Published : Apr 21, 2026, 06:36 AM ISTUpdated : Apr 21, 2026, 10:24 PM IST

Karnataka News Live: Bigg Boss ಸ್ಪರ್ಧಿ ಸಾವು; ಆತ್ಮದ ಜೊತೆ ಮಾತನಾಡೋಕೆ ಹೋದ ತಂಡಕ್ಕೆ ಬೆವರಿಳಿಸಿದ ಆ ಶಕ್ತಿ..! ಯಪ್ಪಾ..!

ಸಾರಾಂಶ

ಬೆಂಗಳೂರು: ಬಿಟ್ ಕಾಯಿನ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಹಲವರ ಮೇಲೆ ದಾಳಿ ನಡೆಸಿದೆ. ಆದರೆ, ಬಿಜೆಪಿ ನಾಯಕರ ವಿರುದ್ಧ ಯಾಕೆ ದಾಳಿ ಮಾಡಿಲ್ಲ? ಇ.ಡಿ. ದಾಳಿ ಆಗುವುದಾದರೆ ಬಿಜೆಪಿಯ ದೊಡ್ಡವರ ಮನೆಗೂ ಆಗಬೇಕಾಗಿತ್ತಲ್ಲವೇ? ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದೀಗ ಇ.ಡಿ. ದಾಳಿ ನಡೆಸಿದ್ದು ಬಿಟ್ ಕಾಯಿನ್ ವಿಚಾರವಾಗಿಯೋ ಅಥವಾ ಬೇರೆ ವಿಚಾರವಾಗಿಯೋ ಎಂಬುವುದು ಗೊತ್ತಿಲ್ಲ. ಈ ಬಗ್ಗೆ ಇ.ಡಿ.ಯವರು ಸ್ಪಷ್ಟವಾಗಿ ಹೇಳಬೇಕು. ಬಿಟ್ ಕಾಯಿನ್ ಸಂಬಂಧಿಸಿ ಟಾರ್ಗೆಟ್ ಮಾಡಿ ಇವರು ದಾಳಿ ಮಾಡುತ್ತಿದ್ದಾರೆ. ಇಂದು ಇ.ಡಿ. ದಾಳಿ ಆಗುವುದಾದರೆ ಬಿಜೆಪಿಯ ದೊಡ್ಡವರ ಮನೆಗೂ ಆಗಬೇಕಾಗಿತ್ತು ಎಂದರು.

10:24 PM (IST) Apr 21

Bigg Boss ಸ್ಪರ್ಧಿ ಸಾವು; ಆತ್ಮದ ಜೊತೆ ಮಾತನಾಡೋಕೆ ಹೋದ ತಂಡಕ್ಕೆ ಬೆವರಿಳಿಸಿದ ಆ ಶಕ್ತಿ..! ಯಪ್ಪಾ..!

Actress Shefali Jariwala Death: ವೈಜ್ಞಾನಿಕತೆ ಎಷ್ಟೇ ಮುಂದುವರೆದರೂ ದೆವ್ವ, ಮಾಟ-ಮಂತ್ರದ ಬಗ್ಗೆ ಆಗಾಗ ಒಂದಿಷ್ಟು ವಿಷಯಗಳು ಕೇಳಿ ಬರುವುದು. ಸೆಲೆಬ್ರಿಟಿಗಳ ಮೇಲೂ ಮಾಟ ಮಂತ್ರ ನಡೆಯುವುದಂತೆ. ಮಹಾರಾಷ್ಟ್ರದ ಭಯಾನಕ ಕಾಡಿಗೆ ಒಂದು ತನಿಖಾ ತಂಡ ಭೇಟಿ ನೀಡಿತು. ಅಲ್ಲಿ ಒಂದಿಷ್ಟು ವಿಷಯ ಬಯಲಾಗಿದೆ.

 

Read Full Story

09:37 PM (IST) Apr 21

ಸಾಗರದಿಂದ ಬೆಂಗಳೂರಿಗೆ ಬಂದ್ರು, ಸ್ವಂತ ಮನೆ ಮಾಡಿದ್ರು; ರಾಧಾ ಕಲ್ಯಾಣ ಧಾರಾವಾಹಿ ನಟಿ ಕೃತಿಕಾ ರವೀಂದ್ರ ಸಾಧನೆ!

Actress Kruttika Ravindra Home Photos: ರಾಧಾ ಕಲ್ಯಾಣ, ಭೂಮಿಗೆ ಬಂದ ಭಗವಂತ ಧಾರಾವಾಹಿ ಖ್ಯಾತಿಯ ನಟಿ ಕೃತಿಕಾ ರವೀಂದ್ರ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬಂದಿದ್ದ ಕೃತಿಕಾ ಈಗ ಸಿಲಿಕಾನ್‌ ಸಿಟಿಯಲ್ಲಿ ಹೊಸ ಮನೆ ಕಟ್ಟಿಕೊಂಡಿದ್ದಾರೆ.

 

Read Full Story

07:49 PM (IST) Apr 21

Akshaya Tritiya - ಇನ್‌ಸ್ಟಾಮಾರ್ಟ್‌ನಲ್ಲಿ ಬೆಂಗಳೂರಿಗನಿಂದ ₹2 ಲಕ್ಷದ ಚಿನ್ನ-ಬೆಳ್ಳಿ ಆರ್ಡರ್‌, ಬಂಗಾರ ಖರೀದಿ 49ಪಟ್ಟು ಹೆಚ್ಚಳ!

2026ರ ಅಕ್ಷಯ ತೃತೀಯದಂದು, ಇನ್‌ಸ್ಟಾಮಾರ್ಟ್ ದಾಖಲೆಯ ಚಿನ್ನ ಮತ್ತು ಬೆಳ್ಳಿ ಮಾರಾಟವನ್ನು ಕಂಡಿದೆ. ಬೆಂಗಳೂರಿನ ಗ್ರಾಹಕರೊಬ್ಬರು ಒಂದೇ ಆರ್ಡರ್‌ನಲ್ಲಿ ಚಿನ್ನ, ಬೆಳ್ಳಿಯ ಜೊತೆಗೆ ದಿನಸಿ ವಸ್ತುಗಳನ್ನು ಖರೀದಿಸಿದ್ದು, 'ಪ್ರೈಸ್ ಲಾಕ್' ಫೀಚರ್ ಕೂಡ ಭಾರಿ ಯಶಸ್ಸು ಗಳಿಸಿದೆ.
Read Full Story

07:43 PM (IST) Apr 21

ಮೀಸಲಾತಿ ಹೆಚ್ಚಿಸಲು ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲಿ - ವಿ.ಎಸ್.ಉಗ್ರಪ್ಪ

ರಾಜ್ಯ ಸರ್ಕಾರ ಪ್ರಸ್ತುತ 56,437 ಹುದ್ದೆಗಳ ಭರ್ತಿಯಲ್ಲಿ ಶೇ.3 ರಷ್ಟು ಮಾತ್ರ ಮೀಸಲಾತಿ ಅನ್ವಯವಾಗುವಂತೆ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.

Read Full Story

07:10 PM (IST) Apr 21

ಇಡಿ ದಾಳಿ ರಾಜಕೀಯವಾಗಿ ನಡೆದಿದೆ, ನನ್ನ ತಮ್ಮ ಟಾರ್ಗೆಟ್‌ ಅಲ್ಲ ಅಪ್ಪನ ಸಚಿವ ಸ್ಥಾನ ತಪ್ಪಿಸಲು ಹುನ್ನಾರ - ನಲಪಾಡ್‌

ಜಾರಿ ನಿರ್ದೇಶನಾಲಯದ (ಇಡಿ) ದಾಳಿಯ ನಂತರ, ಯುವ ಕಾಂಗ್ರೆಸ್ ಮುಖಂಡ ಮಹ್ಮದ್ ನಲಪಾಡ್ ಸುದ್ದಿಗೋಷ್ಠಿ ನಡೆಸಿ, ಈ ದಾಳಿಯು ತಮ್ಮ ತಂದೆ ಎನ್.ಎ. ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ಸಿಗದಂತೆ ಮಾಡಲು ನಡೆಸಿದ ರಾಜಕೀಯ ಪ್ರೇರಿತ ಹುನ್ನಾರ ಎಂದು ಆರೋಪಿಸಿದ್ದಾರೆ. ತಮ್ಮ ಮತ್ತು ತಮ್ಮ ಸಹೋದರನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, ಶ್ರೀಕಿಯೊಂದಿಗೆ ಕೇವಲ ಪರಿಚಯವಿದ್ದು ಯಾವುದೇ ವ್ಯವಹಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

07:09 PM (IST) Apr 21

Anchor Anushree ಸ್ಮೈಲ್​ ಬಗ್ಗೆ ಭವಿಷ್ಯ ನುಡಿದಿದ್ರಂತೆ ಆ ಟೀಚರ್​ - ಮಗಳನ್ನು ಹದ್ದುಬಸ್ತಲ್ಲಿ ಇಟ್ಕೊಳಿ ಅಂದಿದ್ರಂತೆ

ಆ್ಯಂಕರ್ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಪಯಣದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನೆದು ಭಾವುಕರಾಗಿದ್ದಾರೆ. ಗಗನಸಖಿಯಾಗುವ ಕನಸು ಕಂಡಿದ್ದ ಅನುಶ್ರೀ ಅವರ ಭವಿಷ್ಯವನ್ನು ಅವರ ಶಾಲಾ ಶಿಕ್ಷಕಿಯೊಬ್ಬರು ಅಂದೇ ನುಡಿದಿದ್ದರು, ಆ ಕುತೂಹಲಕಾರಿ ಘಟನೆಯನ್ನು ಇಲ್ಲಿ ವಿವರಿಸಲಾಗಿದೆ.
Read Full Story

06:26 PM (IST) Apr 21

Karna serial - ಕರ್ಣ-ನಿಧಿ ಒಂದಾಗ್ತಾರಾ ಕೇಳಿದ್ರೆ ರೊಮಾನ್ಸ್​ ನಂಗೆ ಆಗಿಬರಲ್ಲ ಎನ್ನೋದಾ ನಟ Kiran Raj

ಜೀ ಕನ್ನಡದ 'ಕರ್ಣ' ಸೀರಿಯಲ್ ಮೂಲಕ TRP ಕಿಂಗ್ ಎನಿಸಿರುವ ನಟ ಕಿರಣ್ ರಾಜ್, ತಮ್ಮ ಪಾತ್ರದ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ತಮಗೆ ಒಳ್ಳೆಯವನ ಪಾತ್ರ ಇಷ್ಟವಿಲ್ಲ, ಈಗಿನ ರೆಬಲ್ ಪಾತ್ರವೇ ನಿಜವಾದದ್ದು ಎಂದಿರುವ ಅವರು, ತಮ್ಮ ಹೊಸ 'ಶೇರ್' ಸಿನಿಮಾದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
Read Full Story

06:22 PM (IST) Apr 21

ಬೆಂಗಳೂರು - 9ನೇ ಮಹಡಿ ಕಟ್ಟಡವೇರಿದ ಯುವಕನ ಹೈಡ್ರಾಮಾ! ಇಳಿ ಮಗನೇ ಎಂದ ಅಮ್ಮನಿಗೆ ಹಳೇ ಲವರ್ ಬೇಕೆಂದು ಗೊಳೋ ಅಂದ!

ದೇವನಹಳ್ಳಿ ಹೊರವಲಯದಲ್ಲಿ, ಯುವಕನೊಬ್ಬ 9 ಮಹಡಿಗಳ ಕಟ್ಟಡವನ್ನೇರಿ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾನೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿರುವ ಈತ, ಈ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದು, ಅದೇ ವಿಚಾರವಾಗಿ ಮಾನಸಿಕ ಒತ್ತಡದಲ್ಲಿದ್ದಾನೆ ಎಂದು ತಿಳಿದುಬಂದಿದೆ.
Read Full Story

06:08 PM (IST) Apr 21

EPF ಹಣ ಸಕಾಲಕ್ಕೆ ಪಾವತಿಸದಿದ್ದರೆ ಕ್ರಿಮಿನಲ್ ಕೇಸ್ - ನಂತರ ಹಣ ಕಟ್ಟಿದರೂ ಶಿಕ್ಷೆ ತಪ್ಪಿದ್ದಲ್ಲ ಎಂದ ಹೈಕೋರ್ಟ್!

ನೌಕರರ ಭವಿಷ್ಯ ನಿಧಿ (EPF) ಬಾಕಿಯನ್ನು ಸಕಾಲದಲ್ಲಿ ಜಮೆ ಮಾಡದಿರುವುದು ಗಂಭೀರ ಅಪರಾಧ ಎಂದು ಒರಿಸ್ಸಾ ಹೈಕೋರ್ಟ್ ತೀರ್ಪು ನೀಡಿದೆ. ಬಾಕಿ ಹಣವನ್ನು ನಂತರ ಪಾವತಿಸಿದರೂ, ಕ್ರಿಮಿನಲ್ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Read Full Story

05:56 PM (IST) Apr 21

ಅಂಗನವಾಡಿ ಸಿಬ್ಬಂದಿಗಳಿಂದ ಯೋಜನೆಗಳು ಜನರನ್ನು ತಲುಪುತ್ತಿದೆ - ಸ್ಪೀಕರ್‌ ಯು.ಟಿ.ಖಾದರ್

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಅವಿರತ ಸೇವೆಯಿಂದ ಸರಕಾರದ ಯೋಜನೆಗಳು ಜನರಿಗೆ ತಲುಪುತ್ತಿದೆ. ನಿಮ್ಮ ಕೆಲಸವನ್ನು ಅಭಿನಂದಿಸುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

Read Full Story

05:53 PM (IST) Apr 21

ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿ ಮಹಾ ಮೋಸಗಾರ, ನಂಬಿಕೆ ದ್ರೋಹಿ; ಅಸಲಿ ವಿಷಯ ಹೇಳಿದ ದಿನಕರ್‌ ತೂಗುದೀಪ

ಇದ್ದಕ್ಕಿದ್ದಂತೆ ನಟ ದರ್ಶನ್‌ ತೂಗುದೀಪ ಅವರ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಅವರು ಪ್ರತ್ಯಕ್ಷರಾದರು. ಕೆಲ ವರ್ಷಗಳ ಕಾಲ ಅಜ್ಷಾತವಾಸವಾಸದಲ್ಲಿ ಇದ್ದ ಈ ಮ್ಯಾನೇಜರ್‌ ಏಕಾಏಕಿ ಮಾಧ್ಯಮದ ಮುಂದೆ ಬಂದು, ದರ್ಶನ್‌ ಅವರನ್ನು ಹೊಗಳಿದ್ದರು. ಇದಕ್ಕೆ ಈಗ ದರ್ಶನ್‌ ಸಹೋದರ ದಿನಕರ್‌ ತೂಗುದೀಪ ತಿರುಗೇಟು ಕೊಟ್ಟರು.

 

Read Full Story

05:46 PM (IST) Apr 21

ಮಂಗಳೂರಿನ ಹೋಟೆಲ್‌ಗೂ ಬಂತು ರೋಬೋ ವೈಟರ್ - ಪಾಕಶಾಲದಲ್ಲಿ ಗ್ರಾಹಕರಿಗೆ ಹೊಸ ಅನುಭವ

ಕರಾವಳಿ ಕರ್ನಾಟಕದ ಮೊದಲ ರೋಬೋ ವೈಟರ್ ಆಗಿದ್ದು, ಗ್ರಾಹಕರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮೂರು ಲಕ್ಷ ರು. ವೆಚ್ಚದ ಜಪಾನ್ ಮೂಲದ ರೋಟೋ ವೈಟರ್ ಸೆನ್ಸಾರ್ ಆಧಾರಿತವಾಗಿ ಕಾರ್ಯಾಚರಿಸುತ್ತದೆ.

Read Full Story

05:38 PM (IST) Apr 21

ವೆಸ್ಟರ್ನ್‌ ಸ್ಟೈಲ್‌ನಲ್ಲಿ ಪ್ರಪೋಸ್‌ ಮಾಡ್ತೀನಿ ಅಂತಾ ಸ್ಪರ್ಶ ಸುಖ ಕೊಟ್ಟು ಪ್ರೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪ್ರೇಮಾ!

ಬೆಂಗಳೂರಿನ ಅಂಜನಾನಗರದಲ್ಲಿ ಪ್ರೀತಿಯ ಹೆಸರಿನಲ್ಲಿ ಘೋರ ದುರಂತ ಸಂಭವಿಸಿದೆ. 'ವೆಸ್ಟರ್ನ್ ಸ್ಟೈಲ್' ಪ್ರಪೋಸಲ್ ನೆಪದಲ್ಲಿ ಯುವಕ ಕಿರಣ್‌ನನ್ನು ಕೈಕಾಲು ಕಟ್ಟಿ, ಪೆಟ್ರೋಲ್ ಸುರಿದು ಆತನ ಪ್ರೇಯಸಿ ಪ್ರೇಮಾ ಜೀವಂತವಾಗಿ ದಹಿಸಿದ್ದಾಳೆ ಎಂದು ಆರೋಪಿಸಲಾಗಿದೆ.

Read Full Story

05:29 PM (IST) Apr 21

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ವಿಚಾರವಿದೆ - ಶಾಸಕ ಬಸನಗೌಡ ಪಾಟೀಲ ಯತ್ನಾಳ

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ವಿಚಾರ ಮಾಡುವೆ, ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಆರಂಭವಾಗಿದೆ. ಜಿಲ್ಲಾವಾರು ಎಲ್ಲಾ ಹಿಂದೂಗಳ ಸಭೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Read Full Story

05:14 PM (IST) Apr 21

ನನಗೆ ವಿರಾಟ್‌ ಕೊಹ್ಲಿಯಂಥ ಹುಡುಗನೇ ಬೇಕು; ಯಜುವೇಂದ್ರ ಚಾಹಲ್‌ ಬೇಡ; ಮುಖಕ್ಕೆ ಹೊಡೆದಂತೆ ಹೇಳಿದ Bigg Boss ಸ್ಪರ್ಧಿ

ಬಿಗ್ ಬಾಸ್ ಶೋ 13 ಸ್ಪರ್ಧಿ, ಕ್ರೀಡಾ ನಿರೂಪಕಿ ಶೆಫಾಲಿ ಬಗ್ಗ ಅವರು ಇನ್ನೂ ಸಿಂಗಲ್‌ ಆಗಿದ್ದಾರೆ. ಈಗಾಗಲೇ ಮದುವೆ ಆಗಿ ಡಿವೋರ್ಸ್‌ ತಗೊಂಡಿರೋ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

 

Read Full Story

04:54 PM (IST) Apr 21

ಪ್ರೇಯಸಿ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಸಾವು - ಯುವತಿಯನ್ನೂ ಸಾಯಿಸಲು ಯತ್ನಿಸಿ ತಾನು ಸಾವಿಗೆ ಶರಣಾದ ಕಿರಣ್

ಬೆಂಗಳೂರಿನ ಅಂಜನಾಪುರದಲ್ಲಿ, ಪ್ರೇಯಸಿ ಜೊತೆಗಿನ ಜಗಳದ ನಂತರ ಕಿರಣ್ ಎಂಬ ಯುವಕ ಆಕೆಯ ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು  ಸಾವಿಗೆ ಶರಣಾಗಿದ್ದಾನೆ. ಯುವತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಬ್ಯಾಡರಹಳ್ಳಿ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Read Full Story

04:43 PM (IST) Apr 21

ಸಿಆರ್‌ಪಿಎಫ್ ಬೃಹತ್ ನೇಮಕಾತಿ - 9195 ಹುದ್ದೆಗಳಿಗೆ ಅವಕಾಶ! ಆಯ್ಕೆಯಾದವರಿಗೆ ಭರ್ಜರಿ ವೇತನ

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 2026ನೇ ಸಾಲಿನಲ್ಲಿ 9,195 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ತಾಂತ್ರಿಕ, ಟ್ರೇಡ್ಸ್‌ಮನ್ ಮತ್ತು ಪಯೋನಿಯರ್ ವಿಭಾಗಗಳಲ್ಲಿನ ಈ ಹುದ್ದೆಗಳಿಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು, ಅರ್ಜಿ ಪ್ರಕ್ರಿಯೆ ಏಪ್ರಿಲ್ 20, 2026 ರಿಂದ ಆರಂಭವಾಗಲಿದೆ.
Read Full Story

04:35 PM (IST) Apr 21

Chicken Pox Treatment - ಬೇಸಿಗೆಯಲ್ಲಿ ಹೆಚ್ಚುತ್ತಿರೋ ಸಿಡುಬು; ಈ ಕಷಾಯ ಕುಡಿದ್ರೆ ಅಪ್ಪಿ ತಪ್ಪಿಯೂ ಬರಲ್ಲ

Chicken Pox: ಚಿಕನ್‌ ಪಾಕ್ಸ್‌ ಎಂದರೆ ನಿಜಕ್ಕೂ ನರಕ. ಅದರಲ್ಲಿಯೂ ಬೇಸಿಗೆಯಲ್ಲಿ ಚಿಕನ್‌ ಪಾಕ್ಸ್‌ ಆದರೆ ಮೈತುಂಬ ಗುಳ್ಳೆಗಳು ಆಗಿರುತ್ತವೆ, ಒಂದು ಕಡೆ ಜ್ವರ, ಇನ್ನೊಂದು ಕಡೆ ಹೊಟ್ಟೆಯಲ್ಲಿ ಸಂಕಟ, ಸುಸ್ತು. ಇದು ಬರದಂತೆ ತಡೆಯಲು ಏನು ಮಾಡಬೇಕು?

Read Full Story

04:08 PM (IST) Apr 21

ಮನೆ ಕೆಲಸಕ್ಕೆ ಹೋಗಿದ್ದ ತಾಯಿ ವಾಪಸ್ ಬರುವಷ್ಟರಲ್ಲಿ ಘೋರ ದುರಂತ - ಬ್ಲೂ ಡ್ರಮ್‌ನಲ್ಲಿ 11 ವರ್ಷದ ಬಾಲಕನ ಶವ ಪತ್ತೆ

ಮಧ್ಯಪ್ರದೇಶದ ಸಾತ್ನಾದಲ್ಲಿ, 11 ವರ್ಷದ ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಿ, ಮನೆಯಲ್ಲಿದ್ದ ಡ್ರಮ್‌ನೊಳಗೆ ಶವವನ್ನು ಮುಚ್ಚಿಡಲಾಗಿದೆ. ಬಾಲಕನ ತಾಯಿಯ ಪ್ರೇಮ ನಿವೇದನೆಯನ್ನು ನಿರಾಕರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.
Read Full Story

03:01 PM (IST) Apr 21

ಬಾಯ್‌ಫ್ರೆಂಡ್ ಜೊತೆ ಸ್ನೇಹ ಬಿಡಲೊಪ್ಪದ ಟೀನೇಜ್ ಮಗಳ ಕತೆ ಮುಗಿಸಿದ ತಂದೆ

ಲಕ್ನೋದಲ್ಲಿ, 16 ವರ್ಷದ ಮಗಳು ಪ್ರೀತಿಸುತ್ತಿದ್ದಳೆಂಬ ಕಾರಣಕ್ಕೆ ತಂದೆಯೇ ಆಕೆಯನ್ನು ಕೊಲೆ ಮಾಡಿದ್ದಾನೆ. ಮಗಳ ಪ್ರೇಮ ಸಂಬಂಧದಿಂದ ಕುಟುಂಬಕ್ಕೆ ಅವಮಾನವಾಗಿದೆ ಎಂದು ಭಾವಿಸಿ, ಸ್ನೇಹಿತನೊಂದಿಗೆ ಸೇರಿ ಆಕೆಯನ್ನು ಕತ್ತು ಹಿಸುಕಿ, ಮುಖಕ್ಕೆ ಆಸಿಡ್ ಹಾಕಿ ಗುರುತು ಸಿಗದಂತೆ ಮಾಡಿ ಶವವನ್ನು ಎಸೆದಿದ್ದಾನೆ.
Read Full Story

02:30 PM (IST) Apr 21

ಕೂಲಿ ಕೆಲಸ ಅರಸಿ ಬೆಂಗಳೂರಿಗೆ ಬಂದ 2 ದಿನಕ್ಕೆ ಯುವಕನ ದುರಂತ ಅಂತ್ಯ! ಆತನ ಬಾಳಲ್ಲಿ ಅಂತದ್ದೇನಾಯ್ತು?

ಕೂಲಿ ಕೆಲಸಕ್ಕಾಗಿ ಜಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಿದ್ದ ರಾಜು ಪಹರಿಯಾ ಎಂಬ ಯುವಕ, ಕೇವಲ ಎರಡು ದಿನಗಳಲ್ಲಿ ಟಿಪ್ಪರ್ ಲಾರಿಯ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈಯಕ್ತಿಕ ಸಮಸ್ಯೆಯಿಂದ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
Read Full Story

01:24 PM (IST) Apr 21

ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಈಗ ಯಾಕೆ ದಾಳಿ ನಡೆಯುತ್ತಿದೆ ಗೊತ್ತಾ?

2020ರ ಡ್ರಗ್ಸ್ ಪ್ರಕರಣದಿಂದ ಆರಂಭವಾದ ಬಿಟ್‌ಕಾಯಿನ್ ಹಗರಣವು ಇದೀಗ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯೊಂದಿಗೆ ಹೊಸ ತಿರುವು ಪಡೆದಿದೆ. ಹ್ಯಾಕರ್ ಶ್ರೀಕಿಯ ಪಾತ್ರ, ಸಿಸಿಬಿ ಮತ್ತು ಎಸ್‌ಐಟಿ ತನಿಖೆಗಳ ನಂತರ, ಇಡಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತನಿಖೆ ನಡೆಸುತ್ತಿದ್ದು, ಪ್ರಕರಣದ ದಿಕ್ಕೇ ಬದಲಾಗುವ ಸಾಧ್ಯತೆ ಇದೆ.
Read Full Story

01:17 PM (IST) Apr 21

ಆಕ್ಟಿಂಗ್‌ನಿಂದ ಕೋಟಿ ಕೋಟಿ ದುಡಿತಿರೋ ಪಾಲಕರು, ಅತ್ತ ಮುಖ ಕೂಡ ಹಾಕದೆ, ಬೇರೆ ಜಾಬ್‌ ಮಾಡ್ತಿರೋ ಸ್ಟಾರ್‌ ಕಿಡ್ಸ್‌ ಇವ್ರು

Bollywood Star Kids: ಬಾಲಿವುಡ್ ಒಂದು ಗ್ಲಾಮರ್ ಪ್ರಪಂಚ. ಇದರ ಆಕರ್ಷಣೆಯಿಂದ ದೂರವಿರುವುದು ಸುಲಭವಲ್ಲ. ಹೀಗಾಗಿಯೇ ಹಲವು ಸ್ಟಾರ್‌ಗಳ ಮಕ್ಕಳು ಚಿತ್ರರಂಗಕ್ಕೆ ಬಂದರು. ಆದರೆ ಕೆಲವರಿಗೆ ಈ ಗ್ಲಾಮರ್ ಇಷ್ಟವಾಗಲಿಲ್ಲ, ಅವರು ಬೇರೆ ಕ್ಷೇತ್ರವನ್ನು ಆರಿಸಿಕೊಂಡರು.

Read Full Story

12:44 PM (IST) Apr 21

Bengaluru - ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್

ಬೆಂಗಳೂರಿನಲ್ಲಿದ್ದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಬಾಗಿಲು ಮುಚ್ಚಿದೆ. ಬಿಬಿಎಂಪಿ ನೋಟಿಸ್, ಕೊಹ್ಲಿ ಬ್ರ್ಯಾಂಡ್ ಹೆಸರು ಹಿಂಪಡೆದಿದ್ದು, ವ್ಯಾಪಾರ ಕುಸಿತ ಮತ್ತು ಬಾಡಿಗೆ ವಿವಾದವೇ ಈ ಸ್ಥಿತಿಗೆ ಕಾರಣವಾಗಿದೆ. ಸದ್ಯ ರೆಸ್ಟೋರೆಂಟ್ ಭವಿಷ್ಯ ಅತಂತ್ರವಾಗಿದೆ.
Read Full Story

12:43 PM (IST) Apr 21

Vineesh Darshan - ಅಪ್ಪನ ಹಾದಿಯಲ್ಲೇ ಪುತ್ರ; ದರ್ಶನ್ ರೀತಿಯಲ್ಲೇ ಇದನ್ನೂ ಕಲಿತ ವಿನೀಶ್..! ಸ್ಟಾರ್ ಆಗ್ತಾರಾ ಸ್ಟಾರ್ ಪುತ್ರ?

Actor Darshan Son Vineesh: ನೂಲಿನಂತೆ ಸೀರೆ ತಾಯಿಯಂತೆ ಮಕ್ಕಳು ಅನ್ನೋ ಮಾತು ಎಲ್ಲರಿಗೂ ಗೊತ್ತಿರೋದೇ. ಆದ್ರೆ ದರ್ಶನ್ ಪುತ್ರ ವಿನೀಶ್ ವಿಚಾರದಲ್ಲಿ ಇದು ಕೊಂಚ ಭಿನ್ನ. ಹುಟ್ಟುತ್ತಲ್ಲೇ ಬಂಗಾರದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಬೆಳೆದ ದರ್ಶನ್ ಪುತ್ರ, ಥೇಟ್ ಅವರ ಅಪ್ಪನಂತೆಯೇ ಐಶಾರಾಮಿ ಕಾರುಗಳ ಪ್ರಿಯ. 

Read Full Story

12:34 PM (IST) Apr 21

Bigg Bossಗೆ ರಿಷಾ ಗೌಡ ಹೋಗಿದ್ಯಾಕೆ? ಬಹುದೊಡ್ಡ ಗುಟ್ಟು ಈಗ ರಿವೀಲ್​ ಮಾಡಿದ ನಟಿ

ಬಿಗ್​ಬಾಸ್​ 12ರ ಸ್ಪರ್ಧಿ ರಿಷಾ ಗೌಡ, ತಾವು ಶೋಗೆ ಎಂಟ್ರಿ ಕೊಟ್ಟಿದ್ದರ ಹಿಂದಿನ ಕಾರಣವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 11ನೇ ಸೀಸನ್‌ಗೆ ಬಂದಿದ್ದ ಆಫರ್ ನಿರಾಕರಿಸಿದ್ದ ಅವರು, ಪದೇ ಪದೇ ಇಲ್ಲ ಎನ್ನಲಾಗದೆ 12ನೇ ಸೀಸನ್‌ಗೆ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ. 

Read Full Story

12:32 PM (IST) Apr 21

SSLC ಹಿಂದಿ ಗ್ರೇಡ್ ವಿವಾದ - ಹೈಕೋರ್ಟ್‌ನಿಂದ ಅಂತಿಮ ತೀರ್ಪು, ಸರ್ಕಾರಕ್ಕೆ ಚಾಟಿ ಬೀಸಿದ ನ್ಯಾಯಪೀಠ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸಲು ಕೋರಿತ್ತು. ಸರ್ಕಾರದ ಅರ್ಜಿಯನ್ನು ಇತ್ಯರ್ಥಪಡಿಸಿದ ನ್ಯಾಯಾಲಯ, 2025-26ನೇ ಸಾಲಿನಿಂದ ಅಂಕಗಳನ್ನೇ ನೀಡಬೇಕೆಂದು ಸ್ಪಷ್ಟಪಡಿಸಿದ್ದು, ಪರೀಕ್ಷಾ ನಿಯಮಗಳನ್ನು ಮಧ್ಯದಲ್ಲಿ ಬದಲಿಸಲಾಗದು ಎಂದು ಹೇಳಿದೆ.
Read Full Story

12:13 PM (IST) Apr 21

'ಇನ್ಮುಂದೆ ಕಾಂಗ್ರೆಸ್‌ ಸ್ಮಶಾನಕ್ಕೆ ಹೋದ ಹೆಣದಂತೆ' ಗುಂಡ್ಲುಪೇಟೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಗುಡುಗು

ಗುಂಡ್ಲುಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಹಿಳಾ ಮೀಸಲು, ಬೆಲೆ ಏರಿಕೆ,  ದಲಿತರಿಗೆ ಅನ್ಯಾಯ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

Read Full Story

12:13 PM (IST) Apr 21

ಮಳೆ-ಬಿಸಿಲಿನಾಟ - ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್! ಕರಾವಳಿ ಜಿಲ್ಲೆಗಳಲ್ಲಿ ಹೀಟ್ ವೇವ್ ಎಚ್ಚರಿಕೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಗುಡುಗು ಸಹಿತ ಮಳೆ ಹಾಗೂ ಉಷ್ಣ ಅಲೆಯ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದ್ದು, ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿಯ ಎಚ್ಚರಿಕೆಯನ್ನೂ ನೀಡಿದೆ.
Read Full Story

12:09 PM (IST) Apr 21

ತಂಗಿಯನ್ನು ಚುಡಾಯಿಸಿದಕ್ಕೆ ಯುವಕನ ಎತ್ತಾಕೊಂಡೋಗಿ ಸರಿಯಾಗಿ ಬಾರಿಸಿದ ಅಕ್ಕ

ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಯುವತಿಯನ್ನು ಚುಡಾಯಿಸಿದ ಆರೋಪದ ಮೇಲೆ ಮೆಹಬೂಬ್ ಎಂಬ ಯುವಕನನ್ನು ಯುವತಿಯ ಕಡೆಯವರು ಮನೆಗೆ ಕರೆದೊಯ್ದು ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯ ವೀಡಿಯೋ ವೈರಲ್ ಆಗಿದ್ದು, ಸದರ್‌ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read Full Story

12:08 PM (IST) Apr 21

ಮರ್ಯಾದಾ ಹತ್ಯೆ ಭಯ - ತಂದೆಯಿಂದ ರಕ್ಷಣೆ ಕೋರಿ ಹೈಕೋರ್ಟ್ ಮೊರೆ ಹೋದ ಯುವತಿಗೆ ಭದ್ರತೆ

ಮರ್ಯಾದಾ ಹತ್ಯೆಯ ಭೀತಿಯಿಂದ ಯುವತಿಯೊಬ್ಬರು ತನ್ನ ತಂದೆಯಿಂದ ರಕ್ಷಣೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬಲವಂತದ ಮದುವೆಯನ್ನು ವಿರೋಧಿಸಿದ ಕಾರಣ ತಂದೆಯಿಂದ ಜೀವಭಯವಿದೆ ಎಂದು ಆರೋಪಿಸಿದ್ದು, ನ್ಯಾಯಾಲಯವು ಯುವತಿಗೆ ಸೂಕ್ತ ಭದ್ರತೆ ನೀಡುವಂತೆ ವೈಟ್‌ಫೀಲ್ಡ್ ಪೊಲೀಸರಿಗೆ ನಿರ್ದೇಶನ ನೀಡಿದೆ.

Read Full Story

11:43 AM (IST) Apr 21

ಬೆಂಗಳೂರು - ಮರ್ಯಾದೆ ಹತ್ಯೆಯ ಆತಂಕ, ತಂದೆಯ ವಿರುದ್ಧವೇ ಹೈಕೋರ್ಟ್ ಮೆಟ್ಟಲೇರಿದ ಮಗಳು!

ಬೆಂಗಳೂರಿನ ಯುವತಿಯೊಬ್ಬಳು ಬಲವಂತದ ಮದುವೆ ವಿರೋಧಿಸಿ, ತಂದೆಯಿಂದ ಮರ್ಯಾದೆ ಹತ್ಯೆಯಾಗುವ ಭೀತಿಯಿಂದ ಹೈಕೋರ್ಟ್‌ಗೆ ಮೊರೆ ಹೋಗಿದ್ದಾಳೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಯುವತಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ವೈಟ್‌ಫೀಲ್ಡ್ ಪೊಲೀಸರಿಗೆ ನಿರ್ದೇಶನ ನೀಡಿದೆ.
Read Full Story

11:43 AM (IST) Apr 21

ಕನ್ನಡತಿ ಭುವನೇಶ್ವರಿ v/s ಕರ್ಣ ಸೀರಿಯಲ್ ನಿಧಿ - ಕಿರಣ್​ ರಾಜ್​ಗೆ ಯಾರಿಷ್ಟ ಕೇಳಿದ್ದಕ್ಕೆ ನಟ ಹೇಳಿದ್ದೇನು?

'ಕರ್ಣ' ಸೀರಿಯಲ್‌ ಕಿರಣ್ ರಾಜ್ ಮತ್ತು ಭವ್ಯಾ ಗೌಡ ಜೋಡಿ ಜನಪ್ರಿಯವಾಗಿದೆ, ಈ ಹಿಂದೆ 'ಕನ್ನಡತಿ'ಯಲ್ಲಿ ರಂಜಿನಿ ರಾಘವನ್ ಜೊತೆಗಿನ ಕೆಮಿಸ್ಟ್ರಿ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು. ಇಬ್ಬರು ನಾಯಕಿಯರಲ್ಲಿ ಯಾರು ಹೆಚ್ಚು ಇಷ್ಟ ಎಂಬ ಪ್ರಶ್ನೆಗೆ, ಕಿರಣ್ ರಾಜ್ ಭಾವನಾತ್ಮಕವಾಗಿ ಸಂಪರ್ಕದ ಬಗ್ಗೆ ಹೇಳಿದ್ದೇನು?

Read Full Story

11:39 AM (IST) Apr 21

ಹುಡುಗನಿಗೆ ಅಡಕೆ ತೋಟ ಐತಾ? ನೌಕರಿ ಇದೆಯಾ ಅಂತ ಕೇಳ್ಬೇಡಿ - ಹೆಣ್ಮಕ್ಕಳಿಗೆ ಸ್ವಾಮೀಜಿ ಕಿವಿಮಾತು

ಮಲೇಬೆನ್ನೂರಿನಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ, ರಟ್ಟಿಹಳ್ಳಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಕನ್ಯೆಯ ಪೋಷಕರಿಗೆ ಮಹತ್ವದ ಕಿವಿಮಾತು ಹೇಳಿದರು. ವರನ ಆಸ್ತಿ, ನೌಕರಿಗಿಂತ ಅವನ ಪರಿಶುದ್ಧ ಕಾಯಕ ಮತ್ತು ಉತ್ತಮ ವಿಚಾರಗಳಿಗೆ ಬೆಲೆ ಕೊಟ್ಟು ಹೆಣ್ಣು ನೀಡುವಂತೆ ಅವರು ಸಲಹೆ ನೀಡಿದರು.
Read Full Story

10:57 AM (IST) Apr 21

ರಾಸಣಗಿ ಬಲಭೀಮಸೇನ ದೇವರಿಗೆ ಪಾದರಕ್ಷೆ ಸಮರ್ಪಣೆ; 5 ವರ್ಷಕ್ಕೊಮ್ಮೆ ನಡೆಯುವ ಸಂಪ್ರದಾಯ

ರಾಸಣಗಿ ಬಲಭೀಮಸೇನ ದೇವರಿಗೆ ಅಕ್ಷಯ ತದಿಗೆಯಂದು ಪುರಾತನ ಪದ್ಧತಿಯಂತೆ ಪಾದರಕ್ಷೆ ಸಮರ್ಪಿಸಲಾಯಿತು. ಹರವಾಳ ಗ್ರಾಮದ ಹೇರೂರ ಮನೆತನದವರು 4 ಕಿ.ಮೀ. ಪಾದಯಾತ್ರೆ ಮೂಲಕ ಚಮ್ಮಾವುಗೆಗಳನ್ನು ತಂದು ದೇವರಿಗೆ ಅರ್ಪಿಸಿದರು. ಈ ವಿಶಿಷ್ಟ ಸಂಪ್ರದಾಯವು ಪ್ರತಿ 5 ವರ್ಷಕ್ಕೊಮ್ಮೆ ನಡೆಯುತ್ತದೆ.

Read Full Story

10:47 AM (IST) Apr 21

ನಟ ಸೂರ್ಯ ಬಳಿಕ ಫ್ಯಾಮಿಲಿ ಸಮೇತ ಹುಟ್ಟಿದ ಮನೆ, ಊರು ಖಾಲಿ ಮಾಡ್ತಾರಾ Actor Allu Arjun?

Actor Allu Arjun: ಅಲ್ಲು ಅರ್ಜುನ್ ಹೈದರಾಬಾದ್ ತೊರೆಯಲಿದ್ದಾರೆಯೇ? ಪ್ಯಾನ್ ಇಂಡಿಯಾ ಇಮೇಜ್ ಜೊತೆಗೆ ಬಾಲಿವುಡ್‌ನಿಂದಲೂ ಸಾಲು ಸಾಲು ಆಫರ್‌ಗಳು ಬರುತ್ತಿರುವುದರಿಂದ ಬನ್ನಿ ತಮ್ಮ ಕುಟುಂಬದೊಂದಿಗೆ ಮುಂಬೈಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು?

 

Read Full Story

10:00 AM (IST) Apr 21

ಬಳ್ಳಾರಿ - ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಕಾರು

Andral Ballari road accident: ಬಳ್ಳಾರಿಯ ಅಂದ್ರಾಳ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ. ಕಾರಿನಲ್ಲಿದ್ದ ಏಕೈಕ ವ್ಯಕ್ತಿಯಾದ ಚಾಲಕನನ್ನು ಸ್ಥಳೀಯರು ರಕ್ಷಿಸಿ, ಚಿಕಿತ್ಸೆಗಾಗಿ ವೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Read Full Story

09:57 AM (IST) Apr 21

Zodiac Signs - ಬುಧ, ಗುರು, ಸೂರ್ಯನ ಪ್ರಭಾವದಿಂದ ಯಾವಾಗಲೂ ಫುಲ್ ಜಾಲಿಯಾಗಿರೋ ರಾಶಿಗಳು!

ಮೂರು ರಾಶಿಯ ಜನರು ಜೀವನದ ಸಮಸ್ಯೆಗಳನ್ನು ಹಗುರವಾಗಿ ತೆಗೆದುಕೊಂಡು ಯಾವಾಗಲೂ ಜಾಲಿಯಾಗಿರುತ್ತಾರೆ. ಬುಧ, ಗುರು ಮತ್ತು ಸೂರ್ಯನಂತಹ ಗ್ರಹಗಳ ಪ್ರಭಾವದಿಂದ, ಇವರು ಚಿಂತೆಗಳನ್ನು ದೊಡ್ಡದು ಮಾಡದೆ, ಜೀವನವನ್ನು ಒಂದು ಸಾಹಸದಂತೆ ಅನುಭವಿಸುತ್ತಾರೆ.
Read Full Story

09:54 AM (IST) Apr 21

Women political empowerment - ಮಹಿಳೆಗೆ ರಾಜಕೀಯ ಸ್ಥಾನ ಯಾವಾಗ?

ಭಾರತೀಯ ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಐತಿಹಾಸಿಕ ಹೋರಾಟವನ್ನು ಈ ಲೇಖನ ವಿಶ್ಲೇಷಿಸುತ್ತದೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿಯ ಯಶಸ್ಸಿನಿಂದ ಹಿಡಿದು, 'ನಾರಿಶಕ್ತಿ ವಂದನಾ ಕಾಯ್ದೆ'ಯ ಮೂಲಕ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ಉಳಿಸದೆ, ನಿರ್ಣಾಯಕ ಶಕ್ತಿಯಾಗಿ ರೂಪಿಸುವ ದೂರದೃಷ್ಟಿ ಚರ್ಚಿಸುತ್ತದೆ.

Read Full Story

09:25 AM (IST) Apr 21

ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ - ಇಬ್ಬರೂ ಸ್ಥಳದಲ್ಲೇ ಸಾವು, ನೂರಾರು ಕೋಳಿಗಳ ಮಾರಣಹೋಮ

ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್‌ಗೆ ಕೋಳಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ. ಅಪಘಾತದ ರಭಸಕ್ಕೆ ನೂರಾರು ಕೋಳಿಗಳು ಸಹ ಮೃತಪಟ್ಟಿವೆ.

Read Full Story

More Trending News