LIVE NOW
Published : Apr 21, 2026, 06:36 AM ISTUpdated : Apr 21, 2026, 10:00 AM IST

Karnataka News Live: ಬಳ್ಳಾರಿ - ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಕಾರು

ಸಾರಾಂಶ

ಬೆಂಗಳೂರು: ಬಿಟ್ ಕಾಯಿನ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಹಲವರ ಮೇಲೆ ದಾಳಿ ನಡೆಸಿದೆ. ಆದರೆ, ಬಿಜೆಪಿ ನಾಯಕರ ವಿರುದ್ಧ ಯಾಕೆ ದಾಳಿ ಮಾಡಿಲ್ಲ? ಇ.ಡಿ. ದಾಳಿ ಆಗುವುದಾದರೆ ಬಿಜೆಪಿಯ ದೊಡ್ಡವರ ಮನೆಗೂ ಆಗಬೇಕಾಗಿತ್ತಲ್ಲವೇ? ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದೀಗ ಇ.ಡಿ. ದಾಳಿ ನಡೆಸಿದ್ದು ಬಿಟ್ ಕಾಯಿನ್ ವಿಚಾರವಾಗಿಯೋ ಅಥವಾ ಬೇರೆ ವಿಚಾರವಾಗಿಯೋ ಎಂಬುವುದು ಗೊತ್ತಿಲ್ಲ. ಈ ಬಗ್ಗೆ ಇ.ಡಿ.ಯವರು ಸ್ಪಷ್ಟವಾಗಿ ಹೇಳಬೇಕು. ಬಿಟ್ ಕಾಯಿನ್ ಸಂಬಂಧಿಸಿ ಟಾರ್ಗೆಟ್ ಮಾಡಿ ಇವರು ದಾಳಿ ಮಾಡುತ್ತಿದ್ದಾರೆ. ಇಂದು ಇ.ಡಿ. ದಾಳಿ ಆಗುವುದಾದರೆ ಬಿಜೆಪಿಯ ದೊಡ್ಡವರ ಮನೆಗೂ ಆಗಬೇಕಾಗಿತ್ತು ಎಂದರು.

10:00 AM (IST) Apr 21

ಬಳ್ಳಾರಿ - ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಕಾರು

Andral Ballari road accident: ಬಳ್ಳಾರಿಯ ಅಂದ್ರಾಳ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ. ಕಾರಿನಲ್ಲಿದ್ದ ಏಕೈಕ ವ್ಯಕ್ತಿಯಾದ ಚಾಲಕನನ್ನು ಸ್ಥಳೀಯರು ರಕ್ಷಿಸಿ, ಚಿಕಿತ್ಸೆಗಾಗಿ ವೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Read Full Story

09:57 AM (IST) Apr 21

Zodiac Signs - ಬುಧ, ಗುರು, ಸೂರ್ಯನ ಪ್ರಭಾವದಿಂದ ಯಾವಾಗಲೂ ಫುಲ್ ಜಾಲಿಯಾಗಿರೋ ರಾಶಿಗಳು!

ಮೂರು ರಾಶಿಯ ಜನರು ಜೀವನದ ಸಮಸ್ಯೆಗಳನ್ನು ಹಗುರವಾಗಿ ತೆಗೆದುಕೊಂಡು ಯಾವಾಗಲೂ ಜಾಲಿಯಾಗಿರುತ್ತಾರೆ. ಬುಧ, ಗುರು ಮತ್ತು ಸೂರ್ಯನಂತಹ ಗ್ರಹಗಳ ಪ್ರಭಾವದಿಂದ, ಇವರು ಚಿಂತೆಗಳನ್ನು ದೊಡ್ಡದು ಮಾಡದೆ, ಜೀವನವನ್ನು ಒಂದು ಸಾಹಸದಂತೆ ಅನುಭವಿಸುತ್ತಾರೆ.
Read Full Story

09:54 AM (IST) Apr 21

Women political empowerment - ಮಹಿಳೆಗೆ ರಾಜಕೀಯ ಸ್ಥಾನ ಯಾವಾಗ?

ಭಾರತೀಯ ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಐತಿಹಾಸಿಕ ಹೋರಾಟವನ್ನು ಈ ಲೇಖನ ವಿಶ್ಲೇಷಿಸುತ್ತದೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿಯ ಯಶಸ್ಸಿನಿಂದ ಹಿಡಿದು, 'ನಾರಿಶಕ್ತಿ ವಂದನಾ ಕಾಯ್ದೆ'ಯ ಮೂಲಕ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ಉಳಿಸದೆ, ನಿರ್ಣಾಯಕ ಶಕ್ತಿಯಾಗಿ ರೂಪಿಸುವ ದೂರದೃಷ್ಟಿ ಚರ್ಚಿಸುತ್ತದೆ.

Read Full Story

09:25 AM (IST) Apr 21

ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ - ಇಬ್ಬರೂ ಸ್ಥಳದಲ್ಲೇ ಸಾವು, ನೂರಾರು ಕೋಳಿಗಳ ಮಾರಣಹೋಮ

ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್‌ಗೆ ಕೋಳಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ. ಅಪಘಾತದ ರಭಸಕ್ಕೆ ನೂರಾರು ಕೋಳಿಗಳು ಸಹ ಮೃತಪಟ್ಟಿವೆ.

Read Full Story

08:52 AM (IST) Apr 21

ಯುದ್ಧದ ಎಫೆಕ್ಟ್‌ - ಹೂಡಿಕೆ ಮಾಡುವವರು ಸದ್ಯಕ್ಕೆ ಸುಮ್ಮನಿರುವುದೇ ಸೇಫು

ಯುದ್ಧದ ಸನ್ನಿವೇಶವು ತೀವ್ರ ಆರ್ಥಿಕ ಅನಿಶ್ಚಿತತೆಯನ್ನು ಸೃಷ್ಟಿಸಿದ್ದು, ಇಂತಹ ಸಮಯದಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಖರ್ಚುಗಳ ಮೇಲೆ ಹಿಡಿತ, ಸಾಲ ಕಡಿಮೆ ಮಾಡುವುದು ಮತ್ತು ಷೇರುಗಳನ್ನು ಗಾಬರಿಯಿಂದ ಮಾರದಿರುವುದು ಸೇರಿದಂತೆ ಪ್ರಮುಖ ಆರ್ಥಿಕ ಸಲಹೆಗಳು ಇಲ್ಲಿವೆ.

Read Full Story

08:46 AM (IST) Apr 21

ಅಲ್ಪಸಂಖ್ಯಾತ ಮುಖಂಡರ ಹೊರಹಾಕಿದ್ದುಸರಿಯಲ್ಲ ಡಿಕೆಶಿಗೆ ಹೇಳಿರುವೆ - ಸತೀಶ್

ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಭೇಟಿಯನ್ನು ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದಲ್ಲಿ ಅಲ್ಪಸಂಖ್ಯಾತ ಮುಖಂಡರನ್ನು ಕಡೆಗಣಿಸಿರುವ ಬಗ್ಗೆ ಚರ್ಚಿಸಿದ್ದು, ಇದನ್ನು ಸರಿಪಡಿಸುವ ಭರವಸೆ ಡಿಕೆಶಿ ನೀಡಿದ್ದಾರೆ ಎಂದರು. 

Read Full Story

08:33 AM (IST) Apr 21

ಗಣತಿಗೆ ಪಿಯು ಓದಿದವರಿಗೆ ಅವಕಾಶ - ಆಯ್ಕೆಗಾಗಿ ನಾಳೆ ಟೌನ್‌ಹಾಲ್‌ನಲ್ಲಿ ನೇರ ಸಂದರ್ಶನ

ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಸರ್ಕಾರಿ ನೌಕರರು ಗೈರಾದ ಹಿನ್ನೆಲೆಯಲ್ಲಿ, ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಖಾಸಗಿ ವ್ಯಕ್ತಿಗಳನ್ನು ಗಣತಿದಾರರಾಗಿ ನೇಮಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ಏ.22 ರಂದು ನೇರ ಸಂದರ್ಶನ ಆಯೋಜಿಸಲಾಗಿದ್ದು, ಆಯ್ಕೆಯಾದವರಿಗೆ ಗೌರವಧನ ಹಾಗೂ ತರಬೇತಿ ನೀಡಲಾಗುವುದು.
Read Full Story

08:25 AM (IST) Apr 21

ಡೆಲಿವರಿ ಬಾಯ್ ಮೊಬೈಲ್ ಕದ್ದ ಕ್ಯಾಬ್ ಚಾಲಕನಿಗೆ ಪೊಲೀಸರು ಫೋನ್‌ನಲ್ಲೇ ಶಾಕ್! 112ಗೆ ಕರೆ ಬಂದ 5 ನಿಮಿಷದಲ್ಲಿ ನಡೆದಿದ್ದೇನು?

ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌ನನ್ನು ಬೆದರಿಸಿ ಮೊಬೈಲ್‌ ಕಳವು ಮಾಡಿದ್ದ ಕ್ಯಾಬ್‌ ಚಾಲಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. 112ಗೆ ದೂರು ಬಂದ ಐದೇ ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆರೋಪಿಗೆ ಕರೆ ಮಾಡಿ ಎಚ್ಚರಿಕೆ ನೀಡಿ ಆತನನ್ನು ವಶಕ್ಕೆ ಪಡೆದಿದ್ದಾರೆ.
Read Full Story

08:20 AM (IST) Apr 21

Major Arterial Road - ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರು ನಡುವಿನ ಸಂಚಾರ 1.30 ಗಂಟೆಯಿಂದ 10 ನಿಮಿಷಕ್ಕೆ ಇಳಿಕೆ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಮೇಜರ್‌ ಆರ್ಟೀರಿಯಲ್‌ ರಸ್ತೆ (ಎಂಎಆರ್‌) ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನ ನಡುವಿನ ಪ್ರಯಾಣದ ಸಮಯವನ್ನು 1.30 ಗಂಟೆಯಿಂದ ಕೇವಲ 10 ನಿಮಿಷಕ್ಕೆ ಇಳಿಸಲಿದೆ.

Read Full Story

08:03 AM (IST) Apr 21

ಎರಡು ಮರಗಳ ಮಧ್ಯೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾದ ಕಾರ್; ಇಬ್ಬರ ಸಾವು, ಓರ್ವ ಗಂಭೀರ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರ್ ಎರಡು ಮರಗಳ ಮಧ್ಯೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

Read Full Story

07:39 AM (IST) Apr 21

Vijayapura - ಸಿಂದಗಿಯ ಮೌಲಾಲಿ ಕುಟುಂಬದಲ್ಲಿ ಸಂಭ್ರಮದಿಂದ ಬಸವ ಜಯಂತಿ ಆಚರಣೆ

ಪೊಲೀಸ್‌ ಪೇದೆ ಮೌಲಾಲಿ ಆಲಗೂರ ಅವರು ಮುಸ್ಲಿಂರಾಗಿದ್ದರೂ, ಕಳೆದ 4 ವರ್ಷಗಳಿಂದ ತಮ್ಮ ಮನೆಯಲ್ಲಿ ಬಸವ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಬಸವಣ್ಣನವರ ಸಮಸಮಾಜದ ಚಿಂತನೆಗಳನ್ನು ಗೌರವಿಸಿ, ತಮ್ಮ ಮಕ್ಕಳಿಗೂ ಆ ಮೌಲ್ಯಗಳನ್ನು ತಿಳಿಸುತ್ತಾ ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

Read Full Story

07:36 AM (IST) Apr 21

ಹೆತ್ತ ತಾಯಿಯ ಶವಕ್ಕೆ ಹೆಗಲು ಕೊಡದ ಮಕ್ಕಳು; ಸಮಾಜ ಸೇವಕರಿಂದ್ಲೇ ಅಂತ್ಯಕ್ರಿಯೆ!

ಬೆಳಗಾವಿಯ ಶಾಹು ನಗರದಲ್ಲಿ ಅಂಜನಾ ಧಾಮೋನೆ ಎಂಬ ವೃದ್ಧೆ ನಿಧನರಾದಾಗ, ಅವರ ಇಬ್ಬರು ಪುತ್ರರು ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ್ದಾರೆ. ಮಕ್ಕಳ ಅಮಾನವೀಯ ವರ್ತನೆಯಿಂದಾಗಿ, ಸ್ಥಳೀಯ ಸಮಾಜ ಸೇವಕರೇ ಮುಂದೆ ಬಂದು ವೃದ್ಧೆಯ ಅಂತಿಮ ಸಂಸ್ಕಾರವನ್ನು ನೆರವೇರಿಸಿದ್ದಾರೆ.
Read Full Story

07:22 AM (IST) Apr 21

Hubballi - Fly91 ವಿಮಾನಕ್ಕೆ ಮಾತ್ರ ಹವಾಮಾನ ವೈಪರೀತ್ಯ ಹೇಗೆ ಸಾಧ್ಯ? ಸತ್ಯ ಮುಚ್ಚಿಟ್ಟರಾ?

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬಂದ ಫ್ಲೈ-91 ವಿಮಾನ, ಲ್ಯಾಂಡಿಂಗ್ ಸಮಸ್ಯೆಯಿಂದಾಗಿ 3 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಡಿ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು. ತಾಂತ್ರಿಕ ದೋಷವೆಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದರೆ, ಹವಾಮಾನ ವೈಪರೀತ್ಯವೇ ಕಾರಣವೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Read Full Story

06:55 AM (IST) Apr 21

ಮೇ 9ಕ್ಕೆ ಚಿತ್ರದುರ್ಗದಲ್ಲಿ ಯಡಿಯೂರಪ್ಪ ಉತ್ಸವ? ಕೇಂದ್ರ ಸಚಿವ ಅಮಿತ್‌ ಶಾ ಭಾಗಿ ಸಾಧ್ಯತೆ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಸವಿನೆನಪಿಗಾಗಿ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಮೇ 9 ರಂದು ನಡೆಯುವ ನಿರೀಕ್ಷೆಯಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸುವ ಸಾಧ್ಯತೆಯಿದೆ.
Read Full Story

More Trending News