ಇಲ್ಲಿ ದೇವರಿಗಲ್ಲ ಪೂಜೆ, ಬದಲಿಗೆ ಪ್ರಾಣಿಗಳಿಗೆ!

Published : Apr 18, 2019, 04:18 PM IST
ಇಲ್ಲಿ ದೇವರಿಗಲ್ಲ ಪೂಜೆ, ಬದಲಿಗೆ ಪ್ರಾಣಿಗಳಿಗೆ!

ಸಾರಾಂಶ

ಭಾರತದಲ್ಲಿ ಹಲವು ದೇವಾಲಯಗಳಿವೆ. ಪೂಜಿಸುವ ರೀತಿ, ಪ್ರಸಾದದ ರುಚಿಯಲ್ಲದೇ ವಾಸ್ತುಶಿಲ್ಪಕ್ಕೂ ಪ್ರಸಿದ್ಧಿ. ಆದರೆ, ಕೆಲವೆಡೆ ದೇವರ ಬದಲು ಪ್ರಾಣಿಗಳನ್ನೂ ಪೂಜಿಸುವ ಪದ್ಧತಿ ಇದೆ ಗೊತ್ತಾ? ಎಲ್ಲಿ ಯಾವ ಪ್ರಾಣಿಯನ್ನು ಪೂಜಿಸಲಾಗುತ್ತದೆ?

ಇಲ್ಲಿವರೆಗೂ ದೇವಸ್ಥಾನಗಳು ಹಾಗೂ ಸಂಬಂಧಿಸಿದ ಚಿತ್ರ ವಿಚಿತ್ರ ಪರಂಪರೆ ಬಗ್ಗೆ ಕೇಳಿರುತ್ತೀರಿ. ಆದರೆ, ಎಲ್ಲವಕ್ಕೂ ವಿಭಿನ್ನ ಎನ್ನುವಂತ ಸಂಪ್ರದಾಯದ ಬಗ್ಗೆ ಈಗ ತಿಳಿದು ಕೊಳ್ಳುವಿರಿ. ಇಲ್ಲಿ ದೇವರನ್ನು ಪೂಜಿಸುವುದಿಲ್ಲ. ಬದಲಾಗಿ ಪ್ರಾಣಿಗಳನ್ನು ಪೂಜಿಸಲಾಗುತ್ತದೆ. 

ನಾಯಿ ದೇವಸ್ಥಾನ: ಹಿಂದೂ ಧರ್ಮದಲ್ಲಿ ನಾಯಿಯನ್ನು ಭೈರವನ ವಾಹನವಾಗಿ ಗೌರವಿಸಲಾಗುತ್ತದೆ. ಶನಿ ದೋಷ ನಿವಾರಿಸಲು ನಾಯಿಗೆ ತಿಂಡಿ ನೀಡುತ್ತಾರೆ. ಬುಲಂದ್ ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ದೇವಾಲಯವೊಂದರಲ್ಲಿ ನಾಯಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. 100 ವರ್ಷಗಳ ಹಳೆಯ ಈ ಮಂದಿರದಲ್ಲಿ ನಾಯಿ ಸಮಾಧಿಯ ಮೇಲೆ ಮೂರ್ತಿಯನ್ನು ಕೆತ್ತಿ ಅದಕ್ಕೆ ಪೂಜಿಸಲಾಗುತ್ತದೆ. ಈ ಶ್ವಾನದ ಮೂರ್ತಿ ಕಾಲಿಗೆ ಕಪ್ಪು ಹಗ್ಗ ಕಟ್ಟಿದರೆ, ಎಲ್ಲ ಇಚ್ಛೆಗಳೂ ಈಡೇರುತ್ತವೆ ಎಂದೇ ನಂಬಲಾಗುತ್ತದೆ. 

ಬೆಕ್ಕಿಗೆ ದೇವೀ ಸ್ವರೂಪ: ಬೆಕ್ಕು ಅಡ್ಡ ಬಂದರೇ ಅಪಶಕುನ ಎಂದು ನಂಬುವ ಮಂದಿ ಅದೇ ಪ್ರಾಣಿಯನ್ನು ಪೂಜಿಸುತ್ತಾರೆ! ಕರ್ನಾಟಕದ ಮಂಡ್ಯದಿಂದ 35 ಕಿ.ಮೀ ದೂರದಲ್ಲಿ ಬೆಕ್ಕಾಲಲೆ ಎನ್ನುವ ಹಳ್ಳಿಯಲ್ಲಿ ಬೆಕ್ಕಿನ ದೇವಾಲಯವಿದೆ. ಇಲ್ಲಿ ಬೆಕ್ಕನ್ನು ಮಂಗಮ್ಮ ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಸುಮಾರು 1000 ವರ್ಷಗಳಿಂದ ಈ ಆಚರಣೆ ಜಾರಿಯಲ್ಲಿದೆ. ಬೆಕ್ಕಿನ ರೂಪದಲ್ಲಿ ದೇವಿಯನ್ನು ಆರಾಧಿಸಲಾಗುತ್ತಿದೆ. 

ಕರೆದರೆ ಸಾಕು ಪ್ರಸಾದ ತಿಂದು ಹೋಗೋ ಮೊಸಳೆ!

ಮೂಷಕನ ವಾಹನವೇ ಇಲ್ಲಿ ದೈವ: ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಕರಣಿ ಮಾತಾ ಮಂದಿರದಲ್ಲಿ ಸುಮಾರು 20 ಸಾವಿರ ಇಲಿಗಳಿವೆ. ಇಲ್ಲಿ ದೇವಿಗೆ ನೈವೇದ್ಯ ನೀಡುವುದರ ಜೊತೆ ಜೊತೆಗೆ ಇಲಿಗಳಿಗೂ ನೀಡಲಾಗುತ್ತದೆ. ಕರಣಿ ದೇವಿ ಜಗದಾಂಬೆಯ ಅವತಾರ. ಆ ದೇವಿ ಇಲ್ಲಿನ ಗುಹೆಯಲ್ಲಿ 650 ವರ್ಷಗಳ ಹಿಂದೆ ತಪಸ್ಸು ಮಾಡಿದ್ದಾರೆಂಬ ನಂಬಿಕೆ ಇದೆ. ಆ ಗುಹೆಯೂ ಇಲ್ಲೇ ಇದೆ ಎಂದು ಹೇಳಲಾಗುತ್ತದೆ. 

ಬಾವಲಿ ಪೂಜೆ: ಬಿಹಾರದ ವೈಶಾಲಿ ಜಿಲ್ಲೆಯ ರಾಜಾಪಾಕರ್ ಪ್ರಖಂಡದ ಸಾರಾಸಾಯಿ ಗ್ರಾಮದಲ್ಲಿ ಬಾವಲಿಗಳನ್ನು ಅಭಿವೃದ್ಧಿ ಸಂಕೇತ ಎಂದು ಪೂಜಿಸಲಾಗುತ್ತದೆ. ಎಲ್ಲಿ ಬಾವಲಿ ಇರುತ್ತದೋ, ಅಲ್ಲಿಯೇ ಲಕ್ಷ್ಮಿಯೂ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ ಎನ್ನುವ ನಂಬಿಕೆ ಇದೆ. ಶಕುನಕ್ಕೆ ಸಂಬಂಧಿಸಿದ ಏನೇ ಕೆಲಸವಿದ್ದರೂ ಈ ಊರಿನ ಜನರು ಬಾವಲಿಗೆ ಪೂಜಿಸುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?