ಅಧಿವೇಶನದಲ್ಲಿ ಅಸಮಧಾನ ಹೊರಹಾಕಿದ ಸ್ಪೀಕರ್ ರಮೇಶ್ ಕುಮಾರ್

Dec 14, 2018, 4:45 PM IST

ನನಗೆ ಈ ಕೆಲಸ ಸಾಕಾಗುತ್ತಿದೆ, ಉಸಿರು ಗಟ್ಟುತ್ತಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಕಲಾಪದ ವೇಳೆ ಸ್ಪೀಕರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕಲಾಪದ ವೇಳೆ ಮಾತನಾಡಿದ ಅವರು, ಶಾಸಕರನ್ನು ತರಬೇತಿಗೆ ಕರೆದ್ರೆ ಬರುವುದಿಲ್ಲ. ಪಕ್ಷದವರು ತಾವೇ ತರಬೇತಿ ಕೊಡಲ್ಲ. ಪ್ರಶ್ನೋತ್ತರದಲ್ಲಿ ಉಪಪ್ರಶ್ನೆ ಕೇಳಿ ಅಂದ್ರೆ ಭಾಷಣ ಮಾಡ್ತಾರೆ. ಮೂರು ಉಪಪ್ರಶ್ನೆ ಕೇಳಬೇಕಾದ ಕಡೆ, ಮೂವತ್ತು ಜನ ಎದ್ದು ನಿಲ್ಲುತ್ತಾರೆ. ಹೀಗಾದ್ರೆ ಸದನ ನಡೆಸೋದು ಹೇಗೆ? ಎಂದು ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.