Published : May 15, 2026, 08:15 AM ISTUpdated : May 15, 2026, 11:05 PM IST

India News Live: ಚೀನಾ ಹ್ಯಾಕ್ ಮಾಡಬಹುದೆಂಬ ಭೀತಿಗೆ ಸ್ವದೇಶದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ನಿಯೋಗ!

ಸಾರಾಂಶ

ಬೆಂಗಳೂರು/ನವದೆಹಲಿ: ದೇಶಾದ್ಯಂತ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿವೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಬೆಂಗಳೂರು, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಲ್ಲಿ ಇಂಧನ ದರಗಳು ಗಣನೀಯವಾಗಿ ಹೆಚ್ಚಾಗಿವೆ.

ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3.25 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 106.21 ರೂಪಾಯಿ ತಲುಪಿದೆ. ಇನ್ನುಳಿದಂತೆ ದೇಶದ ಪ್ರಮುಖ ನಗರಗಳ ಇಂದಿನ ದರಗಳು ಹೀಗಿವೆ:

ನವದೆಹಲಿ: ಪೆಟ್ರೋಲ್ 97.77 ರೂ. (+3.00 ರೂ ಏರಿಕೆ)

ಮುಂಬೈ: ಪೆಟ್ರೋಲ್ 106.68 ರೂ. (+3.14 ರೂ ಏರಿಕೆ)

ಕೋಲ್ಕತ್ತಾ: ಪೆಟ್ರೋಲ್ 108.74 ರೂ. (+3.29 ರೂ ಏರಿಕೆ)

ಚೆನ್ನೈ: ಪೆಟ್ರೋಲ್ 103.67 ರೂ. (+2.83 ರೂ ಏರಿಕೆ)

11:05 PM (IST) May 15

ಚೀನಾ ಹ್ಯಾಕ್ ಮಾಡಬಹುದೆಂಬ ಭೀತಿಗೆ ಸ್ವದೇಶದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ನಿಯೋಗ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸವು ಸೈಬರ್ ಭದ್ರತಾ ಭೀತಿಯಿಂದಾಗಿ 'ಡಿಜಿಟಲ್ ಲಾಕ್‌ಡೌನ್' ಅಡಿಯಲ್ಲಿ ನಡೆಯಿತು. ಈ ಭೇಟಿಯಲ್ಲಿ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿತು.

Read Full Story

10:46 PM (IST) May 15

ಶ್ರೀದೇವಿ ಮಗಳಿಗೆ ಭಾರೀ ಬೇಜಾರು.. ಈ ಚಿತ್ರದ ಪ್ರಚಾರಕ್ಕೆ ಬರುವಷ್ಟು 'ಪೆದ್ದಿ' ನಾನಲ್ಲ ಅಂದ ಜಾಹ್ನವಿ ಕಪೂರ್!

ಸಿನಿಮಾ ಪ್ರಚಾರ ಅಂದ ಮೇಲೆ ನಾಯಕ-ನಾಯಕಿ ಒಟ್ಟಾಗಿ ಕಾಣಿಸಿಕೊಳ್ಳುವುದು ವಾಡಿಕೆ. ಆದರೆ 'ಪೆದ್ದಿ' ಪ್ರಚಾರದ ಕಾರ್ಯಕ್ರಮಗಳಲ್ಲಿ ಜಾಹ್ನವಿ ಕಪೂರ್ ಸುಳಿವೇ ಇಲ್ಲ! ಇದಕ್ಕೆ ಕೇಳಿಬರುತ್ತಿರುವ ಕಾರಣ ಮಾತ್ರ ಅಚ್ಚರಿ ಮೂಡಿಸುವಂತಿದೆ. ಕಾರಣ ಏನಿರಬಹುದು? ಈ ಸ್ಟೋರಿ ನೋಡಿ ಗೊತ್ತಾಗುತ್ತೆ..!

Read Full Story

10:02 PM (IST) May 15

ರಶ್ಮಿಕಾ ಅಂತಿಂಥ ಹೆಣ್ಣಲ್ಲ, ಕೇರಳದಲ್ಲಿ ಕಿಚ್ಚು ಹಚ್ಚುವ 'ಗೊಂಡ್' ಯುವತಿಯಾಗಿ ಅಬ್ಬರಿಸಿ ಬಂದಿದ್ದಾರೆ!

ಬಾಲಿವುಡ್‌ನಿಂದ ಟಾಲಿವುಡ್ ತನಕ 'ನ್ಯಾಷನಲ್ ಕ್ರಶ್' ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸೌಂದರ್ಯಕ್ಕಲ್ಲ ಬದಲಿಗೆ ಕೇರಳದಲ್ಲಿ ಈ ನಟಿ ಮಾಡಿರುವ ಕೆಲಸಕ್ಕೆ.. ಏನಿದು ಮ್ಯಾಟರ್ ನೋಡಿ..

Read Full Story

09:28 PM (IST) May 15

ಸ್ನೇಹಿತ-ಸಿಎಂ ವಿಜಯ್‌ಗೇ ಶಾಕ್! 'ದಳಪತಿ' ಬದ್ಧ ವೈರಿಯ ಮಗನ ಜೊತೆ ಕೈಜೋಡಿಸಿದ ತ್ರಿಶಾ ಕೃಷ್ಣನ್

ಸಿಎಂ ಆದ ಖುಷಿಯಲ್ಲಿದ್ದ ವಿಜಯ್‌ಗೆ ಈ ಬೆಳವಣಿಗೆ ಇಕ್ಕಟ್ಟಿಗೆ ಸಿಲುಕಿಸುತ್ತದೆಯೇ? ಅಥವಾ ತ್ರಿಶಾ ಅವರ ಈ ನಿರ್ಧಾರವನ್ನು ಕೇವಲ ಸಿನಿಮಾ ಕೆಲಸ ಎಂದು ಭಾವಿಸಿ ಸುಮ್ಮನಾಗುತ್ತಾರೆಯೇ? ವಿಜಯ್-ತ್ರಿಶಾ ಸ್ನೇಹದ ಹಾದಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ? ಇದೀಗ ಎಲ್ಲರಲ್ಲೂ ಕುತೂಹಲ ಕೆರಳಿದೆ.. 

Read Full Story

08:21 PM (IST) May 15

ಪ್ರಧಾನಿ ಯುಎಇ ಭೇಟಿ - ಶತಕೋಟಿ ಡಾಲರ್​ ಹೂಡಿಕೆ- ಇಂಧನ, LPG ಸೇರಿ ಭಾರತಕ್ಕೆ ಏನೆಲ್ಲಾ ಲಾಭ

ಪ್ರಧಾನಿ ನರೇಂದ್ರ ಮೋದಿಯವರ ಯುಎಇ ಭೇಟಿಯು ಭಾರತಕ್ಕೆ ಮಹತ್ವದ ಲಾಭಗಳನ್ನು ತಂದಿದೆ. ಈ ಭೇಟಿಯ ಸಮಯದಲ್ಲಿ ಇಂಧನ, ರಕ್ಷಣೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇದು ಭಾರತದ ಇಂಧನ ಭದ್ರತೆಯನ್ನು ಬಲಪಡಿಸಿದೆ ಮತ್ತು ಶತಕೋಟಿ ಡಾಲರ್‌ಗಳ ಹೂಡಿಕೆಯನ್ನು ಆಕರ್ಷಿಸಿದೆ.
Read Full Story

08:02 PM (IST) May 15

ಕುಂಕುಮವಿಟ್ಟು ಬಂಗಾಳದಲ್ಲಿ ಮುಸ್ಲಿಂ ಮಹಿಳೆ ಕಾಳಿ ದರ್ಶನ - ಬಾಂಗ್ಲಾದೇಶದಲ್ಲಿ ಅಲ್ಲೋಲ ಕಲ್ಲೋಲ

ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಖಾನ್ ಪಶ್ಚಿಮ ಬಂಗಾಳದ ಕಾಳಿ ದೇಗುಲಕ್ಕೆ ಭೇಟಿ ನೀಡಿ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಹಿಂದೆ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಭೇಟಿಗೆ ಯತ್ನಿಸಿದಾಗ ಬಾಂಗ್ಲಾದೇಶದಿಂದ ಜೀವ ಬೆದರಿಕೆಗಳು ಬಂದಿದ್ದವು ಎಂದು ಅವರು ಬಹಿರಂಗಪಡಿಸಿದ್ದಾರೆ.

Read Full Story

07:36 PM (IST) May 15

ರಜನಿ, ಮೋಹನ್ ಲಾಲ್ & ದಳಪತಿ ವಿಜಯ್ ಸೀಕ್ರೆಟ್ ಹೇಳಿದ ಮಾಳವಿಕಾ ಮೋಹನ್.. ಇಷ್ಟೂ ದಿನ ಗುಟ್ಟಾಗಿಟ್ಟಿದ್ದೇಕೆ?

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾಳವಿಕಾ ಅವರು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್, ಮೋಹನ್ ಲಾಲ್ ಮತ್ತು ದಳಪತಿ ವಿಜಯ್ ಅವರ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಘಟಾನುಘಟಿ ನಟರಿಂದ ತಾವು ಕಲಿತದ್ದೇನು ಎಂಬ ಸೀಕ್ರೆಟ್ ಬಿಚ್ಟಿಟ್ಟಿದ್ದಾರೆ. 

Read Full Story

05:48 PM (IST) May 15

ಇದೊಂದು ವೈರಲ್ ಫೋಟೋ ಜಗತ್ತಿನ ನಿದ್ದೆ ಕೆಡಿಸಿದೆ; ನೀವಿನ್ನೂ ನೋಡಿಲ್ವಾ? ಏನೋ ಬರೆದಿದೆ ಅದ್ರಲ್ಲಿ ನೋಡಿ!

ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಅಗುತ್ತಿರುವ ಈ ಫೋಟೋ ಇಡೀ ಜಗತ್ತಿನ ನಿದ್ದೆ ಕೆಡಿಸಿದೆ. ಕಾರಣ, ಇದರಲ್ಲಿ ಫೋಟೋ & ಬರಹದ ಮೂಲಕ ಹೇಳಿರೋ ವಿಷಯ ಎಂಥವರನ್ನೂ ಒಮ್ಮೆ ದಂಗುಬಡಿಸುತ್ತದೆ. ನೀವು ಒಮ್ಮೆ ಈ ವೈರಲ್ ಫೋಟೋ ನೋಡಿದರೆ, ತುಂಬಾ ದಿನ ನಿದ್ದೆ ಮಾಡಲಾರಿರಿ.. ಸ್ಟೋರಿ ಒಳಗೆ ಫೋಟೋ ಇದೆ ನೋಡಿ..  

Read Full Story

05:32 PM (IST) May 15

ಶ್ರೀಮದ್ ಭಗವತ್ ಕಥಾ ವೇಳೆ ಗಾಯಕನ ಮೇಲೆ ಭಕ್ತರಿಂದ ಹಣದ ಸುರಿಮಳೆ, ನೋಟುಗಳಿಂದ ಮುಳುಗಡೆ

ಶ್ರೀಮದ್ ಭಗವತ್ ಕಥಾ ಮೂಲಕ ಪುರಾಣದ ಕತೆಗಳನ್ನು ಸುಶ್ರಾವ್ಯವಾಗಿ ಭಕ್ತರಿಗೆ ಹೇಳಲಾಗುತ್ತದೆ. ಹೀಗೆ ಜನಪದ ಗಾಯಕನ ಶ್ರೀಮದ್ ಭಗವತ್ ಕಥಾ ವೇಳೆ ಭಕ್ತರು ಗೋಣಿ ಚೀಲದಲ್ಲಿ ಹಣದ ಸುರಿಮಳೆ ಮಾಡಿದ್ದಾರೆ. ನೋಟುಗಳಿಂದ ಗಾಯಕ ಮುಳುಗಿ ಹೋದ ವಿಡಿಯೋ ಭಾರಿ ವೈರಲ್ ಆಗಿದೆ

Read Full Story

03:23 PM (IST) May 15

ವಿವಾದಿತ ಸ್ಥಳ ಸರಸ್ವತಿ ಮಂದಿರ, ಇಲ್ಲಿ ನಮಾಜ್ ನಿಲ್ಲಿಸಿ, ಭೋಜಶಾಲಾ ಕುರಿತು ಹೈಕೋರ್ಟ್ ತೀರ್ಪು

ಭೋಜಶಾಲಾ ವಿವಾದಿತ ಸ್ಥಳ ಹಿಂದೂ ದೇವಸ್ಥಾನವಾಗಿದೆ. ಬಳಿಕ ಕೆಲ ಭಾಗ ಒಡೆದ ಕಮಲ್ ಮೌಲಾ ಮಸೀದಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ನಮಾಜ್ ಮಾಡುವುದು ನಿಲ್ಲಿಸಬೇಕು, ಇದು ಸರಸ್ವತಿ ಮಂದಿರ ಸ್ಥಳ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

 

Read Full Story

02:48 PM (IST) May 15

ಕೊನೆ ಫೋನ್ ಕರೆ ಬಳಿಕ ಮಗಳೇ ಇಲ್ಲ, ಮದ್ವೆಯಾದ ಐದೇ ತಿಂಗಳಿಗೆ ದುರಂತ ಅಂತ್ಯಕಂಡ ಯುವತಿ

ರಾತ್ರಿ 10 ಗಂಟೆಗೆ ಕರೆ ಮಾಡಿ ತನಗಾಗುತ್ತಿರುವ ಮಾನಿಸಿಕ ದೈಹಿಕ ಹಿಂಸೆ ಕುರಿತು ತಾಯಿಗೆ ಹೇಳಿದ್ದಾಳೆ. ಅಷ್ಟರಲ್ಲೇ ಕೋಣೆಗೆ ಗಂಡ ಆಗಮಿಸಿದ ಕಾರಣ ಫೋನ್ ಕಟ್ ಮಾಡಿದ್ದಾಳೆ. 10 ನಿಮಿಷದಲ್ಲೇ ನಡೆದಿದ್ದೇನು?

Read Full Story

02:06 PM (IST) May 15

ಸ್ವಂತ ಮನೆ ಮಾಡಿದ ಬೆನ್ನಲ್ಲೇ ಹೈದರಾಬಾದ್‌ನಲ್ಲಿ ಹೊಸ ಕೆಲಸ ಶುರು ಮಾಡಿದ 'BBK-BBT' ಶೋಭಾ ಶೆಟ್ಟಿ!

ಮಲೆನಾಡಿನ ಈ ಚೆಲುವೆ ಮೊದಲು ಕನ್ನಡಿಗರ ಮನೆಗೆದ್ದಿದ್ದು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ. ಅದರಲ್ಲಿ ಅವರು ನಿರ್ವಹಿಸಿದ 'ತನು' ಎಂಬ ಪಾತ್ರ ಇಂದಿಗೂ ಮನೆಮಾತು. ಕನ್ನಡದ 'ನಮ್ಮ ರುಕ್ಕು' ಸೀರಿಯಲ್‌ ಬಳಿಕ ಶೋಭಾ ಶೆಟ್ಟಿ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದು ತೆಲುಗು ಕಿರುತೆರೆ.

Read Full Story

01:52 PM (IST) May 15

ಯೋಗಿ ಮಾದರಿಯಲ್ಲೇ ಪಶ್ಚಿಮ ಬಂಗಾಳ, 24 ಬುಲ್ಡೋಜರ್ ಮೂಲಕ ಅಕ್ರಮ ಕಟ್ಟಡ ನೆಲೆಸಮ

ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದೀಗ ಯುಪಿಯ ಯೋಗಿ ಮಾಡೆಲ್ ಅನುಸರಿಸುತ್ತಿದೆ. ಸಿಎಂ ಸುವೆಂದು ಅಧಿಕಾರಿ 24 ಬುಲ್ಡೋಜರ್ ಬಳಸಿ ಅತಿಕ್ರಮ ಕಟ್ಟಡ ನೆಲೆಸಮ ಮಾಡಲಾಗುತ್ತಿದೆ.

 

Read Full Story

01:15 PM (IST) May 15

ಸೂರ್ಯ ಈ ಅದ್ಭುತ ಫೋಟೋಗಾಗಿ 1.7 ಮಿಲಿಯನ್ ಕ್ಲಿಕ್ ಮಾಡಿದ ಅಸ್ಟ್ರೋಗ್ರಾಫರ್, ಇಲ್ಲಿದೆ ಫೋಟೋಸ್

ಸೂರ್ಯನ ಒಂದು ಅದ್ಭುತ ಫೋಟೋಗಾಗಿ ಆ್ಯಸ್ಟ್ರೋ ಫೋಟೋಗ್ರಾಫರ್ ಬರೋಬ್ಬರಿ 1.7 ಮಿಲಿಯನ್ ಫೋಟೋ ತೆಗೆದಿದ್ದಾರೆ. ಸತತ ಒಂದು ವಾರ ಫೋಟೋ ಕ್ಲಿಕ್ ಮಾಡಿ ಜಗತ್ತೇ ಚಕಿತಗೊಳಿಸುವ ಫೋಟೋ, ವಿಡಿಯೋ ತೆಗೆದಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿದೆ.

Read Full Story

12:41 PM (IST) May 15

ವಾಯುಭಾರತ ಕುಸಿತ ಬೆನ್ನಲ್ಲೇಎಲ್ ನಿನೋ ಭೀತಿ, ಈ ನಗರಕ್ಕೆ ಪ್ರವಾಹ, ಕೆಲೆವೆಡೆ ಬರಗಾಲ ಎಚ್ಚರಿಕೆ

ವಾಯುಭಾರತ ಕುಸಿತದಿಂದ ಪ್ರತಿ ದಿನ ಮಳೆ ಆತಂಕ, ಹವಾಮಾನ ವೈಪರಿತ್ಯ ಆತಂಕ ಹೆಚ್ಚಾಗಿದೆ. ಎನ್ ನಿನೊ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಇದರ ಪರಿಣಾಮ ಭಾರತದ ಪ್ರಮುಖ ನಗರಗಳಲ್ಲಿ ಪ್ರವಾಹ ಎಚ್ಚರಿಕೆ ಎದುರಾಗಿದೆ.

Read Full Story

12:06 PM (IST) May 15

ಮೌನಿ ರಾಯ್ ದಾಂಪತ್ಯದಲ್ಲಿ ಸಮಸ್ಯೆ ಇದೆ ಎಂಬ ಕ್ಲೂ ಕೊಟ್ಟಿದ್ದು ಈ ನಟಿ; ರಿಯಲೀ 'ಕ್ಯಾ ಹೋಗಯಾ'..?

ಕಿರುತೆರೆಯಿಂದ ಬೆಳ್ಳಿ ಪರದೆಯವರೆಗೆ ಮೌನಿ ರಾಯ್ ಪಯಣ ರೋಚಕವಾಗಿದೆ. 'ದೇವೋಂ ಕೆ ದೇವ್ ಮಹಾದೇವ್' ಮತ್ತು 'ನಾಗಿನ್' ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಈಕೆ, 'ಕೆಜಿಎಫ್' ಸಿನಿಮಾದ ವಿಶೇಷ ಹಾಡಿನಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಹತ್ತಿರವಾಗಿದ್ದರು. 'ಬ್ರಹ್ಮಾಸ್ತ್ರ' ಚಿತ್ರದ ಮೂಲಕ ಬಾಲಿವುಡ್‌ನಲ್ಲೂ ಮಿಂಚಿದ್ದಾರೆ. ಈಗೇನು ಸಂಸಾರದಲ್ಲಿ ಸಮಸ್ಯೆ?

Read Full Story

08:49 AM (IST) May 15

ದೇಶಾದ್ಯಂತ ಇಂಧನ ದರ ಏರಿಕೆ ಬಿಸಿ - ಬೆಂಗಳೂರಿನಲ್ಲಿ 106 ರೂ. ದಾಟಿದ ಪೆಟ್ರೋಲ್! ಬೆಲೆ ಏರಿಕೆಗೆ ಕಾರಣವೇನು?

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾದ ಕಾರಣ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ ಸರಾಸರಿ 3 ರೂ. ಹೆಚ್ಚಳವಾಗಿವೆ. ಪಶ್ಚಿಮ ಏಷ್ಯಾದ ಸಂಘರ್ಷಗಳು ಈ ಏರಿಕೆಗೆ ಕಾರಣವಾಗಿದ್ದು, 11 ವಾರಗಳ ಬಳಿಕ ತೈಲ ಕಂಪನಿಗಳು ಈ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿವೆ.

Read Full Story

More Trending News