Published : Apr 02, 2026, 07:10 AM ISTUpdated : Apr 02, 2026, 10:59 PM IST

Karnataka News Live: Pavithra Bandhana Serial - ತಿಲಕ್‌ ಪಾತ್ರ ಮತ್ತೆ ಬರಲಿದೆಯಾ? ನಟ ಯಶಸ್‌ ಕೃಷ್ಣ ಹೇಳಿದ ಸತ್ಯ ಏನು?

ಸಾರಾಂಶ

ಬೆಂಗಳೂರು: ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಮತ್ತು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ನುಗ್ಲಿ ವಿರುದ್ಧ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ ಕುಮಾರ್‌ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿಗೆ ಬುಧವಾರ ದೂರು ನೀಡಿದ್ದಾರೆ.

ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ವೇಳೆ ಶಾಸಕ ಪ್ರದೀಪ್‌ ಈಶ್ವರ್‌ ಅವರು ಬಿಜೆಪಿ ನಾಯಕರ ವಿರುದ್ಧ ಅವಹೇಳನ ಮಾಡಿದ್ದಾರೆ. ಸರ್ಕಾರಿ ನೌಕರ ಚಂದ್ರಶೇಖರ್ ನುಗ್ಲಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

10:59 PM (IST) Apr 02

Pavithra Bandhana Serial - ತಿಲಕ್‌ ಪಾತ್ರ ಮತ್ತೆ ಬರಲಿದೆಯಾ? ನಟ ಯಶಸ್‌ ಕೃಷ್ಣ ಹೇಳಿದ ಸತ್ಯ ಏನು?

Colors Kannada Pavithra Bandhana Serial: ಪವಿತ್ರ ಬಂಧನ ಧಾರಾವಾಹಿಯಲ್ಲಿ ತಮ್ಮಯ್ಯ ಎಂದೇ ಫೇಮಸ್‌ ಆಗಿರೋ ತಿಲಕ್‌ ದೇಶಮುಖ್‌ ಅಲಿಯಾಸ್‌ ಯಶಸ್‌ ಕೃಷ್ಣ ಅವರ ಪಾತ್ರ ಮುಕ್ತಾಯವಾಗಿದೆ. ಇದನ್ನು ವೀಕ್ಷಕರು ನೋಡಿ ಬೇಸರ ಮಾಡಿಕೊಂಡಿದ್ದರು. ಈ ಪಾತ್ರ ಮರಳಿ ಬರಲಿದೆಯಾ?

 

Read Full Story

10:35 PM (IST) Apr 02

Amruthadhaare Serial - ಕರ್ಮ ಬಿಡ್ಲಿಲ್ಲ, JD ತಂತ್ರಕ್ಕೆ ತಿರುಗು ಮಂತ್ರ ಹಾಕಿದ ಮಲ್ಲಿ; ತತ್ತರಿಸಿ ಹೋದ KD

Amruthadhaare Kannada Serial Update: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಜೀವನ ಹಾಳು ಮಾಡಬೇಕು ಎಂದುಕೊಂಡಿದ್ದ ಜಯದೇವ್‌ಗೆ ಸಖತ್‌ ಟ್ವಿಸ್ಟ್‌ ಸಿಕ್ಕಿದೆ. ಈ KD ಜೇಡಿಯೇ ನಲುಗುವಂಥ ಸುದ್ದಿ ಸಿಕ್ಕಿದೆ. ಅಷ್ಟೇ ಅಲ್ಲದೆ ಅವನಿಗೆ ಒಂದಲ್ಲ, ಎರಡು ಆಘಾತಕಾರಿ ಸುದ್ದಿ ಸಿಕ್ಕಿದೆ.

 

Read Full Story

09:22 PM (IST) Apr 02

ಗ್ಯಾರಂಟಿ ಯೋಜನೆಯಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ - ಸಚಿವ ಬೈರತಿ ಸುರೇಶ್

ಸಿದ್ದರಾಮಯ್ಯ ಅವರು ರಾಜ್ಯರ ಜನತೆಗೆ ಹಲವು ಭಾಗ್ಯಗಳ ಮೂಲಕ ಕಳೆದ ಮೂರು ವರ್ಷಗಳಿಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಿದ್ದಾರೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

Read Full Story

09:14 PM (IST) Apr 02

ಚಾಮರಾಜನಗರ - ಪ್ರೀತಿಗೆ ಮನೆಯವರ ವಿರೋಧ; ಒಂದೇ ಹಗ್ಗಕ್ಕೆ ಕೊರಳೊಡ್ಡಿದ ಆದಿವಾಸಿ ಯುವ ಪ್ರೇಮಿಗಳು!

ಚಾಮರಾಜನಗರದ ಪೊನ್ನಾಚ್ಚಿ ಗ್ರಾಮದಲ್ಲಿ, ಪೋಷಕರ ವಿರೋಧ ಮತ್ತು ಪೊಲೀಸ್ ದೂರಿನ ಭೀತಿಯಿಂದ ಆದಿವಾಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದು, ಸಾವಿನ ಸುತ್ತ ಅನುಮಾನಗಳು ದಟ್ಟವಾಗಿವೆ.
Read Full Story

08:46 PM (IST) Apr 02

ವಿದ್ಯಾರ್ಥಿಗಳಲ್ಲಿನ ಮೊಬೈಲ್‌ ವ್ಯಸನ ನಿವಾರಣೆಗೆ ಮಾರ್ಗಸೂಚಿ - ಸಚಿವ ದಿನೇಶ್ ಗುಂಡೂರಾವ್

ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಂಶವುಳ್ಳ ಕರಡು ನೀತಿ ರೂಪಿಸಿದ್ದು, ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಿ ಅಂತಿಮ ನೀತಿ ಪ್ರಕಟಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Read Full Story

08:34 PM (IST) Apr 02

ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವನ್ನು ಮುಚ್ಚಲು ಸರ್ಕಾರ ಸಂಚು - ಆರ್‌.ಅಶೋಕ್‌ ಕಿಡಿ

ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವನ್ನು (ಕೆಎಸ್‌ಐಸಿ) ಹಂತ ಹಂತವಾಗಿ ಮುಚ್ಚಲು ರಾಜ್ಯ ಸರ್ಕಾರ ಚಕ್ರವ್ಯೂಹ ರಚಿಸಿದಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

Read Full Story

08:27 PM (IST) Apr 02

Super Hit Movies - ಟಾಪ್‌ ಡೈರೆಕ್ಟರ್‌ಗಳ ಸೂಪರ್‌ ಹಿಟ್‌ ಸಿನಿಮಾಗಳಿವು; ಧೂಳೆಬ್ಬಿಸಿರೋ ಕಲೆಕ್ಷನ್‌ ದಾಖಲೆ

Tollywood Directors: ರಾಜಮೌಳಿ, ತ್ರಿವಿಕ್ರಮ್, ಸುಕುಮಾರ್ ಅವರಂತಹ ಟಾಪ್ ಡೈರೆಕ್ಟರ್‌ಗಳ ವೃತ್ತಿಜೀವನದ ಬೆಸ್ಟ್ ಸಿನಿಮಾಗಳ ಬಗ್ಗೆ ಈ ಸ್ಟೋರಿಯಲ್ಲಿದೆ. ಈ ಚಿತ್ರಗಳನ್ನು ಮೀರಿಸುವಂತಹ ಸಿನಿಮಾಗಳನ್ನು ಇವರು ಮತ್ತೆ ನಿರ್ದೇಶಿಸಬಲ್ಲರೇ ಎಂಬ ಚರ್ಚೆ ಅಭಿಮಾನಿಗಳಲ್ಲಿ ಜೋರಾಗಿದೆ.

 

Read Full Story

08:20 PM (IST) Apr 02

ಬಾಲಯ್ಯಗೆ ತಾಯಿಯಾಗುವ ಪಾತ್ರವನ್ನು ಸೌಂದರ್ಯ ರಿಜೆಕ್ಟ್ ಮಾಡಿದ್ದೇಕೆ? ಕಾಸ್ಟಿಂಗ್ ಟ್ವಿಸ್ಟ್ ರಿವೀಲ್

ನಂದಮೂರಿ ಬಾಲಕೃಷ್ಣ ಇಂದಿಗೂ ಸ್ಟಾರ್ ಹೀರೋ ಆಗಿ ಸತತ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ವೃತ್ತಿಜೀವನದಲ್ಲಿ ದ್ವಿಪಾತ್ರಗಳಲ್ಲಿ ನಟಿಸಿದ ಹಲವು ಚಿತ್ರಗಳಿವೆ. 'ಚೆನ್ನಕೇಶವ ರೆಡ್ಡಿ' ಕೂಡಾ ಅಂತಹದ್ದೇ ಒಂದು ಸಿನಿಮಾ.

Read Full Story

08:12 PM (IST) Apr 02

'Now It’s Us Three..' ಮದುವೆಯಾದ ಒಂದೇ ತಿಂಗಳಿಗೆ ನಾವು ಮೂವರಾಗ್ತಿದ್ದೇವೆ ಎಂದ ನಟಿ ರಶ್ಮಿಕಾ ಮಂದಣ್ಣ!

Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರು ಇತ್ತೀಚೆಗೆ ಮದುವೆ ಆಗಿದ್ದಾರೆ. ಈಗ ಅವರು “ನಾವು ಈಗ ಇಬ್ಬರಲ್ಲ, ಮೂವರು” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಈಗ ಭಾರೀ ವೈರಲ್‌ ಆಗ್ತಿದೆ. ಹಾಗಾದರೆ ಸತ್ಯ ಏನು?

 

Read Full Story

06:53 PM (IST) Apr 02

Rishab Shetty ಏಕಾಏಕಿ ಎಲ್ರನ್ನೂ ಅನ್​ಫಾಲೋ ಮಾಡಿದ್ಯಾಕೆ? ಪ್ರಮೋದ್​ ಶೆಟ್ರಿಂದ ಬಂತು ಸ್ಪಷ್ಟನೆ

ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿ, ಫಿಲ್ಮ್ಸ್ ಮತ್ತು ಫೌಂಡೇಷನ್ ಖಾತೆಗಳನ್ನು ಹೊರತುಪಡಿಸಿ ಎಲ್ಲರನ್ನೂ ಅನ್‌ಫಾಲೋ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಅವರ ಆಪ್ತಮಿತ್ರ ಪ್ರಮೋದ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

Read Full Story

06:32 PM (IST) Apr 02

AA22xA6 - ದೀಪಿಕಾ-ಅಲ್ಲು ಅರ್ಜುನ್ ಸಿನಿಮಾ ಬಂಪರ್ ಹಿಟ್ - 'ಧುರಂಧರ್' ಸ್ಟಾರ್ ರಣವೀರ್ ಕೊಟ್ಟೇಬಿಟ್ರು ಹಿಂಟ್

ಈ ಪ್ರಾಜೆಕ್ಟ್‌ ಅನ್ನು ದೊಡ್ಡ ಬಜೆಟ್ ಮತ್ತು ಭವ್ಯವಾದ ಸೆಟ್‌ಗಳೊಂದಿಗೆ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಈ ಹಿಂದೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ಅಟ್ಲಿ ನಿರ್ದೇಶಿಸುತ್ತಿದ್ದಾರೆ.

Read Full Story

05:15 PM (IST) Apr 02

ಅಮ್ಮನಾದ ಜೊತೆ ಜೊತೆಯಲಿ ಸೀರಿಯಲ್‌ ಸ್ಟಾರ್‌ - ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ!

'ಜೊತೆ ಜೊತೆಯಲಿ' ಖ್ಯಾತಿಯ ನಟಿ ಮಾನಸ ಮನೋಹರ್ ಮತ್ತು ಅವರ ಪತಿ, ಫುಟ್‌ಬಾಲ್ ಆಟಗಾರ ಪ್ರೀತಂ ಚಂದ್ರ ಅವರು ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಮಾರ್ಚ್ 20, 2026 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಈ ಸಿಹಿ ಸುದ್ದಿಯನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Read Full Story

04:48 PM (IST) Apr 02

'ಮದರ್ ಪ್ರಾಮಿಸ್‌' ಮಾಡಿ 'ಫಾದರ್‌ ಆಫ್‌ ಆಲ್‌ ಪ್ರಾಮಿಸಸ್‌' ಎಂದ ಡಾಲಿ ಧನಂಜಯ - ಕಾರಣವೇನು?

ಡಾಲಿ ಧನಂಜಯ ನಟನೆ, ನಿರ್ಮಾಣದ ಹೊಸ ಸಿನಿಮಾ ಹೆಸರು ‘ಮದರ್ ಪ್ರಾಮಿಸ್’. ಈ ಚಿತ್ರದ ಟ್ಯಾಗ್‌ಲೈನ್‌ ‘ಫಾದರ್‌ ಆಫ್‌ ಆಲ್‌ ಪ್ರಾಮಿಸಸ್‌’. ವಿಶೇಷ ಎಂದರೆ ಈ ಸಿನಿಮಾ ಮೂಲಕ ನಟ ಪೂರ್ಣಚಂದ್ರ ಮೈಸೂರು ಅವರು ನಿರ್ದೇಶಕನಾಗುತ್ತಿದ್ದಾರೆ.

Read Full Story

04:28 PM (IST) Apr 02

ದೊಡ್ಡ ಹೊಟೆಲ್ ಅದಕ್ಕಿಂತ ಸೂಪರ್ ಹೆಸರು ನೋಡಿ ಆರ್ಡರ್ ಮಾಡಿದ ಬೆಂಗಳೂರಿಗನಿಗೆ ಕೊಟ್ಟಿದ್ದು ಇದು

ದೊಡ್ಡ ಹೊಟೆಲ್ ಅದಕ್ಕಿಂತ ಸೂಪರ್ ಹೆಸರು ನೋಡಿ ಆರ್ಡರ್ ಮಾಡಿದ ಬೆಂಗಳೂರಿಗನಿಗೆ ಕೊಟ್ಟಿದ್ದು ಇದು, ಬೆಂಗಳೂರಿನ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಹೇಳಿದ ತಿಂಡಿ ಬಂದಾಗ ಅಚ್ಚರಿಯಾಗಿತ್ತು.

 

Read Full Story

04:21 PM (IST) Apr 02

ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸ್ಮಾರ್ಟ್ ಎಐ ಡಯಾಲಿಸಿಸ್ ವ್ಯವಸ್ಥೆ - ಸಚಿವ ದಿನೇಶ್ ಗುಂಡೂರಾವ್

ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯ ಪರಿಚಯದಿಂದ ಚಿಕಿತ್ಸಾ ಗುಣಮಟ್ಟ ಮತ್ತು ರೋಗಿ ಸುರಕ್ಷತೆ ಮತ್ತಷ್ಟು ಬಲವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Read Full Story

04:01 PM (IST) Apr 02

ಫಸ್ಟ್‌ ಮದುವೆ ಮುರೀತು, ಪಶ್ಚಾತ್ತಾಪ ಇಲ್ಲ, ಎಲ್ಲ ಹೀಲ್‌ ಆಗಿದೆ - ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಪದ್ಮಜಾ ರಾವ್

Actress Padmaja Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕುಸುಮಾ ಪಾತ್ರದಿಂದ ಜನರ ಮನಸ್ಸು ಗೆದ್ದಿರುವ ನಟಿ ಪದ್ಮಜಾ ರಾವ್‌ ಅವರು ರ್ಯಾಪಿಡ್‌ ರಶ್ಮಿ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೊದಲ ಮದುವೆ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಮೊದಲ ಮದುವೆ ಯಾಕೆ ಮುರಿಯಿತು?

 

Read Full Story

03:56 PM (IST) Apr 02

ಉತ್ತರ ಕನ್ನಡದ ರೈತನ ತೋಟದ ವಿಸ್ಮಯ - ಒಂದೇ ಹಣ್ಣಿಗೆ 60 ಚಿಕ್ಕ ಚಿಕ್ಕ ಕಾಯಿಗಳು!

ಉತ್ತರ ಕನ್ನಡದ ಶೇವಾಳಿ ಗ್ರಾಮದ ರೈತರೊಬ್ಬರ ತೋಟದಲ್ಲಿ ಒಂದು ಅನಾನಸ್ ಗಿಡದಲ್ಲಿ 60ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಅನಾನಸ್‌ಗಳು ಬೆಳೆದು ಅಚ್ಚರಿ ಮೂಡಿಸಿವೆ. ಇದು ಥೈಲ್ಯಾಂಡ್ ಮೂಲದ ಅಪರೂಪದ 'ಮೆಡುಸಾ ಅನಾನಸ್' ತಳಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಇದನ್ನು ಅಲಂಕಾರಿಕ ಉದ್ದೇಶಗಳಿಗಾಗಿ ಹೆಚ್ಚಾಗಿ ಬೆಳೆಯಲಾಗುತ್ತದೆ.
Read Full Story

03:39 PM (IST) Apr 02

ನಾಸ್ತಿಕನಾದರೂ ತಾಯಿಯ ಆಸೆಗೆ ಅಗೌರವ ತೋರಲ್ಲ - ಟ್ರೋಲಿಗರ ಬಾಯಿ ಮುಚ್ಚಿಸಿದ ನಟ ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ನಿಧನರಾದರು. ನಾಸ್ತಿಕರಾದ ಪ್ರಕಾಶ್ ರಾಜ್, ತಾಯಿಯ ಅಂತ್ಯಕ್ರಿಯೆಯನ್ನು ಅವರ ನಂಬಿಕೆಯಂತೆ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ನಡೆಸಿದ್ದಕ್ಕೆ ಟ್ರೋಲ್‌ಗೆ ಒಳಗಾದರು.

Read Full Story

02:59 PM (IST) Apr 02

ಹುಬ್ಬಳ್ಳಿ-ಹೈದರಾಬಾದ್‌ಗೆ ಮಧ್ಯೆ ರಾಜರಥ ಎಸಿ ಸ್ಲೀಪರ್ ಬಸ್ ಆರಂಭ, ಸಮಯ, ಟಿಕೆಟ್ ದರ ಸಂಪೂರ್ಣ ಮಾಹಿತಿ ಇಲ್ಲಿದೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ಹೊಸ ರಾಜರಥ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಗದಗ, ಕೊಪ್ಪಳ, ರಾಯಚೂರು ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಹಾಗೂ ವಿಶೇಷ ರಿಯಾಯಿತಿಗಳು ಲಭ್ಯವಿವೆ.
Read Full Story

02:40 PM (IST) Apr 02

ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಉನ್ನತ ಹುದ್ದೆಗೆ ಅರ್ಜಿ ಆಹ್ವಾನ, 2 ಲಕ್ಷಕ್ಕೂ ಅಧಿಕ ವೇತನ!

ನವ ಮಂಗಳೂರು ಬಂದರು ಪ್ರಾಧಿಕಾರವು (NMPA) ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಿಸಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಈ ಉನ್ನತ ವೇತನದ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ನೇಮಕ ಮಾಡಿಕೊಂಡು ಮಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.
Read Full Story

02:15 PM (IST) Apr 02

ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣ, ಕೇಂದ್ರ ಸಚಿವ ಕುಮಾರಸ್ವಾಮಿಗೆ ಸುಪ್ರೀಂನಿಂದ ಅನಿರೀಕ್ಷಿತ ತಿರುವು

ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣದ ತುರ್ತು ವಿಚಾರಣೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಸಾಮಾನ್ಯ ಕ್ರಮದಲ್ಲೇ ವಿಚಾರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.
Read Full Story

01:33 PM (IST) Apr 02

ಬಿಹಾರವಾದ ಕರ್ನಾಟಕ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 45 ಲಕ್ಷ ಮೌಲ್ಯದ ಸ್ಟೀಲ್‌ ಕಳ್ಳತನ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಿಂದ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಕಬ್ಬಿಣದ ಸರಳುಗಳು ಕಳ್ಳತನವಾಗಿವೆ. ಈ ಸಂಬಂಧ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಾಲ್ವರು ಶಂಕಿತರನ್ನು ಗುರುತಿಸಿರುವ ಪೊಲೀಸರು ಅವರಿಗಾಗಿ ಬಲೆ ಬೀಸಿದ್ದಾರೆ.
Read Full Story

01:29 PM (IST) Apr 02

ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್‌ ಎಕ್ಸ್‌ಪ್ರೆಸ್‌ ರೈಲು ಸಮಯ ಬದಲಾವಣೆಗೆ ಪಟ್ಟುಹಿಡಿದ ರೈಲ್ವೆ ಇಲಾಖೆ! ವ್ಯಾಪಕ ವಿರೋಧ

ವರದಿ: ಆತ್ಮಭೂಷಣ್‌

ನೈಋತ್ಯ ರೈಲ್ವೆಯು ಬೆಂಗಳೂರು-ಕೋಯಿಕ್ಕೋಡ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯವನ್ನು ವಿಳಂಬಗೊಳಿಸಲು ಪ್ರಸ್ತಾಪಿಸಿದೆ, ಇದು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಈ ಬದಲಾವಣೆಗೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲಿನ ಸಮಯ ಬದಲಾಯಿಸುವುದೇ ಸೂಕ್ತ  ಎಂದಿದೆ.

Read Full Story

01:25 PM (IST) Apr 02

ಪದೇ ಪದೇ ಆರೋಗ್ಯ ಸಮಸ್ಯೆ, ಅಂದ್ಕೊಂಡಿದ್ದು ಆಗೋದಿಲ್ಲ; ದೃಷ್ಟಿ ಆಗಿರುತ್ತೆ; ಹೀಗೆ ಮಾಡಿ, ಸರಿ ಹೋಗುತ್ತೆ

ಮಗು ಪದೇ ಪದೇ ಕಿರಿಕಿರಿ ಮಾಡುತ್ತಿದೆಯಾ ಅಥವಾ ಆರೋಗ್ಯ ಕೆಡುತ್ತಿದೆಯಾ? ಹಾಗಿದ್ರೆ ದೃಷ್ಟಿ ಆಗಿರಬಹುದು. ಕೆಲವೊಮ್ಮೆ ದೊಡ್ಡವರಿಗೂ ಏನಾದರೊಂದು ಸಮಸ್ಯೆ ಆಗುತ್ತದೆ, ಇನ್ನೊಮ್ಮೆ ಅಂದುಕೊಂಡ ಕೆಲಸ ಆಗದೆ ಇರಬಹುದು. ಬಿಹಾರದಲ್ಲಿ ಇಂದಿಗೂ ಮಕ್ಕಳ ದೃಷ್ಟಿ ತೆಗೆಯಲು ಬಳಸುವ ಹಳೆಯ ಕಾಲದ ಸುಲಭ ಮನೆಮದ್ದುಗಳಿವು.

 

Read Full Story

12:57 PM (IST) Apr 02

ಉಡುಪಿ - ಸಾಸ್ತಾನ ಯುವಕನ ಅಪಹರಣ ಪ್ರಕರಣ, ಪ್ರಮುಖ ಆರೋಪಿಗಳ ಪತ್ತೆಗೆ 50,000 ಬಹುಮಾನ ಘೋಷಣೆ

ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಡೆದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ್ ಕೋಡಿಕೆರೆ ಮತ್ತು ಚೇತನ್ ಕುಲಾಲ್ ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಪೊಲೀಸರು ₹50,000 ಬಹುಮಾನ ಘೋಷಿಸಿದ್ದಾರೆ.
Read Full Story

12:53 PM (IST) Apr 02

ನಾಳೆನೇ ಮದ್ವೆಯಾಗೋಣ ಎಂದು ಭಾವಿ ಪತಿಗೆ ಫೇಕ್​ಕಾಲ್​ - ಜೈದೇವ್​ ಉತ್ತರ ಕೇಳಿ ನಾಚಿ ನೀರಾಗೋದ ನಟಿ

ಅಮೃತಧಾರೆ ಸೀರಿಯಲ್‌ನಲ್ಲಿ ಮೋಸ ಮಾಡಿದ ಜೈದೇವ್ ಪಾತ್ರಧಾರಿ ರಾಣವ್ ಗೌಡ ಅವರನ್ನೇ ನಟಿ ರಾಧಾ ಭಗವತಿ ನಿಜ ಜೀವನದಲ್ಲಿ ಮದುವೆಯಾಗುತ್ತಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಸಂದರ್ಶನವೊಂದರಲ್ಲಿ ರಾಧಾ ಮಾಡಿದ ಪ್ರಾಂಕ್ ಕಾಲ್‌ಗೆ ರಾಣವ್ ನೀಡಿದ ತಮಾಷೆಯ ಉತ್ತರ ಎಲ್ಲರ ಗಮನ ಸೆಳೆದಿದೆ.
Read Full Story

12:52 PM (IST) Apr 02

10 ಅಡಿ ಆಳದಲ್ಲಿ ಗೋಧಿಯ 70 ಮೂಟೆ ಹೂತಿಟ್ಟ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು, ಸುಮಾರು 70 ಗೋಧಿ ಮೂಟೆಗಳನ್ನು ಶಾಲಾ ಆವರಣದಲ್ಲಿ 10 ಅಡಿ ಆಳದಲ್ಲಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕರ ದೂರಿನ ಮೇರೆಗೆ ಜೆಸಿಬಿ ಮೂಲಕ ಭೂಮಿ ಅಗೆದಾಗ ಮೂಟೆಗಳು ಸಿಕ್ಕಿವೆ.

Read Full Story

12:41 PM (IST) Apr 02

ನಾನು ಸಿಎಂ ಆದರೆ ಯೋಗಿ ಸ್ಟೈಲ್ ಆಡಳಿತ, ಮುಸ್ಲಿಮರ ಬಗ್ಗೆ ಯತ್ನಾಳ್ ಹೊಸ ರಾಜಕೀಯ ಬಾಂಬ್!

ಸಚಿವ ಎಂ.ಬಿ. ಪಾಟೀಲ್ ಅವರ ಸವಾಲಿಗೆ ತಿರುಗೇಟು ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾನು ಮುಖ್ಯಮಂತ್ರಿಯಾದರೆ ಉತ್ತರ ಪ್ರದೇಶದ ಯೋಗಿ ಮಾದರಿ ಆಡಳಿತ ನೀಡುವುದಾಗಿ ಹೇಳಿದ್ದಾರೆ. ತಮ್ಮ ಮೊದಲ ಸಂಪುಟ ಸಭೆಯಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ತೆಗೆದುಹಾಕುವುದಾಗಿ ಸ್ಫೋಟಕ ಹೇಳಿಕೆ

Read Full Story

12:30 PM (IST) Apr 02

'ಏಪ್ರಿಲ್ ಫೂಲ್' ಸಂಪ್ರದಾಯಕ್ಕೆ ಎಂಡ್ ಕಾರ್ಡ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ - ಹೊಸ ಆ್ಯಪ್ ಮೂಲಕ ಭಾರೀ ಸಂಚಲನ!

'ಬುದ್ಧಿವಂತರ ದಿನ'ದಂದು ಉಪ್ಪಿ ಬಿಡುಗಡೆ ಮಾಡಿರುವ ಈ ಹೊಸ ಆ್ಯಪ್ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ರಿಯಲ್ ಸ್ಟಾರ್‌ನ ಈ 'ರಿಯಲ್ ಪ್ರಜಾಕೀಯ' ಆ್ಯಪ್ ಜನಸಾಮಾನ್ಯರ ಬದುಕಿನಲ್ಲಿ ಎಂತಹ ಬದಲಾವಣೆ ತರಲಿದೆ ಎಂಬುದನ್ನು ಕಾದು ನೋಡಬೇಕು.

Read Full Story

11:52 AM (IST) Apr 02

ಜಾತಕದಲ್ಲಿದ್ದಂತೆ ಆಗೋಯ್ತು; ರಾಯರ ಮಠದಲ್ಲಿ ಕಸ ಗುಡಿಸಿದ ಅಸಲಿ ಕಾರಣ ಬಿಚ್ಚಿಟ್ಟ ನಟ ಜಗ್ಗೇಶ್

Actor Jaggesh On Mutt: ಇತ್ತೀಚೆಗೆ ನವರಸನಾಯಕ ಜಗ್ಗೇಶ್‌ ಅವರು ಮಂತ್ರಾಲಯದಲ್ಲಿ ಕಸ ಗುಡಿಸಿದರು. ಈ ವಿಡಿಯೋ ವೈರಲ್‌ ಆಗಿದ್ದು, ಕೆಲವರು ನೆಗೆಟಿವ್‌ ಮಾತನಾಡಿದರು. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ. 

 

Read Full Story

11:35 AM (IST) Apr 02

ಬೆಳ್ಳಂಬೆಳಗ್ಗೆ ಶಿವಾನಂದ ಸರ್ಕಲ್ ಬಳಿ ಭೀಕರ ಅಪಘಾತ - ಡಿವೈಡರ್‌ಗೆ ಡಿಕ್ಕಿ ಹೊಡೆದ ಆಂಧ್ರ ಸಾರಿಗೆ ಬಸ್!

ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (APSRTC) ಸೇರಿದ ಬಸ್‌ವೊಂದು ಶಿವಾನಂದ ಸರ್ಕಲ್ ಬಳಿ ಅಪಘಾತಕ್ಕೀಡಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

 

Read Full Story

11:26 AM (IST) Apr 02

ರಾಜ್ಯದಲ್ಲಿ ಕೆಂಡದಂತಹ ಬಿಸಿಲು ಹವಾಮಾನ ಇಲಾಖೆಯ ಎಚ್ಚರಿಕೆ ಗಂಟೆ, 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲು!

ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಸಿಲಿನ ತೀವ್ರತೆ ಹೆಚ್ಚಿರುವ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Read Full Story

11:17 AM (IST) Apr 02

ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ

ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ 11 ತಿಂಗಳ ಮಗು ಆಕಸ್ಮಿಕವಾಗಿ ಬಕೆಟ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಇದರಿಂದ ತೀವ್ರವಾಗಿ ನೊಂದ ಟೆಕ್ಕಿ ತಾಯಿ, ಮಗುವಿನ ಸಾವಿಗೆ ನಾನೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.

Read Full Story

10:51 AM (IST) Apr 02

Ramayana Teaser - ಮರ್ಯಾದಾ ಪುರುಷೋತ್ತಮನಾಗಿ ಹೊಸ ಲೋಕವನ್ನೇ ಕಣ್ಮುಂದೆ ತಂದ ರಣಬೀರ್‌ ಕಪೂರ್

Ramayana Movie: ರಣಬೀರ್ ಕಪೂರ್ ನಟನೆಯ 'ರಾಮಾಯಣ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಲುಕ್ ನೋಡಿ ಫ್ಯಾನ್ಸ್ 'ದೈವಿಕ ಅನುಭವ' ಎಂದಿದ್ದಾರೆ. ಅದ್ಭುತ ವಿಶ್ಯುವಲ್ಸ್, ಅಂತಾರಾಷ್ಟ್ರೀಯ ಮಟ್ಟದ VFX ಜೊತೆಗೆ ಈ ಸಿನಿಮಾ ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ರಾಜೆಕ್ಟ್ ಆಗಲಿದೆ.

 

Read Full Story

10:28 AM (IST) Apr 02

ಉಪಚುನಾವಣೆ ಕಾವೇರಿದ ಹೊತ್ತಲ್ಲಿ ನಾಳೆ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಎಂಟ್ರಿ, ಚಾಣಕ್ಯನ ಭೇಟಿ ಭಾರೀ ಸಂಚಲನ!

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಿಜಿಎಸ್ ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದು, ಈ ಭೇಟಿಯು ರಾಜಕೀಯ ವಲಯದಲ್ಲಿ ಕುತೂಹಲ.

Read Full Story

10:09 AM (IST) Apr 02

Bhagyalakshmi Serial - ನಾನ್ ಮದುವೆ ಆಗಲ್ಲ-ಉಲ್ಟಾ ಹೊಡೆದ ಆದೀಶ್ವರ್;‌ ಮತ್ತೆ ನರಕವಾದ ಭಾಗ್ಯ ಜೀವನ

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ, ಆದಿ ಮದುವೆ ಆಗ್ತಾರೆ ಎನ್ನುವಾಗಲೇ ಇನ್ನೊಂದು ಟ್ವಿಸ್ಟ್‌ ಸಿಕ್ಕಿದೆ. ಇವರಿಬ್ಬರು ಮದುವೆ ಆಗೋದು ಅನೇಕರಿಗೆ ಇಷ್ಟವೇ ಇಲ್ಲ. ಹೀಗಾಗಿ ಒಂದಾದ ಮೇಲೆ ಒಂದರಂತೆ ಸಮಸ್ಯೆ ಬರುತ್ತಿದೆ.

 

Read Full Story

10:01 AM (IST) Apr 02

ಸಾಲ ಮಾಡೋದ್ರಲ್ಲಿ ದಾಖಲೆ ವೀರ ಸಿದ್ದರಾಮಯ್ಯ - ಬಸವರಾಜ ಬೊಮ್ಮಾಯಿ ವಾಗ್ದಾಳಿ

ದಾವಣಗೆರೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೇ ತಿಂಗಳಲ್ಲಿ ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಮತ್ತೆ ಜಂಗಿ ಕುಸ್ತಿ ಶುರುವಾಗಲಿದೆ ಎಂದು ಭವಿಷ್ಯ ನುಡಿದರು. ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ದಾಖಲೆ ವೀರ, ತಮ್ಮ ಹಾಗೂ ಸಿದ್ದರಾಮಯ್ಯ ಕಾಲದ ಸಾಲದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು..

Read Full Story

09:55 AM (IST) Apr 02

ಖರ್ಚಿಗೆ ಒಂದಿಷ್ಟು ಕೊಡಿ? ರೈತನ ಬಳಿ ಲಂಚ ಕೇಳಿದ ನಾಚಿಕೆ ಬಿಟ್ಟು ಅರಣ್ಯ ಇಲಾಖೆ ಸಿಬ್ಬಂದಿ

ಆನೆ ದಾಳಿಯಿಂದಾದ ಬೆಳೆ ಹಾನಿ ವರದಿ ಸಿದ್ಧಪಡಿಸಲು ಬಂದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು, ರೈತರೊಬ್ಬರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. "ಖರ್ಚಿಗೆ ಏನಾದರೂ ಕೊಡಿ, ಹೆಚ್ಚು ಹಾನಿ ಎಂದು ಬರೆಯುತ್ತೇನೆ" ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕ್ರಮಕ್ಕೆ ಆಗ್ರಹಿಸಿದ್ದಾರೆ.
Read Full Story

08:59 AM (IST) Apr 02

ಸ್ನೇಹಿತರ ಜೊತೆ ಪ್ರವಾಸ ದುರಂತ, ಕಾವೇರಿ ನದಿಯಲ್ಲಿ ಈಜಲು ಹೋದ ಬೆಂಗಳೂರು ಇನ್ಫೋಸಿಸ್ ಉದ್ಯೋಗಿ ಜಲಸಮಾಧಿ

ಬೆಂಗಳೂರಿನ ಇನ್ಫೋಸಿಸ್ ಉದ್ಯೋಗಿ ವಿಘ್ನೇಶ್ (25) ಎಂಬುವವರು ಶ್ರೀರಂಗಪಟ್ಟಣದ ಎಡಮುರಿ ಪ್ರವಾಸಿ ತಾಣದಲ್ಲಿ ಕಾವೇರಿ ನದಿಗೆ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಅವರು, ನೀರಿನ ಹರಿವಿನ ಅಂದಾಜು ಸಿಗದೆ ದುರಂತ ಅಂತ್ಯ ಕಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದು, ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

08:46 AM (IST) Apr 02

ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ - ಶೀಘ್ರದಲ್ಲೇ ವೇತನ ಹೆಚ್ಚಳ ಫಿಕ್ಸ್‌? ಏ.6ರಂದು ಮಹತ್ವದ ಸಭೆ

ದಶಕಗಳ ಹೋರಾಟದ ನಂತರ ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಳದ ಬೇಡಿಕೆ ಈಡೇರುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಚರ್ಚಿಸಲು ಏಪ್ರಿಲ್ 6 ರಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ನೌಕರರ ಸಂಘಟನೆಗಳೊಂದಿಗೆ ಮಹತ್ವದ ಸಭೆ ಕರೆದಿದ್ದು, ಅಂದೇ ವೇತನ ಹೆಚ್ಚಳ ಮತ್ತು ಹಿಂಬಾಕಿನಿರ್ಧಾರ?

Read Full Story

More Trending News