Karnataka Assembly Election- 2018

ಫಲಿತಾಂಶಕ್ಕೂ ಮುನ್ನ ಸೋಲೋಪ್ಪಿಕೊಂಡರಾ ಯೋಗೇಶ್ವರ್?

May 14, 2018, 12:52 PM IST

ಫಲಿತಾಂಶಕ್ಕೂ  ಮುನ್ನವೇ ಚನ್ನಪಟ್ಟಣ ಶಾಸಕ ಸಿ ಪಿ ಯೋಗೇಶ್ವರ್ ತುರ್ತು ಸುದ್ದಿಗೋಷ್ಟಿ ನಡೆಸಿದ್ದಾರೆ. ಸಚಿವ ಡಿಕೆಶಿ ಕಪ್ಪು ಹಣ ಕೆಲಸ ಮಾಡಿದ್ರೆ ನನ್ನ ಗೆಲುವು ಕಷ್ಟ. ನಮ್ಮ ಮುಖಂಡರನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಬೇರೆ ಪಕ್ಷಕ್ಕೆ ಹೋಗಿದ್ರೆ ಗೆಲುವು ಸುಲಭ ಆಗ್ತಾ ಇತ್ತು ಎಂದು ಯೋಗೇಶ್ವರ್ ಹೇಳಿದ್ದಾರೆ.  ನಾನು ಗೆದ್ದರೂ, ಸೋತರೂ ಇಲ್ಲೇ ಇದ್ದು ಜನರ ಸೇವೆ ಮಾಡುತ್ತೇನೆ ಎಂದಿದ್ದಾರೆ.