೇಗೌಡ ಬಡಾವಣೆಯಲ್ಲಿ ಸ್ಕೈಡೆಕ್‌ ನಿರ್ಮಾಣ - ಡಿ.ಕೆ.ಶಿವಕುಮಾರ್‌

ಬೆಂಗಳೂರಿನ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್‌ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರ ಇರಬೇಕು ಎಂಬ ಕಾರಣದ ಹಿನ್ನೆಲೆಯಲ್ಲಿ ಕೆಂಪೇಗೌಡ ಬಡಾವಣೆಯ ಬಿಡಿಎ ಜಾಗದಲ್ಲಿ ಸ್ಕೈಡೆಕ್‌ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Read Full Story

08:32 AM (IST) May 25

ಡೆಲ್ಲಿ-ಪಂಜಾಬ್ ಬಿಗ್ ಫೈಟ್ - ನಿನ್ನೆಯ ಐಪಿಎಲ್ ಮ್ಯಾಚ್ ಗೆದ್ದಿದ್ದು ಯಾರು?

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 6 ವಿಕೆಟ್‌ಗಳಿಂದ ಸೋಲು ಕಂಡಿದೆ. ಶ್ರೇಯಸ್ ಅಯ್ಯರ್ ಮತ್ತು ಮಾರ್ಕಸ್ ಸ್ಟೋಯಿಸ್ ಅವರ ಅರ್ಧಶತಕಗಳ ಹೊರತಾಗಿಯೂ, ಪಂಜಾಬ್ 206 ರನ್‌ಗಳ ಗುರಿಯನ್ನು ರಕ್ಷಿಸಿಕೊಳ್ಳಲು ವಿಫಲವಾಯಿತು. ಸಮೀರ್ ರಿಜ್ವಿ ಅಜೇಯ 58 ರನ್‌ಗಳ ನೆರವಿನಿಂದ ಡೆಲ್ಲಿ ಗೆಲುವು ಸಾಧಿಸಿತು.

Read Full Story

07:43 AM (IST) May 25

ಐಡೆಂಟಿಟಿ ರಾಜಕೀಯದಲ್ಲಿ ನನಗೆ ನಂಬಿಕೆ ಇಲ್ಲ - ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಭಾಸ್ತಿ ಸಂದರ್ಶನ!

ಬಾನು ಮುಷ್ತಾಕ್ ಅವರ ಕೃತಿಗೆ ಬಂದ ಅಂತಾರಾಷ್ಟ್ರೀಯ ಬೂಕರ್ ಮೂಡಿಸಿದೆ. ಅದರ ಅನುವಾದಕಿ ದೀಪಾ ಭಾಸ್ತಿ ಜತೆ ಒಂದು ಸುದೀರ್ಘ ಮಾತುಕತೆ.

Read Full Story

07:25 AM (IST) May 25

ಆಸ್ತಿ ಬೆಲೆ ಏರಿಕೆ - ದೇಶದಲ್ಲಿ ಬೆಂಗಳೂರು ನಂ.1, ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌ ವರದಿ

ದೇಶದ 50 ನಗರಗಳ ಆಸ್ತಿ ಬೆಲೆ ಏರಿಕೆ ಅಧ್ಯಯನದಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದ್ದು, 2024-25ರಲ್ಲಿ ಬೆಂಗಳೂರಿನ ಆಸ್ತಿ ಬೆಲೆಯು ಶೇ.13.1ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.

Read Full Story

07:18 AM (IST) May 25

3ನೇ ಮಗುವಿಗೂ ಮಾತೃತ್ವ ರಜೆ ಕಡ್ಡಾಯ - ಸುಪ್ರೀಂ

ಸುಪ್ರೀಂ ಕೋರ್ಟ್ ಮಹಿಳೆಯರಿಗೆ 3ನೇ ಮಗುವಿಗೂ ಮಾತೃತ್ವ ರಜೆ ನೀಡುವಂತೆ ಮಹತ್ವದ ಆದೇಶ ನೀಡಿದೆ. ಮಹಿಳೆಯರ ಸಾಂವಿಧಾನಿಕ ಹಕ್ಕು ಮತ್ತು ಸಂತಾನೋತ್ಪತ್ತಿ ಆಯ್ಕೆಯಲ್ಲಿ ರಾಜ್ಯದ ಹಸ್ತಕ್ಷೇಪ ಇರಬಾರದು ಎಂದು ಅಭಿಪ್ರಾಯಪಟ್ಟಿದೆ.
Read Full Story

06:55 AM (IST) May 25

ಭಾರತ ಸರ್ಕಾರದ ಸಿಸಿಆರ್‌ಟಿ ಸ್ಕಾಲರ್‌ಶಿಪ್‌ಗೆ ಭರತನಾಟ್ಯ ವಿಭಾಗದಲ್ಲಿ ತೇಜಸ್ವಿರಾಜ್‌ ಆಯ್ಕೆ!

ಕಳೆದ 10 ವರ್ಷಗಳಿಂದ ಭರತನಾಟ್ಯ ಶಾಸ್ತ್ರೀಯ ನೃತ್ಯ ಅಭ್ಯಾಸ ಮಾಡುತ್ತಿರುವ ತೇಜಸ್ವಿರಾಜ್‌, 2018ರಲ್ಲಿ ಜೂನಿಯರ್‌, 2021ರಲ್ಲಿ ಸೀನಿಯರ್‌ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.

Read Full Story

More Trending News