ಈತನ ಅದ್ಧೂರಿ ಮದ್ವೆಗೆ 20 ಸಾವಿರ ಖರ್ಚು: ಹೆಂಗೆ ಅಂತಾ ಅವನನ್ನೇ ಕೇಳಿ!

Published : Dec 25, 2018, 05:31 PM ISTUpdated : Dec 25, 2018, 05:35 PM IST
ಈತನ ಅದ್ಧೂರಿ ಮದ್ವೆಗೆ 20 ಸಾವಿರ ಖರ್ಚು: ಹೆಂಗೆ ಅಂತಾ ಅವನನ್ನೇ ಕೇಳಿ!

ಸಾರಾಂಶ

ಕೇವಲ 20 ಸಾವಿರ ರೂ.ನಲ್ಲಿ ಅದ್ಧೂರಿ ಮದುವೆ| ಕಡಿಮೆ ಬಜೆಟ್‌ನಲ್ಲಿ ಫುಲ್ ಹ್ಯಾಪಿ ಮದುವೆ ಹೇಗೆ?| ಪಾಕಿಸ್ತಾನದ ರಿಜ್ವಾನ್ ಪೆಹಲ್ವಾನ್ ಮದುವೆ ಸಿಕ್ರೇಟ್| ಸಾಮಾಜಿಕ ಜಾಲತಾಣದಲ್ಲಿ ರಿಜ್ವಾನ್ ಮದುವೆ ಬಜೆಟ್ ನದ್ದೇ ಮಾತು

ಇಸ್ಲಾಮಾಬಾದ್(ಡಿ.25): ಇತ್ತೀಚಿಗಷ್ಟೇ ರಿಲಯನ್ಸ್ ಇಂಡಸ್ಟ್ರಿ ಅಧಿಪತಿ ಮುಕೇಶ್ ಅಂಬಾನಿ, ಸುಮಾರು 700 ಕೋಟಿ(ತಮ್ಮ ಒಟ್ಟು ಆದಾಯದ ಶೇ.1ರಷ್ಟು ಮಾತ್ರ) ರೂ. ಖರ್ಚು ಮಾಡಿ ತಮ್ಮ ಮಗಳ ಮದುವೆ ಮಾಡಿ ಸುದ್ದಿಯಾಗಿದ್ದರು.

ಅದರಂತೆ ದೇಶದಲ್ಲಿ ನಿತ್ಯ ಸಾವಿರಾರು ಮದುವೆಗಳಾಗುತ್ತವೆ. ಮದುವೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ. ಇದೇ ಕಾರಣಕ್ಕೆ ಮದುವೆಗೆ ತಮ್ಮ ಬಜೆಟ್ ಮೀರಿ ಹಣ ಖರ್ಚು ಮಾಡುವುದು ಸಾಮಾನ್ಯ.

ಅದರಲ್ಲೂ ಮಧ್ಯಮ ವರ್ಗದ ಜನ ತಮ್ಮ ಮಕ್ಕಳ ಮದುವೆಗೆಂದೇ ಜೀವಮಾನವವೆಲ್ಲಾ ದುಡಿದು ಕೂಡಿಟ್ಟ ಹಣವನ್ನು ನೀರಿನಿಂತೆ ಖರ್ಚು ಮಾಡುತ್ತಾರೆ.

ಆದರೆ ಪಕ್ಕದ ಪಾಕಿಸ್ತಾನದಲ್ಲೋರ್ವ ಆಸಾಮಿ ತನ್ನ ಮದುವೆಗೆ ಕೇವಲ 20 ಸಾವಿರ (ಭಾರತೀಯ ಕರೆನ್ಸಿ ಪ್ರಕಾರ 10 ಸಾವಿರ)ರೂ. ಖರ್ಚು ಮಾಡಿದ್ದಾನೆ. ಅಲ್ಲದೇ ಹೇಗೆ ಅತ್ಯಂತ ಕಡಿಮೆ ಬಜೆಟ್ ನಲ್ಲಿ ತನ್ನ ಮದುವೆಯಾಯ್ತು ಎಂಬುದನ್ನು ಆತ ವಿವರಿಸಿದ್ದಾನೆ.

ಪಾಕಿಸ್ತಾನದ ರಿಜ್ವಾನ್ ಪೆಹಲ್ವಾನ್ ಎಂಬಾತ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾನೆ. ಅದೂ ಕೇವಲ 20 ಸಾವಿರ ರೂ. ನಲ್ಲಿ ರಿಜ್ವಾನ್ ತನ್ನ ಮದುವೆ ಮುಗಿಸಿದ್ದಾನೆ.

ಇನ್ನು ಅತ್ಯಂತ ಕಡಿಮೆ ಬಜೆಟ್ ನಲ್ಲಿ ತನ್ನ ಮದುವೆ ಆಗಿದ್ದೇಗೆ ಎಂಬುದನ್ನು ರಿಜ್ವಾನ್ ಟ್ವಿಟ್ಟರ್‌ನಲ್ಲಿ ವಿವರಿಸಿದ್ದು, ಅದನ್ನು ನೀವು ಇಲ್ಲಿ ನೋಡಬಹುದು.

ರಿಜ್ವಾನ್ ಮದುವೆ ಪ್ಲ್ಯಾನ್‌ಗೆ ಬಹುತೇಕ ಯುವಕ, ಯುವತಿಯರು ಸೋತಿದ್ದು, ತಾವೂ ಕೂಡ ಹೀಗೆ ಮದುವೆಯಾದರೆ ಚೆನ್ನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಪೋಸ್ಟ್ ಮಾಡುತ್ತಿದ್ದಾರೆ.

 

ಅಂಬಾನಿ ಮಗಳ ಮದುವೆಗೆ 700 ಕೋಟಿ ರೂ. ಖರ್ಚು! 

ಜೀವನವೆಲ್ಲ ಕೂಡಿಟ್ಟು ಮದ್ವೆ ಮಾಡೋರಿಗೆ ಅಂಬಾನಿ ಮನೆ ಮದುವೆ ಪಾಠ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್