Karnataka Assembly Election- 2018

’ಅಡ್ವಾಣಿಯವರಿಗೇನು ಸ್ಥಿತಿಯಾಗಿದೆಯೋ ಅದೇ ಸ್ಥಿತಿ ಯಡಿಯೂರಪ್ಪಗೂ ಆಗುತ್ತೆ’

Apr 29, 2018, 3:44 PM IST

ಬಾದಾಮಿಯಿಂದ ಸ್ಪರ್ಧಿಸುತ್ತಿರುವ  ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. ಶ್ರೀರಾಮುಲು ಬಳ್ಳಾರಿಯಲ್ಲಿ ಬೆಟ್ಟ ಅಗಿದು ಖಾಲಿ ಮಾಡಿ ಇದೀಗ ಬಾದಾಮಿಗೆ ಬಂದಿದ್ದಾರೆ ಎಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ. ಇದೇ ವೇಳೆ ಬಿ.ಎಸ್. ಯಡಿಯೂರಪ್ಪನವರ ಮೇಲೆ ತನಗೆ ಅನುಕಂಪವಿದೆ. ಬಿಜೆಪಿಯಲ್ಲಿ ಅಡ್ವಾಣಿಯವರಿಗಾದ ಸ್ಥಿತಿಯೇ ಚುನಾವಣೆ ಬಳಿಕ  ಯಡಿಯೂರಪ್ಪನವರಿಗೂ ಆಗಲಿದೆ ಎಂದು ಅವರು ಹೇಳಿದ್ದಾರೆ.