LIVE NOW
Published : Mar 15, 2026, 06:43 AM ISTUpdated : Mar 15, 2026, 09:11 AM IST

Karnataka News Live: Bengaluru - 6.5 KM ಹೋಗೋಕೆ 1 ಗಂಟೆ! ಇದೇನ್ ಗುರು ಟ್ರಾಫಿಕ್? ಯುವಕನ ವಿಡಿಯೋ ವೈರಲ್

ಸಾರಾಂಶ

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಲೋಟ್ ವಾಚನ್ನು ಧರಿಸಿ ಭಾರಿ ಸುದ್ದಿಯಾಗಿದ್ದರು. ಇದೀಗ ಇಂಥಹ ಸುದ್ದಿಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸಿಲುಕಿದ್ದು, ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಹಿರೇಬಗನಾಳ ಗ್ರಾಮಕ್ಕೆ ಆಗಮಿಸಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿರೊಂದಿಗೆ ಸುತ್ತಾಡುವಾಗ ಹಿಟ್ನಾಳ ₹18 ಲಕ್ಷ ಮೌಲ್ಯದ ಹುಬ್ಲೋಟ್ ವಾಚ್‌ ಕಟ್ಟಿಕೊಂಡಿದ್ದರು. ಆ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಶಾಸಕರು ಶನಿವಾರದ ಕಾರ್ಯಕ್ರಮಕ್ಕೆ ಹುಬ್ಲೋಟ್ ಬದಲು ಬೇರೆಯ ವಾಚ್‌ ಕಟ್ಟಿಕೊಂಡಿದ್ದಾರೆ. 

ಮಾಧ್ಯಮದವರು ಕೇಳಿದ್ದಕ್ಕೆ ‘ಯಾಕೆ ಅಂಥ ದುಬಾರಿ ವಾಚ್ ಕಟ್ಟಬಾರದೆ? ಅದು ನನ್ನ ಸಹೋದರನ ವಾಚ್, ಎರಡು ದಿನ ಕಟ್ಟಿಕೊಳ್ಳಲು ಕೊಟ್ಟಿದ್ದರು’ ಎಂದು ಶಾಸಕರು ಸಮರ್ಥಿಸಿಕೊಂಡಿದ್ದಾರೆ.

09:11 AM (IST) Mar 15

Bengaluru - 6.5 KM ಹೋಗೋಕೆ 1 ಗಂಟೆ! ಇದೇನ್ ಗುರು ಟ್ರಾಫಿಕ್? ಯುವಕನ ವಿಡಿಯೋ ವೈರಲ್

ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ 6.5 ಕಿಲೋಮೀಟರ್ ಆಫೀಸ್ ಪ್ರಯಾಣಕ್ಕೆ ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.

Read Full Story

08:50 AM (IST) Mar 15

Bengaluru - 3000 ಮೆಟ್ರಿಕ್ ಟನ್ ಹಸಿ ಕಸದಿಂದ ಬಯೋಗ್ಯಾಸ್ ಉತ್ಪಾದನೆಗೆ ಕ್ರಮ - ಮಹೇಶ್ವರ್ ರಾವ್

Bengaluru: ಹಸಿ ಕಸದಿಂದ ಜೈವಿಕ ಅನಿಲ ಉತ್ಪಾದಿಸುವ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದ್ದು, ಕೋರಮಂಗಲ, ಕನ್ನಹಳ್ಳಿಗಳಲ್ಲಿ ಹೊಸ ಘಟಕಗಳು ಸ್ಥಾಪನೆಯಾಗುತ್ತಿದ್ದು, ಉತ್ಪಾದನೆಯಾದ ಗ್ಯಾಸ್ ಅನ್ನು ಬಯೋ ಸಿಎನ್‌ಜಿ ರೂಪದಲ್ಲಿ ಮಾರಾಟ ಮಾಡಿ, ಮನೆಗಳಿಗೆ ತಲುಪಿಸುವ ಯೋಜನೆಯೂ ಇದೆ.

Read Full Story

08:38 AM (IST) Mar 15

ಕಾರ್ಕಳ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ಅಕಾಲಿಕ ಮಳೆ; ಉರಿ ಬಿಸಿಲಿನಿಂದ ಬೇಸತ್ತಿದ್ದ ತಂಪೆರೆದ ವರುಣ

ಕಾರ್ಕಳ ಮತ್ತು ಬೆಳ್ತಂಗಡಿ ತಾಲೂಕಿನ ಹಲವೆಡೆ ಶನಿವಾರ ಗುಡುಗು ಸಹಿತ ಅಕಾಲಿಕ ಮಳೆ ಸುರಿದಿದೆ. ಕಳೆದ ಕೆಲವು ದಿನಗಳ ಉರಿ ಬಿಸಿಲಿನಿಂದ ಬಳಲಿದ್ದ ಜನರಿಗೆ ಈ ಮಳೆಯು ತಂಪೆರೆದಿದ್ದು, ವಾತಾವರಣವನ್ನು ತಂಪಾಗಿಸಿದೆ. 

Read Full Story

08:18 AM (IST) Mar 15

ಏರ್‌ಪೋರ್ಟ್‌ಗೆ ತಡವಾಗಿ ಬಂದ, ಮಾತಿನ ಭರದಲ್ಲಿ 'ಬಾಂಬ್ ಇದ್ರೆ..' ಅಂದ, ಖ್ಯಾತ ಗಾಯಕ ಅರೆಸ್ಟ್!

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದ ಪಶ್ಚಿಮ ಬಂಗಾಳ ಮೂಲದ ಗಾಯಕ ರಜತೇಶ್ ಬೇರಾ ಅವರಿಗೆ ಬೋರ್ಡಿಂಗ್ ನಿರಾಕರಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಅವರು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದು 'ಬಾಂಬ್' ಎಂಬ ಪದ ಬಳಸಿದ್ದರಿಂದ, ಪೊಲೀಸರು ಅವರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ.
Read Full Story

08:18 AM (IST) Mar 15

ಇತಿಹಾಸ ಪುಟ ಸೇರಲಿದೆ ಬೆಳ್ತಂಗಡಿ ಸೋಮಾವತಿ ಸೇತುವೆ; 70 ವರ್ಷವಾದರೂ ಶಿಥಿಲವಾಗಿಲ್ಲ

ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ, ಸೋಮಾವತಿ ನದಿಗೆ ಅಡ್ಡಲಾಗಿರುವ 70 ವರ್ಷ ಹಳೆಯ ಬೆಳ್ತಂಗಡಿ ಸೇತುವೆಯನ್ನು ತೆರವುಗೊಳಿಸಲಾಗುತ್ತಿದೆ. ಹೊಸ ಸರ್ವಿಸ್ ರಸ್ತೆ ಸೇತುವೆ ನಿರ್ಮಾಣಕ್ಕಾಗಿ ಈ ಐತಿಹಾಸಿಕ ಸೇತುವೆಯನ್ನು ಕೆಡವಲಾಗುತ್ತಿದೆ.

Read Full Story

08:00 AM (IST) Mar 15

Bengaluru - ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!

ಬೆಂಗಳೂರಿನಲ್ಲಿ ಪಾರ್ಟಿ ಮುಗಿಸಿ ಉಬರ್ ಕ್ಯಾಬ್‌ನಲ್ಲಿ ಮನೆಗೆ ಮರಳುತ್ತಿದ್ದ ಪ್ರಯಾಣಿಕ ನಿದ್ರೆಗೆ ಜಾರಿದ್ದಾರೆ. ಇದೇ ಸಮಯ ಸಾಧಿಸಿದ ಚಾಲಕ, ಪ್ರಯಾಣಿಕನ ಚಿನ್ನಾಭರಣ ಹಾಗೂ ಐಪೋನ್ ದೋಚಿ, ಮಾರ್ಗ ಮಧ್ಯದಲ್ಲೇ ಇಳಿಸಿ ಪರಾರಿಯಾಗಿದ್ದಾನೆ. 

Read Full Story

07:49 AM (IST) Mar 15

Belagavi - ಗೃಹಲಕ್ಷ್ಮಿಯಿಂದ ಬದುಕು ಕಟ್ಟಿಕೊಂಡ ಮಹಿಳೆಯರು; ಶಕ್ತಿ ಯೋಜನೆಯ ಸದ್ಬಳಕೆ

ಖಾನಾಪುರ ತಾಲೂಕಿನ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಹಣದಿಂದ ಹೈನುಗಾರಿಕೆ, ಕಿರಾಣಿ ಅಂಗಡಿಯಂತಹ ಸ್ವಯಂ ಉದ್ಯೋಗಗಳನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಶಕ್ತಿ ಯೋಜನೆಯು ಅವರ ವ್ಯಾಪಾರಕ್ಕೆ ಸಹಕಾರಿಯಾಗಿದ್ದು, ವಿಶ್ವ ಮಹಿಳಾ ದಿನದಂದು ಇಂತಹ ಯಶಸ್ವಿ ಫಲಾನುಭವಿಗಳನ್ನು ಗ್ಯಾರಂಟಿ ಸಮಿತಿಯು ಸನ್ಮಾನಿಸಿದೆ.
Read Full Story

07:36 AM (IST) Mar 15

Mandya - ಹೋಟೆಲ್‌ ಟಾಯ್ಲೆಟ್‌ನಲ್ಲಿ ಮೊಬೈಲಿಟ್ಟು ವಿಡಿಯೋ ರೆಕಾರ್ಡಿಂಗ್ - ಸಪ್ಲೈಯರ್ ಬಂಧನ

ಶ್ರೀರಂಗಪಟ್ಟಣದ ಶರವಣ ಹೋಟೆಲ್‌ನಲ್ಲಿ ಸಪ್ಲೈಯರ್ ಹರೀಶ್, ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ. ಹೋಟೆಲ್‌ಗೆ ಬಂದ ಮಹಿಳೆಯೊಬ್ಬರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Read Full Story

07:08 AM (IST) Mar 15

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಈಗ ಕನ್ನಡಮಯ! ಹಳದಿ-ಕೆಂಪು ಬಣ್ಣ, ಕನ್ನಡ ಸೂಚನಾ ಫಲಕಗಳೊಂದಿಗೆ ಹೊಸ ರೂಪ

ಬೆಂಗಳೂರಿನ ಪ್ರಸಿದ್ಧ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಇದೀಗ ಕನ್ನಡಮಯವಾಗುತ್ತಿದೆ. ಈ ಹಿಂದೆ ಕನ್ನಡ ಕಡೆಗಣನೆಗೆ ಟೀಕೆಗೊಳಗಾಗಿದ್ದ ಕೆಎಸ್‌ಸಿಎ, ಇದೀಗ ಹೊಸ ಗೇಟ್‌ಗಳು, ಸೂಚನಾ ಫಲಕಗಳಲ್ಲಿ ಕನ್ನಡಕ್ಕೆ ಮತ್ತು ಕರ್ನಾಟಕದ ಬಾವುಟದ ಹಳದಿ-ಕೆಂಪು ಬಣ್ಣಗಳಿಗೆ ಆದ್ಯತೆ ನೀಡಿದೆ. 

Read Full Story

More Trending News