Published : Oct 06, 2025, 07:47 AM ISTUpdated : Oct 06, 2025, 09:58 PM IST

India News Live 6th October: ಸುಂಕ ಹೆಚ್ಚಿಸಿದ್ದ ಟ್ರಂಪ್‌ಗೆ ಆಘಾತ ಕೊಟ್ಟ ಅಮೆರಿಕದ ಕಂಪನಿ; ಇದು ಇಂಡಿಯಾಗೆ ಶುಭ ಸುದ್ದಿ!

ಸಾರಾಂಶ

ನವದೆಹಲಿ (ಅ.6): 'ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತ ಎಂಬ ಮನೆಯೊಳಗಿನ ಕೋಣೆ ಇದ್ದಂತೆ. ಆದರೆ ಅಪರಿಚಿತರು ಒಳಗೆ ಬಂದಿದ್ದಾರೆ ಆ ಕೊಠಡಿ ಮರುವಶ ಮಾಡಿಕೊಳ್ಳಬೇಕು' ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಭಾನುವಾರ ಕರೆ ನೀಡಿದ್ದಾರೆ. ಮಧ್ಯಪ್ರದೇಶದ ಸತ್ಪಾದಲ್ಲಿ ಸಿಂಧಿ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು, 'ಇಡೀ ಭಾರತ ಒಂದೇ ಮನೆ, ಆದರೆ ಯಾರೋ ನಮ್ಮ ಮನೆಯ ಒಂದು ಕೋಣೆಯನ್ನು ಮನೆಯಿಂದ ಬೇರ್ಪಡಿಸಿದ್ದಾರೆ. ಅಲ್ಲಿ ನನ್ನ ಮೇಜು, ಕುರ್ಚಿ ಮತ್ತು ಬಟ್ಟೆಗಳನ್ನು ಇಡಲಾಗುತ್ತಿತ್ತು. ಅವರು (ಪಾಕ್) ಅದನ್ನು ಆಕ್ರಮಿಸಿಕೊಂಡಿದ್ದಾರೆ. ನಾಳೆ ನಾನು ಅದನು ಒಂದಕ್ಕೆ ತೆಗೆದುಕೊಳ್ಳಬೇಕು' ಎಂದು ಕರತಾಡನದ ಮಧ್ಯೆ ಹೇಳಿದರು. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

09:58 PM (IST) Oct 06

ಸುಂಕ ಹೆಚ್ಚಿಸಿದ್ದ ಟ್ರಂಪ್‌ಗೆ ಆಘಾತ ಕೊಟ್ಟ ಅಮೆರಿಕದ ಕಂಪನಿ; ಇದು ಇಂಡಿಯಾಗೆ ಶುಭ ಸುದ್ದಿ!

India Investment News: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೈ ಡಿಯರ್ ಫ್ರೆಂಡ್ ಅನ್ನುತ್ತಲೇ ಸುಂಕ ಹೆಚ್ಚಳ ಮಾಡುತ್ತಿದ್ದಾರೆ. ಇದೀಗ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕ ಕಂಪನಿಯೊಂದು ಶಾಕ್ ನೀಡಿದೆ.

Read Full Story

09:46 PM (IST) Oct 06

ಹೆಂಡ್ತಿಗೆ ಸಮಯ ಕೊಡದ ಗಂಡ - ಪತ್ನಿ ಮಾಡಿದ್ದೇನು? ವೀಡಿಯೋ ವೈರಲ್

Work Life Balance: ಕೆಲಸ ಹಾಗೂ ಜೀವನ ಎರಡನ್ನೂ ಸಮತೋಲನಗೊಳಿಸುವುದೇ ಇಂದಿನ ಅನೇಕರ ಸವಾಲಾಗಿದೆ. ಹೀಗಿರುವಾಗ ವೃತ್ತಿ ಹಾಗೂ ಜೀವನ ಎರಡನ್ನೂ ಸಮಾನವಾಗಿ ಬ್ಯಾಲೆನ್ಸ್ ಮಾಡದ ಪತಿ ವಿರುದ್ಧ ಕಿಡಿಕಾರ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story

08:51 PM (IST) Oct 06

ಚೆನ್ನೈನ ಝೂನಿಂದ ತಪ್ಪಿಸಿಕೊಂಡಿದ್ದ 5 ವರ್ಷದ ಸಿಂಹ ಸುರಕ್ಷಿತವಾಗಿ ಪತ್ತೆ

Lion Escapes from Chennai Zoo: ಶೆರಿಯಾರ್ ಎಂಬ ಹೆಸರಿನ ಎಳೆಯ ಪ್ರಾಯದ ಸಿಂಹವೊಂದು ಚೆನ್ನೈನ ವಂಡಲೂರ್‌ನಲ್ಲಿರುವ ಅರಿಗ್ನಾರ್ ಅಣ್ಣ ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಂಡಿತ್ತು. ಅದು ಈಗ ಪತ್ತೆಯಾಗಿದೆ.

Read Full Story

07:33 PM (IST) Oct 06

ಹೆಚ್ಚುತ್ತಿದೆ ಪತ್ನಿಯ ಎಕ್ಸ್​ಚೇಂಜ್​ ಟ್ರೆಂಡ್​! ಯಾರ ಕಾರಿನ ಕೀ ಯಾರಿಗೋ, ಇವರ ಹೆಂಡ್ತಿ ಅವರಿಗೆ

ನಟಿ ಕರೀಷ್ಮಾ ಕಪೂರ್ ಅವರ ವಿಚ್ಛೇದನದ ಸಮಯದಲ್ಲಿ ಬೆಳಕಿಗೆ ಬಂದ 'ಪತ್ನಿಯರ ವಿನಿಮಯ' (Wife Swapping) ಟ್ರೆಂಡ್ ಭಾರತದ ಶ್ರೀಮಂತ ವರ್ಗದಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ಕಾರಿನ ಕೀಲಿಗಳನ್ನು ಬಳಸಿ ಸಂಗಾತಿಗಳನ್ನು ವಿನಿಮಯ ಮಾಡಿಕೊಳ್ಳುವ ಆಘಾತಕಾರಿ ವಿಧಾನ  ಇದು.

Read Full Story

07:33 PM (IST) Oct 06

ಹಸಿವು ಬಡತನದಿಂದ ಬಳಲ್ತಿರುವ ಜನ - 15 ಪತ್ನಿಯರು 30 ಮಕ್ಕಳು ಆಫ್ರಿಕನ್‌ ರಾಜನ ಐಷಾರಾಮಿ ಜೀವನ

ಆಫ್ರಿಕಾದ ಎಸ್ವಾಟಿನಿ ರಾಜ ಎಂಸ್ವತಿ III, ತನ್ನ 15 ಪತ್ನಿಯರು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್‌ನಲ್ಲಿ ಅಬುಧಾಬಿಗೆ ಭೇಟಿ ನೀಡಿದ ವೀಡಿಯೋ ವೈರಲ್ ಆಗಿದೆ. ದೇಶದಲ್ಲಿ ಬಡತನ ತಾಂಡವವಾಡುತ್ತಿದ್ದರೂ, ರಾಜನ ಈ ಐಷಾರಾಮಿ ಜೀವನಶೈಲಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

Read Full Story

05:44 PM (IST) Oct 06

ಕಸ ಹಾಕಿದ ಪ್ರವಾಸಿಗರಿಂದಲೇ ಕಸ ಎತ್ತಿಸಿದ ಸ್ಥಳೀಯರು - ವೀಡಿಯೋ ಭಾರಿ ವೈರಲ್

Tourists littering in Darjeeling:  ಡಾರ್ಜಿಲಿಂಗ್‌ನಲ್ಲಿ ಪ್ರವಾಸಿಗರು ಕಸ ಎಸೆದಿದ್ದು ಇದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ, ಅವರಿಂದಲೇ ಆ ಕಸವನ್ನು ಹೆಕ್ಕಿಸಿದ್ದಾನೆ. ಈ ವೀಡಿಯೋ ವೈರಲ್ ಆಗಿದ್ದು, ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆಯ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.

Read Full Story

05:42 PM (IST) Oct 06

ಗಿಲ್ ಕ್ಯಾಪ್ಟನ್ ಅಗುವ ಬಗ್ಗೆ 13 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ರಾ ರೋಹಿತ್ ಶರ್ಮಾ? ಹಿಟ್‌ಮ್ಯಾನ್ ಪೋಸ್ಟ್ ಅಸಲಿಯತ್ತೇನು?

ಶುಭಮನ್ ಗಿಲ್ (ಜರ್ಸಿ 77) ಭಾರತದ ನಾಯಕನಾಗಿ ಆಯ್ಕೆಯಾದಾಗ, 13 ವರ್ಷಗಳ ಹಿಂದಿನ ರೋಹಿತ್ ಶರ್ಮಾ (ಜರ್ಸಿ 45) ಅವರ ಟ್ವೀಟ್ ವೈರಲ್ ಆಯಿತು.  ಈ ಲೇಖನವು ಈ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ತಿಳಿಯೋಣ ಬನ್ನಿ

Read Full Story

05:19 PM (IST) Oct 06

ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ ವಿಶ್ವದಾಖಲೆ 100 ವರ್ಷವಾದ್ರೂ ಯಾರಿಗೂ ಮುರಿಯೋಕೆ ಆಗಲ್ಲ!

ಬೆಂಗಳೂರು: ಮುಂಬರುವ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಿಂದ ಕೆಳಗಿಳಿದಿದ್ದು, ಕೇವಲ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇಂದು ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ ಅಪರೂಪದ ರೆಕಾರ್ಡ್ ಬಗ್ಗೆ ತಿಳಿಯೋಣ

 

Read Full Story

04:19 PM (IST) Oct 06

ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಕಳ್ಳರ ಪ್ಲಾನ್ ಫೈಲ್ ಆಗಿದ್ದು ಹೇಗೆ? ವೀಡಿಯೋ ಭಾರಿ ವೈರಲ್

smart jewelry store: ದೊಡ್ಡ ದೊಡ್ಡ ಜ್ಯುವೆಲ್ಲರಿ ಶಾಪ್‌ಗಳಲ್ಲಿ ರಾತ್ರೋರಾತ್ರಿ ಕಳ್ಳರು ಕೈಚಳಕ ತೋರಿ ಕೈಗೆ ಸಿಕ್ಕಿದೆಲ್ಲವನ್ನು ದೋಚಿ ಹೋಗುವಂತಹ ಹಲವು ಘಟನೆಗಳು ನಡೆದಿವೆ. ಆದರೆ ಎಲ್ಲವೂ ಕಣ್ಣೆದುರೇ ಇದ್ದರೂ ಕಳ್ಳರಿಗೆ ಏನನ್ನೂ ಕದಿಯಲಾಗದಂತೆ ಮಾಡಿದ ಘಟನೆಯ ವೀಡಿಯೋವೊಂದು ಈಗ ಭಾರಿ ವೈರಲ್ ಆಗಿದೆ.

Read Full Story

04:09 PM (IST) Oct 06

ಕಾಂತಾರ ಹೀರೋ ರಿಷಬ್ ಶೆಟ್ಟಿ ಫೇವರೇಟ್ ಕ್ರಿಕೆಟಿಗ ಯಾರು? ಗೆಸ್ ಮಾಡಿ

ಬೆಂಗಳೂರು: ದೇಶಾದಾದ್ಯಂತ ಕನ್ನಡದ ಸಿನಿಮಾ ಕಾಂತಾರ ಚಾಪ್ಟರ್-1 ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ. ಇದೀಗ ಸಂದರ್ಶನವೊಂದರಲ್ಲಿ ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿ, ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.

Read Full Story

03:23 PM (IST) Oct 06

ಇನ್ನೆರಡು ವಾರದಲ್ಲಿ ಪಾತಾಳಕ್ಕೆ ಇಳಿಯಲಿರುವ ಚಿನ್ನ ಮತ್ತು ಬೆಳ್ಳಿ - ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ ಖ್ಯಾತ ವೆಲ್ತ್‌ ಮ್ಯಾನೇಜರ್!

Gold & Silver Prices to Crash 35-50% Soon ಈ ವರ್ಷ ಚಿನ್ನದ ಬೆಲೆಗಳು ಹಲವು ಬಾರಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಪ್ರಸ್ತುತ ಪ್ರತಿ ಔನ್ಸ್‌ಗೆ $4,000 ರ ಸಮೀಪದಲ್ಲಿದೆ, ಆದರೆ ಬೆಳ್ಳಿ $50 ರ ಸಮೀಪದಲ್ಲಿದೆ.

 

Read Full Story

03:07 PM (IST) Oct 06

ಇವರೇ ನೋಡಿ ಪಾಕಿಸ್ತಾನದ ಬ್ಯೂಟಿಫುಲ್ ಮಹಿಳಾ ಕ್ರಿಕೆಟರ್! ಈಕೆಯ ಮೂಲ ಕಾಶ್ಮೀರ

2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರು ಪಾಕಿಸ್ತಾನ ತಂಡವು ಹೀನಾಯ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ಪಾಕ್‌ನ ನತಾಲಿಯಾ ಪರ್ವೇಜ್ ತಮ್ಮ ಬ್ಯೂಟಿಫುಲ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ.  

Read Full Story

02:52 PM (IST) Oct 06

ಒಂದು ಮೀನಿನ ರಕ್ಷಣೆಗಾಗಿ ಸಮುದ್ರದಲ್ಲಿ 17 ಯುದ್ಧನೌಕೆ, ಕಣ್ಗಾವಲು ಹೆಲಿಕಾಪ್ಟರ್‌ಗಳ ನಿಯೋಜನೆ ಮಾಡಿದ ಬಾಂಗ್ಲಾದೇಶ!

India-Bangladesh Relation: ಬಾಂಗ್ಲಾದೇಶವು ಮೀನನ್ನು ರಕ್ಷಿಸಲು ಯುದ್ಧನೌಕೆಗಳು ಮತ್ತು ಗಸ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.ಈ ನಿರ್ಧಾರವು ಭಾರತ-ಬಾಂಗ್ಲಾದೇಶ ಸಂಬಂಧಗಳನ್ನು ಸ್ವಲ್ಪ ಮಟ್ಟಿಗೆ ಬಿಗಡಾಯಿಸಬಹುದು.

Read Full Story

01:35 PM (IST) Oct 06

ಪಾಕಿಸ್ತಾನ ನನ್ನ ಜನ್ಮಭೂಮಿ ಆದ್ರೆ ಭಾರತ ನನ್ನ ಮಾತೃಭೂಮಿ ಎಂದು ಗುಡುಗಿದ ಸ್ಟಾರ್ ಕ್ರಿಕೆಟಿಗ!

ಕರಾಚಿ: ಸದಾ ಒಂದಿಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನೀಶ್ ಕನೇರಿಯಾ, ಇದೀಗ ಮತ್ತೊಂದು ಅಚ್ಚರಿಯ ಹೇಳಿಕೆ ಮೂಲಕ ಗಮನ ಸೆಳೆದಿದ್ದಾರೆ. ಇದೇ ವೇಳೆ ತಾವು ಭಾರತೀಯ ನಾಗರಿತ್ವ ಪಡೆಯುವ ಆಲೋಚನೆ ಸದ್ಯಕ್ಕಿಲ್ಲ ಎಂದು ಕನೇರಿಯಾ ಸ್ಪಷ್ಟನೆ ನೀಡಿದ್ದಾರೆ.

Read Full Story

01:32 PM (IST) Oct 06

ಧ್ರುವ್‌ ರಾಠಿ, ತನ್ಮಯ್‌ ಭಟ್‌...ಭಾರತದ ಟಾಪ್‌-10 ಶ್ರೀಮಂತ ಯೂಟ್ಯೂಬರ್‌ಗಳು!

India's Top 10 Richest YouTubers: Tanmay Bhat Tops List with ₹665 Cr Net Worth ತನ್ಮಯ್ ಭಟ್ ಅವರು 665 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಆಗಿ ಹೊರಹೊಮ್ಮಿದ್ದಾರೆ.

Read Full Story

01:16 PM (IST) Oct 06

'ಸನಾತನಕ್ಕೆ ಅವಮಾನ ಸಹಿಸೋದಿಲ್ಲ..' ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆಯಲು ಯತ್ನಿಸಿದ ವಕೀಲ!

Lawyer Attempts to Attack CJI BR Gavai in Supreme Court ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ರಾಜಶೇಖರ್‌ ಎಂಬ ವಕೀಲರು ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ನಡೆದಿದೆ. 

Read Full Story

01:15 PM (IST) Oct 06

Post Officeನಲ್ಲಿ ಉಳಿತಾಯ ಮಾಡಿ- ಬ್ಯಾಂಕ್​ಗಳಿಗಿಂತಲೂ ಹೆಚ್ಚು ಬಡ್ಡಿ ಪಡೆಯಿರಿ - ಪರಿಷ್ಕೃತ ರೇಟ್ ಇಲ್ಲಿದೆ

ಖಾಸಗಿ ಸಂಸ್ಥೆಗಳ ಮೋಸದ ಬಲೆಗೆ ಬೀಳುವ ಬದಲು, ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಹಣ ಹೂಡುವುದು ಸುರಕ್ಷಿತ ಮತ್ತು ಲಾಭದಾಯಕ. ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಬಡ್ಡಿ ನೀಡುವ ಯೋಜನೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

Read Full Story

12:57 PM (IST) Oct 06

ಅರೆಬರೆ ಬಟ್ಟೆ ತೊಟ್ಟು ದೇಗುಲಕ್ಕೆ ಬಂದ ಯುವತಿ - ಒಳಗೆ ಪ್ರವೇಶ ನಿರಾಕರಿಸಿದ್ದಕ್ಕೆ ಅರ್ಚಕರ ಜೊತೆ ಗಲಾಟೆ

temple dress code: ಯುವತಿಯೊಬ್ಬಳು ಅರೆಬರೆ ಬಟ್ಟೆ ತೊಟ್ಟು ದೇಗುಲಕ್ಕೆ ಬಂದಿದ್ದಾಳೆ. ಆದರೆ ಅಲ್ಲಿ ಪೊಲೀಸರು ಹಾಗೂ ಅರ್ಚಕರು ಆಕೆಯ ವೇಷಭೂಷಣ ನೋಡಿ ಒಳಗೆ ಪ್ರವೇಶಿಸುವುದನ್ನು ತಡೆದಿದ್ದಾರೆ ಇದರಿಂದ ಸಿಟ್ಟಿಗೆದ್ದ ಆಕೆ ಅವರ ಜೊತೆ ಗಲಾಟೆ ಮಾಡಿದ್ದು, ವೀಡಿಯೋ ವೈರಲ್ ಆಗಿದೆ.

Read Full Story

12:09 PM (IST) Oct 06

ಬೆಂಗಳೂರಿನಿಂದ ಅಯೋಧ್ಯೆಗೆ ದೈನಂದಿನ ನೇರ ವಿಮಾನಸೇವೆ ಆರಂಭಿಸಿದ ಸ್ಪೈಸ್‌ ಜೆಟ್‌!

SpiceJet Launches Daily Direct Flights to Ayodhya from Bengaluru ಹಂತ ಹಂತವಾಗಿ ಪ್ರಾರಂಭವಾಗಲಿರುವ ಹೊಸ ವಿಮಾನಗಳು ದೀಪಾವಳಿ ಹಬ್ಬದ ಸಮಯದಲ್ಲಿ ಪವಿತ್ರ ನಗರ ಮತ್ತು ಶ್ರೀರಾಮ ದೇವಾಲಯಕ್ಕೆ ಪ್ರವಾಸಿಗರು ಮತ್ತು ಭಕ್ತರಿಗೆ ಪ್ರವೇಶವನ್ನು ಒದಗಿಸುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

 

Read Full Story

11:17 AM (IST) Oct 06

ಪ್ರತಿ ತಿಂಗಳೂ ಕೂದಲಿಗೆ ಡೈ ಮಾಡಿಕೊಳ್ತೀರಾ? ಕಿಡ್ನಿ ಕಾಯಿಲೆ ಬರೋದು ಖಂಡಿತ ಎಂದ ವೈದ್ಯರು!

Monthly Hair Coloring Leads to Kidney Disease in 20-Year-Old Woman ವೈದ್ಯರ ಪ್ರಕಾರ, ಹೇರ್‌ ಡೈ ಕಲರ್‌ ಮೂತ್ರಪಿಂಡ ಮತ್ತು ಉಸಿರಾಟದ ವೈಫಲ್ಯಕ್ಕೆ ಕಾರಣವಾಗುವ ವಿಷಕಾರಿ ವಸ್ತುಗಳನ್ನು ಹೊಂದಿರುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

 

Read Full Story

10:17 AM (IST) Oct 06

ದೋಷಪೂರಿತ ಕಾಫ್‌ ಸಿರಪ್‌ ಮೇಲೆ ಕ್ರಮ - ಕೇಂದ್ರ ಸೂಚನೆ

Centre Orders Action on Defective Cough Syrups ಕೆಮ್ಮಿನ ಸಿರಪ್ ಸೇವನೆಯಿಂದ 16 ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೋಷಪೂರಿತ ಸಿರಪ್‌ಗಳ ಮೇಲೆ ಕ್ರಮಕ್ಕೆ ಸೂಚಿಸಿದೆ. ಮಹಾರಾಷ್ಟ್ರದಲ್ಲಿ ಕೋಲ್ಡ್ರಿಫ್‌ ಸಿರಪ್ ನಿಷೇಧಿಸಲಾಗಿದೆ.

Read Full Story

10:07 AM (IST) Oct 06

ಏರ್‌ ಇಂಡಿಯಾ ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ, ದಿಢೀರ್‌ ಆನ್‌ ಆದ RAT!

Air India Dreamliner's RAT Deploys Mid-Air Mysteriously ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ತೆರಳುತ್ತಿದ್ದ ಏರ್‌ಇಂಡಿಯಾ ಬೋಯಿಂಗ್ 787 ಡ್ರೀಮ್‌ ಲೈನರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

Read Full Story

09:31 AM (IST) Oct 06

ಪ್ರೊ ಕಬಡ್ಡಿ ಲೀಗ್ - ತಲೈವಾಸ್ ಎದುರು ರೋಚಕ ಗೆಲುವು ಕಂಡ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿ ಲೀಗ್‌ನ 66ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವು ತಮಿಳ್‌ ತಲೈವಾಸ್‌ ವಿರುದ್ಧ 33-29 ಅಂಕಗಳಿಂದ ರೋಚಕ ಜಯ ಸಾಧಿಸಿತು. ಪಂದ್ಯದ ಕೊನೆಯ ಹತ್ತು ನಿಮಿಷಗಳಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಬುಲ್ಸ್, ಸತತ ಎರಡು ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದೆ.

Read Full Story

09:03 AM (IST) Oct 06

ಮಯಾಂಕ್, ಸ್ಮರಣ್, ದ್ರಾವಿಡ್ ಪುತ್ರ ಅನ್ವಯ್‌ಗೆ ಕೆಎಸ್‌ಸಿಎ ವಾರ್ಷಿಕ ಪ್ರಶಸ್ತಿ!

2024-25ನೇ ಸಾಲಿನ ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಮಯಾಂಕ್ ಅಗರ್‌ವಾಲ್, ಅವರೊಂದಿಗೆ ಕಿರಿಯರ ವಿಭಾಗದಲ್ಲಿ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಕೂಡ ಪ್ರಶಸ್ತಿ ಸ್ವೀಕರಿಸಿದರು.  

Read Full Story

08:46 AM (IST) Oct 06

ನೇಪಾಳದಲ್ಲಿ ಭೀಕರ ಪ್ರವಾಹ, ಭೂಕುಸಿತ - 52 ಮಂದಿ ಸಾವು

Nepal Floods and Landslides Kill 52 PM Modi Offers Aid ನೇಪಾಳದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೀಕರ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 52 ಜನರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ. 

Read Full Story

08:23 AM (IST) Oct 06

ಡಾರ್ಜೀಲಿಂಗ್ ಪ್ರವಾಹಕ್ಕೆ 23 ಮಂದಿ ಸಾವು, ಕೇವಲ 12 ಗಂಟೆ ಅವಧಿಯಲ್ಲಿ 30 ಸೆಂ.ಮೀ ಮಳೆ!

Darjeeling Floods Kill 23 After 300mm Rain in 12 Hours  ಪಶ್ಚಿಮ ಬಂಗಾಳದ ಡಾರ್ಜೀಲಿಂಗ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದ್ದು, ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ.

Read Full Story

07:58 AM (IST) Oct 06

ಪಿಒಕೆ ನಮ್ಮ ಮನೆ ಕೋಣೆ ಇದ್ದಂತೆ, ವಾಪಾಸ್‌ ಪಡೀಬೇಕು - ಆರೆಸ್ಸೆಸ್‌ ಮುಖಸ್ಥ ಮೋಹನ್‌ ಭಾಗವತ್‌

RSS Chief Mohan Bhagwat Calls for PoK Retake Amid Pakistan Minister's Anti-India Threat ಪಾಕ್ ಆಕ್ರಮಿತ ಕಾಶ್ಮೀರವು (ಪಿಒಕೆ) ಭಾರತದ ಮನೆಯೊಳಗಿನ ಕೋಣೆಯಂತೆ, ಅದನ್ನು ಮರುವಶ ಮಾಡಿಕೊಳ್ಳಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. 

Read Full Story

07:49 AM (IST) Oct 06

ಕರ್ನಾಟಕದಲ್ಲೂ 2 ಕಳಪೆ ಕೆಮ್ಮು ಔಷಧ ಪತ್ತೆ: ಆಗಸ್ಟಲ್ಲೇ ಔಷಧ ಗುಣಮಟ್ಟ ಸಂಸ್ಥೆ ವರದಿ

ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ 2 ಬ್ರ್ಯಾಂಡ್‌ಗಳ ಕೆಮ್ಮಿನ ಸಿರಪ್ ಗುಣಮಟ್ಟ ಕಳಪೆಯಾಗಿದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಆಗಸ್ಟ್‌ನಲ್ಲೇ ವರದಿ ನೀಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.

 

Read Full Story

More Trending News