ಸೇತುವೆ ಇಲ್ಲದೇ ಪರದಾಡ್ತಾ ಇದ್ದಾರೆ ಕಡದರಗಟ್ಟಿ ಗ್ರಾಮದ ಜನ; ಯಾವಾಗ ನಿರ್ಮಿಸ್ತೀರಿ ಶಾಸಕರೇ?

Jul 4, 2018, 2:14 PM IST

ಇಲ್ಲಿನ ಜನರು ಸಾಮಾನು ತರಬೇಕೆಂದರೆ ಈ ನದಿಯನ್ನು ದಾಟಿಕೊಂಡು ಬರಬೇಕು. ಶಾಲೆಗೆ ಹೋಗುವ ಮಕ್ಕಳು ನದಿಯನ್ನು ದಾಟಿಕೊಂಡೇ ಹೋಗಬೇಕು. ತುಂಬಿದ ನದಿಯನ್ನು ದಾಟುವಾಗ ಚೂರು ಹೆಚ್ಚು ಕಡಿಮೆಯಾದರೂ ಜೀವಕ್ಕೆ ಬರುತ್ತೆ ಕುತ್ತ. ಇದು ರಾಯಚೂರು ಜಿಲ್ಲೆಯ ಕಡದರಗಟ್ಟಿ ಗ್ರಾಮದ ಜನರ ಗೋಳಿನ ಕಥೆ. ಶಾಸಕರು, ಅಧಿಕಾರಿಗಳು, ಸಂಬಂಧಪಟ್ಟವರು ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ.