ಬಿಗ್ 3 ವರದಿ ಬಳಿಕ ಕಾವೇರಿ ತಟದ ಫ್ಯಾಕ್ಟರಿಗೆ ಬಿತ್ತು ಬೀಗ!

Jul 11, 2018, 11:54 AM IST

ಮಂಡ್ಯ ಮತ್ತು ಬೆಂಗಳೂರು ಭಾಗದಲ್ಲಿ ಕಾವೇರಿ ನದಿಗೆ ನೇರವಾಗಿ ರಾಸಾಯನಿಕಗಳು ಸೇರುತ್ತಿದೆ. ಕುಡಿಯುವ ನೀರು ವಿಷವಾಗುತ್ತಿದೆ. ನಮ್ಮ ಜೀವಜಲ ಎಂದು ಕುಡಿಯುವ ಕಾವೇರಿ ವಿಷವಾಗಿ ದೇಹವನ್ನು ಸೇರುತ್ತಿದೆ ಎಂದು ಸುವರ್ಣ ನ್ಯೂಸ್ ನಿನ್ನೆ ವರದಿ ಪ್ರಸಾರ ಮಾಡಿತ್ತು. ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀಯವರು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು, ಶಾಸಕರು ಎಲ್ಲರನ್ನು ಮಾತನಾಡಿಸಿ ಸಮಸ್ಯೆಯನ್ನು ಗಮನಕ್ಕೆ ತರಲಾಯಿತು. ಕೂಡಲೇ ಎಚ್ಚೆತ್ತುಕೊಂಡ ಆಡಳಿತ ವರ್ಗ ಕಾವೇರಿ ತಟದ ಫ್ಯಾಕ್ಟರಿಗೆ ಬೀಗ ಹಾಕಿಸಿತು.