ಮೀ ಟೂ ಶ್ರುತಿ ಹರಿಹರನ್‌ ಎಂದು ಕಾಲೆಳೆದ ಗುರು ಪ್ರಸಾದ್; ವ್ಯಂಗ್ಯ ತಿರುಗೇಟು ಕೊಟ್ಟ ನಟಿ

Published : May 08, 2024, 03:29 PM ISTUpdated : May 08, 2024, 03:34 PM IST
ಮೀ ಟೂ ಶ್ರುತಿ ಹರಿಹರನ್‌ ಎಂದು ಕಾಲೆಳೆದ ಗುರು ಪ್ರಸಾದ್; ವ್ಯಂಗ್ಯ ತಿರುಗೇಟು ಕೊಟ್ಟ ನಟಿ

ಸಾರಾಂಶ

ಮತ್ತೆ ಮೀ ಟೂ ವಿಚಾರಕ್ಕೆ ಸುದ್ದಿಯಲ್ಲಿರುವ ಶ್ರುತಿ ಹರಿಹರನ್. ಗುರು ಪ್ರಸಾದ್‌ ಟೀಕೆಗೆ ಉತ್ತರ ಕೊಡ್ತಾರಾ ನಟಿ?   

ಕನ್ನಡ ಚಿತ್ರರಂಗದ ಬಬ್ಲಿ ನಟಿ ಶ್ರುತಿ ಹರಿಹರನ್ ಮದರ್‌ಹುಡ್, ಫಿಟ್ನೆಸ್‌ ಮತ್ತು ಸಿನಿಮಾ ಪ್ರಾಜೆಕ್ಟ್‌ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ 28 ಕೆಜಿ ಇಳಿಸಿಕೊಂಡು ಅನೇಕರಿಗೆ ಸ್ಫೂರ್ತಿಯಾದ ಶ್ರುತಿ, ಈ ಹಿಂದೆಯೂ ಹೆಣ್ಣು ಮಕ್ಕಳು ಧ್ವನಿ ಎತ್ತಲು ಸ್ಫೂರ್ತಿಯಾಗಿದ್ದರು. ಅದೇ ಮೀ ಟೂ ಅಭಿಯಾನ. ವಿಸ್ಮಯ ಸಿನಿಮಾ ಚಿತ್ರೀಕರಣದಲ್ಲಿ ಎದುರಿಸಿದ ಘಟನೆಯನ್ನು ಬಿಚ್ಚಿಟ್ಟ ಶ್ರುತಿಗೆ ಬೆಂಬಲ ನೀಡಿದವರಿಗಿಂತ ಟೀಕೆ ಮಾಡುತ್ತಿದ್ದವರೇ ಹೆಚ್ಚಿದ್ದರು. ಈ ವಿಚಾರದ ಬಗ್ಗೆ ಗುರು ಪ್ರಸಾದ್‌ ಕೂಡ ಮಾತನಾಡಿದ್ದರು.

'ನಟಿ ಶ್ರುತಿ ಹರಿಹರನ್ ಮೂಲ ಕನ್ನಡ ಅಲ್ಲ ಎಲ್ಲಿಂದಲೋ ಬಂದು ಕನ್ನಡದಲ್ಲಿ ರಾಡಿ ಎಬ್ಬಿಸಿದ್ದರು. ಆ ಘಟನೆಗಳ ಸಂಪೂರ್ಣ ಮಾಹಿತಿ ನನಗೆ ಗೊತ್ತು ಸೀಕ್ರೆಟ್‌ ಕೂಡ ಗೊತ್ತಿತ್ತು. ಹಾಗಾಗಿ ಕೋಪ ತ್ತು ಆದರೆ ಅದನ್ನು ತೀರಿಸಿಕೊಳ್ಳಲು ಅವಕಾಶ ಬೇಕಿತ್ತು. ನನ್ನ ಮಾಧ್ಯಮ ಸಿನಿಮಾ ಆಗಿರುವುದರಿಂದ ಆಕೆಯ ಧೋರಣೆಗೆ ದಿಕ್ಕರ ಕೂಗಬೇಕಿತ್ತು. ಹಾಗಾಗಿ ಮೀ ಟೂ ಶ್ರುತಿ ಅಂತ ಬೇಕು ಅಂತಲೇ ಹಾಡಿನಲ್ಲಿ ತಂದಿರೋದು' ಎಂದು ನಿರ್ದೇಶಕ ಗುರು ಪ್ರಸಾದ್ ಗಾಳಿ ತಂಗಾಳಿ ಹಾಡಿನ ಬಗ್ಗೆ ಹೇಳಿದ್ದರು.

8 ತಿಂಗಳಲ್ಲಿ 28 ಕೆಜಿ ತೂಕ ಕಳೆದುಕೊಂಡ ಶ್ರುತಿ ಹರಿಹರನ್; ನಿಂಬೆ ಜ್ಯೂಸ್ ಸಹಾಯ ಮಾಡಿದೆ!

ಈ ವಿಚಾರದ ಬಗ್ಗೆ ಶ್ರುತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದಾರೆ. 'ಕೆಲವೊಂದು ವಿಚಾರಗಳನ್ನು ಹಾಗೂ ಕೆಲವರನ್ನು ಹಾಗೆ ಸುಮ್ಮನೆ ಬಿಟ್ಟು ಬಿಡಬೇಕು. ಈ ವಿಚಾರದ ಬಗ್ಗೆ ಮಾತನಾಡಲು ನನಗೆ ಮನಸಿಲ್ಲ' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಶ್ರುತಿ ಮಾತನಾಡಿದ್ದಾರೆ. ಗುರು ಪ್ರಸಾದ್ ಅವರ ಗಾಳಿ ತಂಗಾಳಿ ಹಾಡನ್ನು ನೋಡಿದ್ದೀನಿ ನನಗೆ ಎಲ್ಲವೂ ಗೊತ್ತಿದೆ ಅಷ್ಟೇ ಅಲ್ಲ ನಾನು ಉಳ್ಳಾಡಿ ಉಳ್ಳಾಡಿ ನಕ್ಕಿದ್ದೀನಿ ಎಂದು ಹೇಳಿದ್ದರು.

Me too ಕೇಸ್ ಮುಗಿದಿಲ್ಲ, ನನ್ನನ್ನು ಗಂಡ ಮನೆಯಿಂದ ಹೊರ ಹಾಕಿಲ್ಲ: ಶ್ರುತಿ ಹರಿಹರನ್

ಮೀಟೂ ಪ್ರಕರಣದಲ್ಲಿ ಶ್ರುತಿ ಹರಿಹರನ್‌ಗೆ ಹಿನ್ನಡೆಯಾಗಿದೆ ಎಂದು ಅನೇಕರು ಅಂದುಕೊಂಡಿದ್ದರು ಆದರೆ ಅದು ಸುಳ್ಳು, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇದೆ ಎಂದು ನಟಿ ಸ್ಪಷ್ಟನೆ ಕೊಟ್ಟರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?