ಮುಂಬೈ ತೊರೆದು ಪುದುಚೇರಿ ಸೇರಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ!

Published : Aug 20, 2018, 04:50 PM ISTUpdated : Sep 09, 2018, 10:07 PM IST
ಮುಂಬೈ ತೊರೆದು ಪುದುಚೇರಿ ಸೇರಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ!

ಸಾರಾಂಶ

ಆತ ಟೀಂ ಇಂಡಿಯಾ ಪರ ಮಿಂಚಿದ ಕ್ರಿಕೆಟಿಗ, ಮುಂಬೈ ರಣಜಿ ತಂಡವನ್ನ ಮುನ್ನಡೆಸಿದ ನಾಯಕ. ಆಲ್ರೌಂಡರ್ ಕ್ರಿಕೆಟಿಗನಾಗಿ ಅದ್ಬುತ ಪ್ರದರ್ಶನ ನೀಡಿದ ಸ್ಟಾರ್ ಕ್ರಿಕೆಟಿಗ ಇದೀಗ 20 ವರ್ಷಗಳಿಂದ ಆಡುತ್ತಿದ್ದ ಮುಂಬೈ ತಂಡವನ್ನ ತೊರೆದು ಹೊಸ ತಂಡ ಸೇರಿಕೊಳ್ಳುತ್ತಿದ್ದಾರೆ. ಹಾಗಾದರೆ ಹೊಸ ತಂಡ ಸೇರಿಕೊಳ್ಳುತ್ತಿರುವ ಆ ಕ್ರಿಕೆಟಿಗ ಯಾರು? ಇಲ್ಲಿದೆ.

ಮುಂಬೈ(ಆ.20): ಮುಂಬೈ ರಣಜಿ ಕ್ರಿಕೆಟ್ ತಂಡದ ಆಲ್ರೌಂಡರ್ ಆಗಿ, ನಾಯಕನಾಗಿ ಅದ್ಬುತ ಕೊಡುಗೆ ನೀಡಿದ ಕ್ರಿಕೆಟಿಗ. ಟೀಂ ಇಂಡಿಯಾ ಪರ ಏಕದಿನ ಪಂದ್ಯ ಆಡಿದ ಮುಂಬೈ ಮೂಲದ ಅಭಿಷೇಕ್ ನಾಯರ್ ಇದೀಗ ಮುಂಬೈ ತಂಡ ತೊರೆದು ನೂತನ ಪುದುಚೇರಿ ತಂಡ ಸೇರಿಕೊಂಡಿದ್ದಾರೆ. 

ಈ ಬಾರಿಯ ರಣಜಿ ಟೂರ್ನಿಗೆ ಪುದುಚೇರಿ ತಂಡ ಹೊಸದಾಗಿ ಸೇರ್ಪಡೆಗೊಂಡಿದೆ. ಮುಂಬೈ ತಂಡದಲ್ಲಿ ಅವಕಾಶದ ಕೊರತೆಯಿಂದ ಅಭಿಷೇಕ್ ನಾಯರ್ ಇದೀಗ ಪುದುಚೇರಿ  ತಂಡದ ಪರ ಕಣಕ್ಕಿಳಿಯಲಿದ್ದಾರೆ.

ವಿಶೇಷ ಅಂದರೆ ಅಭಿಷೇಕ್ ನಾಯರ್ 99 ಪ್ರಥಮ ದರ್ಜೆ ಪಂದ್ಯಗಳನ್ನ ಆಡಿದ್ದಾರೆ. ಇದೀಗ ಪುದುಚೇರಿ ಪರ ಕಣಕ್ಕಿಳಿಯಲಿರುವ ಅಭಿಷೇಕ್ ನಾಯರ್ 100ನೇ ಪಂದ್ಯ ಆಡುತ್ತಿರುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 

ಮುಂಬೈ ತೊರೆದು ಪುದುಚೇರಿ ತಂಡ ಸೇರಿಕೊಳ್ಳುತ್ತಿರುವ ಅಭಿಷೇಕ್ ನಾಯರ್ ಟ್ವಿಟರ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂಬೈ ತಂಡದಲ್ಲಿ ಸಹಕರಿಸಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

 

 

ಅಭಿಷೇಕ್ ನಾಯರ್ ಟ್ವೀಟ್‌ಗೆ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.  ನೂತನ ತಂಡ ಸೇರಿಕೊಳ್ಳುತ್ತಿರುವ ನಾಯರ್‌ಗೆ ಶುಭಾಶಯ ಹೇಳಿದ್ದಾರೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

RCB vs CSK: 60 ಸೆಕೆಂಡ್‌ನಲ್ಲೇ ಆರ್‌ಸಿಬಿ-ಚೆನ್ನೈ ಟಿಕೆಟ್‌ ಖಾಲಿ!
IPL 2026: ಸೋಲಿನ ದವಡೆಯಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್; ಲಖನೌಗೆ ತವರಿನಲ್ಲೇ ಮರ್ಮಾಘಾತ!