ಕಾವೇರಿ ಮಧ್ಯಸ್ತಿಕೆಗೆ ಪ್ರಧಾನಿ ಯಾಕೆ ಮೌನ ?

Published : Sep 19, 2016, 03:50 PM ISTUpdated : Apr 11, 2018, 01:11 PM IST
ಕಾವೇರಿ ಮಧ್ಯಸ್ತಿಕೆಗೆ ಪ್ರಧಾನಿ ಯಾಕೆ ಮೌನ ?

ಸಾರಾಂಶ

ಬೆಂಗಳೂರು (ಸೆ.19): ಕಳೆದ ಕೆಲ ದಿನಗಳಿಂದ ಕಾವೇರಿ ಪ್ರತಿಭಟನೆ, ಬಂದ್  ನಡೆಯುತ್ತಿದೆ. ಮಳೆ ಇಲ್ಲದೇ ಕುಡಿಯಲು, ಕೃಷಿಗೆ ನೀರಿಲ್ಲದೇ ಕರ್ನಾಟಕದ ಜನರು ಪರದಾಡುತ್ತಿದ್ದಾರೆ. ಇದಕ್ಕೆ ಬರೆ ಎಳೆದಂತೆ ಸುಪ್ರೀಂ ತೀರ್ಪು ಬಂದಿದೆ. ಸಾಕಷ್ಟು ನಿರೀಕ್ಷೆಯಿರಿಸಿದ್ದ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶ ಕೂಡ ಇಂದು ಹೊರ ಬಿದ್ದಿದೆ. ಇದರಲ್ಲೂ ಕೂಡ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇಷ್ಟಕ್ಕೆಲ್ಲಾ ಕಾರಣವಾಗಿರುವ ಕಾವೇರಿ ಜಲವಿವಾದದ ಹಿನ್ನೆಲೆಯನ್ನು ಹಾಗೂ ಈ ಬಗ್ಗೆ ಪ್ರಧಾನಿ ಮೋದಿ ಮೌನದ ಹಿಂದಿರುವ ಕಾರಣವನ್ನು ಒಮ್ಮೆ ನೋಡೋಣ.

ಮೊದಲ ಮಧ್ಯಸ್ಥಿಕೆ

ಕಾವೇರಿ ಮೊದಲ ಮಧ್ಯಸ್ಥಿಕೆ ರಾಜಕೀಯ 1996ಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ ನಡೆಯಿತು. ಪ್ರಧಾನಿ ನರಸಿಂಹರಾವ್​ ಸಮ್ಮುಖದಲ್ಲಿ 6 ಟಿಎಂಸಿ ನೀರು ಬಿಡುವಂತೆ  ಕಾವೇರಿ ಮೇಲುಸ್ತುವಾರಿ ಸಮಿತಿ ರಾಜ್ಯ ಸರ್ಕಾರ ಕ್ಕೆ ಸೂಚನೆ ನೀಡಿತ್ತು . ಇದಕ್ಕೆ ರಾಜ್ಯ ಸರ್ಕಾರವೂ ಒಪ್ಪಿತ್ತು.

2ನೇ ಮಧ್ಯಸ್ಥಿಕೆ

2ನೇ ಮಧ್ಯಸ್ಥಿಕೆ  ರಾಜಕೀಯ 2002ರಲ್ಲಿ ಎಸ್​.ಎಂ.ಕೃಷ್ಣ ಸಿಎಂ ಆಗಿದ್ದಾಗ ನಡೆದಿತ್ತು. ಸುಪ್ರೀಂ ಕೋರ್ಟ್​​ 1.25 ಟಿಎಂಸಿ ನೀರು ಬಿಡಲು ಸೂಚಿಸಿತ್ತು. ಪ್ರಧಾನಿ ವಾಜಪೇಯಿ ನೇತೃತ್ವದಲ್ಲಿ  ಸಂಧಾನ ಮಾತುಕತೆಯಾಯಿತು. ಇದಕ್ಕೆ  ಉಭಯ ರಾಜ್ಯಗಳು ಒಪ್ಪಲಿಲ್ಲ.  ಕರ್ನಾಟಕದಲ್ಲಿ ಪ್ರತಿಭಟನೆ, ಘರ್ಷಣೆ ನಡೆಯಿತು.

3ನೇ ಮಧ್ಯಸ್ಥಿಕೆ

3ನೇ ಮಧ್ಯಸ್ಥಿಕೆ  ರಾಜಕೀಯ ನಡೆದಿದ್ದು 2012ರಲ್ಲಿ. ಪ್ರಧಾನಿ ಮನಮೋಹನ್ ಸಿಂಗ್​​ ಸಮ್ಮುಖದಲ್ಲಿ ರಾಜ್ಯದ ಸಿಎಂ ಜಗದೀಶ್ ಶೆಟ್ಟರ್​-ತಮಿಳುನಾಡು ಸಿಎಂ ಜಯಲಲಿತಾ ಭಾಗಿಯಾಗಿದ್ದರು.

ಸುಪ್ರೀಂ ಕೋರ್ಟ್ 10000 ಕ್ಯುಸೆಕ್ ನೀರು ಬಿಡುಗಡೆಗೆ ಸೂಚಿಸಿತ್ತು. ಪ್ರಧಾನಿ ಸಂಧಾನದಲ್ಲಿ ನಿತ್ಯ 9000 ಕ್ಯುಸೆಕ್ ನೀರು ಬಿಡಲು ಸಿಎಂ ಜಗದೀಶ್ ಶೆಟ್ಟರ್​​ ಒಪ್ಪಿದ್ದರು.

ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ಮೌನ - ಯಾಕೆ?   

1. ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಲು ಇದುವರೆಗೂ ಸೂಚಿಸಿಲ್ಲ. ಹೀಗಾಗಿ ಹಿಂಜರಿಕೆ ಇರಬಹುದು.

2. ಮಧ್ಯಸ್ಥಿಕೆ ವಹಿಸಿದ್ರೆ 2 ರಾಜ್ಯಗಳ ಪೈಕಿ ಒಂದು ರಾಜ್ಯಕ್ಕೆ ಅತೃಪ್ತಿ ಆಗಬಹುದು. ಇದು ಮುಂದೆ ರಾಜಕೀಯ ಮುಳುಗು ಆಗುವ ಭೀತಿ ಕಾಡುತ್ತಿರಬಹುದು.

3. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ​ ಮುಗಿಸಲು ಇದೊಂದು ಒಳ್ಳೆಯ ಅವಕಾಶ ಇರಬಹುದು.

4. ಸುಪ್ರೀಂ ಕೋರ್ಟ್ ಅಂತಿಮ ಆದೇಶಕ್ಕೆ ಕಾಯುತ್ತಿರಬಹುದು. ಅಂತಿಮ ಆದೇಶ ನೋಡಿಕೊಂಡು ನಿರ್ಧರಿಸುವ ಸಾಧ್ಯತೆಯೂ ಇರಬಹುದು.

5. ಈ ಹಿಂದೆ ಪ್ರಧಾನಿಗಳಾಗಿದ್ದವರು ಮಧ್ಯಸ್ಥಿಕೆ ವಹಿಸಿ ಮುಖಂಭಂಗ ಅನುಭವಿಸಿದ ಪ್ರಸಂಗಗಳೂ ಕಾರಣ ಇರಬಹುದು.

6. ಒಂದೊಮ್ಮೆ ಮಧ್ಯಸ್ಥಿಕೆ ವಹಿಸಿದ್ರೂ ತಮ್ಮ ಸಲಹೆ-ಸೂಚನೆಗಳನ್ನು ಎರಡೂ ರಾಜ್ಯಗಳೂ ಒಪ್ಪದಿರಬಹುದೆಂಬ ಲೆಕ್ಕಾಚಾರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!