ಪರಿಸರ ನಿಯಂತ್ರಣ ಸಮಿತಿ ರೂಪಿಸಿ: ಸಂಸದ ರಾಜೀವ್ ಚಂದ್ರಶೇಖರ್ ಮನವಿ

Jul 26, 2018, 12:22 PM IST

ನವದೆಹಲಿ[ಜು.26]: ಪರಿಸರ ನಿಯಂತ್ರಣ ಸಮಿತಿ ರೂಪಿಸುವಂತೆ ರಾಜ್ಯಸಭೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿದೆಡೆ ಪರಿಸರಕ್ಕೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕೆರೆಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಭವಿಷ್ಯದ ಜನಾಂಗಕ್ಕಾಗಿ ಪರಿಸರ ಕಾಪಾಡುವುದು ನಮ್ಮ ಹೊಣೆ ಎಂದು ಹೇಳಿದ್ದಾರೆ.