Published : Apr 16, 2026, 06:45 AM ISTUpdated : Apr 16, 2026, 09:42 PM IST

Karnataka News Live: ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ - ಶಾಸಕ ಲಕ್ಷ್ಮಣ ಸವದಿ

ಸಾರಾಂಶ

ದಾವಣಗೆರೆ: ಕಾರು ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬೇವಿನ ಮರಕ್ಕೆ ಡಿಕ್ಕಿ ಹೊಡೆದು ಪೊಲೀಸ್‌ ಇನ್‌ಸ್ಪೆಕ್ಟರ್‌ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಚಿತ್ರದುರ್ಗ-ಜಗಳೂರು ತಾಲೂಕುಗಳ ಗಡಿ ಗ್ರಾಮ ಕಡಬನಕಟ್ಟೆ ಬಳಿ ಸಂಭವಿಸಿದೆ. ಪೊಲೀಸ್ ಇನ್‌ಸ್ಪೆಕ್ಟರ್ ರಘುನಾಥ ಮೃತರು. ಚಿತ್ರದುರ್ಗ ಜಿಲ್ಲೆ ಆಯಿಕಲ್‌ ಗ್ರಾಮದಲ್ಲಿದ್ದ ತಮ್ಮ ಪತ್ನಿ ತವರು ಮನಗೆ ಮೂರು ದಿನ ರಜೆ ಹಾಕಿ, ರಘುನಾಥ ಬಂದಿದ್ದರು. ಬುಧವಾರ ಮಧ್ಯಾಹ್ನ ಕಾರಿನಲ್ಲಿ ಹೊಸಪೇಟೆ ಕಡೆ ಹೊರಟಿದ್ದಾಗ ಚಿತ್ರದುರ್ಗ-ಜಗಳೂರು ಗಡಿ ಗ್ರಾಮವಾದ ಕಡಬನಕಟ್ಟೆ ಬಳಿ ರಸ್ತೆ ಬದಿಯ ಬೇವಿನ ಮರಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

laxman savadi

09:42 PM (IST) Apr 16

ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ - ಶಾಸಕ ಲಕ್ಷ್ಮಣ ಸವದಿ

ಅನೇಕ ಶಾಸಕರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಎರಡೂವರೆ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಶಾಸಕರು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

Read Full Story

08:51 PM (IST) Apr 16

ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರಹಾವು ಕಡಿತ - ಚಿಕಿತ್ಸೆ ಫಲಿಸದೆ ಸಾವು!

ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸಾಗರ ಪಟ್ಟಣದ ಎಸ್‌ಎನ್ ನಗರದಲ್ಲಿ ನಡೆದಿದೆ. ಭವೀನ್ (2.5) ಮೃತಪಟ್ಟ ಬಾಲಕ.

Read Full Story

08:31 PM (IST) Apr 16

ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ - ಸಿಎಂ ಸಿದ್ದರಾಮಯ್ಯ

ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ಗುಣಗಳು ನಮ್ಮಲ್ಲಿ ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Read Full Story

08:03 PM (IST) Apr 16

ಮಂಗಳೂರು-ಸುಬ್ರಹ್ಮಣ್ಯ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರದ್ದಾಗಿದ್ದ ಪ್ಯಾಸೆಂಜರ್‌ ರೈಲು ಮತ್ತೆ ಆರಂಭ

ನಿರ್ವಹಣಾ ಕಾಮಗಾರಿ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಲಾಗಿದೆ. ರೈಲ್ವೆ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಕೆಲವು ರೈಲುಗಳ ವಿಳಂಬದ ಅವಧಿಯನ್ನು ಕಡಿಮೆ ಮಾಡಿದೆ ಮತ್ತು ಇತರ ರೈಲುಗಳ ಸಂಚಾರಕ್ಕೆ ಹೊಸ ದಿನಾಂಕಗಳನ್ನು ನಿಗದಿಪಡಿಸಿದೆ.
Read Full Story

07:23 PM (IST) Apr 16

ರಾಜ್ಯದ 12 ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' - ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸಾಧ್ಯತೆ!

ಭಾರತೀಯ ಹವಾಮಾನ ಇಲಾಖೆಯು (IMD) ಕರ್ನಾಟಕದ 12 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ 'ಎಲ್ಲೋ ಅಲರ್ಟ್' ಘೋಷಿಸಿದೆ. ಈ ಅವಧಿಯಲ್ಲಿ ಗುಡುಗು, ಮಿಂಚು, ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Read Full Story

06:50 PM (IST) Apr 16

ರಾಜ್ಯದಲ್ಲಿ ಬಿಸಿಗಾಳಿ ಆರ್ಭಟ - 12 ಜಿಲ್ಲೆಗಳಿಗೆ 4 ದಿನ ಕಾಲ ಹೀಟ್‌ವೇವ್‌ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ!

ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಕಲಬುರಗಿಯಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹವಾಮಾನ ಇಲಾಖೆಯು ಉತ್ತರ ಕರ್ನಾಟಕ ಸೇರಿದಂತೆ 12 ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಬಿಸಿಗಾಳಿಯ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಸೂಚಿಸಿದೆ.
Read Full Story

06:29 PM (IST) Apr 16

ಎಚ್‌ಡಿಕೆ ಚನ್ನಪಟ್ಟಣದಿಂದ ಸ್ಪರ್ಧಿಸಬೇಕೆಂಬುದು ಜನರ ಅಭಿಲಾಷೆ - ನಿಖಿಲ್ ಕುಮಾರಸ್ವಾಮಿ

ಕುಮಾರಸ್ವಾಮಿಯವರು ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಬೇಡಿಕೆ ಇಟ್ಟಿದ್ದಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

Read Full Story

06:20 PM (IST) Apr 16

ಭದ್ರಾ ಅರಣ್ಯದಲ್ಲಿ 'ಬೆಂಗಾಲ್ ಟೈಗರ್' ರಾಜ ಗಾಂಭೀರ್ಯದ ನಡಿಗೆ - ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾದ ಶಾರ್ದೂಲ

Bhadra Wildlife Sanctuary tiger sighting: ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯ ದರ್ಶನವಾಗಿದೆ. ಕೆಮ್ಮಣ್ಣುಗುಂಡಿಯ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದ ಹುಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

Read Full Story

06:15 PM (IST) Apr 16

ಸಂಪುಟ ಪುನಾರಚನೆ ಹೈಕಮಾಂಡ್‌ ನಾಯಕರು ತೀರ್ಮಾನಿಸುತ್ತೆ - ಸಚಿವ ರಾಮಲಿಂಗಾರೆಡ್ಡಿ

ಸಂಪುಟ ಪುನಾರಚನೆಯಾಗಿ ಈಗ ಮೂರು ವರ್ಷಗಳಾಗುತ್ತಿದ್ದು, ಶಾಸಕರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್‌ ನಾಯಕರು ತೀರ್ಮಾನಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Read Full Story

06:03 PM (IST) Apr 16

ಅನಾಥ ಕಂದಮ್ಮಗಳಿಗೆ ಆಧಾರ್ ಕೂಡ ಸಿಗದೇ ಸಂಕಷ್ಟ - ಚಾಮರಾಜನಗರದಲ್ಲಿ ಕರುಣಾಜನಕ ಘಟನೆ

ಚಾಮರಾಜನಗರದ ಮೂಡಲ ಅಗ್ರಹಾರದ ಮಹದೇವ ಕುಡಿತದ ದಾಸನಾಗಿದ್ದ. ಎರಡು ತಿಂಗಳ ಹಿಂದೆ ಕುಡಿದ ಅಮಲಿನಲ್ಲಿ ತನ್ನ ಪತ್ನಿ ಸುಮತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದ. ಸುಟ್ಟಗಾಯಗಳಿಂದ ಸುಮತಿ ಮೃತಪಟ್ಟಿದ್ದಳು.

Read Full Story

06:00 PM (IST) Apr 16

Curry Leaves - ಈ ರಹಸ್ಯ ಟಿಪ್ಸ್‌ ಫಾಲೋ ಮಾಡಿದ್ರೆ ಕರಿಬೇವಿನ ಸೊಪ್ಪು ಪೊದೆ ಥರ ವರ್ಷ ಪೂರ್ತಿ ಬೆಳೆಯುತ್ತೆ!

Curry Leaves Plant: ಕರಿಬೇವಿನ ಗಿಡ ಸೊಂಪಾಗಿ, ದಟ್ಟವಾಗಿ ಬೆಳೆಯಲು ಸಹಾಯ ಮಾಡುವ 5 ಪ್ರಮುಖ ರಹಸ್ಯ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ. ನೈಸರ್ಗಿಕ ಗೊಬ್ಬರಗಳು ಮತ್ತು ಸರಿಯಾದ ಆರೈಕೆಯ ವಿಧಾನಗಳು ಇಲ್ಲಿವೆ. 

 

Read Full Story

05:52 PM (IST) Apr 16

ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ - ಮಾಳವಿಕಾ ಅವಿನಾಶ್

ಮುಂದಿನ ಲೋಕಸಭೆ ಚುನಾವಣೆಯೊಳಗೆ ಜನಗಣತಿ ಮುಗಿಯುವುದು ಕಷ್ಟವಾಗುತ್ತಿರುವ ಕಾರಣ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ ಎಂದು ಮಾಳವಿಕಾ ಅವಿನಾಶ್ ತಿಳಿಸಿದರು.

Read Full Story

05:52 PM (IST) Apr 16

ಕಾರವಾರ - ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ, ಚಾಲಕ ನಾಪತ್ತೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಸಾಯನಿಕ ತುಂಬಿದ ಟ್ಯಾಂಕರ್ ಸ್ಫೋಟಗೊಂಡು ಹೊತ್ತಿ ಉರಿದಿದೆ. ಘಟನೆಯ ನಂತರ ಚಾಲಕ ನಾಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
Read Full Story

05:49 PM (IST) Apr 16

ಯೋಗೇಶ ಗೌಡ ಹತ್ಯೆ - ಕುಲಕರ್ಣಿಗೆ ಪರಮಾಪ್ತನೇ ತಿರುಗಿ ಬಿದ್ದ! ಮಾತು ಬದಲಿಸಿ ಕಾಂಗ್ರೆಸ್ ಸೇರಿದ್ದ ಯೋಗೇಶ್ ಪತ್ನಿ!

ವರದಿ: ಶಿವಾನಂದ ಗೊಂಬಿ

ಬರೋಬ್ಬರಿ 10 ವರ್ಷಗಳ ಬಳಿಕಯೋಗೇಶಗೌಡ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿ ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಯು ಸಿಬಿಐ ತನಿಖೆಯಿಂದಾಗಿ ತಾರ್ಕಿಕ ಅಂತ್ಯ ಕಂಡಿದೆ.

Read Full Story

05:37 PM (IST) Apr 16

Night Shift - ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತೀರಾ? ಎಚ್ಚರ.. ಈ ಕಾಯಿಲೆ ಬರೋ ರಿಸ್ಕ್ ಹೆಚ್ಚು!

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಡುತ್ತದೆ. ಯಾಕಂದ್ರೆ, ಅವರು ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಅಥವಾ ಮನೆಯೊಳಗೆ ಹೆಚ್ಚು ಸಮಯ ಕಳೆಯುವುದರಿಂದ ಸೂರ್ಯನ ಬೆಳಕಿಗೆ ಮೈಯೊಡ್ಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

Read Full Story

05:36 PM (IST) Apr 16

Personality Test - ನೀವು ಹೀಗೆಲ್ಲ ಕಾಲು ಮೇಲೆ ಕಾಲು ಹಾಕಿ ಕೂರ್ತೀರಾ? ನಿಮ್ಮ ವ್ಯಕ್ತಿತ್ವ ಬಯಲಾಗುತ್ತೆ!

Personality Test: ನಾವು ಮಾಡುವ ಕೆಲಸಗಳು, ಕೂರುವ ರೀತಿ ನಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಇಲ್ಲಿ ನಾವು ಕಾಲು ಕ್ರಾಸ್ ಮಾಡಿ ಕೂರುವವರ ವ್ಯಕ್ತಿತ್ವ ಹೇಗಿರುತ್ತೆ ಅಂತ ತಿಳಿಯೋಣ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

05:20 PM (IST) Apr 16

Late Night Eating - ರಾತ್ರಿ ಹೊತ್ತು ತಡವಾಗಿ ಊಟ ಮಾಡ್ತೀರಾ? ಹಾಗಿದ್ರೆ ಲಿವರ್‌ಗೆ ಕಾದಿದೆ ಅಪಾಯ!

ರಾತ್ರಿ ಹೊತ್ತು ತಡವಾಗಿ ಊಟ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು ನಿಮ್ಮ ಲಿವರ್ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರಿಂದ 'ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್' ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Read Full Story

04:58 PM (IST) Apr 16

ಸತ್ತರೂ ಮುಖ ನೋಡಲ್ಲ-14 ವರ್ಷದಿಂದ ಬೀದಿಗೆ ಬಂದು ಜಗಳ ಆಡಿದ್ದ ಸ್ಟಾರ್‌ ನಟನ ಮನೆ ಸಮಸ್ಯೆ ಬಗೆಹರಿತು!

Actor Govinda News: ಬಾಲಿವುಡ್ ನಟ ಗೋವಿಂದ ಮತ್ತು ಅವರ ಅಳಿಯ ಕೃಷ್ಣ ಅಭಿಷೇಕ್ ಕುಟುಂಬದ ನಡುವಿನ ಮುನಿಸು ಕೊನೆಗೂ ಮುಗಿದಿದೆ. ತಮ್ಮ ಅತ್ತೆ ಸುನೀತಾ ಜೊತೆ ಕಾಣಿಸಿಕೊಂಡ ಕೃಷ್ಣ ಮತ್ತು ಪತ್ನಿ ಕಾಶ್ಮೀರಾ, ನಮ್ಮ ವನವಾಸ ಮುಗಿಯಿತು ಎಂದು ಹೇಳಿದ್ದಾರೆ.

 

Read Full Story

04:56 PM (IST) Apr 16

ಬ್ಯಾಚುಲರ್ ಬಾಯ್ಸ್‌, ಹಾಸ್ಟೆಲ್ ಹುಡುಗ್ರು & ವರ್ಕಿಂಗ್ ವುಮೆನ್‌ಗೆ ಬೆಸ್ಟ್ ಈ ಹುಣುಸೇಹುಳಿ; ಆದ್ರೆ ಈ ಸೀಕ್ರೆಟ್ ಗೊತ್ತಿರ್ಲಿ!

ಅನೇಕರಿಗೆ ಹುಣಸೇಹಣ್ಣಿನಿಂದ ಕೇವಲ ಸಾಂಬಾರ್ ಮಾಡುವುದು ಮಾತ್ರ ತಿಳಿದಿದೆ. ಆದರೆ, ಅತ್ಯಂತ ಸರಳವಾಗಿ ಮತ್ತು ಬೇಗನೆ ಮಾಡಬಹುದಾದ 'ಹುಣಸೇಹುಳಿ' (ಒಂದು ರೀತಿಯ ರಸಂ ರೆಸಿಪಿ) ರುಚಿಯೇ ಬೇರೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಇದು ಅರ್ಜೆಂಟ್ ಅಡುಗೆ ಮಾತ್ರವಲ್ಲ, ವಾರಗಟ್ಟಲೆ ಉಪಯೋಗಿಸಬಹುದು.

Read Full Story

04:52 PM (IST) Apr 16

ಹಾಸನ - ರಾಯರ ದರ್ಶನಕ್ಕೂ ಮುನ್ನವೇ ಮಸಣ ಸೇರಿದ 8 ಮಂದಿ ಸಂಬಂಧಿಕರು, ಸಾವನ್ನಪ್ಪಿದ ಒಂದೊಂದು ಕುಟುಂಬದ್ದು ಒಂದೊಂದು ಕಥೆ!

ಮಂತ್ರಾಲಯದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ರಾಯರ ದರ್ಶನಕ್ಕೆ ತೆರಳುತ್ತಿದ್ದ ಹಾಸನ ಮತ್ತು ಚಿಕ್ಕಮಗಳೂರು ಮೂಲದ ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟಿದ್ದಾರೆ. ಗೂಡ್ಸ್ ವಾಹನ ಮತ್ತು ಟ್ಯಾಂಕರ್ ನಡುವಿನ ಈ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಾಯಗೊಂಡಿದ್ದು, ಈ ದುರ್ಘಟನೆ ಗ್ರಾಮಗಳಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.
Read Full Story

04:42 PM (IST) Apr 16

ಕರಾವಳಿ ಕನ್ನಡ ಸೊಗಡಿನ ಹೊಸ ಸಿನಿಮಾ ವಾದಿರಾಜ ವಾಲಗ ಮಂಡಳಿ - ಅಂತಿಮ ಹಂತದಲ್ಲಿ ಚಿತ್ರೀಕರಣ

ಕರಾವಳಿ ಕನ್ನಡದ ಸೊಗಡಿನ ಭಾಷೆಯೊಂದಿಗೆ, ಹೊಸತನದ ಕಥಾವಸ್ತುವಿನೊಂದಿಗೆ, ವಿಭಿನ್ನ ನಿರೂಪಣೆ ಹೊಂದಿರುವ ವಿವಿಎಂ ಕನ್ನಡ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಏಪ್ರಿಲ್‌ 18ರಿಂದ ಪ್ರಾರಂಭಗೊಂಡು ಏಪ್ರಿಲ್‌ 30ಕ್ಕೆ ಪೂರ್ಣಗೊಳ್ಳಲಿದೆ.

Read Full Story

04:24 PM (IST) Apr 16

ಬ್ರೇಕಪ್‌ ಬಳಿಕ ಹೊಸ ಹುಡುಗಿ ಫೋಟೋ ಶೇರ್‌ ಮಾಡಿದ ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ! ಯಾರದು?

Youtuber Varun Aradya: ಇತ್ತೀಚೆಗೆ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಅವರು ಹುಡುಗಿ ಫಿಕ್ಸ್‌ ಎಂದು ಫೋಟೋ, ವಿಡಿಯೋಗಳನ್ನು ಹಂಚಿಕೊಂಡರು. ಈಗ ಬೃಂದಾವನ ಧಾರಾವಾಹಿ ನಟ, ಯುಟ್ಯೂಬರ್‌ ವರುಣ್‌ ಆರಾಧ್ಯ ಅವರು ಕೂಡ ಹುಡುಗಿ ಇರೋದನ್ನು ಅಧಿಕೃತಪಡಿಸಿದ್ದಾರೆ.

 

Read Full Story

04:23 PM (IST) Apr 16

ರಾವಣನ ಪಾತ್ರ ಮಾಡಬೇಕು ಅಂದಾಗ ಕೊಂಚ ಬೆದರಿದೆ - ಯಶ್‌ ಹೇಳಿದಿಷ್ಟು..

‘ರಾಮಾಯಣ 1’ ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ ಯಶ್‌ ಸಿನಿಮಾದ ಬಗ್ಗೆ ಒಂದೊಂದೇ ಗುಟ್ಟು ಬಿಟ್ಟುಕೊಡಲು ಶುರು ಮಾಡಿದ್ದಾರೆ. ಅವರು ಅಮೆರಿಕಾದ ಲಾಸ್‌ ವೇಗಾಸ್‌ನ ಸಿನಿಮಾಕಾನ್‌ 2026ನಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story

04:12 PM (IST) Apr 16

ಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ ಭೇಟಿ - ಪತಿಯನ್ನ ನೋಡಲು ನಟ ಧನ್ವೀರ್ ಜೊತೆ ಆಗಮಿಸಿದ ದರ್ಶನ್ ಪತ್ನಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಅವರು ನಿರಂತರವಾಗಿ ಬೆಂಬಲ ನೀಡುತ್ತಿದ್ದಾರೆ. ಇಂದಿನ ಜೈಲು ಭೇಟಿಯ ವೇಳೆ, ಅವರೊಂದಿಗೆ ನಟ ಧನ್ವೀರ್ ಗೌಡ ಕೂಡ ಕಾಣಿಸಿಕೊಂಡು ದರ್ಶನ್‌ಗೆ ಧೈರ್ಯ ತುಂಬಿದ್ದಾರೆ.
Read Full Story

03:47 PM (IST) Apr 16

ಬಾಯಲ್ಲಿ ನೀರೂರಿಸುವ ಟೊಮ್ಯಾಟೋ ಗೊಜ್ಜು - ಈ ಒಂದು 'ಸೀಕ್ರೆಟ್' ಟಿಪ್ಸ್ ಅನುಸರಿಸಿದರೆ ವಾರವಿಡೀ ಫ್ರೆಶ್ ಆಗಿರುತ್ತೆ!

ನಮ್ಮ ಅಡುಗೆಮನೆಯಲ್ಲಿ ಟೊಮ್ಯಾಟೋ (Tomato) ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅದು ಸಾಂಬಾರ್ ಇರಲಿ, ರಸಂ ಇರಲಿ ಅಥವಾ ಸಲಾಡ್ ಇರಲಿ, ಟೊಮ್ಯಾಟೋ ಇರಲೇಬೇಕು. ಆದರೆ, ದಿನವೂ ಅದೇ ಸಾಂಬಾರ್, ರಸಂ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಹೀಗೆ ಮಾಡಿ..

Read Full Story

03:34 PM (IST) Apr 16

Bhagyalakshmi Serial - ಮೊದಲ ರಾತ್ರಿ ಮೊದಲೇ ಭಾಗ್ಯ ಎಡವಟ್ಟು- ಶೂಟಿಂಗ್​ನಲ್ಲಿ ಮುಖ ಮುಚ್ಚಿಕೊಂಡ ನಟಿ

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯ ಮತ್ತು ಆದಿ ಒಂದಾಗಿದ್ದು, ನಾದಿನಿಯರ ಕಾಟ ಶುರುವಾಗಿದೆ. ಇದರ ನಡುವೆ, ಶೂಟಿಂಗ್ ವೇಳೆ ನಡೆದ ತಮಾಷೆಯ ಘಟನೆಯೊಂದರಲ್ಲಿ, ಮೊದಲ ರಾತ್ರಿಗೂ ಮುನ್ನ ಭಾಗ್ಯ ಆದಿಯ ಟೋಪಿ ಕಿತ್ತ ವಿಡಿಯೋ ವೈರಲ್ ಆಗಿದೆ.
Read Full Story

03:25 PM (IST) Apr 16

Anupama Gowda Weight Loss - ಆ ದಿನ ಮನನೊಂದು 10kg ಸಣ್ಣಗಾದ ಅನುಪಮಾ ಗೌಡ; ಇದರ ಸೀಕ್ರೇಟ್ ಏನು?

Anupama Gowda Weight Loss: ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ ಅವರು ಇಂದು ಬಳುಕುವ ಬಳ್ಳಿಯ ಥರ ಕಾಣುತ್ತಿದ್ದಾರೆ. ಆದರೆ ಈ ಹಿಂದೆ ಅವರು ದಪ್ಪಗಿದ್ದರಂತೆ, ಹೇಗೆ ಸಣ್ಣಗಾದೆ ಎಂದು ಹೇಳಿಕೊಂಡಿದ್ದಾರೆ.

 

Read Full Story

03:15 PM (IST) Apr 16

ಕೋಮಾದಲ್ಲಿರುವ ಸೈನಿಕನ ಸ್ಪರ್ಮ್ ತೆಗೆಯಲು ಕೋರ್ಟ್ ಒಪ್ಪಿಗೆ

Delhi High Court : ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸೈನಿಕನ ಸ್ಪರ್ಮ್ ತೆಗೆದು ಪತ್ನಿಯ ಆಸೆಯಂತೆ ಐವಿಎಫ್‌ ಚಿಕಿತ್ಸೆ ಮುಂದುವರೆಸಲು ಒಪ್ಪಿಗೆ ನೀಡಿದೆ. ಅಷ್ಟಕ್ಕೂ ಏನು ಈ ಪ್ರಕರಣ? ವಿವರ ಇಲ್ಲಿದೆ.

 

Read Full Story

03:13 PM (IST) Apr 16

ಯೋಗೇಶ್ ಗೌಡ ಹತ್ಯೆ ಪ್ರಕರಣ, ಕಠಿಣ ಶಿಕ್ಷಗೆ ಸಿಬಿಐ ಮನವಿ, ಕಡಿಮೆಗೊಳಿಸುವಂತೆ ಜಡ್ಜ್‌ ಮುಂದೆ ಅಪರಾಧಿಗಳ ಕಣ್ಣೀರು!

ಯೋಗೇಶ್ ಗೌಡ ಹತ್ಯೆ ಪ್ರಕರಣದ ಶಿಕ್ಷೆ ಪ್ರಕಟಣೆಗೂ ಮುನ್ನ ನಡೆದ ವಿಚಾರಣೆಯಲ್ಲಿ, ಸಿಬಿಐ ಪರ ವಕೀಲರು ಇದೊಂದು ಪೂರ್ವಯೋಜಿತ ರಾಜಕೀಯ ಕೊಲೆ ಎಂದು ವಾದಿಸಿ ಗರಿಷ್ಠ ಶಿಕ್ಷೆಗೆ ಒತ್ತಾಯಿಸಿದರು. ಮತ್ತೊಂದೆಡೆ, ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಆರೋಪಿಗಳು ಕೌಟುಂಬಿಕ ಹಾಗೂ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು, ಕನಿಷ್ಠ ಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.
Read Full Story

02:17 PM (IST) Apr 16

ಗಂಡ ಸತ್ತ ಮೇಲೆ ಮಹಿಳೆಯರು ಹೂ ಮುಡಿಬಾರದಾ? ಏನಿದು ಆಚರಣೆ? ಈ ನಂಬಿಕೆ ಎಷ್ಟು ಸರಿ?

Hindu culture: ಗಂಡ ತೀರಿಕೊಂಡ ಮೇಲೆ ಮಹಿಳೆಯರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಅದರಲ್ಲೂ ತಲೆಗೆ ಹೂವು ಮುಡಿಯುವುದನ್ನು ನಿಲ್ಲಿಸಿಬಿಡುತ್ತಾರೆ. ಈ ನಂಬಿಕೆ ಸರಿಯೇ? ನಿಜವಾಗಿಯೂ ಹೂವು ಮುಡಿಯಬಾರದಾ?

Read Full Story

01:57 PM (IST) Apr 16

ದಶಕಗಳಿಗೂ ಹೆಚ್ಚು ಕಾಲ ಸೌಂದರ್ಯ-ಪ್ರತಿಭೆಯ 'ದರ್ಶನ' ಮಾಡಿಸಿರೋ ನಟಿ ಡಿಂಪಲ್‌ ಕ್ವೀನ್ ಅಂದಕ್ಕೆ ಸರಿಸಾಟಿ ಯಾರು?

"ಯಾರ ದೃಷ್ಟಿಯೂ ಬೀಳದಿರಲಿ, ನಮ್ಮ ನೆಚ್ಚಿನ ನಟಿ ದೇವಲೋಕದ ಅಪ್ಸರೆಯಂತೆ ಕಾಣುತ್ತಿದ್ದಾರೆ" ಎಂದು ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಎಮೋಜಿಗಳ ಸುರಿಮಳೆಗೈಯುತ್ತಿದ್ದಾರೆ. ರಚಿತಾ ಅವರ ಈ ಹೊಸ ಲುಕ್ ಸ್ಯಾಂಡಲ್‌ವುಡ್‌ನ ಗ್ಲಾಮರ್ ಅಖಾಡದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

Read Full Story

01:34 PM (IST) Apr 16

Owaisi - ಕೇಂದ್ರದ ಮಸೂದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧ, ದಕ್ಷಿಣ ಭಾರತ, ಒಬಿಸಿಗಳ ಮೇಲೆ ಟಾರ್ಗೆಟ್ - ಓವೈಸಿ ಗಂಭೀರ ಆರೋಪ

ಸಂವಿಧಾನದ 131ನೇ ತಿದ್ದುಪಡಿ ಮಸೂದೆಯು ಸಂಯುಕ್ತ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರೋಧ. ದಕ್ಷಿಣ ಭಾರತದ ಮೇಲೆ ಹಿಡಿತ ಸಾಧಿಸುವುದು ಮತ್ತು ಶಾಸಕಾಂಗದಲ್ಲಿ ಒಬಿಸಿಗಳ ಪ್ರಾತಿನಿಧ್ಯ ಇಲ್ಲವಾಗಿಸುವುದೇ ಈ ಮಸೂದೆಯ ಮುಖ್ಯ ಗುರಿ ಎಂದು ಅವರು ಆರೋಪಿಸಿದ್ದಾರೆ.

Read Full Story

01:31 PM (IST) Apr 16

ಪಂಚಮಸಾಲಿ ಮಠದ ಹರಿಹರ ಪೀಠ ವಿವಾದ ವಚನಾನಂದ ಶ್ರೀ ಮಾಜಿ ಸಚಿವ ನಿರಾಣಿಯಿಂದ 2 ಕೋಟಿ ಪಡೆದ ಆರೋಪ!

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ಹೆಚ್.ಎಸ್. ನಾಗರಾಜ ಅವರು, ವಚನಾನಂದ ಶ್ರೀಗಳು ಮಾಜಿ ಸಚಿವ ಮುರುಗೇಶ ನಿರಾಣಿಯಿಂದ 2 ಕೋಟಿ ರೂ. ಪಡೆದು ದುರ್ಬಳಕೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳು ಮಠದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿರುವ ಆರೋಪ.

Read Full Story

01:23 PM (IST) Apr 16

ಗಿಲ್ಲಿನ ಮದ್ವೆಯಾಗ್ತೀರಾ ಎಂದು Bigg Boss ಕಾವ್ಯಾನ ಕೇಳಿದ ಪುಟಾಣಿ - ಆದ್ರೆ ಆಗಿದ್ದೇ ಬೇರೆ

ಗಿಚ್ಚಿಗಿಲಿಗಿಲಿ ರಿಯಾಲಿಟಿ ಷೋನಲ್ಲಿ, ಬಿಗ್​ಬಾಸ್​ ಖ್ಯಾತಿಯ ಕಾವ್ಯಾ ಶೈವಗೆ 'ಗಿಲ್ಲಿ ನಟ'ನನ್ನು ಮದುವೆಯಾಗುತ್ತೀರಾ ಎಂದು ಪುಟಾಣಿ ಬಾಲಕಿಯೊಬ್ಬಳು ಕೇಳಿದ್ದು  ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಸ್ಯದ ಹೆಸರಿನಲ್ಲಿ ಮಕ್ಕಳ ಬಾಯಲ್ಲಿ  ಇಂಥ ವಿಷ್ಯ ಹೇಳಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. 

Read Full Story

01:17 PM (IST) Apr 16

ಫ್ರೈ ಮಾಡುವಾಗ ಮಸಾಲೆ ಬೇರೆಯಾಗದಂತೆ ಕ್ರಿಸ್ಪಿ ಚಿಕನ್ 65ಗೆ ಮ್ಯಾರಿನೇಟ್ ಮಾಡುವ Authentic ವಿಧಾನ

ಮನೆಯಲ್ಲಿ ಚಿಕನ್ 65 ಮಾಡುವಾಗ ಎಣ್ಣೆಯಲ್ಲಿ ಮಸಾಲೆ ಬೇರ್ಪಡುವ ಸಮಸ್ಯೆಗೆ ಈ ಲೇಖನ ಪರಿಹಾರ ನೀಡುತ್ತದೆ. ಹೋಟೆಲ್ ಶೈಲಿಯ ರುಚಿಕರವಾದ ಚಿಕನ್ 65 ತಯಾರಿಸಲು ಬೇಕಾದ ಸಾಮಾಗ್ರಿಗಳು ಮತ್ತು ಮಸಾಲೆ ಬೇರೆಯಾಗದಂತೆ ಚಿಕನ್ ಮ್ಯಾರಿನೇಟ್ ಮಾಡುವ ಹಂತ-ಹಂತದ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
Read Full Story

12:57 PM (IST) Apr 16

ಬಹಳ ಒಳ್ಳೇವ್ರು ಕುಂದಾಪುರದ ಈ ಮಿಸ್ಸು; ಹೊಡೆಯಲ್ಲ, ಶಿಕ್ಷೆ ಕೊಡಲ್ಲ, ರಜೆ ಹಾಕಲ್ಲ - ಎಲ್ಲದಕ್ಕೂ ಎಸ್ಸೆಸ್ಸು

ಕುಂದಾಪುರದ ವಂಡ್ಸೆ ಸರ್ಕಾರಿ ಶಾಲೆಯು 'ಐರಿಸ್' ಎಂಬ ಕೃತಕ ಬುದ್ಧಿಮತ್ತೆಯ ರೋಬೋಟ್ ಶಿಕ್ಷಕಿಯನ್ನು ಪರಿಚಯಿಸಿದೆ. 'ಅಟಲ್ ಟಿಂಕರಿಂಗ್ ಲ್ಯಾಬ್' ಯೋಜನೆಯಡಿ ನಿರ್ಮಿಸಲಾದ ಈ ರೋಬೋಟ್, 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಹನ ನಡೆಸಬಲ್ಲದು ಮತ್ತು ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಶಿಕ್ಷಣದಲ್ಲಿ ಕ್ರಾಂತಿ ಮೂಡಿಸುತ್ತಿದೆ.
Read Full Story

12:56 PM (IST) Apr 16

Bigg Boss ಧನುಶ್ರೀ ಶಾಪ್‌ನಲ್ಲಿ ಕಳ್ಳತನ; ದೇವರಿದ್ದಾನಾ ಎಂದು ಕೇಳಿದ್ದಕ್ಕೆ, ತಕ್ಕ ಉತ್ತರ ಕೊಟ್ಟ ಭಗವಂತ

Bigg Boss Dhanushree: ಬಿಗ್‌ ಬಾಸ್‌ ಕನ್ನಡ ಸೀಸನ್‌ 8 ಖ್ಯಾತಿಯ ಧನುಶ್ರೀ ಅವರ ಶಾಪ್‌ನಲ್ಲಿ ಕಳ್ಳತನ ಆಗಿದೆ. ಮಂತ್ರಿ ಮಾಲ್‌ನಲ್ಲಿ ಅವರು ನೇಲ್‌ ಶಾಪ್‌ ಹಾಕಿದ್ದರು. ಒಟ್ಟೂ 80000 ರೂಪಾಯಿ ಮೌಲ್ಯದ ವಸ್ತು ಕಳ್ಳತನ ಆಗಿದೆ. ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ಧನುಶ್ರೀ ಹೇಳಿದ್ದರು.

 

Read Full Story

12:52 PM (IST) Apr 16

8 ವರ್ಷ ಅಜ್ಞಾತವಾಸದಲ್ಲಿದ್ದ ದರ್ಶನ್ ಮಾಜಿ ಆಪ್ತ ಮಲ್ಲಿಕಾರ್ಜುನ್ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದೇನು?

'ಪ್ರೇಮಬರಹ ಸಿನಿಮಾದಿಂದ ಅವ್ರ ನಡುವೆ ವೈಮನಸ್ಸು ಮೂಡಿದೆ ಅನ್ನೋದು ಗೊತ್ತಿಲ್ಲ.. ನಾನು ದರ್ಶನ್ ಸರ್ ಅವ್ರ ಒಂದು ರೂಪಾಯಿ ಖರ್ಚ್ ಮಾಡಿಲ್ಲ.. ನಾನು ಹಣ ದುರ್ಬಳಕೆ ಮಾಡಿದ್ದೀನಿ ಅಂತ ದರ್ಶನ್ ಸರ್ ಹೇಳಿಲ್ಲ.. ಯಾರ್ಯಾರೋ ಅಂತಹ ಸುಳ್ಳು ಸುದ್ದಿ ಹರಡಿಸಿದ್ರು..' ಎಂದಿರುವ  ಮಲ್ಲಿಕಾರ್ಜುನ್ ಇನ್ನೂ ಏನಂದ್ರು ನೋಡಿ..

Read Full Story

12:31 PM (IST) Apr 16

ಸೀಮೆಎಣ್ಣೆಯಲ್ಲಿ ಈ ಪೌಡರ್ ಸೇರಿಸಿ ಮನೆ ಸುತ್ತ ಸಿಂಪಡಿಸಿದ್ರೆ ಯಾವ ಹಾವುಗಳು ಬರಲ್ಲ

ಮನೆಯ ಸುತ್ತಮುತ್ತ ಹಾವುಗಳು ಬರದಂತೆ ತಡೆಯಲು ಮನೆಯಲ್ಲೇ ಔಷಧ ತಯಾರಿಸಬಹುದು. ಈ ಮಿಶ್ರಣವನ್ನು ಮನೆಯ ಸುತ್ತ ಸಿಂಪಡಿಸಿದರೆ, ಅದರ ಕಡು ವಾಸನೆಗೆ ಹಾವುಗಳು ಮನೆಯ ಹತ್ತಿರ ಸುಳಿಯುವುದಿಲ್ಲ. ಗ್ರಾಮೀಣ ಭಾಗದಲ್ಲಿ ಈ ಉಪಾಯವನ್ನು ಹೆಚ್ಚಾಗಿ ಬಳಸಲಾಗುತ್ತದೆ.

Read Full Story

11:55 AM (IST) Apr 16

ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್‌ ನೀಡಲು ನಿರ್ಧರಿಸಿದ ಸರ್ಕಾರಕ್ಕೆ ತೀವ್ರ ಹಿನ್ನಡೆ, ಅಂಕವೇ ನೀಡಿ ಎಂದ ಹೈಕೋರ್ಟ್‌

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಹಾಲಿ ಇರುವ ಅಂಕ ಪದ್ಧತಿಯನ್ನೇ ಮುಂದುವರಿಸಲು ಆದೇಶಿಸಿದೆ.
Read Full Story

More Trending News