ಮೋದಿ ಗೆಲುವಿಗಾಗಿ ಕೃಷ್ಣ ಮೊರೆ ಹೋದ ಭಕ್ತರು

Feb 2, 2019, 10:06 AM IST

ಲೋಕಸಭಾ ಸಮರ ಕೇವಲ ಪಕ್ಷ ಪಕ್ಷಗಳ ನಡುವಿನ ಸಮರವಾಗಿ ಉಳಿದಿಲ್ಲ. ಆಯಾ ಪಕ್ಷಗಳ ಅಭಿಮಾನಿಗಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ಪ್ರಧಾನಿ ಮೋದಿ ಗೆಲುವಿಗಾಗಿ ಭಕ್ತರು ಉಡುಪಿ ಕೃಷ್ಣ ಮಠದಲ್ಲಿ ಹರಕೆ ಹೊತ್ತು ಉತ್ಸವ ನಡೆಸಿದ್ದಾರೆ. ಈ ಬಾರಿ ಲೋಕ ಸಮರದಲ್ಲಿ ಪುನಃ ಮೋದಿಯವರೇ ಪ್ರಧಾನಿಯಾಗಬೇಕೆಂಬುದು ಭಕ್ತರ ಆಶಯ. ದೇವರೇ ನಮ್ಮ ನಾಯಕನನ್ನು ಗೆಲ್ಲಿಸು ಎಂದು ಕೃಷ್ಣನ ಮೊರೆ ಹೋಗಿದ್ದಾರೆ.