Published : Jul 10, 2025, 07:24 AM ISTUpdated : Jul 10, 2025, 11:18 PM IST

Karnatata Latest News Live: ರಾಜ್ಯದಲ್ಲಿ ನಿಲ್ಲದ ಹೃದಯಾಘಾತ, ಬೆಳಗಾವಿ-ಧಾರವಾಡದಲ್ಲಿ ಇಬ್ಬರಿಗೆ ಹಾರ್ಟ್ ಅಟ್ಯಾಕ್

ಸಾರಾಂಶ

ಬೆಂಗಳೂರು (ಜು.10): ದಿಲ್ಲಿಯಲ್ಲಿಂದು ರಾಜ್ಯ ಕಾಂಗ್ರೆಸ್ 2 ಮಹತ್ವದ ಸಭೆಗಳು ನಡೆಯಲಿದೆ. ಸರ್ಕಾರದಲ್ಲಿನ ಆಂತರಿಕ ಗೊಂದಲದ ಮಧ್ಯೆ ಸಭಾ ಸರಣಿ ನಡೆಯಲಿದೆ. ಸಿಎಂ, ಡಿಸಿಎಂ, ಸುರ್ಜೇವಾಲಾ ಮಧ್ಯೆ ಮೊದಲನೇ ಸಭೆ ನಡೆಯಲಿದ್ದು, ಪರಿಷತ್, ನಿಗಮ ಮಂಡಳಿ ಬಗ್ಗೆ ಚರ್ಚೆಯಾಗಿದೆ. ಆ ಬಳಿಕ ರಾಹುಲ್‌ ಗಾಂಧಿ ಜೊತೆ ಸಿಎಂ, ಡಿಸಿಎಂ ಪ್ರತ್ಯೇಕ ಸಭೆ ಸಾಧ್ಯತೆ ಇದ್ದು, ನಾಯಕತ್ವ ಗೊಂದಲದ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:18 PM (IST) Jul 10

ರಾಜ್ಯದಲ್ಲಿ ನಿಲ್ಲದ ಹೃದಯಾಘಾತ, ಬೆಳಗಾವಿ-ಧಾರವಾಡದಲ್ಲಿ ಇಬ್ಬರಿಗೆ ಹಾರ್ಟ್ ಅಟ್ಯಾಕ್

ರಾಜ್ಯದಲ್ಲಿ ಹೃದಯಾಘಾತ ಸರಣಿ ಮುಂದುವರಿದಿದೆ. ಇದೀಗ ಬೆಳಗಾವಿಯಲ್ಲಿ 35ರ ಯುವಕ ಹಾಗೂ ಧಾರವಾಡದಲ್ಲಿ 55ರ ಮಹಿಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Read Full Story

11:01 PM (IST) Jul 10

ಬಿಜೆಪಿ ಕಳಪೆ ಪ್ರಾಡಕ್ಟ್‌ ಪ್ರಚಾರಕ್ಕೆ ನಾನು ಅಂಬಾಸಿಡರ್‌ - ಸಚಿವ ಪ್ರಿಯಾಂಕ್‌ ಖರ್ಗೆ

ಮಾಜಿ ಸಂಸದ ಪ್ರತಾಪ್‌ ಸಿಂಹ ಅವರೇ ನನ್ನ ಅಪ್ಪನ ಹೆಸರು ಹೇಳಲು ನನಗೆ ಹೆಮ್ಮೆ ಇದೆ. ನಿಮಗೆ ನಿಮ್ಮ ಅಪ್ಪನ ಹೆಸರು ಹೇಳೋದಕ್ಕೆ ಆಗಿಲ್ಲ ಅಂದರೆ ನಾನೇನು ಮಾಡಲಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

Read Full Story

10:33 PM (IST) Jul 10

ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮ*ಹತ್ಯೆ

ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿಯ ಟೋಲ್‌ನಾಕಾದಲ್ಲಿ ನಡೆದಿದೆ.

Read Full Story

10:31 PM (IST) Jul 10

ವಿಟಮಿನ್ ಡ್ರಾಪ್ ಎಡವಟ್ಟು, ಶಿವಮೊಗ್ಗದ 13 ಅಂಗನವಾಡಿ ಮಕ್ಕಳು ಅಸ್ವಸ್ಥ

ಶಿವಮೊಗ್ಗದ ಅಂಗನವಾಡಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಲಾಗಿದೆ. ಇದರ ಬೆನ್ನಲ್ಲೇ ಒಂದರ ಹಿಂದೆ ಮತ್ತೊಬ್ಬರಂತೆ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Read Full Story

09:40 PM (IST) Jul 10

ಹಲವು ದಿನಗಳ ಬಳಿಕ ಈವೆಂಟ್‌ನಲ್ಲಿ ಉರ್ಫಿ ಜಾವೇದ್, ಗ್ಲಾಮರಸ್ ಎಂಟ್ರಿಗೆ ಫಿದಾ

ಮುಂಬೈನ ಪ್ರತಿಷ್ಠಿತ ಮ್ಯಾಗಜೀನ್‌ ತನ್ನ ಮೊದಲ ಆವೃತ್ತಿಯನ್ನ ಲಾಂಚ್‌ ಮಾಡಿದೆ. ಸೋಶಿಯಲ್‌ ಮೀಡಿಯಾ ಸೆನ್ಸೇಷನ್‌ ಉರ್ಫಿ ಜಾವೇದ್‌ ಗ್ಲಾಮರಸ್ ಲುಕ್‌ನೊಂದಿಗೆ ಈವೆಂಟ್‌ಗೆ ಎಂಟ್ರಿಕೊಟ್ಟಿದ್ದರೆ. ಉರ್ಫಿ ಲುಕ್ ಹಲವರ ಆಕರ್ಷಿಸಿದೆ 

Read Full Story

09:21 PM (IST) Jul 10

ಫಿಕ್ಸೆಡ್ ಡೆಪಾಸಿಟ್ ಮೇಲೆ ಗರಿಷ್ಠ ಬಡ್ಡಿ ನೀಡುವ 6 ಬ್ಯಾಂಕ್, ಹೂಡಿಕೆ ಡಬಲ್

ಷೇರು ಮಾರುಕಟ್ಟೆಯ ಏರಿಳಿತಗಳ ನಡುವೆ, ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿ) ಹೂಡಿಕೆದಾರರಿಗೆ ಸುರಕ್ಷಿತ ಆಯ್ಕೆಯಾಗಿವೆ. ಹೀಗೆ ಹೂಡಿಕೆ ಮಾಡುವ ಹಣಕ್ಕೆ ಗರಿಷ್ಠ ಬಡ್ಡಿ ನೀಡುವ 6 ಬ್ಯಾಂಕ್ ಇಲ್ಲಿದೆ. 

Read Full Story

09:17 PM (IST) Jul 10

ಫಲಾಪೇಕ್ಷೆ ಇಲ್ಲದೆ ಜೆಡಿಎಸ್‌ ಸಂಘಟನೆಗೆ ಶ್ರಮಿಸಿ - ನಿಖಿಲ್ ಕುಮಾರಸ್ವಾಮಿ

ನಮಗೆ ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಪಕ್ಷವನ್ನು ಕಟ್ಟಿ ಬೆಳಸಿ ಜನರೊಂದಿಗೆ ಇರುವುದು ಮುಖ್ಯ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

Read Full Story

08:44 PM (IST) Jul 10

ಬೆಂಗಳೂರಿನ ರಾಮೇಶ್ವರಂ ಕೆಫೆ ತಿಂಡಿಗೆ ಮನಸೋತ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ

ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಬೇಟಿ ನೀಡಿ ತಿಂಡಿ ಸವಿದಿದ್ದಾರೆ. ದೋಸೆ, ಫಿಲ್ಟರ್ ಕಾಫಿಗೆ ಜ್ಯೋತಿರಾಧಿತ್ಯ ಸಿಂಧಿಯಾ ಮಾರು ಹೋಗಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡ ಸಚಿವ, ಅತ್ಯುತ್ತಮ ಸ್ಥಳ ಎಂದಿದ್ದಾರೆ.

Read Full Story

08:10 PM (IST) Jul 10

Amrutadhare - ಭೂಮಿಕಾಗೆ ಮಗು ಆದ ಖುಷಿಯಲ್ಲಿ ಹೀಗೆಲ್ಲಾ ಡಾನ್ಸ್​ ಮಾಡೋದಾ ಭಾಗ್ಯಮ್ಮಾ?

ಅಮೃತಧಾರೆಯಲ್ಲಿ ಭೂಮಿಕಾ ಮತ್ತು ಗೌತಮ್​ ಅಮ್ಮ-ಅಪ್ಪ ಆಗಿದ್ದಾರೆ. ಈ ಖುಷಿಯಲ್ಲಿ ಇಲ್ಲಿಯವರೆಗೆ ಮೌನವಾಗಿದ್ದ ಗೌತಮ್​ ಅಮ್ಮ ಭಾಗ್ಯಮ್ಮಾ ಹೇಗೆ ಕುಣಿದು ಕುಪ್ಪಳಿಸಿದ್ದಾಳೆ ನೋಡಿ! ನಟಿಯ ಕಾಲೆಳೆದ ನೆಟ್ಟಿಗರು

 

Read Full Story

07:58 PM (IST) Jul 10

Kodagu - ಸತ್ತವರಿಗೂ ನೆಮ್ಮದಿ ಇಲ್ಲ... ರಸ್ತೆಯಿಲ್ಲದೆ 180 ಮೆಟ್ಟಿಲು ಶವ ಹೊತ್ತು ಹತ್ತಿಳಿದ ಸಂಬಂಧಿಕರು

ಮಂಜಿನ ನಗರಿ ಮಡಿಕೇರಿ ಅಂದ್ರೆ ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುತ್ತೆ. ದೂರದ ಬೆಟ್ಟ ಅಂದರೆ ನುಣ್ಣಗೆ ಎನ್ನುವ ಹಾಗೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಡಿಕೇರಿ ಅಂದರೆ ಸ್ವರ್ಗ ಎನ್ನುತ್ತಾರೆ.

Read Full Story

07:52 PM (IST) Jul 10

Coriander at home - ಪಾಟ್​ನಲ್ಲೇ ಸುಲಭದಲ್ಲಿ ಬೆಳೆಯಿರಿ ಕೊತ್ತಂಬರಿ ಸೊಪ್ಪು - ವಿಡಿಯೋ ಜೊತೆ ಮಾಹಿತಿ ಇಲ್ಲಿದೆ..

ಅತಿ ಸುಲಭದಲ್ಲಿ ಕೊತ್ತಂಬರಿ ಸೊಪ್ಪನ್ನು ಮನೆಯಲ್ಲಿಯೇ ಅದರಲ್ಲಿಯೂ ಕುಂಡದಲ್ಲಿಯೇ ಬೆಳೆಯಬಹುದಾಗಿದೆ. ಅದು ಹೇಗೆ? ವಿಡಿಯೋ ಸಹಿತ ಅದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

 

Read Full Story

07:40 PM (IST) Jul 10

ಕಪಿಲ್ ಶರ್ಮಾ ಕೆನಡಾದ ಕೆಫೆ ಮೇಲೆ ಖಲಿಸ್ತಾನಿ ಉಗ್ರರ ಗುಂಡಿನ ದಾಳಿ, ದೃಶ್ಯ ಸೆರೆ

ಕಾಮಿಡಿಯನ್ ಕಪಿಲ್ ಶರ್ಮಾ ಇತ್ತೀಚೆಗಷ್ಟೇ ಕೆನಡಾದಲ್ಲಿ ಕ್ಯಾಪ್ಸ್ ಕೆಫೆ ಅದ್ಧೂರಿಯಾಗಿ ಒಪನ್ ಮಾಡಿದ್ದರು. ಆದರೆ ಇದೀಗ ನಿಷೇಧಿ ಖಲಿಸ್ತಾನಿ ಉಗ್ರ ಸಂಘಟನೆ ಕಪಿಲ್ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿದೆ.

Read Full Story

07:22 PM (IST) Jul 10

ಚಿರಂಜೀವಿ ಸಿನಿಮಾ ಮಾಡೋಕೆ ದಿಲ್ ಬೇಕು - ನಟ ರಾಜಶೇಖರ್ ಹೊಗಳಿಕೆಗೆ ಟಾಲಿವುಡ್ ಶಾಕ್!

ಮೆಗಾಸ್ಟಾರ್ ಚಿರಂಜೀವಿ ಅವರನ್ನ ಆಗಾಗ ಟೀಕಿಸೋರಲ್ಲಿ ಸೀನಿಯರ್ ನಟ ರಾಜಶೇಖರ್ ಕೂಡ ಒಬ್ಬರು. ರಾಜಶೇಖರ್ ಮತ್ತು ಚಿರಂಜೀವಿ ಕುಟುಂಬಗಳ ನಡುವೆ ಬಹಳ ವರ್ಷಗಳಿಂದಲೂ ಭಿನ್ನಾಭಿಪ್ರಾಯಗಳಿವೆ.

Read Full Story

07:02 PM (IST) Jul 10

ಮಕ್ಕಳ ತಾಯಂದಿರೇ ಗಮನಿಸಿ; ಸ್ವಯಂಚಾಲಿತ ತೊಟ್ಟಿಲು ಮೇಲೆ ಫ್ಲಿಪ್‌ಕಾರ್ಟ್‌ ಭರ್ಜರಿ ಆಫರ್!

ಒಂಟಿ ಕುಟುಂಬಗಳಲ್ಲಿ ಮಗುವಿನ ಆರೈಕೆ ಕಷ್ಟವಾಗಬಹುದು. ಸ್ವಯಂಚಾಲಿತ ತೊಟ್ಟಿಲುಗಳು ಈ ಸಮಸ್ಯೆಗೆ ಪರಿಹಾರವಾಗಿವೆ. ಫ್ಲಿಪ್‌ಕಾರ್ಟ್‌ನಲ್ಲಿ ವಿವಿಧ ಬಗೆಯ ಸ್ವಯಂಚಾಲಿತ ತೊಟ್ಟಿಲುಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ.

Read Full Story

07:00 PM (IST) Jul 10

25ರ ಹರೆಯದ ಖ್ಯಾತ ಟೆನಿಸ್ ಪಟು ರಾಧಿಕಾಗೆ ಗುಂಡಿಕ್ಕಿದ ತಂದೆ, ಕಾರಣ ಬಹಿರಂಗ

ಟೆನಿಸ್ ಪಟು ರಾಧಿಕಾ ಯಾದವ್ ದೇಹಕ್ಕೆ 3 ಗುಂಡುಗಳು ಹೊಕ್ಕಿವೆ. ಸ್ವಂತ ತಂದಯೇ ಮಗಳ ಮೇಲೆ 5 ಸುತ್ತಿನ ಗುಂಡು ಹಾರಿಸಿದ್ದಾರೆ. ರಾಧಿಕಾ ಸ್ಥಳದಲ್ಲೆ ಮೃತಪಟ್ಟರೆ, ತಂದೆ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಾರಣವೂ ಬಹಿರಂಗವಾಗಿದೆ.

 

Read Full Story

06:17 PM (IST) Jul 10

ಯೆಮೆನ್ ಜೈಲಿನಲ್ಲಿ ಜು.16ಕ್ಕೆ ಮಲಯಾಳಿ ನರ್ಸ್‌ಗೆ ಮರಣದಂಡನೆ; ರಾಷ್ಟ್ರಪತಿ ಮಧ್ಯಸ್ಥಿಕೆಗೆ ಪತ್ರ!

ಯೆಮೆನ್‌ನಲ್ಲಿ ಜೈಲಿನಲ್ಲಿರುವ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಜುಲೈ 16 ರಂದು ಶಿಕ್ಷೆ ಜಾರಿಯಾಗುವ ಸಾಧ್ಯತೆಯಿದೆ. ರಾಜಕೀಯ ನಾಯಕರು ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಸೋಮವಾರ ಅರ್ಜಿಯ ವಿಚಾರಣೆ ನಡೆಸಲಿದೆ.
Read Full Story

06:07 PM (IST) Jul 10

ಕಬ್ಬಿಣದ ಸರಳುಗಳ ಮಧ್ಯೆ ಜಾಮ್ ಆಯ್ತು ಕುಡುಕನ ತಲೆ - ವೀಡಿಯೋ ವೈರಲ್

ಮದ್ಯದಂಗಡಿ ಮುಚ್ಚಿದ್ದರಿಂದ ಕಬ್ಬಿಣದ ಸರಳಿನ ಮಧ್ಯೆ ತಲೆ ಹಾಕಿ ಮದ್ಯದ ಬಾಟಲಿ ತೆಗೆಯಲು ಹೋದ ವ್ಯಕ್ತಿಯೊಬ್ಬನ ತಲೆ ಸಿಲುಕಿಕೊಂಡ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಜನರು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
Read Full Story

05:54 PM (IST) Jul 10

ಮನೆ ಕೆಲಸದಾಕೆಯ ಇಂಗ್ಲೀಷ್ ಮೆಸೇಜ್ ನೋಡಿ ಹಲವರಿಗೆ ಅಚ್ಚರಿ, ಸ್ಕ್ರೀನ್‌ಶಾಟ್ ಹಂಚಿದ ಮಾಲಕಿ

ಮನೆಗೆಲಸದಾಕೆ ಇಂಗ್ಲೀಷ್‌ನಲ್ಲಿ ಮನೆ ಮಾಲಕಿಗೆ ಮೆಸೇಜ್ ಮಾಡಿದ್ದಾರೆ. ವ್ಯಾಟ್ಸಾಪ್ ಮೆಸೇಜ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕೆಲಸದಾಕೆಯ ಇಂಗ್ಲೀಷ್ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ.ಅಷ್ಟಕ್ಕೂ ಕೆಲಸದಾಕೆ ಸೆಂಡ್ ಮಾಡಿದ ಮೆಸೇಜ್ ಏನು?

Read Full Story

05:36 PM (IST) Jul 10

ಜೂನ್ 2025ರಲ್ಲಿ ಮಾರಾಟವಾದ ಟಾಪ್-10 ಕಾರುಗಳು ಮಾರಾಟ!

2025ರ ಜೂನ್‌ನಲ್ಲಿ ಭಾರತದ ಆಟೋಮೊಬೈಲ್ ಉದ್ಯಮವು ಮಿಶ್ರ ಫಲಿತಾಂಶಗಳನ್ನು ಕಂಡಿದೆ. ಒಟ್ಟಾರೆ ವಾಹನ ಮಾರಾಟ ಕುಸಿದಿದ್ದರೂ, ಕೆಲವು SUVಗಳು ಗಮನಾರ್ಹ ಏರಿಕೆ ದಾಖಲಿಸಿವೆ. ಮಾರುತಿ ಸುಜುಕಿ ಅಗ್ರಸ್ಥಾನದಲ್ಲಿ ಉಳಿದಿದ್ದರೆ, ಮಹೀಂದ್ರ & ಮಹೀಂದ್ರ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ.
Read Full Story

05:17 PM (IST) Jul 10

ವೃದ್ಧಾಶ್ರಮದಲ್ಲಿ ಚಿಗುರಿದ ಪ್ರೀತಿ - 75ರ ವೃದ್ಧೆಯ ಜೊತೆ 79ರ ವೃದ್ಧನ ಮದುವೆ

ಕೇರಳದ ವೃದ್ಧ ಜೋಡಿಯೊಂದು ವೃದ್ಧಾಶ್ರಮದಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. 79 ವರ್ಷದ ವಿಜಯರಾಘವನ್ ಹಾಗೂ 75 ವರ್ಷದ ಸುಲೋಚನಾ ಅವರು ಕೇರಳದಲ್ಲಿ ಸರ್ಕಾರಿ ಪ್ರಯೋಜಕತ್ವದ ವೃದ್ಧಾಶ್ರಮವೊಂದರಲ್ಲಿ ವಾಸ ಮಾಡುತ್ತಿದ್ದರು

Read Full Story

05:02 PM (IST) Jul 10

ಪೂಜಾ ಹೆಗ್ಡೆಗೆ ತೆಲುಗು ಬಳಿಕ ತಮಿಳಿನಲ್ಲೂ ನೋ ಚಾನ್ಸ್; ಮತ್ತೆ ಕನ್ನಡಕ್ಕೆ ಬರ್ತಾರಾ ಕರಾವಳಿ ಬೆಡಗಿ!

ಕನ್ನಡದಿಂದ ತೆಲುಗು ಚಿತ್ರರಂಗಕ್ಕೆ ಹಾರಿ ಭಾರೀ ಯಶಸ್ಸು ಗಳಿಸಿದ್ದ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಬಹುತೇಕ ಸಿನಿಮಾ ಸೋತು ಮಕಾಡೆ ಮಲಗಿವೆ. ತೆಲುಗಿನಲ್ಲಿ ಆಫರ್ ಕಡಮೆಯಾಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರೆ, ಧನುಷ್ ಸಿನಿಮಾದಿಂದ ಸುಖಾ ಸುಮ್ಮನೆ ಕೈಬಿಡಲಾಗಿದೆಯಂತೆ. ಕನ್ನಡಕ್ಕೆ ಬರ್ತಾರಾ ಕಾದು ನೋಡಬೇಕಿದೆ.

Read Full Story

04:46 PM (IST) Jul 10

ಆತನ ಕೈ ನನ್ನ.... ಮಲೇಷಿಯಾದ ದೇಗುಲದ ಅರ್ಚಕನ ಕರಾಳ ಮುಖ ಬಹಿರಂಗಪಡಿಸಿದ ನಟಿ

ಮಲೇಷಿಯಾದಲ್ಲಿನ ದೇಗುಲದ ಅರ್ಚನಕ ಆಶೀರ್ವಾದ, ದೇವರ ಕೃಪೆ ಎಂದು ಕರೆದೊಯ್ಡು ಏನೆಲ್ಲಾ ಮಾಡಿದ್ದ ಅನ್ನೋದನ್ನು ನಟಿ ಬಹಿರಂಗಪಡಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ಪ್ರಕರಣ ದಾಖಲಾಗಿದೆ.

 

Read Full Story

04:36 PM (IST) Jul 10

ಮನಬಂದಂತೆ ದರ ಹೆಚ್ಚಿಸಿದ ಓಲಾ-ಉಬರ್, ದಬ್ಬಾಳಿಕೆ ವಿರುದ್ಧ ಎಚ್ಚೆತ್ತ ಸಾರಿಗೆ ಇಲಾಖೆ

ಓಲಾ-ಉಬರ್ ಕಂಪನಿಗಳ ಬೇಕಾಬಿಟ್ಟಿ ದರವಸೂಲಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ರಾಜ್ಯ ಸರ್ಕಾರದ ಏಕರೂಪ ದರ ನಿಯಮವನ್ನು ಪಾಲಿಸದ ಕಾರಣ, ತೀವ್ರ ತಪಾಸಣೆಗೆ ಸೂಚನೆ ನೀಡಲಾಗಿದೆ. ಮಿನಿಮಮ್ ದರ ಮೀರಿ ದರ ವಿಧಿಸುತ್ತಿರುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
Read Full Story

04:19 PM (IST) Jul 10

1 ಗಂಟೆ ಸುರಿದ ಜಡಿ ಮಳೆಗೆ ಕರೆಯಾದ ಗುರುಗ್ರಾಮ - ಬಾಯ್ತೆರೆದ ರಸ್ತೆ 40 ಅಡಿ ಆಳಕ್ಕೆ ಬಿದ್ದ ಟ್ರಕ್

ಗುರುಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಕುಸಿದು ಟ್ರಕ್ ಒಂದು ಕಂದಕಕ್ಕೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

Read Full Story

04:07 PM (IST) Jul 10

ಹಾಸನ ಹೃದಯಾಘಾತ ಸಾವು ವರದಿ; ಆಟೋ, ಕ್ಯಾಬ್ ಚಾಲಕರಿಗೇ ಅತ್ಯಧಿಕ ಹಾರ್ಟ್ ಅಟ್ಯಾಕ್!

ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟವರಲ್ಲಿ ಹೆಚ್ಚಿನವರು ಆಟೋ ಮತ್ತು ಕ್ಯಾಬ್ ಚಾಲಕರು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ವಾಯು ಮಾಲಿನ್ಯ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಶಂಕಿಸಿದ್ದಾರೆ. ಈ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
Read Full Story

03:35 PM (IST) Jul 10

ಸರ್ಕಾರಿ ಉದ್ಯೋಗಿ-ಪಿಂಚಣಿದಾರರಿಗೆ ಗುಡ್ ನ್ಯೂಸ್,ಶೀಘ್ರ ಶೇ.30 ರಿಂದ 34ರಷ್ಟು ಸ್ಯಾಲರಿ ಹೆಚ್ಚಳ

ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್. ಕಾರಣ ಸ್ಯಾಲರಿ ಶೇಕಡಾ 30 ರಿಂದ 34 ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. 9ನೇ ವೇತನ ಆಯೋಗ ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ.

 

Read Full Story

03:23 PM (IST) Jul 10

ಭಾರತದ ಟೆನಿಸ್ ಕ್ವೀನ್ ಸಾನಿಯಾ ವಿಂಬಲ್ಡನ್‌ ಹಾದಿ ಮತ್ತು ಸಾಧನೆ

ಸಾನಿಯಾ ವಿಂಬಲ್ಡನ್ ಹೈಲೈಟ್ಸ್: ಟೆನಿಸ್ ಕ್ವೀನ್ ಸಾನಿಯಾ ವಿಂಬಲ್ಡನ್‌ನಲ್ಲಿ ಭಾರತದ ಹೆಸರು ಮಿಂಚುವಂತೆ ಮಾಡಿದ್ದರು. ಅವರ ಕೆರಿಯರ್ ಹೈಲೈಟ್ಸ್ ಇಲ್ಲಿವೆ…

Read Full Story

03:21 PM (IST) Jul 10

ಎರಡು ಡಿಫೆನ್ಸ್‌ ಕಾರಿಡಾರ್‌, ಮೈಸೂರು ದಸರಾದಲ್ಲಿ ಏರ್‌ ಶೋ - ರಕ್ಷಣಾ ಸಚಿವರಿಗೆ ಮನವಿ ಮಾಡಿದ ಸಿಎಂ ಸಿದ್ಧರಾಮಯ್ಯ

ಸೆಪ್ಟೆಂಬರ್ ಅಂತ್ಯದಲ್ಲಿ ಆಚರಿಸಲಾಗುವ ಮೈಸೂರು ದಸರಾದ ಸಮಯದಲ್ಲಿ ಒಂದು ಸಿಗ್ನೇಚರ್ ಕಾರ್ಯಕ್ರಮವಾಗಿ ಮಾರ್ಪಟ್ಟಿರುವ ಏರ್ ಶೋ ನಡೆಸುವ ಬಗ್ಗೆ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

 

Read Full Story

03:16 PM (IST) Jul 10

ಯಾದಗಿರಿಯಲ್ಲಿ ಜಾತಿ ನಿಂದನೆ ಭೀತಿಗೆ ಜೀವ ಕಳಕೊಂಡ ಮಗ, ಪುತ್ರನ ಸಾವಿನಿಂದ ಹೃದಯಾಘಾತಕ್ಕೆ ತಂದೆ ಬಲಿ

ಜಾತಿ ನಿಂದನೆ ಪ್ರಕರಣದ ಭಯದಿಂದ ಮಹೆಬೂಬ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನಿಂದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಡಗೇರದಲ್ಲಿ ನಡೆದ ಈ ಘಟನೆ ತೀವ್ರ ಆಘಾತವನ್ನುಂಟು ಮಾಡಿದೆ.
Read Full Story

03:08 PM (IST) Jul 10

ಲಾರ್ಡ್ಸ್‌ ಟೆಸ್ಟ್‌ - ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಎರಡು ತಂಡದಲ್ಲೂ ಒಂದು ಮೇಜರ್ ಚೇಂಜ್

ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ, ಭಾರತದ ಪರ ಜಸ್ಪ್ರೀತ್ ಬುಮ್ರಾ ಆಡುತ್ತಿದ್ದಾರೆ.
Read Full Story

02:40 PM (IST) Jul 10

ಡೀಲರ್ ತಲುಪಿದ ಮಹೀಂದ್ರ XUV 3XO ಹೊಸ REVX ಕಾರು,ಆಫರ್ -ಬೆಲೆ ಎಷ್ಟು?

ಮಹೀಂದ್ರ ಬಿಡುಗಡೆ ಮಾಡಿರುವ ಹೊಸ ವೇರಿಯೆಂಟ್ XUV 3XO REVX ಕಾರು ಈಗಾಗಲೇ ಡೀಲರ್ ಬಳಿ ತಲುಪಿದೆ. ಕೈಗೆಟುಕುವ ದರದಲ್ಲಿ ಕಾರು ಬಿಡುಗಡೆಯಾಗಿದೆ.ಇದರ ಬೆಲೆ ಪಟ್ಟಿ, ಆಫರ್ ಮಾಹಿತಿ ಇಲ್ಲಿದೆ.

Read Full Story

01:29 PM (IST) Jul 10

ನಾಯಕತ್ವ ಬದಲಾವಣೆ, ಸಂಪುಟ ಸರ್ಜರಿ ಆಗೋದಿಲ್ಲ; 5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ

ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಊಹಾಪೋಹಗಳಿಗೆ ದೆಹಲಿಯಿಂದಲೇ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, 5 ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದಾರೆ. ಸಂಪುಟ ಪುನರ್ ರಚನೆಯೂ ಇಲ್ಲ ಎಂದು ತಿಳಿಸಿದ್ದಾರೆ.
Read Full Story

01:28 PM (IST) Jul 10

ಮನೆಯವರು ಮದುವೆ ಮಾಡಿಸೋ ಭರವಸೆ ನೀಡಿದ್ರೂ ತುಂಗಭದ್ರಾ ಕಾಲುವೆಯಲ್ಲಿ ಪ್ರೇಮಿಗಳ ದುರಂತ ಅಂತ್ಯ!

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರ ವಿರೋಧದಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
Read Full Story

01:24 PM (IST) Jul 10

ಸರ್ಕಾರದ ವಶಕ್ಕೆ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನ!

ಹುಂಡಿ ಹಣ ಕಳವು ಪ್ರಕರಣದ ನಂತರ, ಬೆಂಗಳೂರಿನ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. ಮುಜರಾಯಿ ಇಲಾಖೆಗೆ ದೇವಸ್ಥಾನದ ಆಡಳಿತವನ್ನು ವಹಿಸಲಾಗಿದೆ.
Read Full Story

01:23 PM (IST) Jul 10

RSS ಬಗ್ಗೆ ಮಾತನಾಡುವಾಗ ನಾಲಗೆ ಮೇಲೆ ನಿಗಾ ಇರಲಿ - ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ ಈ ನಾಯಕ ಯಾರು?

ಸಚಿವ ಪ್ರಿಯಾಂಕಾ ಖರ್ಗೆಯವರ ಆರ್‌ಎಸ್‌ಎಸ್‌ ವಿರೋಧಿ ಹೇಳಿಕೆಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್‌ನ ಸ್ವಯಂಸೇವೆ ಮತ್ತು ರಾಷ್ಟ್ರನಿರ್ಮಾಣ ಕಾರ್ಯಗಳನ್ನು ಪ್ರಶ್ನಿಸುವ ಯೋಗ್ಯತೆ ಪ್ರಿಯಾಂಕಾ ಖರ್ಗೆ ಅವರಿಗಿಲ್ಲ ಎಂದು ಟೀಕಿಸಿದ್ದಾರೆ.
Read Full Story

01:13 PM (IST) Jul 10

ತನ್ನ ಮನೆ ಬಾಗಿಲು ಬಡಿಯುವವರ ಮೇಲೆ ಇಟ್ಟಿಗೆ ಎಸೆಯಲು ನಾಯಿಗೆ ತರಬೇತಿ - ವ್ಯಕ್ತಿಯ ಬಂಧನ

ಜನರೊಂದಿಗೆ ಮಾತನಾಡಲು ಇಷ್ಟಪಡದ ಯುವಕನೊಬ್ಬ ತನ್ನ ಮನೆಗೆ ಭೇಟಿ ನೀಡುವವರ ಮೇಲೆ ಇಟ್ಟಿಗೆ ಎಸೆಯಲು ತನ್ನ ನಾಯಿಗೆ ತರಬೇತಿ ನೀಡಿದ್ದಾನೆ. ಈ ಬಗ್ಗೆ ಯುವಕನ ನೆರೆಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಆತನ ಬಂಧನವಾಗಿದೆ.

Read Full Story

01:10 PM (IST) Jul 10

ನೆಲಮಂಗಲ - ನೀರಿನ ಹಂಡೆಯಲ್ಲಿ 38 ದಿನದ ಮಗುವನ್ನು ಮುಳುಗಿಸಿ ಕೊಂದ ತಾಯಿ!

ನೆಲಮಂಗಲದಲ್ಲಿ 27 ವರ್ಷದ ತಾಯಿಯೊಬ್ಬಳು ತನ್ನ 38 ದಿನದ ಮಗುವನ್ನು ಕುದಿಯುವ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಪ್ರಸವಾನಂತರದ ಖಿನ್ನತೆ ಮತ್ತು ಕೌಟುಂಬಿಕ ಸಮಸ್ಯೆಗಳು ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Read Full Story

12:38 PM (IST) Jul 10

ರಾಜ್ಯ ಸರ್ಕಾರದಿಂದ ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯ - ಬಿಬಿಎಂಪಿ ₹2.80 ಕೋಟಿ ವೆಚ್ಚದಲ್ಲಿ ಯೋಜನೆ

ಬೆಂಗಳೂರಿನ ಬೀದಿ ನಾಯಿಗಳಿಗೆ ದಿನನಿತ್ಯ ಚಿಕನ್ ಬಿರಿಯಾನಿ ಒದಗಿಸಲು ಬಿಬಿಎಂಪಿ 2.80 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದೆ. 5000 ನಾಯಿಗಳಿಗೆ 367 ಗ್ರಾಂ ಚಿಕನ್ ರೈಸ್ ನೀಡಲಾಗುವ ಈ ಯೋಜನೆ ಚರ್ಚೆಗೆ ಗ್ರಾಸವಾಗಿದೆ.
Read Full Story

12:29 PM (IST) Jul 10

ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕ ಶಾಕ್! SSLC ಪರೀಕ್ಷೆಯಲ್ಲಿ ಅಂಕ ಕಡಿತ

ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಶುಲ್ಕದಲ್ಲಿ ಭಾರಿ ಏರಿಕೆಯಾಗಿದ್ದು, ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. SSLC ಪರೀಕ್ಷೆಯ ಪ್ರಥಮ ಭಾಷಾ ವಿಷಯಗಳ ಅಂಕಗಳನ್ನು ಕಡಿತಗೊಳಿಸುವ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ.
Read Full Story

12:20 PM (IST) Jul 10

ಮೀನುಗಾರರ ಬಹುದಿನಗಳ ಬೇಡಿಕೆ ಪೂರ್ಣ, ಮುಂದಿನ ಋತುವಿನ ವೇಳೆಗೆ ರಾಜ್ಯದ ಮೊದಲ ಸೀ ಆಂಬ್ಯುಲೆನ್ಸ್ ಕಾರ್ಯಾರಂಭ

ಕರ್ನಾಟಕದ ಮೊದಲ ಸೀ ಆಂಬ್ಯುಲೆನ್ಸ್ 2026 ರ ಮೀನುಗಾರಿಕೆ ಋತುವಿನಲ್ಲಿ ಕಾರ್ಯಾರಂಭ ಮಾಡಲಿದೆ. 7.85 ಕೋಟಿ ರೂ. ವೆಚ್ಚದ ಈ ಆಂಬ್ಯುಲೆನ್ಸ್ ಮೀನುಗಾರರಿಗೆ ತುರ್ತು ವೈದ್ಯಕೀಯ ನೆರವು ನೀಡಲಿದೆ.
Read Full Story

More Trending News