Published : Jun 12, 2025, 06:25 AM ISTUpdated : Jun 13, 2025, 12:16 AM IST

Karnataka News Live 12th June 2025: ಕೊಲೆ ಮಾಡಲು ಬಂದವನೇ, ಕೊಲೆಯಾಗಿ ಹೋದ! ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ EXCLUSIVE ದೃಶ್ಯ!

ಸಾರಾಂಶ

ಬಳ್ಳಾರಿ/ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬುಧವಾರ ಕಾಂಗ್ರೆಸಿನ ಐವರು ಶಾಸಕರು ಹಾಗೂ ಬಳ್ಳಾರಿ ಸಂಸದ ಇ. ತುಕಾರಾಂ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಭಾರಿ ಶಾಕ್ ನೀಡಿದ್ದಾರೆ. ಬೆಂಗಳೂರಿನ 3, ಬಳ್ಳಾರಿ- ವಿಜಯನಗರ ಜಿಲ್ಲೆಯ 5 ಸೇರಿ ಒಟ್ಟು 8 ಕಡೆ ದಾಳಿ ನಡೆಸಲಾಗಿದೆ. ಬೆಳಗ್ಗೆ 6ಕ್ಕೆ ಆರಂಭವಾದ ದಾಳಿ ಹದಿನೈದೂವರೆ ತಾಸಿನ ಬಳಿಕ ರಾತ್ರಿ 9.30ಕ್ಕೆ ಮುಗಿದಿದೆ. ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಬೆಂಗಳೂರಿನ ಕೊಡಿಗೇ ಹಳ್ಳಿ ಸಮೀಪದ ರೈನ್ ಟ್ರಿ ಬುಲೇವಾರ್ಡ್ ಅಪಾರ್ಟ್‌ ಮೆಂಟ್, ಶಾಸಕರ ಭವನದ 4ನೇ ಮಹಡಿಯ ನಾಗೇಂದ್ರ ಅವರ ಕೊಠಡಿ ಸಂಖ್ಯೆ 360, ಬಳ್ಳಾರಿಯ ನೆಹರು ಕಾಲನಿಯಲ್ಲಿರುವ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಕಂಪ್ಲಿಯ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕ ಜೆ.ಎನ್. ಗಣೇಶ್ ಅವರ ನಿವಾಸ ಹಾಗೂ ಸಂಡೂರಿನ ಅಶೋಕ ಕಾಲನಿಯಲ್ಲಿರುವ ಬಳ್ಳಾರಿ ಸಂಸದ ಇ. ತುಕಾರಾಂ ಹಾಗೂ ಅವರ ಪತ್ನಿ ಸಂಡೂರು ಶಾಸಕಿ ಇ.ಅನ್ನಪೂರ್ಣ ಅವರ ನಿವಾಸ, ಸಂಸದರ ಬೆಂಗಳೂರಿನ ಜಯನಗರ ನಿವಾಸ, ವಿಜಯನಗರ ಜಿಲ್ಲೆ ಕೂಡ್ಲಿಗಿ ಶಾಸಕ ಡಾ.ಎನ್ .ಟಿ. ಶ್ರೀನಿವಾಸ್ ಅವರ ನರಸಿಂಹನಗಿರಿ ಗ್ರಾಮದ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಈ ಹಿಂದೆ ನಾಗೇಂದ್ರ ಮನೆಯ ಮೇಲೆ ದಾಳಿ ನಡೆಸಿದ್ದ ಇ.ಡಿ., ಅಲ್ಲಿ ದೊರೆತ ಕೆಲವು ದಾಖಲೆಗಳನ್ನು ಆಧರಿಸಿ ಈ ದಾಳಿ ನಡೆಸಿದೆ ಎನ್ನಲಾಗಿದೆ.

Bengaluru crime

12:16 AM (IST) Jun 13

ಕೊಲೆ ಮಾಡಲು ಬಂದವನೇ, ಕೊಲೆಯಾಗಿ ಹೋದ! ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ EXCLUSIVE ದೃಶ್ಯ!

ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ರೌಡಿ ಪುನೀತ್ ಅಲಿಯಾಸ್ ನೇಪಾಳಿ ಪುನೀತ್‌ನ ಕೊಲೆ ಕೇಸ್‌ನಲ್ಲಿ ಆಘಾತಕಾರಿ ಬೆಳವಣಿಗೆ ನಡಿದಿದ್ದು, ಈ ಪ್ರಕರಣದಲ್ಲಿ ಕೊಲೆಗೆ ಯತ್ನಿಸಿದವನೇ ಕೊಲೆಗೀಡಾಗಿದ್ದಾನೆ.

Read Full Story

11:24 PM (IST) Jun 12

ವಾಹನ ನಂಬರ್‌ನಿಂದ ಅಂತಿಮ ಯಾತ್ರೆವರೆಗೆ ಮಾಜಿ ಸಿಎಂ ರೂಪಾನಿಯ ನಂಬರ್ 12 ನಿಗೂಢತೆ

ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಗೆ ನಂಬರ್ 12 ಮೇಲೆ ಎಲ್ಲಿಲ್ಲದ ಮೋಹ. ತಮ್ಮ ಎಲ್ಲಾ ವಾಹನಗಳ ನಂಬರ್ 12 ಇರಲೇ ಬೇಕು. ದುರಂತ ಅಂದರೆ ಇದೇ 12 ನಂಬರ್ ಯಾತ್ರೆ ತಮ್ಮ ಕೊನೆಯ ಯಾತ್ರೆಯಾಗಲಿದೆ ಅನ್ನೋ ಸುಳಿವು ಇರಲಿಲ್ಲ.

Read Full Story

10:42 PM (IST) Jun 12

Udupi Red alert - ಭಾರೀ ಮಳೆ, ಶಾಲೆಗಳಿಗೆ ನಾಳೆಯೂ ರಜೆ!

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು 1 ರಿಂದ 10ನೇ ತರಗತಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸಾರ್ವಜನಿಕರು ಸುರಕ್ಷಿತವಾಗಿರಲು ಜಿಲ್ಲಾಡಳಿತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
Read Full Story

10:00 PM (IST) Jun 12

ವಿಮಾನ ದುರಂತದಲ್ಲಿ ಆಪ್ತ ಸಂಬಂಧಿ ಪೈಲೆಟ್ ಕುಂದರ್‌ನ ಕಳೆದುಕೊಂಡ ಬಾಲಿವುಡ್ ನಟ

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಇಬ್ಬರು ಪೈಲೆಟ್, ಸಿಬ್ಬಂದಿಗಳು ಪ್ರಯಾಣಿಕರು ಸೇರಿದಂತೆ 241 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕೋ ಪೈಲೆಟ್ ಕ್ಲೈವ್ ಕುಂದರ್ ಬಾಲಿವುಡ್ ನಟ ವಿಕ್ರಾಂತಿ ಮಾಸ್ಸೆ ಸಂಬಂಧಿ. ಘಟನೆ ನನೆದು ವಿಕ್ರಾಂತ ಮಾಸ್ಸೆ ಕಣ್ಣೀರಿಟ್ಟಿದ್ದಾರೆ.

Read Full Story

09:14 PM (IST) Jun 12

ಚನ್ನಪಟ್ಟಣದ ಕೆರೆ ಬಳಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಬ್ಯಾಗ್, ಐಡಿ ಕಾರ್ಡ್ ಪತ್ತೆ; ತೀವ್ರ ಹುಡುಕಾಟ!

ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರ ಕೆರೆಯ ಬಳಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್ ಮತ್ತು ಐಡಿ ಕಾರ್ಡ್ ಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮದ್ದೂರು ತಾಲೂಕಿನ ಮಹಾಲಕ್ಷ್ಮಿ ಎಂದು ಗುರುತಿಸಲಾದ ವಿದ್ಯಾರ್ಥಿನಿ ಕೆರೆಯಲ್ಲಿ ಮುಳುಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
Read Full Story

08:39 PM (IST) Jun 12

ವಿಮಾನ ದುರಂತ, ಮಡಿ ಪ್ರಯಾಣಿಕರಿಗೆ ತಲಾ ₹1 ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಪ್ರಯಾಣಿಕರ ಕುಟುಂಬಕ್ಕೆ ಟಾಟಾ ಸಮೂಹ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಾಳು ಚಿಕಿತ್ಸಾ ವೆಚ್ಚ, ಹಾಸ್ಟೆಲ್ ಮರು ನಿರ್ಮಾಣ ಸೇರಿದಂತೆ ಪ್ರಮುಖ ಭರವಸೆ ನೀಡಿದೆ. 

Read Full Story

08:03 PM (IST) Jun 12

ಕೊಡಗು ಜಿಲ್ಲೆಯಲ್ಲಿ ಪ್ರವಾಹ, ಭೂಕುಸಿತ ಎದುರಾದರೆ 12 ಸಾವಿರ ಜನರ ಸ್ಥಳಾಂತರ ಸಾಧ್ಯತೆ

ಕೊಡಗು ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಸಾವಿರಾರು ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ನೊಟೀಸ್ ನೀಡಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Read Full Story

07:55 PM (IST) Jun 12

ಗುಡ್ ಬೈ ಟು ಇಂಡಿಯಾ, ವಿಮಾನ ದುರಂತದಲ್ಲಿ ಮಡಿದ ಬ್ರಿಟಿಷ್ ಪ್ರಯಾಣಿಕನ ಕೊನೆಯ ವಿಡಿಯೋ

ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೂ ಕೆಲವೇ ಕ್ಷಣಗಳ ಮುನ್ನ ಬ್ರಿಟಿಷ್ ಪ್ರಯಾಣಿಕ ತೆಗೆದ ಕೊನೆಯ ವಿಡಿಯೋ ಪತ್ತೆಯಾಗಿದೆ. ಗುಡ್ ಬೈ ಟು ಇಂಡಿಯಾ ಎಂದಿರುವ ಈ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ.

 

Read Full Story

07:34 PM (IST) Jun 12

ವಿಮಾನ ದುರಂತದಲ್ಲಿ 242 ಪ್ರಯಾಣಿಕರ ಪೈಕಿ ಓರ್ವ ಜೀವಂತ, ಬದುಕುಳಿದಿದ್ದೇ ಪವಾಡ

ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ಪತದಲ್ಲಿ 242 ಪ್ರಯಾಣಿಕರ ಪೈಕಿ 241 ಮಂದಿ ನಿಧನರಾಗಿದ್ದಾರೆ. ಆದರೆ ಒರ್ವ ಪ್ರಯಾಣಿಕ ಪವಾಡ ಸದಶ್ಯವಾಗಿ ಪಾರಾಗಿದ್ದಾರೆ.

Read Full Story

07:30 PM (IST) Jun 12

ಏರ್ ಇಂಡಿಯಾ ವಿಮಾನ ದುರಂತ, ಇಲ್ಲಿವರೆಗೆ ನಡೆದ ಬೆಳವಣಿಗೆಗಳ ಸಂಕ್ಷಿಪ್ತ ವಿವರಣೆ

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI171 ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ, 241  ಮಂದಿ ಮೃತಪಟ್ಟಿದ್ದಾರೆ. ವಿಮಾನವು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದ್ದು, ಹಲವಾರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

Read Full Story

06:46 PM (IST) Jun 12

ವಿಮಾನ ದುರಂತದಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಸಾವು, ಕುಟುಂಬಸ್ಥರ ಆಕ್ರಂದನ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮೃತಪಟ್ಟಿರುವುದು ಖಚಿತವಾಗಿದೆ. ರೂಪಾನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Read Full Story

06:36 PM (IST) Jun 12

ಬೇರೊಬ್ಬನಿಂದ ಗರ್ಭಿಣಿಯಾಗಿದ್ದೂ ಅಲ್ದೇ ಪತಿಗೇ ಧಮ್ಕಿ! ಪತ್ನಿಯ ಟಾರ್ಚರ್​ ತಾಳದೇ ಯುವಕ ಆ*ತ್ಮಹತ್ಯೆ

ಮದುವೆಗೂ ಮುನ್ನ ಗರ್ಭಿಣಿಯಾಗಿರುವ ವಿಷಯ ಗಂಡನ ಮನೆಯವರಿಗೆ ತಿಳಿಯುತ್ತಲೇ ಮಹಿಳೆಯೇ ಟಾರ್ಚರ್​ ಕೊಟ್ಟು ಪತಿಯ ಸಾವಿಗೆ ಕಾರಣಳಾಗಿದ್ದಾಳೆ! ಮಹಿಳಾ ಪರ ಕಾನೂನುಗಳ ದುರ್ಬಳಕೆಯ ಆರೋಪದ ಬೆನ್ನಲ್ಲೇ, ಈ ಘಟನೆ ನಡೆದಿದೆ...

 

Read Full Story

06:35 PM (IST) Jun 12

ಪ್ರೇಕ್ಷಕರ ಮುಂದೆ ಬರಲು ರೆಡಿಯಾದ ಪದ್ಮಗಂಧಿ; ಸುಚೇಂದ್ರ ಪ್ರಸಾದ್ ಸಿನಿಮಾಗೆ ಬಹುಪರಾಕ್ ಸಿಗುತ್ತಾ?

ಪದ್ಮಗಂಧಿಯ ಹಾಡುಗಳೆಲ್ಲವೂ ತಯಾರಾಗಿವೆ. ಅವುಗಳ ಒಂದಷ್ಟು ಝಲಕ್ಕುಗಳನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಲಾಗಿದೆ. ಈ ಮೂಲಕ ಪದ್ಮಗಂಧಿಯ ಹಾಡುಗಳ ಸಣ್ಣ ಪರಿಚಯವನ್ನು ಪ್ರೇಕ್ಷಕರತ್ತ ತಲುಪಿಸುವ ಪ್ರಯತ್ನವೂ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪದ್ಮಗಂಧಿಯ ಹಾಡುಗಳು ಪ್ರೇಕ್ಷಕರ ಮುಂದೆ ಬರಲಿವೆ.

Read Full Story

06:34 PM (IST) Jun 12

ಏರ್‌ ಇಂಡಿಯಾ ವಿಮಾನ ದುರಂತ - ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗೆ 26 ಸಾವಿರ ಕೋಟಿ ರೂಪಾಯಿ ಪರಿಹಾರದ ಭಾರ!

ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾ ಪರಿಹಾರದ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಹಲ್ ವಿಮೆ ಮತ್ತು ಪ್ರಯಾಣಿಕರ ಹೊಣೆಗಾರಿಕೆ ವಿಮೆಗಳ ಅಡಿಯಲ್ಲಿ ಪರಿಹಾರ ನೀಡಲಾಗುತ್ತದೆ.
Read Full Story

06:31 PM (IST) Jun 12

ಗುಜರಾತ್ ವಿಮಾನ ದುರಂತ - ವಿಜಯ್ ರೂಪಾನಿ ಯಾರು? ಮಗಳ ಭೇಟಿಗೆ ಲಂಡನ್‌ಗೆ ತೆರಳುತ್ತಿದ್ದಾಗ ದುರಂತ

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ದುರಂತವಾಗಿದೆ. ಅವರ ರಾಜಕೀಯ ಜೀವನ, ಸಾಧನೆಗಳು, ಮತ್ತು ವಿವಾದಗಳನ್ನು ಒಳಗೊಂಡ ಸಂಕ್ಷಿಪ್ತ ವಿವರಣೆ. ಬರ್ಮಾದಿಂದ ಗುಜರಾತ್‌ಗೆ ವಲಸೆ ಬಂದ ರೂಪಾನಿ, ವಿದ್ಯಾರ್ಥಿ ರಾಜಕಾರಣ ಪ್ರಯಾಣವನ್ನು ಈ ಲೇಖನ ಒಳಗೊಂಡಿದೆ.

Read Full Story

06:08 PM (IST) Jun 12

ವಿಮಾನ ಪತನಕ್ಕೆ ಕಾರಣ ಏನು? ಗೇರ್ ಮೇಲಕ್ಕೆತ್ತಿದ್ರೂ ಇಂಜಿನ್ ನಿಷ್ಕ್ರಿಯಗೊಂಡಿದ್ದು ಹೇಗೆ?

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ರನ್‌ವೇ 23 ರಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಈ ದುರಂತಕ್ಕೆ ಕಾರಣವೇನು?

Read Full Story

05:57 PM (IST) Jun 12

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಮಡಿದ ಪ್ರಯಾಣಿಕರಿಗೆ ಸಿಗೋ ಪರಿಪಾರ ಮೊತ್ತ ಎಷ್ಟು?

ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದವರ ಸಂಖ್ಯೆ ಸ್ಪಷ್ಟವಾಗಿಲ್ಲಿ. ಸದ್ಯ ಈ ಘಟನೆಯಲ್ಲಿ 133 ಮಂದಿ ಮೃತಪಟ್ಟಿದ್ದಾರೆ. ವಿಮಾನ ದುರಂತದಲ್ಲಿ ಮಡಿದರೆ ಪರಿಹಾರ ಮೊತ್ತ ಕೊಡುವ ಜವಾಬ್ದಾರಿ ಯಾರದ್ದು? ಮಡಿದ ಪ್ರಯಾಣಿಕರ ಕುಟುಂಬಕ್ಕೆ ಸಿಗುವ ಪರಿಹಾರ ಮೊತ್ತವೆಷ್ಟು?

Read Full Story

05:55 PM (IST) Jun 12

ಏರ್‌ ಇಂಡಿಯಾ ವಿಮಾನ ದುರಂತ - ವಿಮಾನದಲ್ಲಿದ್ದ ಎಲ್ಲಾ 242 ಪ್ರಯಾಣಿಕರು ಸಾವು

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI171 ಅಪಘಾತಕ್ಕೀಡಾಗಿದ್ದು, 240 ಕ್ಕೂ ಹೆಚ್ಚು ಜನರ ಸಾವಿನ Befaru ಇದೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷರು, 7 ಪೋರ್ಚುಗೀಸರು ಮತ್ತು 1 ಕೆನಡಾದ ಪ್ರಜೆ ಸೇರಿದಂತೆ ಒಟ್ಟು 242 ಜನರಿದ್ದರು.
Read Full Story

05:53 PM (IST) Jun 12

ಎಲ್ಲೆಂದರಲ್ಲಿ ಕಸ ಎಸೆದು ಹೋಗೋರನ್ನು ಹಿಡಿದುಕೊಡಲು ವಾಟ್ಸಾಪ್ ನಂಬರ್ ಕೊಟ್ಟ ಬಿಬಿಎಂಪಿ!

ಬೆಂಗಳೂರು ನಗರದ ಸ್ವಚ್ಛತೆ ಕಾಪಾಡಲು ಬಿಬಿಎಂಪಿ ಹೊಸ ಕ್ರಮ ಕೈಗೊಂಡಿದೆ. ಕಸ ಎಸೆಯುವವರ ಫೋಟೋ ತೆಗೆದು 9448197197 ವಾಟ್ಸಪ್ ಸಂಖ್ಯೆಗೆ ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುವುದು. ನಗರದ ಸ್ವಚ್ಛತೆಗಾಗಿ ಪಾಲಿಕೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಲಾಗಿದೆ.
Read Full Story

05:45 PM (IST) Jun 12

Air India Plane Crash - ದುರಂತದ ಬಗ್ಗೆ ಕಳೆದ ವಾರವೇ ಎಚ್ಚರಿಕೆ ಕೊಟ್ಟಿದ್ದ ಖ್ಯಾತ ಜ್ಯೋತಿಷಿ!

ಗುಜರಾತ್​ನ ಅಹಮ್ಮದಾಬಾದ್​ನಲ್ಲಿ ಸಂಭವಿಸಿರುವ ಭೀಕರ ವಿಮಾನ ಅಪಘಾತದಲ್ಲಿ 242 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇದಕ್ಕೆ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಆದರೆ ಇದರ ನಡುವೆಯೇ ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರು ನೀಡಿದ್ದ ಎಚ್ಚರಿಕೆ ಬೆಳಕಿಗೆ ಬಂದಿದೆ.

 

Read Full Story

05:20 PM (IST) Jun 12

ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಸಾವು ಕಂಡ ಮಂಗಳೂರು ಮೂಲದ ಸಿಬ್ಬಂದಿ ಕ್ಲೈವ್‌ ಕುಂದರ್!

ಗುರುವಾರ ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ AI 171 ಪತನಗೊಂಡಿದೆ. ಮಂಗಳೂರು ಮೂಲದ ಮೊದಲ ಅಧಿಕಾರಿ ಕ್ಲೈವ್ ಕುಂದರ್ ಸೇರಿದಂತೆ 242 ಜನರಿದ್ದ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ಘಟನೆಯ ತನಿಖೆ ನಡೆಯುತ್ತಿದೆ.
Read Full Story

05:13 PM (IST) Jun 12

ಭಾರತದ ಪ್ರಸಿದ್ಧ ಇನ್ಫ್ಲುಯೆನ್ಸರ್ ಕಮಲ್ ಕೌರ್ ನಿಗೂಢ ಸಾವು; ಕಾರಿನೊಳಗೆ ಶವ ಪತ್ತೆ!

ಉತ್ತರ ಭಾರತದ ಪ್ರಸಿದ್ಧ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಮಲ್ ಕೌರ್ ಅವರ ಶವ ಬಠಿಂಡಾದಲ್ಲಿ ಕಾರಿನೊಳಗೆ ಪತ್ತೆಯಾಗಿದೆ. ಭಯೋತ್ಪಾದಕನೊಬ್ಬ ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read Full Story

04:59 PM (IST) Jun 12

ವಿದ್ಯಾರ್ಥಿಗಳು ಊಟ ಮಾಡುತ್ತಿರುವಾಗ ಹಾಸ್ಟೆಲ್ ಮೇಲೆ ವಿಮಾನ ಪತನ, ಹಲವರು ಗಂಭೀರ

ಅಹಮ್ಮದಾಬಾದ್ ವಿಮಾನ ದುರಂತದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ. ಕಾರಣ ಈ ವಿಮಾನ ಪತನಗೊಂಡಿದ್ದು ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ. ವಿದ್ಯಾರ್ಥಿಗಳು ಊಟ ಮಾಡುತ್ತಿರುವಾಗ ಹಾಸ್ಟೆಲ್ ಮೇಲೆ ಪತನಗೊಂಡಿದೆ. ಈ ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ.

Read Full Story

04:53 PM (IST) Jun 12

ಬದಲಾದ NMKRV ಕಾಲೇಜು ಹೆಸರು, ಗಂಡ ಮಕ್ಕಳಿಗೂ ಶಿಕ್ಷಣ ನೀಡುವತ್ತ ಹೊಸ ಹೆಜ್ಜೆ

NMKRV ಮಹಿಳಾ ಕಾಲೇಜು ಈಗ NMKRV ಕಾಲೇಜು ಎಂದು ಮರುನಾಮಕರಣಗೊಂಡು, 2025-26ರಿಂದ ಸಹ-ಶಿಕ್ಷಣ ಸಂಸ್ಥೆಯಾಗಿ ಪರಿವರ್ತನೆಗೊಳ್ಳಲಿದೆ. ಕಾಲೇಜಿನಲ್ಲಿ ಈಗಾಗಲೇ 60 ಹುಡುಗರನ್ನು ದಾಖಲಿಸಲಾಗಿದ್ದು, ಮುಂದಿನ ವರ್ಷಗಳಲ್ಲಿ ಹುಡುಗರಿಗೆ ಮೀಸಲಾದ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ.
Read Full Story

04:49 PM (IST) Jun 12

Air India Flight Crash - 1996ರ ಚರ್ಕಿ ದಾದ್ರಿ ದುರಂತದ ಬಳಿಕ ಭಾರತ ಕಂಡ ಅತಿದೊಡ್ಡ ವಿಮಾನ ದುರ್ಘಟನೆ

ಗುಜರಾತ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, 242 ಜನರಿದ್ದರು. 1996 ರ ಚರ್ಕಿ ದಾದ್ರಿ ದುರಂತದ ನಂತರ ಭಾರತದಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ ಇದಾಗಿದೆ.
Read Full Story

04:19 PM (IST) Jun 12

ಮೇಡೇ, ಅಹಮ್ಮಬಾದ್ ವಿಮಾನ ಪತನಕ್ಕೂ ಮುನ್ನ ಪೈಲೆಟ್ ಕಳುಹಿಸಿದ ಕೊನೆಯ ಸಂದೇಶವೇನು?

ಏರ್ ಇಂಡಿಯಾ ವಿಮಾನ ಪತನ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದೆ. 242 ಮಂದಿ ಹೊತ್ತು ಪ್ರಯಾಣಿಸಿದ ವಿಮಾನ ಪತನಕ್ಕೂ ಕೆಲವೇ ಕ್ಷಣ ಮುನ್ನ ಪೈಲೆಟ್, ಏರ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಮೇಡೇ ಸಂದೇಶ ಕಳುಹಿಸಿದ್ದಾರೆ. ಪೈಲೆಟ್ ಕೊನೆಯದಾಗಿ ಕಳುಹಿಸಿದ ಮೇಡೇ ಸಂದೇಶವೇನು?

Read Full Story

04:18 PM (IST) Jun 12

ಅಹಮದಾಬಾದ್ ವಿಮಾನ ದುರಂತ, ಭಾರತದ 10 ಭಯಾನಕ ವಿಮಾನ ದುರಂತಗಳು ಪಟ್ಟಿ

ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಅಹಮದಾಬಾದ್‌ನಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ 244 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಈವರೆಗೆ ಸಂಭವಿಸಿದ ಭೀಕರ ವಿಮಾನ ದುರಂತಗಳನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ.
Read Full Story

04:06 PM (IST) Jun 12

'ದಿ ಇಂಡಿಯಾ ಹೌಸ್ ಸೆಟ್ ಅಪಘಾತ - ನಿಖಿಲ್ ಹೇಳಿದ್ದೇನು? ರಾಮ್ ಚರಣ್ ಸಿನಿಮಾಗೆ ಇದೆಂಥಾ ಆಘಾತ!

ದಿ ಇಂಡಿಯಾ ಹೌಸ್ ಸಿನಿಮಾ ಸೆಟ್‌ನಲ್ಲಿ ನಡೆದ ಅಪಘಾತದ ಬಗ್ಗೆ ನಟ ನಿಖಿಲ್ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
Read Full Story

03:55 PM (IST) Jun 12

ಕಳೆದ ಆರು ವರ್ಷದಲ್ಲಿ ಮೂರನೇ ಬಾರಿ ಆಗಸದಲ್ಲಿ ಅಪಘಾತ ಕಂಡ ಬೋಯಿಂಗ್‌ ಕಂಪನಿಯ ವಿಮಾನ!

ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು 242 ಜನರನ್ನು ಹೊತ್ತು ಅಹಮದಾಬಾದ್‌ನಲ್ಲಿ ಪತನಗೊಂಡಿದೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ಜನನಿಬಿಡ ಪ್ರದೇಶದ ಮೇಲೆ ಅಪ್ಪಳಿಸಿತು, ಇದು ಬೃಹತ್ ರಕ್ಷಣಾ ಕಾರ್ಯಾಚರಣೆಗೆ ಕಾರಣವಾಯಿತು.
Read Full Story

03:50 PM (IST) Jun 12

ಮಾಧ್ಯಮದವರು ನನ್ನನ್ನ ರೇಪ್ ಒಂದು ಮಾಡಿಲ್ಲ..! ಡಿಸಿಎಂ ಡಿ.ಕೆ. ಶಿವಕುಮಾರ್ ಗರಂ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳು ತಮ್ಮನ್ನು ವಿಲನ್ ಮಾಡಿವೆ ಎಂದು ಆರೋಪಿಸಿದ್ದಾರೆ. ಜಾತಿಗಣತಿ ವರದಿ ಬಗ್ಗೆ ಚರ್ಚೆ ನಡೆದಿದ್ದು, ಕಾನೂನಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

Read Full Story

03:49 PM (IST) Jun 12

ಕರಣ್ ಜೋಹರ್ ಶೋ 'ದಿ ಟ್ರೈಟರ್ಸ್'ಯಾವಾಗ, ಎಲ್ಲಿ ನೋಡ್ಬೇಕು? ಹುಡುಕ್ತಿರೋರು ಅವಶ್ಯವಾಗಿ ನೋಡಿ ಇಲ್ಲಿ!

ಕರಣ್ ಜೋಹರ್ ಅವರ ಹೊಸ ಶೋ 'ದ ಟ್ರೈಟರ್ಸ್' ಒಟಿಟಿಯಲ್ಲಿ ಶುರುವಾಗ್ತಿದೆ. ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ, ಯಾವಾಗ, ಏನ್ ಸಮಯಕ್ಕೆ ಮತ್ತು ಎಷ್ಟು ಜನ ಸ್ಪರ್ಧಿಗಳು ಭಾಗವಹಿಸ್ತಾರೆ ಅನ್ನೋದನ್ನ ತಿಳ್ಕೊಳ್ಳೋಣ.

 

Read Full Story

03:38 PM (IST) Jun 12

ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ಪತನ, ಸಾವಿನ ಸಂಖ್ಯೆ 110ಕ್ಕೆ ಏರಿಕೆ

ಅಹಮ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದಲ್ಲಿ ಸಾವಿನ ಸಂಖ್ಯೆ ಇದೀಗ 110ಕ್ಕೆ ಏರಿಕೆಯಾಗಿದೆ. 242 ಪ್ರಯಾಣಿಕರಿದ್ದ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಪತನಗೊಂಡಿದೆ. ಈ ಪೈಕಿ 132 ಮಂದಿಗೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story

03:36 PM (IST) Jun 12

ಜಾನ್ ಅಬ್ರಹಾಂ ಅದೆಷ್ಟು ಕೋಟಿಗೆ ಬಾಳ್ತಾರೆ ಗೊತ್ತಾ? ಮುಂಬೈ ಆಸ್ತಿ ಲೆಕ್ಕ ಗೊತ್ತಿದ್ಯಾ ನಿಮ್ಗೆ?

ಜಾನ್ ಅಬ್ರಹಾಂ ಮುಂಬೈನಲ್ಲಿ ಮೂರು ಆಸ್ತಿಗಳನ್ನು ಬಾಡಿಗೆಗೆ ನೀಡಿದ್ದಾರೆ, ಇದರಿಂದ ಅವರಿಗೆ ಕೋಟಿಗಟ್ಟಲೆ ಗಳಿಕೆ ಆಗಲಿದೆ. ಬಾಂದ್ರಾ ವೆಸ್ಟ್‌ನಲ್ಲಿರುವ ಈ ಆಸ್ತಿಗಳ ಮಾಸಿಕ ಬಾಡಿಗೆ ಲಕ್ಷಾಂತರ ರೂಪಾಯಿ!

Read Full Story

03:17 PM (IST) Jun 12

Photos - ಟೇಕ್‌ ಆಫ್‌ ಆದ ಕೆಲವೇ ಕ್ಷಣದಲ್ಲಿ ಪತನವಾದ ಏರ್‌ ಇಂಡಿಯಾ ವಿಮಾನ, ಸುಟ್ಟು ಕರಕಲಾದ ದೇಹಗಳು!

242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಏರ್ ಇಂಡಿಯಾ ವಿಮಾನ 171, ಭಾರತದ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹೊರಟ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ. ವಿಮಾನವು ನಗರದ ಮೇಘಾನಿ ಪ್ರದೇಶದಲ್ಲಿ ಪತನಗೊಂಡಿದೆ.

Read Full Story

03:13 PM (IST) Jun 12

ಗುಜರಾತ್ ವಿಮಾನ ಪತನ ಬೆನ್ನಲ್ಲಿಯೇ ಮುನ್ನೆಲೆಗೆ ಬಂದ 15 ವರ್ಷ ಹಿಂದಿನ ಮಂಗಳೂರು ದುರಂತ!

ಗುಜರಾತಿನ ಅಹಮದಾಬಾದ್ ಏರ್‌ ಇಂಡಿಯಾ ವಿಮಾನ ಪತನದ ಘಟನೆ ಬೆನ್ನಲ್ಲಿಯೇ ಕಳೆದ 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತದ ಕ್ಷಣಗಳು ಮುನ್ನೆಲೆಗೆ ಬಂದಿವೆ. ಮಂಗಳೂರಿನ ವಿಮಾನ ಪತನು ಘಟನೆಯಲ್ಲಿ 158 ಜನರು ಸಾವನ್ನಪ್ಪಿದ್ದರು.

Read Full Story

02:50 PM (IST) Jun 12

ಪತನಗೊಂಡ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ

Ahmedabad Aircraft Crash Live Updates: ಮೇಘನಿನಗರ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ವ್ಯಾಪಕ ಭೀತಿ ಮತ್ತು ಅವ್ಯವಸ್ಥೆ ಉಂಟಾಗಿದೆ. ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.

 

Read Full Story

02:40 PM (IST) Jun 12

ಬೆಂಗಳೂರಿನಲ್ಲಿ‌ ಫುಡ್‌ ಡೆಲಿವರಿ ಬಾಯ್ ರೆಸ್ಯೂಮ್‌ ನೋಡಿ ಹೌಹಾರಿದ ಗ್ರಾಹಕ! ಅಂಥದ್ದೇನಿತ್ತು?

ಬೆಂಗಳೂರಿನಲ್ಲಿ ಗ್ರಾಹಕನ ಮನೆಗೆ ಫುಡ್‌ ಆರ್ಡರ್‌ ಬಂದಿದೆ. ಆಗ ಅವರ ರೆಸ್ಯೂಮ್‌ ನೋಡಿ ಆರ್ಡರ್‌ ಮಾಡಿದ ವ್ಯಕ್ತಿಯೇ ಹೆದರಿದ್ದಾರೆ.

 

Read Full Story

02:39 PM (IST) Jun 12

ಬಾಯ್ ಫ್ರೆಂಡ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕೇರ್ ಆಫ್ ಫುಟ್ ಪಾತ್' ನಟಿ

ಹಿಂದಿ ಕಿರುತೆರೆ ಹಾಗೂ ಹಿರಿ ತೆರೆ ನಟಿ ಅವಿಕಾ ಗೋರ್ ತಮ್ಮ ಬಹುಕಾಲದ ಗೆಳೆಯ ಮಿಲಿಂದ್ ಚಂದ್ವಾನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅವಿಕಾ ಈ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.

 

Read Full Story

02:27 PM (IST) Jun 12

ಹನಿಮೂನ್‌ ಮರ್ಡರ್‌ ಬೆನ್ನಲ್ಲೇ, ಸೋಶಿಯಲ್‌ ಮೀಡಿಯಾದಲ್ಲಿ ಮತ್ತೆ ಮಿಂಚಿದ ಬೆಂಗಳೂರಿನ ರಿಂಗ್‌ ರೋಡ್‌ ಶುಭ!

ಹನಿಮೂನ್‌ನಲ್ಲಿ ಪತ್ನಿಯಿಂದಲೇ ಕೊಲೆಯಾದ ರಾಜಾ ರಘುವಂಶಿ ಪ್ರಕರಣವು 2003ರ ರಿಂಗ್‌ ರೋಡ್‌ ಕೊಲೆ ಪ್ರಕರಣವನ್ನು ನೆನಪಿಸುತ್ತದೆ. ಎರಡೂ ಪ್ರಕರಣಗಳಲ್ಲಿ ಪ್ರೇಮ ದ್ರೋಹ, ನಂಬಿಕೆ ದ್ರೋಹ ಮತ್ತು ಏಕಾಂತ ಸ್ಥಳದಲ್ಲಿ ವ್ಯವಸ್ಥಿತ ಕೊಲೆಯಂಥ ಹೋಲಿಕೆಗಳಿವೆ.
Read Full Story

02:11 PM (IST) Jun 12

Breaking - ಗುಜರಾತ್‌ ನಲ್ಲಿ ಏರ್‌ ಇಂಡಿಯಾ ದುರಂತ, 130 ಜನ ಬಲಿ!

ಅಹಮ್ಮದಾಬಾದ್‌ ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ.ಮೇಘನಿ ನಗರ ಪ್ರದೇಶದಲ್ಲಿ ಸುಮಾರು 200 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಡಿದೆ. ಸ್ಥಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Read Full Story

More Trending News