ಹೈದ್ರಾಬಾದ್‌ನಲ್ಲಿಂದು ನಂದಮೂರಿ ಹರಿಕೃಷ್ಣ ಅಂತ್ಯಸಂಸ್ಕಾರ

Aug 30, 2018, 11:11 AM IST

ಬುಧವಾರ ಭೀಕರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ನಂದಮೂರಿ ಹರಿಕೃಷ್ಣರ ಅಂತ್ಯಕ್ರಿಯೆ ಇಂದು ಹೈದ್ರಾಬಾದ್‌ನಲ್ಲಿ ನಡೆಯಲಿದೆ.  ನಲ್ಗೊಂಡಾ ಹೆದ್ದಾರಿಯಲ್ಲಿ ಹರಿಕೃಷ್ಣ ಸೇರಿದಂತೆ ನಾಲ್ಕು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಮುಗುಚಿ ಬಿದ್ದು ಹರಿಕೃಷ್ಣ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ನಾರ್ಕಟ್​ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.