ನವದೆಹಲಿ (ಆ.22): 'ಸ್ಕೂಲ್ ಠೀಕ್ ಕರೋ' ಅಭಿಯಾನದ ಭಾಗವಾಗಿ ಸರ್ಕಾರಿ ಶಾಲೆಯನ್ನು ಪರಿಶೀಲಿಸಲು ತೆರಳಿದ್ದ ಜಿರಳೆ ಪಕ್ಷದ (ಸಿಜೆಪಿ) ತಂಡವನ್ನು ಸ್ಥಳೀಯರು ತಡೆದು, ಗ್ರಾಮದಿಂದ ಹೊರದಬ್ಬಿರುವ ಘಟನೆ ಜೈಪುರದ ರಾಮಪುರ ಕನ್ವರ್ಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ಬೆನ್ನಲ್ಲೇ, 48 ಗಂಟೆಗಳಲ್ಲಿ ಶಾಲೆ ದುರಸ್ತಿ ಆರಂಭಿಸದಿದ್ದರೆ ಹಾಗೂ ಬಿಜೆಪಿ ಗೂಂಡಾಗಳನ್ನು ಬಂಧಿಸದಿದ್ದರೆ ಧರಣಿ ಕೂರುತ್ತೇವೆ ಎಂದು ಸಿಜೆಪಿ ಸ್ಥಾಪಕ ಅಬಿಜೀತ್ ದೀಪೈ ಎಚ್ಚರಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:12 PM (IST) Aug 22
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವಾಗಲೇ, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಉಪ ಕಮಾಂಡರ್ ಸೈಫುಲ್ಲಾ ಕಸೂರಿಯ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.
09:54 PM (IST) Aug 22
ಪ್ರಧಾನಿ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಗಮನಹರಿಸಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
09:38 PM (IST) Aug 22
4 ವರ್ಷದೊಳಗಿನ ಮಕ್ಕಳಿಗೆ ಶೀತ ಮತ್ತು ಅಲರ್ಜಿಗಾಗಿ ಬಳಸಲಾಗುವ ಕ್ಲೋರ್ಫೆನಿರಮೈನ್ ಮಲೇಟ್ ಹಾಗೂ ಫೆನೈಲೆಫ್ರಿನ್ ಹೈಡ್ರೋಕ್ಲೋರೈಡ್ ಕಾಂಬಿನೇಷನ್ (FDC) ಔಷಧಗಳ ಬಳಕೆಯನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಔಷಧಗಳ ಲೇಬಲ್ ಮತ್ತು ಪ್ಯಾಕೆಟ್ಗಳ ಮೇಲೆ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಇದನ್ನು ಬಳಸಬಾರದು ಎಂಬ ಎಚ್ಚರಿಕೆಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗಿದೆ.
08:45 PM (IST) Aug 22
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್ಗಾಗಿ ನಡೆದ ಜಗಳದ ಬಳಿಕ ಮಗ ಬೆಟ್ಟದಿಂದ ಧುಮುಕಿದ್ದು, ಆತನನ್ನು ರಕ್ಷಿಸಲು ಹೋದ ತಂದೆ-ತಾಯಿ ಇಬ್ಬರೂ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಮೃತ ಸಹೋದರನ ಶವ ಕಂಡು ಕಣ್ಣೀರಿಟ್ಟ ತಂಗಿ, ಇನ್ನು ಹತ್ತು ದಿನದಲ್ಲಿ ರಾಖಿ ಇದೆ, ಈಗ ನಾನು ಯಾರಿಗೆ ಫೋನ್ ಮಾಡಲಿ? ಎಂದು ಕರುಣಾಜನಕವಾಗಿ ರೋದಿಸಿರುವುದು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
08:41 PM (IST) Aug 22
ಸದ್ಯ ಸಿನಿಮಾ ಪ್ರೇಮಿಗಳ ಮಾತಿನಲ್ಲಿ ‘ಫೌಜಿ’, ‘ವಿಶ್ವಂಭರ’, ‘ಟಾಕ್ಸಿಕ್’ನಂತಹ ಬಿಗ್ ಬಜೆಟ್ ಸಿನಿಮಾಗಳದ್ದೇ ಸದ್ದು. ಆದರೆ ಮುಂದಿನ ಎರಡು ತಿಂಗಳು ಬಾಕ್ಸ್ ಆಫೀಸ್ನಲ್ಲಿ ಕೇವಲ ದೊಡ್ಡ ಸಿನಿಮಾಗಳದ್ದೇ ಅಬ್ಬರವಿರಲ್ಲ.
07:07 PM (IST) Aug 22
ಯಾವುದೇ ಆರ್ಭಟವಿಲ್ಲದೆ, ಕೇವಲ ಪ್ರೀತಿ ಮತ್ತು ಕಾನೂನಿನ ಗೌರವದೊಂದಿಗೆ ಸತಿ-ಪತಿಯರಾಗಿರುವ ಅರ್ಜುನ್ ಮತ್ತು ಗೇಬ್ರಿಯೆಲಾ ಜೋಡಿಗೆ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಆದರೆ, ಈ ಜೋಡಿಯ ಮದುವೆಯಲ್ಲಿ ಒಂದು ಟ್ವಿಸ್ಟ್ ಇದೆ..! ಅದೇನ್ ಗೊತ್ತಾ?
06:42 PM (IST) Aug 22
ಎಲ್ಲವೂ ಅಂದುಕೊಂಡಂತೆ ನಡೆದರೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗೆ ನಾಯಿಗಳ ನಿಯೋಜನೆ ಆಗಲಿದೆ. ಆದರೆ, ಇದು ಅಂತಿಂಥ ನಾಯಿಗಳಲ್ಲ, ಅತ್ಯಾಧುನಿಕ ರೋಬೋಟಿಕ್ ನಾಯಿಗಳು!
06:34 PM (IST) Aug 22
05:53 PM (IST) Aug 22
05:53 PM (IST) Aug 22
ಬ್ಯಾಂಕ್ ಆಫ್ ಬರೋಡಾ ದೇಶಾದ್ಯಂತ ಒಟ್ಟು 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪದವಿ ಜೊತೆಗೆ ಕನಿಷ್ಠ ಒಂದು ವರ್ಷದ ಬ್ಯಾಂಕಿಂಗ್ ಅಧಿಕಾರಿ ಹುದ್ದೆಯ ಅನುಭವ ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 7, 2026 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
05:23 PM (IST) Aug 22
Mahakali The End Begins: ನಟಿ ಭೂಮಿ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ನ ಬಹುನಿರೀಕ್ಷಿತ ಸಿನಿಮಾ ‘ಮಹಾಕಾಳಿ-ದಿ ಎಂಡ್ ಬಿಗಿನ್ಸ್’ನಲ್ಲಿ ಟೈಟಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
04:52 PM (IST) Aug 22
04:52 PM (IST) Aug 22
ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ರೆಜಿನಾ ಕ್ಯಾಸಂಡ್ರಾ, ಚಿತ್ರರಂಗದಲ್ಲಿ ಬರೋಬ್ಬರಿ 20 ವರ್ಷಗಳನ್ನು ಪೂರೈಸಿದ್ದಾರೆ.
04:43 PM (IST) Aug 22
ಶಾರ್ಕ್ಗಳು ಸಾಗರದಲ್ಲಿ ದಾರಿ ತಪ್ಪದೆ ಸಾವಿರಾರು ಕಿಲೋಮೀಟರ್ ಹೇಗೆ ಚಲಿಸುತ್ತವೆ ಎಂಬುದು ಬಹುಕಾಲದ ರಹಸ್ಯವಾಗಿತ್ತು. ಫ್ಲೋರಿಡಾದಲ್ಲಿ ನಡೆದ ಅಧ್ಯಯನವೊಂದು, ಶಾರ್ಕ್ಗಳು ಭೂಮಿಯ ಕಾಂತಕ್ಷೇತ್ರವನ್ನು ಕೇವಲ ದಿಕ್ಸೂಚಿಯಂತೆ ಅಲ್ಲ, ಬದಲಾಗಿ ತಮ್ಮ ಸ್ಥಾನವನ್ನು ಗುರುತಿಸುವ 'ಕಾಂತೀಯ ನಕ್ಷೆ'ಯಾಗಿ ಬಳಸುತ್ತವೆ ಎಂಬುದಕ್ಕೆ ಪ್ರಾಯೋಗಿಕ ಸಾಕ್ಷ್ಯವನ್ನು ಒದಗಿಸಿದೆ.
04:35 PM (IST) Aug 22
04:30 PM (IST) Aug 22
ಮೆಗಾಸ್ಟಾರ್ ಚಿರಂಜೀವಿ ಅವರ 70ನೇ ಹುಟ್ಟುಹಬ್ಬದ ದಿನ ಅವರ ಮುಂದಿನ ಸಿನಿಮಾ Mega158ಗೆ 'ಕಾಕ' ಎಂದು ಹೆಸರಿಡಲಾಗಿದೆ. ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದ ಗ್ಲಿಂಪ್ಸ್ನಲ್ಲಿ ಚಿರಂಜೀವಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
04:17 PM (IST) Aug 22
04:14 PM (IST) Aug 22
03:59 PM (IST) Aug 22
03:31 PM (IST) Aug 22
ಶಾರ್ಟ್ಸ್, ರೀಲ್ಸ್ಗಳಂತಹ ಕಿರು ವಿಡಿಯೋಗಳನ್ನು ಅತಿಯಾಗಿ ನೋಡೋದ್ರಿಂದ ಮೆದುಳಿನ ಪ್ರಿಫ್ರಂಟಲ್ ಭಾಗದ ಮೇಲೆ ಪರಿಣಾಮ ಉಂಟಾಗಿ, ಏಕಾಗ್ರತೆ, ಸ್ವಯಂ ನಿಯಂತ್ರಣದ ಸಾಮರ್ಥ್ಯ ಕುಂಠಿತವಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳ ಅಗತ್ಯವಿದ್ದರೂ, ಮಾನಸಿಕ ಗಮನ ಮತ್ತು ಬೌದ್ಧಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊಬೈಲ್ ಬಳಕೆಯ ಸಮಯ ಮಿತಿಗೊಳಿಸುವುದು ಉತ್ತಮ ಎಂದು ತಜ್ಞರು ಎಚ್ಚರಿಸಿದ್ದಾರೆ.
02:28 PM (IST) Aug 22
ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ಗಳ ನಿಯಮಗಳು ಮತ್ತು ಶುಲ್ಕಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು ಆಗಸ್ಟ್ 28, 2026 ರಿಂದ ಜಾರಿಗೆ ಬರಲಿವೆ.
02:12 PM (IST) Aug 22
ಮಂಗಳೂರು ರೈಲ್ವೆ ವಲಯವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ಮೈಸೂರು ವಿಭಾಗಕ್ಕೆ ಸೇರಿಸುವ ಕೇಂದ್ರದ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಸಂಸದರೊಂದಿಗೆ ಒಗ್ಗಟ್ಟಿನ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
01:42 PM (IST) Aug 22
01:36 PM (IST) Aug 22
01:21 PM (IST) Aug 22
12:56 PM (IST) Aug 22
ಬೆಂಗಳೂರಿನ ಮೆಜೆಸ್ಟಿಕ್ನಿಂದ ಹಿಡಿದು ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಪ್ರತಿಯೊಂದು ನಗರಗಳಲ್ಲಿ ಈಗಾಗ್ಲೇ ಹೌಸ್ಫುಲ್ ಬೋರ್ಡ್ಗಳು ರಾರಾಜಿಸುತ್ತಿವೆ. ವಿಶೇಷವಾಗಿ ಬೆಳಗಿನ ಜಾವ 6 ಗಂಟೆಯ ಪ್ರದರ್ಶನಗಳಿಗೆ ಅಭಿಮಾನಿಗಳು ಅಕ್ಷರಶಃ ಮುಗಿಬಿದ್ದಿದ್ದಾರೆ. ಏನೆಲ್ಲಾ ಬೆಳವಣಿಗೆ ಅಗಿದೆ ಅಂತ ನೋಡಿ..
12:56 PM (IST) Aug 22
12:54 PM (IST) Aug 22
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ. ಈ ಅಂತರ್ರಾಜ್ಯ ಮೆಟ್ರೋ ಯೋಜನೆಯು ಎರಡೂ ರಾಜ್ಯಗಳ ಆರ್ಥಿಕತೆಗೆ ಬಲ ನೀಡಲಿದೆ ಎಂದಿದ್ದಾರೆ.
12:42 PM (IST) Aug 22
12:40 PM (IST) Aug 22
ಸಕ್ಕರೆ ಬೆಲೆ ಮತ್ತೆ 30 ರೂಪಾಯಿ ಏರಿಕೆ ಕಂಡು ಇದೀಗ ಕೆಜೆಗಿ 75 ರೂಪಾಯಿ ಆಗಿದೆ. ಇದೀಗ ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕೊರತೆ ಎದುರಾಗಿದೆ. ಪರಿಣಾಮ ಬೆಲೆ ಗಗನಕ್ಕೇರುತ್ತಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?
11:52 AM (IST) Aug 22
ಗ್ರಾಹಕ 505 ರೂಪಾಯಿ ನೀಡಿ ಪಿಝಾ ಆರ್ಡರ್ ಮಾಡಿದ್ದಾನೆ. ಪಿಝಾ ತಲುಪಿದೆ. ಆದರೆ ಗ್ರಾಹಕನಿಗೆ ಸಣ್ಣ ಅನುಮಾನ ಕಾಡಿದೆ. ಕಣ್ಣೆತ್ತಿ ನೋಡಿದ ಬೆನ್ನಲ್ಲೇ 10520 ರೂಪಾಯಿ ಕೂಡ ಬಂದಿದೆ. ಏನಿದು ಘಟನೆ?
11:35 AM (IST) Aug 22
ಬೆಳ್ಳಿತೆರೆಯ ಮೇಲೆ ಸದಾ ನಗುನಗುತ್ತಾ, ಬಬ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳುವ ಈ ನಟಿಯ ಮನಸ್ಸಿನ ಆಳದಲ್ಲಿ ಒಂದು ಕರಾಳ ಅಧ್ಯಾಯ ಅಡಗಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಅವರು ಬಿಚ್ಚಿಟ್ಟ ಸತ್ಯಗಳು ಅಭಿಮಾನಿಗಳ ಎದೆಯನ್ನು ಝಲ್ಲೆನಿಸಿವೆ. ಅದೇನು ನೋಡಿ..
10:56 AM (IST) Aug 22
ತಮಿಳುನಾಡು ಸರ್ಕಾರದ 'ತಾಯ್ಮಾಮನ್ ತಂಗ ಮೊದಿರಂ ತಿಟ್ಟಂ' ಯೋಜನೆಯಡಿ, ಜೋಯಾಲುಕ್ಕಾಸ್ ಸಂಸ್ಥೆಯು ಪ್ರತಿ ಚಿನ್ನದ ಉಂಗುರಕ್ಕೆ ಕೇವಲ 1 ಪೈಸೆ ಸೇವಾ ಶುಲ್ಕದ ಬಿಡ್ ಸಲ್ಲಿಸಿ 755 ಕೋಟಿ ರೂ. ಮೌಲ್ಯದ ಟೆಂಡರ್ನ ಶೇ. 70ರಷ್ಟು ಭಾಗವನ್ನು ಪಡೆದುಕೊಂಡಿದೆ.
10:48 AM (IST) Aug 22
ಹಲವು ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾದಿಂದ ಸುದ್ದಿಯಾಗುತ್ತಿರುವ ಪಂಜಾಬ್ ಇದೀಗ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ವಿರುದ್ಧ ಅತ್ಯಾ೧ಚಾರ ಪ್ರಕರಣವೊಂದನ್ನು ಮುಚ್ಚಿಹಾಕಲು 5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರವನ್ನು NHRC ಗಂಭೀರವಾಗಿ ಪರಿಗಣಿಸಿದೆ.
08:05 AM (IST) Aug 22
07:56 AM (IST) Aug 22
ಜೈಪುರದ ರಾಮಪುರ ಕನ್ವರ್ಪುರ ಗ್ರಾಮದಲ್ಲಿ ಪಾಳುಬಿದ್ದ ಸರ್ಕಾರಿ ಶಾಲೆಯನ್ನು ಪರಿಶೀಲಿಸಲು ತೆರಳಿದ್ದ ಜಿರಳೆ ಪಕ್ಷದ ಕಾರ್ಯಕರ್ತರನ್ನು ಸ್ಥಳೀಯರು ತಡೆದು ಗ್ರಾಮದಿಂದ ಹೊರಹಾಕಿದ್ದಾರೆ.