ಮಳೆಗೆ ಹಾರಾಟ ಸ್ಥಗಿತ: ಇಂಡಿಗೋ ಪ್ರಯಾಣಿಕರಿಗೆ ಇಡೀ ರಾತ್ರಿ ವಿಮಾನ ವಾಸ

Published : Sep 06, 2019, 11:55 AM IST
ಮಳೆಗೆ ಹಾರಾಟ ಸ್ಥಗಿತ: ಇಂಡಿಗೋ ಪ್ರಯಾಣಿಕರಿಗೆ ಇಡೀ ರಾತ್ರಿ ವಿಮಾನ ವಾಸ

ಸಾರಾಂಶ

ಮಳೆಗೆ ಹಾರಾಟ ಸ್ಥಗಿತ: ಇಂಡಿಗೋ ಪ್ರಯಾಣಿಕರಿಗೆ ಇಡೀ ರಾತ್ರಿ ವಿಮಾನ ವಾಸ| ಮುಂಬೈನಿಂದ ಜೈಪುರಕ್ಕೆ ಹೊರಡಬೇಕಿದ್ದ ವಿಮಾನ

ಮುಂಬೈ[ಸೆ.06]: ಮಳೆಯಿಂದ ಸಂಚಾರ ರದ್ದಾಗಿದ್ದರೂ, ನೂರಾರು ಪ್ರಯಾಣಿಕರನ್ನು ಇಂಡಿಗೋ ಸಂಸ್ಥೆ ಇಡೀ ರಾತ್ರಿ ವಿಮಾನದಲ್ಲೇ ಕೂರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನಯಾನ ಪ್ರಾಧಿಕಾರ ಈ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ.

ಇಂಡಿಗೋ ವಿಮಾನ ಬುಧವಾರ ರಾತ್ರಿ 7.55ಕ್ಕೆ ಮುಂಬೈನಿಂದ ಜೈಪುರಕ್ಕೆ ಹೊರಡಬೇಕಿತ್ತು. ಆದರೆ ಮಳೆಯಿಂದಾಗಿ ಸಂಚಾರ ವಿಳಂಬವಾಗಿತ್ತು. ಬಳಿಕ ಪ್ರತಿಕೂಲ ಹವಾಮಾನದ ಕಾರಣ ಸಂಚಾರ ರದ್ದುಪಡಿಸಲಾಗಿತ್ತು. ಅಂತಿಮವಾಗಿ ಗುರುವಾರ ಬೆಳಗ್ಗೆ ವಿಮಾನ ಮುಂಬೈನಿಂದ ಸಂಚಾರ ಆರಂಭಿಸಿದೆ.

ವಿಮಾನ ಹೀಗೆ 10 ಗಂಟೆ ವಿಳಂಬವಾದರೂ, ಪ್ರಯಾಣಿಕರನ್ನು ವಿಮಾನದಲ್ಲೇ ಕೂರಿಸಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ