Karnataka Assembly Election- 2018
May 9, 2018, 12:00 PM IST
ರಾಜರಾಜೇಶ್ವರಿ ವಿಧಾನಸಭಾ ವ್ಯಾಪ್ತಿಯಲ್ಲಿರುವ ಜಾಲಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಮತ ಚೀಟಿ ಹಗರಣವೊಂದು ಬೆಳಕಿಗೆ ಬಂದಿದೆ. ಈ ಅಪಾರ್ಟ್ಮೆಂಟ್ ಮಂಜುಳಾ ನಂಜಾಮರಿ ಎಂಬುವವರಿಗೆ ಸೇರಿದೆ. ಈ ಮಂಜುಳಾ ಆರು ವರ್ಷಗಳ ಹಿಂದೆಯೇ ಬಿಜೆಪಿ ತೊರೆದಿದ್ದಾರೆಂದು ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಆದರೆ, ಸೋಲಿನ ಭೀತಿಯಿಂದ ಬಿಜೆಪಿ ಹೈಡ್ರಾಮಾ ಮಾಡುತ್ತಿದ್ದು, ಮುಂಜುಳಾ ಬಿಜೆಪಿ ಮುಖಂಡೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕಾಂಗ್ರೆಸ್-ಬಿಜೆಪಿ ಆರೋಪ, ಪ್ರತ್ಯಾರೋಪಗಳು ಮುಂದುವರಿದಿದೆ.