ರಕ್ತಚಂದನ ಗ್ರಹಣದಂದೇ ಸಪ್ತಪದಿ ತುಳಿದ ಯುವ ಜೋಡಿ

Jul 28, 2018, 1:33 PM IST

ಶತಮಾನದ ಅಪರೂಪದ ರಕ್ತಚಂದನ ಚಂದ್ರಗ್ರಹಣದ ಮೂಢ ನಂಬಿಕೆಗೆ ಜನರು ಸೆಡ್ಡುಹೊಡೆದಿದ್ದಾರೆ. ಗ್ರಹಣ ಸ್ಪರ್ಶದ ವೇಳೆ ಪ್ರಗತಿಪರ ಚಿಂತಕರು, ಬುದ್ದಿಜೀವಿಗಳು ವಿಭಿನ್ನವಾಗಿ ಸ್ವಾಗತಿಸಿದ್ದಾರೆ. ಕೆಲವರು ಟೌನ್ ಹಾಲ್ ಮುಂದೆ ಕೇಕ್ ಕತ್ತರಿಸಿ ನಮ್ಮ ನಡಿಗೆ ವಿಜ್ಞಾನದೆಡೆಗೆ ಎಂಬ ಸಂದೇಶ ಸಾರಿದರೆ, ಮತ್ತೆ ಕೆಲವರು ಸ್ಮಶಾನದಲ್ಲಿ ಚೆನ್ನಾಗಿ ಬಾಡೂಟ ಸವಿದರು. ಇನ್ನು ಗ್ರಹಣದ ವೇಳೆಯೇ ಚಿತ್ರದುರ್ಗದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿತು.