ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧಾರವಾಡ ಡಿವೈಎಸ್ಪಿ!

Dec 5, 2018, 4:48 PM IST

ಚಿತ್ರದುರ್ಗದ ಮುರುಘಾ ಮಠದಲ್ಲಿ ಧಾರವಾಡ  ಮಹಿಳಾ ಡಿವೈಎಸ್ಪಿ ಪ್ರಿಯದರ್ಶಿನಿ ತೋಟಗಾರಿಕೆ ಕಾಲೇಜು ಪ್ರಾಧ್ಯಾಪಕ ಡಾ ಸಂತೋಷ್ ಜೊತೆ  ಸರಳವಾಗಿ ವಿವಾಹವಾಗುವ ಮೂಲಕ  ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಉನ್ನತ ಹುದ್ದೆಯಲ್ಲಿದ್ದರೂ ಮುರುಘಾ ಶ್ರೀಗಳ ನೇತೃತ್ವದಲ್ಲಿ ಮುರುಘಾ ಮಠದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಮೂಲಕ ಈ ಜೋಡಿ ಹಲವರಿಗೆ ಮಾದರಿಯಾಗಿದೆ.