LIVE NOW
Published : Mar 02, 2026, 06:34 AM ISTUpdated : Mar 02, 2026, 09:38 AM IST

Karnataka Latest News Live: ತೆಲುಗು ನಿರ್ದೇಶಕನ ಕನ್ನಡ ಸಿನಿಮಾದಲ್ಲಿ ಸುದೀಪ್; ಸದ್ದಿಲ್ಲದೆ ಮತ್ತೊಂದು ಸಿನಿಮಾ ಶುರು?

ಸಾರಾಂಶ

ಅಮೆರಿಕ-ಇಸ್ರೇಲ್‌ ಜಂಟಿ ದಾಳಿಯಲ್ಲಿ ಇರಾನ್‌ ಪರಮೋಚ್ಚ ನಾಯಕ ಅಯತೋಲ್ಲ ಅಲಿ ಖಮೇನಿ ಸಾವನ್ನಪ್ಪಿರುವ ಸುದ್ದಿ ಕೇಳಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ‘ಬೇಬಿ ಇರಾನ್‌’ ಅಲೀಪುರ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Bigg Boss Kiccha Sudeep

09:38 AM (IST) Mar 02

ತೆಲುಗು ನಿರ್ದೇಶಕನ ಕನ್ನಡ ಸಿನಿಮಾದಲ್ಲಿ ಸುದೀಪ್; ಸದ್ದಿಲ್ಲದೆ ಮತ್ತೊಂದು ಸಿನಿಮಾ ಶುರು?

ನಟ ಸುದೀಪ್ ಅವರು ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸಹಾಯಕ ನಿರ್ದೇಶಕರೊಬ್ಬರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದು, 'ಬಿಲ್ಲ ರಂಗ ಬಾಷ' ಚಿತ್ರಕ್ಕೂ ಮುನ್ನವೇ ಈ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.

Read Full Story

09:27 AM (IST) Mar 02

ಪಂಕಾ ಮಸೀದಿ, ಮುಸ್ಲಿಮರಿಗೆ ಸೇರಿದ ಅಂಗಡಿಗಳು ಕಾಣದಂತೆ ಬೃಹತ್ ಪರದೆ ಹಾಕಿ RSS ಶೋಭಾಯಾತ್ರೆ

ಇತ್ತೀಚಿನ ಉದ್ವಿಗ್ನತೆಯ ನಂತರ ಬಾಗಲಕೋಟೆಯಲ್ಲಿ ಆರ್‌ಎಸ್‌ಎಸ್‌ ಬೃಹತ್ ಕೇಸರಿ ಶಕ್ತಿ ಪ್ರದರ್ಶನ ನಡೆಸಿತು. ಪಂಕಾ ಮಸೀದಿ ಮುಂದೆ ಬೃಹತ್ ಪರದೆ ಹಾಕಿ, ಬಿಗಿ ಪೊಲೀಸ್ ಭದ್ರತೆಯೊಂದಿಗೆ ನಡೆದ ಶೋಭಾಯಾತ್ರೆಯು ಯಾವುದೇ ಅಹಿತಕರ ಘಟನೆಯಿಲ್ಲದೆ ಯಶಸ್ವಿಯಾಗಿ ಜರುಗಿತು. 

Read Full Story

09:09 AM (IST) Mar 02

Red Chutney - ಮಸಾಲೆ ದೋಸೆ ಮೇಲೆ ಸವರುವ ಕೆಂಪು ಚಟ್ನಿ ಮಾಡೋದು ಹೇಗೆ? ಇದು ನಾರ್ಮಲ್‌ ಚಟ್ನಿ ಥರ ಅಲ್ಲ!

Red Chutney For Masala Dosa: ಮಸಾಲದೋಸೆ ಮೇಲೆ ಸವರುವ ಚಟ್ನಿ ತುಂಬ ಚೆನ್ನಾಗಿ ಇರುವುದು. ನಾರ್ಮಲ್‌ ಚಟ್ನಿ ಮಾಡೋ ಥರ ಇದನ್ನು ಮಾಡೋದೆಲ್ಲ. ಇಲ್ಲೊಂದು ಸಿಂಪಲ್‌ ಟ್ರಿಕ್‌ ಇದೆ. ಹಾಗಾದರೆ ಏನೇನು ಹಾಕಬೇಕು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

08:40 AM (IST) Mar 02

ಕುಕ್ಕರ್‌ ಅನ್ನ ಮುದ್ದೆ ಮುದ್ದೆ ಆಗ್ತಿದ್ಯಾ? ಮಂಡಕ್ಕಿ ಥರ ಉದುರು ಉದುರು ಆಗಲು ಈ ಪದಾರ್ಥ ಹಾಕ್ಬೇಕು!

Cooker rice recipes indian style: ಕುಕ್ಕರ್‌ನಲ್ಲಿ ಅನ್ನ ಮಾಡೋದು ಸಹಜ. ಇದು ಬಹಳ ಬೇಗ ಕೂಡ ಆಗುವುದು. ಆದರೆ ಕುಕ್ಕರ್‌ ಅನ್ನ ಮುದ್ದೆ ಮುದ್ದೆ ಆಗುತ್ತೆ ಎಂದು ಅನೇಕರು ಬೇಸರ ಮಾಡಿಕೊಳ್ಳೋದುಂಟು. ಇದಕ್ಕೂ ಪರಿಹಾರ ಇದೆ.

 

Read Full Story

08:38 AM (IST) Mar 02

ಕಲರ್ಸ್ ಜನಮೆಚ್ಚಿದ ಮಂಥರೆ ಇದೀಗ ಜೀ ಕನ್ನಡ ವಾಹಿನಿಯ ಲಕ್ಷ್ಮೀನಿವಾಸ ಸೀರಿಯಲ್‌ಗೆ ಖಳನಾಯಕಿ

ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ನೀಲು ಪಾತ್ರಕ್ಕೆ ಬದಲಾವಣೆಯಾಗಿದೆ. ಗರ್ಭಿಣಿ ಮಾನಸ ಮನೋಹರ್ ಪಾತ್ರದಿಂದ ಹೊರನಡೆದಿದ್ದು, ಅವರ ಜಾಗಕ್ಕೆ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ಬಂದಿದ್ದಾರೆ.

Read Full Story

08:00 AM (IST) Mar 02

ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!

ಬೇಸಿಗೆಯಲ್ಲಿ ಹೆಚ್ಚಾಗುವ ಪಾದಗಳ ಉರಿ ಸಮಸ್ಯೆಗೆ ಹಾರ್ಮೋನ್ ಬದಲಾವಣೆ ಮತ್ತು ವಿಟಮಿನ್ ಕೊರತೆ ಕಾರಣವಾಗಿರಬಹುದು. ಈ ಲೇಖನದಲ್ಲಿ ಪುದೀನಾ ಎಣ್ಣೆ, ಅರಿಶಿನ, ವಿನೇಗರ್ ಬಳಕೆ ಹಾಗೂ ಕಾಲುಗಳನ್ನು ಎತ್ತರದಲ್ಲಿಡುವಂತಹ ಐದು ಸರಳ ಮನೆಮದ್ದುಗಳನ್ನು ವಿವರಿಸಲಾಗಿದೆ.
Read Full Story

07:56 AM (IST) Mar 02

ಖಾಸಗಿ ಶಾಲಾ ಮಾನ್ಯತೆ ಮಾನದಂಡ ಇನ್ನಷ್ಟು ಸರಳ! ಭೂ ಪರಿವರ್ತನೆಗೆ ವಿನಾಯಿತಿ

ರಾಜ್ಯದಲ್ಲಿ ಖಾಸಗಿ ಶಾಲೆಗಳ ಮಾನ್ಯತೆ ಮತ್ತು ನವೀಕರಣಕ್ಕೆ ಇರುವ ಭೂ ಪರಿವರ್ತನೆ, ರಸ್ತೆ ಸಂಪರ್ಕದಂತಹ ಕಠಿಣ ನಿಯಮಗಳನ್ನು ಸರಳಗೊಳಿಸಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆಯಾಗದಂತೆ, ಭ್ರಷ್ಟಾಚಾರ ತಡೆಯಲು ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕ ಜಾರಿಗೊಳಿಸಲಾಗುತ್ತಿದೆ.

Read Full Story

07:32 AM (IST) Mar 02

ಬೆಂಗಳೂರು ವಿಲ್ಲಾದಲ್ಲಿ ವಿದ್ಯಾರ್ಥಿನಿ ರೇ*ಪ್‌ ಕೇಸ್ - ರಾಜಕಾರಣಿ ಪುತ್ರ ಸೇರಿ ಐವರು ಅರೆಸ್ಟ್! ಸಭ್ಯರಂತೆ ವರ್ತಿಸಿ ಮೋಸ

ಬೆಂಗಳೂರಿನಲ್ಲಿ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದಾವಣಗೆರೆ ಪಾಲಿಕೆಯ ಮಾಜಿ ಸದಸ್ಯನ ಪುತ್ರ ಸೇರಿದಂತೆ ಒಟ್ಟು 5 ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.  

Read Full Story

07:25 AM (IST) Mar 02

ದತ್ತು ನೀಡಿದ ತಾಯಿಗೂ ಜೀವನಾಂಶ ಕಡ್ಡಾಯ

ತನ್ನನ್ನು ದತ್ತು ನೀಡಿದ್ದನ್ನೇ ಮುಂದಿಟ್ಟುಕೊಂಡು ಜೀವನದ ಸಂಧ್ಯಾಕಾಲದಲ್ಲಿರುವ ಹೆತ್ತ ತಾಯಿಗೆ ಜೀವನಾಂಶ ನೀಡಲು ನಿರಾಕರಿಸಿದ್ದ ಮಗನಿಗೆ ಹೈಕೋರ್ಟ್‌ ಛೀಮಾರಿ ಹಾಕಿದೆ. ದತ್ತು ನೀಡಿದ ಮಾತ್ರಕ್ಕೆ ಹೆತ್ತವಳಿಗೆ ಮಗನಾಗುವುದಿಲ್ಲವೇ? ಪ್ರಶ್ನಿಸಿ ದೆ

Read Full Story

07:23 AM (IST) Mar 02

90s ಕಿಡ್ಸ್ ಹೃದಯ ಹಿಂಡಿದ ಕನ್ನಡದ ಸಿನಿಮಾಗಳು; Gen Zಗಳು ಮಿಸ್ ಮಾಡದೇ ನೋಡ್ಲೇಬೇಕು!

90ರ ದಶಕದ ಕೆಲವು ಕನ್ನಡ ಸಿನಿಮಾಗಳು ತಮ್ಮ ದುರಂತ ಅಂತ್ಯದಿಂದ ಪ್ರೇಕ್ಷಕರ ಹೃದಯವನ್ನು ಘಾಸಿಗೊಳಿಸಿದ್ದವು. ಈ ಸಿನಿಮಾಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದ್ದು, ಇಂದಿನ ಯುವ ಪೀಳಿಗೆಯೂ ನೋಡಲೇಬೇಕಾದ ಚಿತ್ರಗಳಾಗಿವೆ.

Read Full Story

07:15 AM (IST) Mar 02

ಖಮೇನಿ ಹತ್ಯೆಗೆ ಶನಿವಾರ ಮುಹೂರ್ತ ಇಟ್ಟಿದ್ದೇಕೆ ?

ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕನನ್ನು ಕುಳಿತ ಸ್ಥಳದಲ್ಲೇ ಹತ್ಯೆಗೈದ ಅಮೆರಿಕ- ಇಸ್ರೇಲ್‌ ಸೇನೆ ಇದಕ್ಕಾಗಿ ಹಲವು ತಿಂಗಳಿನಿಂದ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಏಕಕಾಲಕ್ಕೆ 30 ಬಾಂಬ್‌ ಬಳಸಿ ಹತ್ತಾರು ಜನರನ್ನು ಒಂದೇ ಏಟಿಗೆ ಮುಗಿಸಲಾಯಿತು

Read Full Story

07:04 AM (IST) Mar 02

ಇರಾನ್‌ ಮೇಲೇಕೆ ಎಲ್ಲರ ಕಣ್ಣು? ಇರಾನ್‌ ವಶ ಅಮೆರಿಕದ ಪಾಲಿಗೂ ಕಷ್ಟ ಕಷ್ಟ

ಇರಾನ್‌ ಇರುವುದು ಏಷ್ಯಾ, ಯುರೋಪ್‌ ಮತ್ತು ಮಧ್ಯಪ್ರಾಚ್ಯದ ನಡುವಲ್ಲಿ. ಆದ್ದರಿಂದ, ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿದರೆ, ಸಹಜವಾಗಿ ಜಾಗತಿಕ ವ್ಯಾಪಾರ ಮಾರ್ಗದ ನಿಯಂತ್ರಣ ಹಾಗೂ ವ್ಯೂಹಾತ್ಮಕ ಲಾಭಗಳನ್ನು ಪಡೆಯಬಹುದು.

Read Full Story

06:53 AM (IST) Mar 02

ಬಾಗಲಕೋಟೆ - ಹೋಳಿಯಾಟಕ್ಕೆ ಬರಲಿದ್ದಾರೆ ರಷ್ಯನ್ ಬೆಡಗಿ ಮೀನಾ! ಭಾರತದ ಆರಿಯಾ, ಅಕ್ಷಯ್

ಎಸ್‌ಆರ್‌ಎ ಮೈದಾನದಲ್ಲಿ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಮಹಿಳೆಯರಿಗಾಗಿ 'ರಂಗ ಸಂಭ್ರಮ' ಹೋಳಿಯಾಚರಣೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಷ್ಯಾದ ಖ್ಯಾತ ಡಿಜೆ ಮೀನಾ ಹಾಗೂ ಭಾರತದ ಇತರೆ ಕಲಾವಿದರು ಆಗಮಿಸಲಿದ್ದು, ಮಹಿಳೆಯರಿಗೆ ಪ್ರತ್ಯೇಕ ವೇದಿಕೆಯಲ್ಲಿ ಆಚರಣೆ ನಡೆಯಲಿದೆ.

Read Full Story

06:42 AM (IST) Mar 02

ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ - ಎಂ.ಬಿ.ಪಾಟೀಲ್‌

ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಬಡವರ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಗಳಾಗಿದ್ದು, ಶ್ರೀಮಂತರು ಇವುಗಳ ಪ್ರಯೋಜನ ಪಡೆಯುವುದನ್ನು ಸ್ವಯಂಪ್ರೇರಿತವಾಗಿ ಬಿಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಕರೆ ನೀಡಿದ್ದಾರೆ.

Read Full Story

More Trending News