Sep 1, 2018, 2:47 PM IST
ಬೆಂಗಳೂರು(ಸೆ.1): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಸಂಗತಿ ಹೊರಬಿದ್ದಿದೆ. ಗೌರಿ ಲಂಕೇಶ್ ಅವರಿಗೆ ಗುಂಡು ಹರಿಸಿದ ಆರೋಪ ಹೊತ್ತಿರುವ ಪರಶುರಾಮ್ ವಾಗ್ಮೋರೆ, ಒಂದು ವೇಳೆ ಗೌರಿಗೆ ಗುಂಡು ಹಾರಿಸದೇ ಹೋದರೆ ಗೌರಿ ಅವರನ್ನು ಕೊಲ್ಲಲು ಮತ್ತೊಂದು ತಂಡ ಕಾದು ಕುಳಿತಿತ್ತು ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಹಂತಕ ಪರಶುರಾಮ್ ಟೀಂ ಜೊತೆ ಇನ್ನೊಂದು ಟೀಂ ಕೂಡಾ ಅಂದು ರಾಜರಾಜೇಶ್ವರಿನಗರಕ್ಕೆ ಎಂಟ್ರಿ ಕೊಟ್ಟಿದ್ದು, ಮತ್ತೊಂದು ಬೈಕ್ ನಲ್ಲಿ ಇನ್ನಿಬ್ಬರು ಆಗಂತುಕರು ಅಲ್ಲಿಗೆ ಬಂದು ಕಾಯುತ್ತಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಒಂದು ವೇಳೆ ಪರುಶುರಾಮ್ ವಾಗ್ಮೋರೆ ಮಿಸ್ ಮಾಡಿದ್ರೂ, ಗೌರಿ ಅವರನ್ನು ಕೊಲ್ಲಲು ಮತ್ತೊಂದು ತಂಡ ಸಿದ್ಧವಾಗಿತ್ತು ಎನ್ನಲಾಗಿದ್ದು, ನಾಲ್ಕೂ ವಿಚಾರವಾದಿಗಳ ಹತ್ಯೆಗಳ ಹಿಂದೆ ಇದೇ ತಂಡ ಕೆಲಸ ಮಾಡಿದೆ ಎಂಬ ವಿಚಾರ ಬಹಿರಂಗವಾಗಿದೆ. ನಾಲ್ಕೂ ಹತ್ಯೆಗಳ ಹಿಂದಿನ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಎನ್ನಲಾಗಿದ್ದು, ಸ್ಥಳೀಯ ಯುವಕರನ್ನು ಬಳಕೆ ಮಾಡಿಕೊಂಡು ಕೊಲೆ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಹೊರ ಬಿದ್ದಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...