LIVE NOW
Published : Dec 24, 2025, 06:53 AM ISTUpdated : Dec 24, 2025, 02:19 PM IST

Karnataka News Live: Fans War - FIR​ ಆಗಿದೆ- ಕೇರ್​ಫುಲ್​ ಆಗಿರಿ - ಲೈವ್​ನಲ್ಲಿ ಬಂದ ನಟಿ ತನಿಷಾ ಕುಪ್ಪಂಡ ವಾರ್ನ್​ ಮಾಡಿದ್ದೇನು?

ಸಾರಾಂಶ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅಹಿಂದ ಸಮಾವೇಶದ ಪೂರ್ವ ಸಿದ್ಧತಾ ಸಭೆಯನ್ನು ಡಿ.24ರ ಬೆಳಗ್ಗೆ 11.30ಕ್ಕೆ ಮೈಸೂರಿನ ಹೊಟೇಲ್ ಗುರು ರೆಸಿಡೆನ್ಸಿಯಲ್ಲಿ ಅಹಿಂದ ಮೈಸೂರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಆಯೋಜಿಸಿದೆ. ಸಿಎಂ ಸಿದ್ದರಾಮಯ್ಯರನ್ನು ಬೆಂಬಲಿಸಿ ಜನವರಿ ಮೂರನೇ ವಾರದಲ್ಲಿ ಮೈಸೂರಿನಲ್ಲಿ ಬೃಹತ್ ಅಹಿಂದ ಸಮಾವೇಶ ಆಯೋಜನೆಗಾಗಿ ಸಮಾವೇಶದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಪೂರ್ವ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿದ್ದು, ಅಹಿಂದ ಮುಖಂಡರು ಪಾಲ್ಗೊಳ್ಳಲಿದ್ದಾರೆ.

Tanisha Kuppanda

02:19 PM (IST) Dec 24

Fans War - FIR​ ಆಗಿದೆ- ಕೇರ್​ಫುಲ್​ ಆಗಿರಿ - ಲೈವ್​ನಲ್ಲಿ ಬಂದ ನಟಿ ತನಿಷಾ ಕುಪ್ಪಂಡ ವಾರ್ನ್​ ಮಾಡಿದ್ದೇನು?

ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ, ತಮ್ಮ ನಿರ್ಮಾಣದ 'ಕೋಣ' ಚಿತ್ರದ ಪೈರಸಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟರ ಅಭಿಮಾನಿಗಳ ಯುದ್ಧ ಮತ್ತು ಪ್ರಪೋಗಂಡಾದಿಂದ ಚಿತ್ರರಂಗಕ್ಕಾಗುತ್ತಿರುವ ನಷ್ಟದ ಬಗ್ಗೆ ಮಾತನಾಡಿದ್ದಾರೆ

Read Full Story

01:36 PM (IST) Dec 24

ವೀರಪ್ಪನ್‌ಗಿಂತ, ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಜಾಸ್ತಿ.! ಅಂಕಿ-ಅಂಶ ಬಚ್ಚಿಟ್ಟ ಆರ್. ಅಶೋಕ್

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಿದ್ದರಾಮಯ್ಯ ಸರ್ಕಾರದ ಎರಡೂವರೆ ವರ್ಷದ ಆಡಳಿತದಲ್ಲಿ ವೀರಪ್ಪನ್‌ಗಿಂತಲೂ ಹೆಚ್ಚು ಆನೆಗಳು (206) ಸಾವನ್ನಪ್ಪಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆನೆಗಳ ಸಾವಿಗೆ ಜಂಗಲ್ ಸಫಾರಿ ನಿಷೇಧಿಸುವುದು ಸರಿಯಲ್ಲ ಎಂದರು.

Read Full Story

01:30 PM (IST) Dec 24

ಹೊಸೂರು ವಿಮಾನ ನಿಲ್ದಾಣ ನಿರ್ಮಾಣದ ತಮಿಳುನಾಡು ಆಸೆಗೆ ಬ್ರೇಕ್‌, ಕೇಂದ್ರದ ಉಡಾನ್‌ ಪಟ್ಟಿಯಿಂದ ಹೊರಕ್ಕೆ! ಕಾರಣ ಬೆಂಗಳೂರು ವಿಮಾನ ನಿಲ್ದಾಣ!

ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ತಮಿಳುನಾಡು ಸರ್ಕಾರದ ಯೋಜನೆಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ. ಬೆಂಗಳೂರು ವಿಮಾನ ನಿಲ್ದಾಣದೊಂದಿಗಿನ ಒಪ್ಪಂದದ ಪ್ರಕಾರ, 2033ರವರೆಗೆ 150 ಕಿ.ಮೀ. ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ ಎಂಬ ನಿಯಮವೇ ಮುಖ್ಯ ಕಾರಣವಾಗಿದೆ.

Read Full Story

12:52 PM (IST) Dec 24

ದರ್ಶನ್ ಕಷ್ಟಕಾಲದಲ್ಲಿ ಜೊತೆಗೆ ನಿಂತಿದ್ರು ಸುದೀಪ್ - ಆಸ್ಪತ್ರೆ ಸೇರಿದ್ದ ದಾಸ.. ಧೈರ್ಯ ತುಂಬಿದ್ದ ಕಿಚ್ಚ!

ಕಿಚ್ಚ ಸುದೀಪ್ ಯುದ್ಧದ ಮಾತು.. ದರ್ಶನ್-ಸುದೀಪ್ ಸ್ನೇಹಿತರಾಗಿದ್ದ ವೇಳೆ ವಿಜಯಲಕ್ಷ್ಮೀ ನಡುವೆನೂ ಒಳ್ಳೆ ಸ್ನೇಹ ಸಲುಗೆ ಇತ್ತು. ಅದ್ರಲ್ಲೂ ಒಂದೊಮ್ಮೆ ದರ್ಶನ್ ಕಷ್ಟದಲ್ಲಿದ್ದ ವೇಳೆ, ಕಿಚ್ಚ ವಿಜಯಲಕ್ಷ್ಮೀ ಜೊತೆ ನಿಂತುಕೊಂಡಿದ್ರು.

Read Full Story

12:36 PM (IST) Dec 24

ಹೊಸ ವರ್ಷದಲ್ಲಿ ಸಂಪುಟ ವಿಸ್ತರಣೆ ಖಚಿತ; ನಾನೂ ಸಚಿವ ಸ್ಥಾನದ ಆಕಾಂಕ್ಷಿ-ಶಾಸಕ ಡಾ. ಅಜಯ್ ಸಿಂಗ್

ಹೊಸ ವರ್ಷದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

12:31 PM (IST) Dec 24

ಬಳ್ಳಾರಿ ಜ್ಯುವೆಲ್ಲರಿಯಲ್ಲಿ ಮತ್ತೆ ಕೇರಳ ಎಸ್‌ಐಟಿ ಶೋಧ, ಶಬರಿಮಲೆಯ ಇನ್ನೂ ಕೆಲ ದೇಗುಲದಲ್ಲಿ ಚಿನ್ನಕ್ಕೆ ಕನ್ನ ಶಂಕೆ!

ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮಾಲೀಕ ಗೋವರ್ಧನ್ ಅವರನ್ನು ಬಂಧಿಸಲಾಗಿದೆ. ಕೇರಳದ ವಿಶೇಷ ತನಿಖಾ ತಂಡವು ಬಳ್ಳಾರಿಗೆ ಆಗಮಿಸಿ, ಗೋವರ್ಧನ್ ಅವರ ಅಂಗಡಿಯಲ್ಲಿ ಶೋಧ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.

Read Full Story

12:28 PM (IST) Dec 24

ಪೈರಸಿ ವಿರುದ್ಧವೇ ನನ್ನ ಯುದ್ಧ ಎಂದ ಸುದೀಪ್ - ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ

ನಮ್ಮ ಸಿನಿಮಾ ಟೀಮ್‌ನಲ್ಲಿ 11 ಮಂದಿ ಇದ್ದಾರೆ, ನಮ್ಮ ಎದುರಾಳಿಗಳು 33 ಮಂದಿ ಇದ್ದಾರೆ. ಆದರೂ ಪೈರಸಿ ವಿರುದ್ಧ ನಮ್ಮ ತೀವ್ರ ಹೋರಾಟ ನಡೆಸಿಯೇ ಸಿದ್ಧ. ಶೇ.80ರಷ್ಟಾದರೂ ಪೈರಸಿ ತಡೆಯುತ್ತೇವೆ ಎಂಬ ಮಾತನ್ನೂ ಸುದೀಪ್‌ ಹೇಳಿದರು.

Read Full Story

12:26 PM (IST) Dec 24

BBK 12 - ಸೊಸೆ ಬದಲಾಗಿ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನುಷ್ ತಾಯಿ ಹೇಳಿದ್ದೇನು?

ಬಿಗ್‌ಬಾಸ್ ಮನೆಗೆ ಆಗಮಿಸಿದ ಧನುಷ್ ತಾಯಿ ಮತ್ತು ಪತ್ನಿಯ ನಡುವೆ, ಧನುಷ್ ತನ್ನ ತಾಯಿಯನ್ನು ಆಯ್ಕೆ ಮಾಡಿಕೊಂಡರು. ನಂತರ, ಧನುಷ್ ತಾಯಿ ತಮ್ಮ ಮಗನಿಗೆ ಕೇವಲ 9 ತಿಂಗಳ ಮಗುವಾಗಿದ್ದಾಗಲೇ ಅವರ ಅಣ್ಣನ ಮಗಳೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದರು.
Read Full Story

12:18 PM (IST) Dec 24

ಸಾರಿಗೆ ನೌಕರರಿಗೆ ಹೊಸ ವರ್ಷದ ಬಂಪರ್ ಗಿಫ್ಟ್ - ಅಂತರ ನಿಗಮ ವರ್ಗಾವಣೆಗೆ ಜ.1 ರಿಂದ ಅರ್ಜಿ ಸಲ್ಲಿಕೆ ಆರಂಭ!

ರಾಜ್ಯ ಸಾರಿಗೆ ನಿಗಮಗಳ 'ಅಂತರ ನಿಗಮ ವರ್ಗಾವಣೆ'ಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ಜನವರಿ 1 ರಿಂದ 31ರ ವರೆಗೆ ನೌಕರರು ಅರ್ಜಿ ಸಲ್ಲಿಸಬಹುದಾಗಿದೆ. ಇದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ನೌಕರರ ದಶಕದ ಬೇಡಿಕೆಯನ್ನು ಈಡೇರಿಸಿದೆ.

Read Full Story

12:06 PM (IST) Dec 24

ಮಂಡ್ಯ ಅಪಘಾತ - ಕೆ.ಎಂ.ದೊಡ್ಡಿ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಸಿಮೆಂಟ್ ಲಾರಿ!

ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಸಿಮೆಂಟ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಲಾರಿ ಹಳ್ಳಕ್ಕೆ ಉರುಳಿದ್ದು, ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಚಾಲಕನ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story

12:03 PM (IST) Dec 24

Bigg Boss ಮನೆಗೆ ಡಾಗ್​ ಸತೀಶ್​ ರೀ-ಎಂಟ್ರಿ? ಮಗ ಫೇಲ್​ ಆಗಿರೋ ಖುಷಿಗೆ ಮಾಡಿದ ಪಾರ್ಟಿಯಲ್ಲಿ ರಿವೀಲ್​!

ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ಮಗ ಕಾಲೇಜಿನಲ್ಲಿ ಫೇಲ್ ಆದ ಕಾರಣಕ್ಕೆ ಅದ್ಧೂರಿ ಪಾರ್ಟಿ ಆಯೋಜಿಸಿದ್ದಾರೆ. ಈ ಪಾರ್ಟಿಯಲ್ಲಿ ಸೆಲೆಬ್ರಿಟಿಗಳು ಭಾಗವಹಿಸಿದ್ದು, ಇದೇ ವೇಳೆ ಸತೀಶ್ ಅವರು ಬಿಗ್‌ಬಾಸ್ ಮನೆಗೆ ಮತ್ತೆ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದ್ದಾರೆ.

Read Full Story

11:52 AM (IST) Dec 24

ಭಾರತೀಯ ದಂತ ವೈದ್ಯಕೀಯ ಕ್ಷೇತ್ರದ ಪಿತಾಮಹ ಡಾ.ಆರ್.ಅಹ್ಮದ್ - ಸೇವೆ, ತ್ಯಾಗ ಮತ್ತು ಮಾನವೀಯತೆಯ ಪ್ರತೀಕ

ಡಾ। ಆರ್.ಅಹ್ಮದ್ ಅವರ ದಂತ ವೈದ್ಯಕೀಯ ಕ್ಷೇತ್ರದಲ್ಲಿನ ಅಮೋಘ ಸೇವೆಗಾಗಿ 1947ರಲ್ಲಿ ಅಂತಾರಾಷ್ಟ್ರೀಯ ದಂತ ಕಾಲೇಜಿನಿಂದ ಫೆಲೋಶಿಪ್ ನೀಡಲಾಯಿತು ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ ಇಂಗ್ಲೆಂಡ್ ಇದರ ಫೆಲೋಶಿಪ್ ಕೂಡಾ ನೀಡಲಾಯಿತು.

Read Full Story

11:28 AM (IST) Dec 24

ಮದುವೆ ನಿರಾಕರಣೆ - ಯುವತಿ ತಾಯಿಯ ಜೀವಕ್ಕೆ ಕುತ್ತು ತಂದ ದುರುಳ!

ಬೆಂಗಳೂರಿನ ಬಸವೇಶ್ವರ ನಗರದಲ್ಲಿ, ತನ್ನ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದಕ್ಕೆ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

Read Full Story

11:16 AM (IST) Dec 24

ರೈಲಲ್ಲಿ ಬ್ಯಾಗ್‌ ಮರೆವವರ ನೆರವಿಗೆ 'ಆಪರೇಷನ್‌ ಅಮಾನತ್‌' - 2.25 ಕೋಟಿ ಮೌಲ್ಯದ ವಸ್ತುಗಳನ್ನು ರಕ್ಷಿಸಿದ ಆರ್‌ಪಿಎಫ್‌

ರೈಲು, ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್‌ ಮರೆತು ಬಂದಿದ್ದರೆ, ಅದನ್ನು ಹುಡುಕಿ ಕಾಪಿಟ್ಟು ಪ್ರಯಾಣಿಕರಿಗೆ ಕೊಡುವ ರೈಲ್ವೆ ಭದ್ರತಾ ಪಡೆಯು 'ಆಪರೇಷನ್‌ ಅಮಾನತ್‌' ನಡಿ ಈ ವರ್ಷ 2.25 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿದೆ.

Read Full Story

11:06 AM (IST) Dec 24

Bengaluru 2ನೇ ಏರ್‌ಫೋರ್ಟ್‌ಗೆ ಡಿಎಫ್‌ಆರ್‌ ಸಿದ್ಧತೆಗೆ ಟೆಂಡರ್‌ - ವನ್ಯಜೀವಿ ಪರಿಣಾಮಕ್ಕೂ ಅಧ್ಯಯನ

ಬೆಂಗಳೂರಿಗೆ 2ನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕನಕಪುರ ರಸ್ತೆಯಿಂದ ಮೈಸೂರು ರಸ್ತೆ ನಡುವಿನ ಚೂಡಹಳ್ಳಿ, ಕನಕಪುರ ರಸ್ತೆಯ ಸೋಮನಹಳ್ಳಿ ಮತ್ತು ನೆಲಮಂಗಲ ಬಳಿಯಲ್ಲಿ ಜಾಗಗಳನ್ನು ಗುರುತಿಸಲಾಗಿತ್ತು.

Read Full Story

10:53 AM (IST) Dec 24

ಯಾದಗಿರಿಯಲ್ಲಿ ಅಭಿವೃದ್ಧಿ ಹೆಸರಲ್ಲಿ ಹಣ ದುರ್ಬಳಕೆ? ಸ್ಮಾರ್ಟ್‌ ಟೀವಿಗೆ ₹2 ಲಕ್ಷ, ಟಾಯ್ಲೆಟ್‌ ಕುಡ್ಡಿಗೆ ₹5 ಲಕ್ಷ!

ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಪ್ರದೇಶಾಭಿವೃದ್ಧಿ ಮಂಡಳಿ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಈ ಭಾಗಕ್ಕೆ ವಿವಿಧ ಇಲಾಖೆಗಳು ನೂರಾರು, ಸಾವಿರಾರು ಕೋಟ್ಯಂತರ ರುಪಾಯಿ ಹಣ ಬಿಡುಗಡೆ ಮಾಡುತ್ತವೆ.

Read Full Story

10:52 AM (IST) Dec 24

ಬೆಂಗಳೂರೇ ಬೆಚ್ಚಿ ಬೀಳಿಸುವಂತ ದೃಶ್ಯ - ನಡುರಸ್ತೆಯಲೇ ಯುವತಿಗೆ ಲೈಂ*ಗಿಕ ದೌರ್ಜನ್ಯ

ಬೆಂಗಳೂರಿನ ಜ್ಞಾನಜ್ಯೋತಿನಗರದಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿ, ನಡುರಸ್ತೆಯಲ್ಲಿ ಆಕೆಯ ಬಟ್ಟೆ ಎಳೆದು ದೌರ್ಜನ್ಯ ಎಸಗಿದ್ದಾನೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read Full Story

10:44 AM (IST) Dec 24

ಪೈರಸಿ ಯುದ್ಧದಿಂದ ನಿಲ್ಲಲ್ಲ, ಸರ್ಕಾರದ ನೆರವು ಅಗತ್ಯ - ಹಾಸ್ಯ ನಟ ಸಾಧು ಕೋಕಿಲ ಹೇಳಿದ್ದೇನು?

ಪೈರಸಿ ದೊಡ್ಡ ಪಿಡುಗು. ಅದನ್ನು ಎಷ್ಟೇ ನಿಲ್ಲಿಸಲು ಪ್ರಯತ್ನಿಸಿದರೂ ಮತ್ತೆ ಹುಟ್ಟಿಕೊಳ್ಳುತ್ತಿದೆ. ಹಾಗಂತ, ಪೈರಸಿಯನ್ನು ಯುದ್ಧ ಮಾಡಿ ನಿಲ್ಲಿಸಲಾಗದು ಎಂದು ಚಲನಚಿತ್ರ ನಟ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದರು.

Read Full Story

10:31 AM (IST) Dec 24

ರಜನಿಕಾಂತ್ ಜೈಲರ್ 2ನಲ್ಲಿ ನನ್ನ ಪಾತ್ರ ಗೆಸ್ಟ್ ರೋಲ್ ಅಲ್ಲ - ಶಿವಣ್ಣನ ಮಾತಿನ ಮರ್ಮವೇನು?

ಜನವರಿ ತಿಂಗಳಲ್ಲಿ ಮತ್ತೆ ನಾಲ್ಕು ದಿನ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ. ಇದು ಯೂನಿವರ್ಸಲ್‌ ಕಂಟೆಂಟ್‌ ಸಿನಿಮಾ. ನಿರ್ದೇಶಕ ನೆಲ್ಸನ್‌ ಅವರು ರಜನಿಕಾಂತ್‌ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಶಿವಣ್ಣ ಹೇಳಿದರು.

Read Full Story

10:11 AM (IST) Dec 24

ದಿ ಡೆವಿಲ್‌ ಚಿತ್ರದಲ್ಲಿ ಪಾತ್ರ ಚೆನ್ನಾಗಿಲ್ಲ ಅಂತ ರಿಜೆಕ್ಟ್‌ ಮಾಡಿದೆ - ಕಣ್ಣೀರಿಟ್ಟ ರಾಗಿಣಿ ದ್ವಿವೇದಿ

ಪಂಜಾಬಿ ಮೂಲ ನನ್ನದು. ಮಾಡೆಲಿಂಗ್‌ ಮಾಡಿಕೊಂಡಿದ್ದೆ. ಕನ್ನಡ ಚಿತ್ರರಂಗ ಇದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಆಗ ಸಿಕ್ಕಿದ್ದೇ ‘ಹೋಳಿ’ ಚಿತ್ರ. ಇದು ನಾನು ನಟಿಸಿದ ಮೊದಲ ಚಿತ್ರ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದರು.

Read Full Story

09:57 AM (IST) Dec 24

ಮತಗಳ್ಳತನಕ್ಕೆ ಕೆಪಿಸಿಸಿ-ಬಿಎಲ್‌ಎಗಳ ಲೋಪವೇ ಕಾರಣ - ರಾಹುಲ್ ಗಾಂಧಿಗೆ ಕೆ.ಎನ್.ರಾಜಣ್ಣ ಸುದೀರ್ಘ ಪತ್ರ

ರಾಜ್ಯದಲ್ಲಿನ ಮತಗಳ್ಳತನಕ್ಕೆ ಕೆಪಿಸಿಸಿ ಹಾಗೂ ಬೂತ್‌ ಮಟ್ಟದ ಏಜೆಂಟ್‌ (ಬಿಎಲ್‌ಎ)ಗಳ ಲೋಪವೇ ಕಾರಣ ಎಂದು ಆರೋಪಿಸಿ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಅವರಿಗೆ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಪತ್ರ ಬರೆದಿದ್ದಾರೆ.

Read Full Story

09:49 AM (IST) Dec 24

ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ - ಬಗರ್‌ಹುಕುಂ ಸಭೆ ಬಳಿಕ ಪ್ರದೀಪ್ ಈಶ್ವರ್ ಸ್ಪಷ್ಟನೆ

ಫಾರಂ 57ಲ್ಲಿ 13970 ಅರ್ಜಿಗಳು ಬಾಕಿ ಇವೆ. ಬಗರ್ ಹುಕುಂ ಸಮಿತಿ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದು ಆದಷ್ಟು ಬೇಗ ಅರ್ಹರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

Read Full Story

07:33 AM (IST) Dec 24

BBK 12 - ಮನೆಗೆ ಬರುತ್ತಲೇ ರಕ್ಷಿತಾ ಶೆಟ್ಟಿಗೆ ಅಮ್ಮನಿಂದ ಕ್ಲಾಸ್; ಸೂಪರ್ ಅವಕಾಶ ಪಡೆದ ಪುಟ್ಟಿ

Rakshitha Shetty mother in Bigg Boss: ಬಿಗ್‌ಬಾಸ್ ಸೀಸನ್ 12ರ ಫ್ಯಾಮಿಲಿ ವೀಕ್‌ನಲ್ಲಿ ರಕ್ಷಿತಾ ಶೆಟ್ಟಿಯವರ ತಾಯಿ ಮನೆಗೆ ಆಗಮಿಸಿದ್ದಾರೆ. ಈ ತಾಯಿ-ಮಗಳ ಬಾಂಧವ್ಯದ ಜೊತೆಗೆ, ರಕ್ಷಿತಾ ತನ್ನ ತಾಯಿಯೊಂದಿಗೆ ವ್ಲಾಗ್ ಮಾಡುವ ಅವಕಾಶವನ್ನೂ ಪಡೆದರು.

Read Full Story

More Trending News