LIVE NOW
Published : Apr 01, 2026, 06:44 AM ISTUpdated : Apr 01, 2026, 09:32 AM IST

Karnataka News Live: ಪೊಲೀಸರ ವಾಟ್ಸ್ಆ್ಯಪ್ ನೋಟಿಸ್‌ಗೆ ಬ್ರೇಕ್ - ಹೈಕೋರ್ಟ್ ಮಹತ್ವದ ಆದೇಶ!

ಸಾರಾಂಶ

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು ಏಪ್ರಿಲ್‌ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3ರಷ್ಟು ಹೆಚ್ಚಿಸಲಿದೆ. ಪರಿಣಾಮ ಏಪ್ರಿಲ್‌ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20ರಿಂದ 30 ರು. ಹೆಚ್ಚುವರಿ ನೀರಿನ ಬಿಲ್‌ ಬರುವ ಸಾಧ್ಯತೆಗಳಿವೆ.

ನೀರಿನ ಸರಬರಾಜು ವೆಚ್ಚ, ನಿರ್ವಹಣಾ ವೆಚ್ಚ, ವಿದ್ಯುತ್‌ ಮತ್ತು ಮೂಲಸೌಕರ್ಯ ಖರ್ಚಿನಲ್ಲಿನ ಹೆಚ್ಚಳ ಸೇರಿ ಇನ್ನಿತರ ಕಾರಣಗಳಿಂದಾಗಿ ಜಲಮಂಡಳಿ ಆರ್ಥಿಕ ನಷ್ಟದಲ್ಲಿದೆ. ಅದನ್ನು ತಪ್ಪಿಸಲು ಪ್ರತಿವರ್ಷ ಶೇ.3ರಷ್ಟು ನೀರು ಬಳಕೆ ಶುಲ್ಕ ಹೆಚ್ಚಿಸಲು ಜಲಮಂಡಳಿ ನಿರ್ಧರಿಸಿದೆ. ಕಳೆದ ವರ್ಷವೂ ಇದೇ ಮಾದರಿಯಲ್ಲಿ ನೀರು ಬಳಕೆ ಶುಲ್ಕ ಹೆಚ್ಚಿಸಲಾಗಿತ್ತು. ಇದೀಗ ಏಪ್ರಿಲ್‌ ತಿಂಗಳಿನಿಂದ ಅನ್ವಯವಾಗುವಂತೆ ಮತ್ತೆ ಶೇ.3ರಷ್ಟು ನೀರಿನ ಬಿಲ್‌ ಹೆಚ್ಚಳ ಮಾಡಲಾಗುತ್ತಿದೆ.

09:32 AM (IST) Apr 01

ಪೊಲೀಸರ ವಾಟ್ಸ್ಆ್ಯಪ್ ನೋಟಿಸ್‌ಗೆ ಬ್ರೇಕ್ - ಹೈಕೋರ್ಟ್ ಮಹತ್ವದ ಆದೇಶ!

ಪೊಲೀಸರು ನೋಟಿಸ್ ಅಥವಾ ಎಫ್‌ಐಆರ್ ಪ್ರತಿಯನ್ನು ವಾಟ್ಸ್ಆ್ಯಪ್‌ ಅಥವಾ ಇತರೆ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೀಡುವಂತಿಲ್ಲ, ಬದಲಾಗಿ ಭೌತಿಕವಾಗಿಯೇ ನೀಡಬೇಕು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಆದರೆ ಈ ಕೇಳಗಿನ ಸಂದರ್ಭದಲ್ಲಿ ಆರೋಪಿಗೆ ವಾಟ್ಸಪ್ ನೋಟಿಸ್ ನೀಡಬಹುದು ಎಂದಿದೆ.

Read Full Story

09:32 AM (IST) Apr 01

ವಿಜಯನಗರ ಕಾಲದ ಒಂದು ಅಪರೂಪದ ಚಿನ್ನದ ನಾಣ್ಯ, ಒಂದು ಸಾಮ್ರಾಜ್ಯ, ಒಂದು ವೈಯಕ್ತಿಕ ಪಯಣ

ಚಿನ್ನದ ಬೆಲೆ ಏರಿಕೆಯಿಂದಾಗಿ ಐತಿಹಾಸಿಕ ನಾಣ್ಯಗಳ ಮೇಲೆ ಆಸಕ್ತಿ ಬೆಳೆಸಿಕೊಂಡ ಲೇಖಕರು, ಆನ್‌ಲೈನ್ ಹರಾಜಿನಲ್ಲಿ ವಿಜಯನಗರ ಸಾಮ್ರಾಜ್ಯದ ಅಪರೂಪದ ನಾಣ್ಯಗಳನ್ನು ಹುಡುಕಲು ಆರಂಭಿಸುತ್ತಾರೆ. 

Read Full Story

09:12 AM (IST) Apr 01

ಅನ್ನದ ಋಣ ಮುಗಿಯಿತು - ತನಗೆ ಮಗನಂತೆ ತುತ್ತು ನೀಡಿದ ಅಜ್ಜಿಯ ಸಾವು, ಪಾರ್ಥಿವ ಶರೀರ ತಬ್ಬಿ ಕಣ್ಣೀರು ಸುರಿಸಿದ ಮಂಗ!

ರಾಮನಗರ ಜಿಲ್ಲೆಯಲ್ಲಿ, ತನಗೆ ನಿತ್ಯ ಆಹಾರ ನೀಡುತ್ತಿದ್ದ 85 ವರ್ಷದ ಪಾರ್ವತಮ್ಮ ಎಂಬ ವೃದ್ಧೆಯ ಸಾವಿಗೆ ಮಂಗವೊಂದು ಮರುಗಿದೆ. ವೃದ್ಧೆಯ ಪಾರ್ಥಿವ ಶರೀರವನ್ನು ಮನೆಗೆ ತಂದಾಗ, ಅಲ್ಲಿಗೆ ಬಂದ ಮಂಗವು ಶವವನ್ನು ತಬ್ಬಿಕೊಂಡು, ಮುತ್ತಿಕ್ಕಿ ಕಣ್ಣೀರಿಟ್ಟಿದ್ದು, ಈ ಮನಕಲಕುವ ದೃಶ್ಯ ಎಲ್ಲರನ್ನೂ ಬೆರಗುಗೊಳಿಸಿದೆ.
Read Full Story

08:57 AM (IST) Apr 01

ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ 119ನೇ ಜಯಂತಿ - ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಮಹೋತ್ಸವವನ್ನು ವೈಭವೋಪೇತವಾಗಿ ಆಚರಿಸಲಾಗುತ್ತಿದೆ. ಈ ಗುರುವಂದನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಲಕ್ಷಾಂತರ ಭಕ್ತರಿಗಾಗಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

Read Full Story

08:53 AM (IST) Apr 01

EXCLUSIVE - ಮಹಿಳೆ ಅಂಗಾಂಗ ಮುಟ್ಟಿ ಎಳೆದಾಡಿ ವಿಕೃತಿ, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್‌ ಮಲ್ಲು ವಿರುದ್ಧ FIR

ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಮಲ್ಲು ಎಂಬಾತ ತನ್ನದೇ ಕಚೇರಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಸಂತ್ರಸ್ತೆ ದೂರಿನ ಅನ್ವಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಅಧಿಕಾರಿಯು ತಲೆಮರೆಸಿಕೊಂಡಿದ್ದಾನೆ.

Read Full Story

07:57 AM (IST) Apr 01

Shivamogga - ಸತ್ತ ಮೇಲೂ ಬಿಡದ ದ್ವೇಷ - ಸಂಕೇತ್ ಸಮಾಧಿ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಶಿವಮೊಗ್ಗದಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ಬಾಲಕ ಸಂಕೇತ್ ಸಮಾಧಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಪ್ರತಿ ಬುಧವಾರ ಪೂಜೆ ಸಲ್ಲಿಸುತ್ತಿದ್ದ ಕುಟುಂಬಸ್ಥರು, ಮಗನ ಸಮಾಧಿ ಧ್ವಂಸಗೊಂಡಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read Full Story

07:51 AM (IST) Apr 01

BWSSB - ಇಂದಿನಿಂದ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ! ಶೇ.3ರಷ್ಟು ಏರಿಸಿದ ಜಲಮಂಡಳಿ!

ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು, ಬೆಂಗಳೂರು ಜಲಮಂಡಳಿಯು ಏಪ್ರಿಲ್‌ನಿಂದ ನೀರಿನ ಬಳಕೆ ಶುಲ್ಕವನ್ನು ಶೇ.3ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ದರ ಏರಿಕೆಯಿಂದಾಗಿ ಗೃಹ ಬಳಕೆದಾರರಿಗೆ ಮಾಸಿಕ 20-30 ರೂ. ಮತ್ತು ವಾಣಿಜ್ಯ ಬಳಕೆದಾರರಿಗೆ 50-60 ರೂ. ಹೆಚ್ಚುವರಿ ಹೊರೆಯಾಗಲಿದೆ.
Read Full Story

07:46 AM (IST) Apr 01

ಗ್ರಾಹಕರಿಗೆ ಬಿಗ್ ಶಾಕ್ - ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 218 ರೂಪಾಯಿ ಹೆಚ್ಚಳ

ಏಪ್ರಿಲ್ 1 ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹218 ರಷ್ಟು ಭಾರೀ ಏರಿಕೆಯಾಗಿದೆ. ಈ ಬೆಲೆ ಏರಿಕೆಯು ಹೋಟೆಲ್‌ ಮತ್ತು ಇತರೆ ವ್ಯಾಪಾರಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Read Full Story

07:27 AM (IST) Apr 01

Bengaluru Karaga 2026 - ಇಂದು ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ

Bengaluru Karaga 2026 ಐತಿಹಾಸಿಕ ಬೆಂಗಳೂರು ಹಸಿ ಕರಗ ಮಹೋತ್ಸವವು ಸಂಪಂಗಿ ಕೆರೆ ಅಂಗಳದಲ್ಲಿ ಭಕ್ತಿ-ಭಾವದಿಂದ ಆರಂಭವಾಗಿದೆ. ಬುಧವಾರ ರಾತ್ರಿ ನಡೆಯಲಿರುವ ಹೂವಿನ ಕರಗವು ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸಲಿದ್ದು, ಇದಕ್ಕಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Read Full Story

More Trending News