Published : Apr 08, 2026, 06:26 AM ISTUpdated : Apr 08, 2026, 11:49 PM IST

India news live: ಡೆಲ್ಲಿ ಕ್ಯಾಪಿಟಲ್ಸ್ ಎದುರು ಗುಜರಾತ್ ಟೈಟಾನ್ಸ್ ರೋಚಕವಾಗಿ ಗೆಲ್ಲಿಸಿದ ಕನ್ನಡಿಗ ಪ್ರಸಿದ್ದ್ ಕೃಷ್ಣ!

ಸಾರಾಂಶ

ನವದೆಹಲಿ: ತಮಿಳುನಾಡಿನ ಕಲ್ಪಾಕಂ ಅಣು ವಿದ್ಯುತ್ ಸ್ಥಾವರದಲ್ಲಿನ ಸಂಪೂರ್ಣ ಸ್ವದೇಶಿ ನಿರ್ಮಿತ ಪ್ರೋಟೋಟೈಪ್ ಫಾಸ್ಟ್ ಬೀಡರ್ ರಿಯಾಕ್ಟರ್ (ಪಿಎಫ್ ಬಿಆರ್) ಇದೀಗ ನಿರ್ಣಾಯಕ ಹಂತ ತಲುಪಿದ್ದು, ಪರಮಾಣು ವಿದಳನ ಪ್ರಕ್ರಿಯೆ ಆರಂಭಿಸಿದೆ. ಇದನ್ನು ಪರಮಾಣು ವಿದ್ಯುತ್ ಉತ್ಪಾದನೆಯ ದೊಡ್ಡ ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ರಷ್ಯಾ ಬಳಿಕ ಈ ಸಾಧನೆ ಮಾಡಿದ 2ನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಇಂಧನ ದಹಿಸುತ್ತಲೇ ಇಂಧನ ಸೃಷ್ಟಿಸುವ ಘಟಕ ಇದಾಗಿದ್ದು, ಫಾಸ್ಟ್ ಬೀಡರ್ ಘಟಕ ಹೊಂದಿದ ವಿಶ್ವದ 2ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಯಾಕೆ ಮಹತ್ವ?

ತ.ನಾಡಿನ ಕಲ್ಪಾಕಂ ಘಟಕ ಸಂಪೂರ್ಣ ಸ್ವದೇಶಿ ವಿನ್ಯಾಸ, ಮತ್ತು ಸ್ವದೇಶಿ ನಿರ್ಮಿತವಾಗಿದೆ.

ಘಟಕದಲ್ಲಿ ಯುರೇನಿಯಂ ಬಳಕೆ ಬಳಿಕ ಲಭ್ಯವಾಗುವ ಪ್ಲುಟೋನಿಯಂ ಮರು ಬಳಕೆ ಮಾಡಲಾಗುತ್ತದೆ.

ವಿದ್ಯುತ್‌ ಉತ್ಪತ್ತಿಗೆ ಕಡಿಮೆ ಯುರೇನಿಯಂ ಸಾಕಾಗುವುದು ಹಾಗೂ ತ್ಯಾಜ್ಯವೂ ಕಡಿಮೆ

ಸದ್ಯ ರಿಯಾಕ್ಟರ್‌ನಲ್ಲಿ ಅಣು ವಿದಳನ ಕ್ರಿಯೆ ಸುಸ್ಥಿರ ಹಂತಕ್ಕೆ ತಲುಪಿದೆ. ಈ ಎಲ್ಲಾ ಕಾರಣಗಳಿಂದ ಇದು ಮಹತ್ವ ಪಡೆದಿದೆ.

 

11:49 PM (IST) Apr 08

ಡೆಲ್ಲಿ ಕ್ಯಾಪಿಟಲ್ಸ್ ಎದುರು ಗುಜರಾತ್ ಟೈಟಾನ್ಸ್ ರೋಚಕವಾಗಿ ಗೆಲ್ಲಿಸಿದ ಕನ್ನಡಿಗ ಪ್ರಸಿದ್ದ್ ಕೃಷ್ಣ!

ಶುಭ್‌ಮನ್ ಗಿಲ್, ಬಟ್ಲರ್ ಮತ್ತು ಸುಂದರ್ ಅವರ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ 210 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಕೆ ಎಲ್ ರಾಹುಲ್ ಅವರ 92 ರನ್‌ಗಳ ಹೋರಾಟದ ಹೊರತಾಗಿಯೂ ಕೇವಲ ಒಂದು ರನ್‌ನಿಂದ ಸೋಲನುಭವಿಸಿತು. ಕೊನೆಯ ಓವರ್‌ನಲ್ಲಿ ಪ್ರಸಿದ್ದ ಕೃಷ್ಣ 13 ರನ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಂಡು ಗುಜರಾತ್‌ಗೆ ರೋಚಕ ಜಯ ತಂದುಕೊಟ್ಟರು.
Read Full Story

10:55 PM (IST) Apr 08

ಲೆಬೆನಾನ್ ಮೇಲೆ ಇಸ್ರೇಲ್ ಕಳೆದ 40 ವರ್ಷದಲ್ಲೇ ಅತೀ ಭೀಕರ ದಾಳಿ, 1500 ಮಂದಿ ಹತ್ಯೆ

ಲೆಬೆನಾನ್ ಮೇಲೆ ಇಸ್ರೇಲ್ ಕಳೆದ 40 ವರ್ಷದಲ್ಲೇ ಅತೀ ಭೀಕರ ದಾಳಿ, 1500 ಮಂದಿ ಹತ್ಯೆ, ಅಮೆರಿಕ ಇರಾನ್ ನಡುವಿನ ಕದನ ವಿರಾಮದಿಂದ ಆಕ್ರೋಶಗೊಂಡಿರುವ ಇಸ್ರೇಲ್ ಇದೀಗ ಹೆಝ್‌ಬೊಲ್ಲಾ ಉಗ್ರರ ಗುರಿಯಾಗಿಸಿ ಲೆಬೆನಾನ್ ಮೇಲೆ ದಾಳಿ ನಡೆಸಿದೆ.

Read Full Story

10:10 PM (IST) Apr 08

Breaking ಕದನ ವಿರಾಮ ಉಲ್ಲಂಘನೆ, ಇಸ್ರೇಲ್ ದಾಳಿಯಿಂದ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್

Breaking ಕದನ ವಿರಾಮ ಬ್ರೇಕ್, ಇಸ್ರೇಲ್ ದಾಳಿಯಿಂದ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್, ಅಮೆರಿಕ ಮಾಡಿದ ಕದನ ವಿರಾಮದ ಬೆನ್ನಲ್ಲೇ ಲೆಬೆನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಪರಿಣಾಮ ಪರಿಸ್ಥಿತಿ ಉದ್ವಿಘ್ನಗೊಂಡಿದೆ.

Read Full Story

09:18 PM (IST) Apr 08

ರನೌಟ್ ವಿವಾದಕ್ಕೆ ಅಂಪೈರೆಗೆ ಚಾಕು ಇರಿದ ಅಭಿಮಾನಿ, ದುರಂತ ಸಾವಿನಿಂದ ಕ್ರಿಕೆಟ್ ಜಗತ್ತು ಶಾಕ್

ರನೌಟ್ ವಿವಾದಕ್ಕೆ ಅಂಪೈರೆಗೆ ಚಾಕು ಇರಿದ ಅಭಿಮಾನಿ, ದುರಂತ ಸಾವಿನಿಂದ ಕ್ರಿಕೆಟ್ ಜಗತ್ತು ಶಾಕ್, ಮೈದಾನದಲ್ಲಿ ಶುರುವಾದ ರನೌಟ್ ವಿವಾದ ಕೊಲೆಯಲ್ಲಿ ಅಂತ್ಯಗೊಂಡಿದೆ.  ಏನಿದು ರನೌಟ್ ಹತ್ಯೆ

Read Full Story

08:15 PM (IST) Apr 08

ನಾಸಿಕ್ ಗುರೂಜಿ ಕಾಮಕಾಂಡ ವಿಡಿಯೋ ಟೆಲಿಗ್ರಾಂನಲ್ಲಿ 50 ರೂಗೆ ಮಾರಾಟ, ಪೊಲೀಸ್ ವಾರ್ನಿಂಗ್

ನಾಸಿಕ್ ಗುರೂಜಿ ಕಾಮಕಾಂಡ ವಿಡಿಯೋ ಟೆಲಿಗ್ರಾಂನಲ್ಲಿ 50 ರೂಗೆ ಮಾರಾಟ, ಈ ಕುರಿತು ವರದಿಗಳು ಹರಿಡಾಡುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಈಗಾಗಲೇ ವಿಡಿಯೋ ಕುರಿತು ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.

Read Full Story

07:44 PM (IST) Apr 08

ಒಂದು ರಾತ್ರಿಗೆ 50 ಲಕ್ಷ; ಷರತ್ತು ನಿನ್ನದು, ಸ್ಥಳ ನನ್ನದು- Bigg Boss ಬೆಡಗಿ ಹೇಳಿಕೆಗೆ ಬಣ್ಣದ ಲೋಕ ಶೇಕ್​

ಬಿಗ್​ಬಾಸ್​ ಖ್ಯಾತಿಯ 'ವಡಾ ಪಾವ್ ಗರ್ಲ್' ಚಂದ್ರಿಕಾ ದೀಕ್ಷಿತ್, ತಮಗೆ ಉದ್ಯಮಿಯೊಬ್ಬರು ಒಂದು ರಾತ್ರಿ ಕಳೆಯಲು 50 ಲಕ್ಷ ರೂಪಾಯಿ ಆಫರ್ ಮಾಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪತಿಯ ವಿವಾಹೇತರ ಸಂಬಂಧದ ಬಗ್ಗೆಯೂ ಆರೋಪ ಮಾಡಿದ್ದಾರೆ.

Read Full Story

07:28 PM (IST) Apr 08

ಕದನ ವಿರಾಮ ಬಳಿಕ ಚಿನ್ನದ ಬೆಲೆ ಏರಿಕೆ, ಮತ್ತೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಾ ಬಂಗಾರ ದರ?

ಕದನ ವಿರಾಮ ಬಳಿಕ ಚಿನ್ನದ ಬೆಲೆ ಏರಿಕೆ, ಮತ್ತೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಾ ಬಂಗಾರ ದರ?, ಕದನ ವಿರಾಮದಿಂದ ತೈಲ ಬೆಲೆ ಇಳಿಕೆಯಾಗಿದೆ. ಆದರೆ ಚಿನ್ನ ಬೆಲೆ ಮಾತ್ರ ಏರಿಕೆಯಾಗಿದ್ದೇಕೆ?

Read Full Story

07:26 PM (IST) Apr 08

ಪತಿ ನಾಪತ್ತೆ, ತಮ್ಮನ ಜೊತೆ ಪತ್ನಿ ಮದ್ವೆ - 25 ವರ್ಷಗಳ ಬಳಿಕ ವಾಪಸಾದ ಗಂಡ- ಮುಂದೇನಾಯ್ತು?

25 ವರ್ಷಗಳ ಹಿಂದೆ ಕಾಣೆಯಾಗಿದ್ದ ಪಂಜಾಬ್‌ನ ಹಂಸಾ ಸಿಂಗ್ ಎಂಬ ವ್ಯಕ್ತಿ ಈಗ ಜೀವಂತವಾಗಿ ಪತ್ತೆಯಾಗಿದ್ದಾರೆ. ಆತ ಸತ್ತಿದ್ದಾನೆಂದು ಭಾವಿಸಿ, ಕುಟುಂಬದವರು ಆತನ ಪತ್ನಿಯನ್ನು ಆತನ ತಮ್ಮನಿಗೆ ಕೊಟ್ಟು ಮದುವೆ ಮಾಡಿದ್ದರು. 25 ವರ್ಷಗಳ ನಂತರ ಹಂಸಾ ಸಿಂಗ್ ಮನೆಗೆ ಮರಳಿದ್ದು, ಇದು ಕುಟುಂಬದಲ್ಲಿ ಸಂತೋಷದ ಜೊತೆಗೆ ಪತ್ನಿ ಮತ್ತು ಕುಟುಂಬಕ್ಕೆ ದೊಡ್ಡ ಸಾಮಾಜಿಕ ಮತ್ತು ಭಾವನಾತ್ಮಕ ಸಂದಿಗ್ಧತೆಯನ್ನು ಸೃಷ್ಟಿಸಿದೆ.
Read Full Story

07:01 PM (IST) Apr 08

ಸಾವನ್ನು ಮಡಿಲಲ್ಲಿಟ್ಟು, ದೇಶಕ್ಕಾಗಿ ಪಾಕ್​ನ ಸೊಸೆಯಾದ ಭಾರತದ ರಾ ಏಜೆಂಟ್​ ಮೈನವಿರೇಳಿಸುವ ಸ್ಟೋರಿ

1970ರ ದಶಕದಲ್ಲಿ, ಸೆಹ್ಮತ್ ಖಾನ್ ಎಂಬ ಭಾರತೀಯ ಯುವತಿ ದೇಶಕ್ಕಾಗಿ ತನ್ನೆಲ್ಲಾ ಕನಸುಗಳನ್ನು ತ್ಯಜಿಸಿ ಪಾಕಿಸ್ತಾನಿ ಸೇನಾಧಿಕಾರಿಯನ್ನು ವಿವಾಹವಾದರು. ಶತ್ರುದೇಶದಲ್ಲಿ ಪತ್ನಿಯಾಗಿ ನಟಿಸುತ್ತಾ, ಭಾರತಕ್ಕೆ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ರವಾನಿಸಿದ , 1971ರ ಇಂಡೋ-ಪಾಕ್​ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಹಿಳಾ ಗೂಢಚಾರಿಯ ರೋಚಕ ಕಥೆಯಿದು. ಇವರ ಜೀವನಗಾಥೆಯೇ 'ರಾಝಿ' ಸಿನಿಮಾಗೆ ಸ್ಪೂರ್ತಿಯಾಗಿದೆ.

Read Full Story

06:22 PM (IST) Apr 08

ಊಹಾಪೋಹಗಳಿಗೆ ಖಡಕ್ ಬ್ರೇಕ್; ಇಡೀ ಪ್ರಾಜೆಕ್ಟ್ 'ಕೋಲ್ಡ್ ಸ್ಟೋರೇಜ್‌'ಗೆ ಹೋಗಿಲ್ಲ ಎಂದ 'ಡ್ರ್ಯಾಗನ್' ಟೀಮ್!

ಕಥೆಯ ವ್ಯಾಪ್ತಿ ದೊಡ್ಡದಿರುವುದರಿಂದ ಈ ಸಿನಿಮಾವನ್ನು ಕೂಡ ‘ಕೆಜಿಎಫ್’ ಮತ್ತು ‘ಸಲಾರ್’ ಮಾದರಿಯಲ್ಲೇ ಎರಡು ಭಾಗಗಳಲ್ಲಿ ತರಲು ನೀಲ್ ಪ್ಲಾನ್ ಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ, ಗಾಸಿಪ್‌ಗಳು ಏನೇ ಇರಲಿ, ಪ್ರಶಾಂತ್ ನೀಲ್ ಮತ್ತು ತಾರಕ್ ಜೋಡಿ ತೆರೆಯ ಮೇಲೆ ಬಂದಾಗ ಬಾಕ್ಸ್ ಆಫೀಸ್ ಸುನಾಮಿ ಗ್ಯಾರಂಟಿ ಎಂಬುದು ಮಾತ್ರ ಸತ್ಯ!

Read Full Story

06:02 PM (IST) Apr 08

ಇಂಟರ್ನೆಟ್ ಬೇಡ, ಕೇವಲ ವಾಯ್ಸ್‌ ಕಾಲ್‌ ಸಾಕು - ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಟ್ರಾಯ್, ಅಗ್ಗದ ಪ್ಲಾನ್ ಕಡ್ಡಾಯ!

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಟೆಲಿಕಾಂ ಕಂಪನಿಗಳಿಗೆ ಕೇವಲ ವಾಯ್ಸ್ ಕಾಲಿಂಗ್ ಮತ್ತು ಎಸ್‌ಎಂಎಸ್ ಸೌಲಭ್ಯಗಳಿರುವ ಅಗ್ಗದ ಪ್ಲಾನ್‌ಗಳನ್ನು ಕಡ್ಡಾಯವಾಗಿ ನೀಡಲು ನಿರ್ದೇಶಿಸಿದೆ. 

Read Full Story

06:01 PM (IST) Apr 08

ಭಾರತದ ಅತ್ಯಂತ ಮಾಲಿನ್ಯ ನಗರ ಮಾರ್ಚ್ 2026 ಪಟ್ಟಿ ರಿಲೀಸ್, ದೆಹಲಿ ಅಲ್ಲ ನಂ.1 ಯಾರು?

ಭಾರತದ ಅತ್ಯಂತ ಮಾಲಿನ್ಯ ನಗರ ಮಾರ್ಚ್ 2026 ಪಟ್ಟಿ ರಿಲೀಸ್, ದೆಹಲಿ ಅಲ್ಲ ನಂ.1 ಯಾರು?, ಉತ್ತರ ಪ್ರದೇಶದ ಹಲವು ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕರ್ನಾಟಕ ಯಾವುದಾದರು ಸಿಟಿ ಈ ಪಟ್ಟಿಯಲ್ಲಿ ಇದೆಯಾ?

Read Full Story

05:28 PM (IST) Apr 08

ಕರ್ನಾಟಕದ 2 ಕ್ಷೇತ್ರ, ಮೂರು ರಾಜ್ಯಗಳಲ್ಲಿ ನಾಳೆ ಮತದಾನ, ಉದ್ಯೋಗಿಗಳಿಗೆ ವೇತನ ಸಹಿತ ರಜೆ

ಕರ್ನಾಟಕದ 2 ಕ್ಷೇತ್ರ, ಮೂರು ರಾಜ್ಯಗಳಲ್ಲಿ ನಾಳೆ ಮತದಾನ, ಉದ್ಯೋಗಿಗಳಿಗೆ ವೇತನ ಸಹಿತ ರಜೆ, ಚುನಾವಣಾ ಆಯೋಗದ ಆದೇಶದಿಂದ ಮತದಾನ ದಿನ ಕಾರ್ಮಿಕರು, ನೌಕರರಿಗೆ ವೇತನ ಸಹಿತ ರಜೆ ಸಿಗಲಿದೆ.

 

Read Full Story

04:32 PM (IST) Apr 08

ಕದನ ವಿರಾಮದಿಂದ ಕಚ್ಚಾ ತೈಲ ಬೆಲೆ ಕುಸಿತ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರ ಇಳಿಯುತ್ತಾ?

ಕದನ ವಿರಾಮದಿಂದ ಕಚ್ಚಾ ತೈಲ ಬೆಲೆ ಕುಸಿತ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರ ಇಳಿಯುತ್ತಾ?, ಹೊರ್ಮುಜ್ ಜಲಸಂಧಿ ತೆರೆಯಲಾಗಿದೆ. ಇತ್ತ ಕಚ್ಟಾ ತೈಲ ಬೆಲೆ 100 ಡಾಲರ್‌ಗೆ ಇಳಿಕೆಯಾಗಿದೆ. ಇದೀಗ ಭಾರತದಲ್ಲಿ ಪೆಟ್ರೋಲ್ ಬೆಲೆ ಕತೆ ಏನು?

Read Full Story

04:23 PM (IST) Apr 08

ಸೋತಿದ್ದಕ್ಕೆ ಬೇಜಾರಿಲ್ಲ, 15ರ ಹುಡುಗನ ಆಟ ನೋಡಿ ಬೆರಗಾದ ಹಾರ್ದಿಕ್ ಪಾಂಡ್ಯ! ವೈಭವ್ ಸೂರ್ಯವಂಶಿ ಕೊಂಡಾಡಿದ ಮುಂಬೈ ನಾಯಕ

ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿಗೆ ಬೌಲಿಂಗ್ ವೈಫಲ್ಯವೇ ನೇರ ಕಾರಣ ಎಂದು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಪವರ್‌ಪ್ಲೇನಲ್ಲಿ ಬೌಲರ್‌ಗಳು ವಿಫಲರಾದರು ಎಂದ ಅವರು, ಎದುರಾಳಿ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ನಿರ್ಭೀತ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು.
Read Full Story

04:22 PM (IST) Apr 08

'ಬೇರೆ ಮನೆ ಮಾಡು, ಇಲ್ಲವೇ ಜಗಳ ಅನುಭವಿಸು..' ಪತ್ನಿ ಹಿಂಸೆ ತಾಳಲಾರದೆ ಚಲಿಸುವ ರೈಲಿಗೆ ತಲೆಕೊಟ್ಟ ಗಂಡ

ಮಹಾರಾಷ್ಟ್ರದ ಕಲ್ಯಾಣ್ ಬಳಿ 49 ವರ್ಷದ ವ್ಯಕ್ತಿಯೊಬ್ಬರು ಕೌಟುಂಬಿಕ ಕಲಹದಿಂದ ಬೇಸತ್ತು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಡೆತ್ ನೋಟ್‌ನಲ್ಲಿ, ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಸಂಬಂಧಿಕರ ಮಾನಸಿಕ ಹಾಗೂ ದೈಹಿಕ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. 

Read Full Story

03:42 PM (IST) Apr 08

ಡಿಗ್ರಿ ಇಲ್ಲದಿದ್ದರೂ BMW ಕಂಪನಿಯಲ್ಲಿ ಕೆಲಸ! 19ರ ಯುವತಿಯ ಸಾಧನೆ ನೋಡಿ ಬೆರಗಾದ ನೆಟ್ಟಿಗರು

19 ವರ್ಷದ ಗೌರಿ ಎಂ, ಯಾವುದೇ ಪದವಿ ಇಲ್ಲದಿದ್ದರೂ ತನ್ನ ಬಲವಾದ ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದಿಂದ ವಿಶ್ವಪ್ರಸಿದ್ಧ BMW ಕಂಪನಿಯಲ್ಲಿ ಮಾರ್ಕೆಟಿಂಗ್ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ. 

Read Full Story

03:34 PM (IST) Apr 08

ಟ್ರಾಫಿಕ್ ಚಲನ್ ಮೂಲಕ ಸಿಕ್ಕಿಬಿದ್ದ ಕಳ್ಳ - ಬೈಕ್ ಕಳವಾದ 3 ತಿಂಗಳ ಬಳಿಕ ಮನೆಗೆ ಬಂತು ಕಳ್ಳನ ಫೋಟೋ!

ಮೂರು ತಿಂಗಳ ಹಿಂದೆ ಕಳುವಾಗಿದ್ದ ಬೈಕ್‌ಗೆ ಮಾಲೀಕನ ಮನೆಗೆ ಟ್ರಾಫಿಕ್ ಚಲನ್ ಬಂದಿದೆ. ಆ ಚಲನ್‌ನಲ್ಲಿ ಬೈಕ್ ಓಡಿಸುತ್ತಿದ್ದ ಕಳ್ಳನ ಫೋಟೋ ಸ್ಪಷ್ಟವಾಗಿ ಮುದ್ರಿತವಾಗಿದ್ದು, ಮಾಲೀಕರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಳ್ಳನನ್ನು ಹಿಡಿಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

Read Full Story

03:16 PM (IST) Apr 08

ಅಪಘಾತಕ್ಕೀಡಾದವರಿಗೆ ನೀರು ಕೊಡಲೇಬೇಡಿ, ಹೆಲ್ಮೆಟ್​ ತೆಗೆಯಲೇಬೇಡಿ- ವೈದ್ಯರು ಹೇಳೋದೇನು? ನೀವೇನು ಮಾಡಬೇಕು

ಭಾರತದಲ್ಲಿ ರಸ್ತೆ ಅಪಘಾತದ ನಂತರ ಪ್ರಥಮ ಚಿಕಿತ್ಸೆಯ ಕೊರತೆಯಿಂದ ಅನೇಕರು ಸಾಯುತ್ತಾರೆ. ಅಪಘಾತಕ್ಕೀಡಾದವರಿಗೆ ನೀರು ಕೊಡುವುದು ಸಾಮಾನ್ಯವಾದರೂ, ಇದು ಶಸ್ತ್ರಚಿಕಿತ್ಸೆ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಾರಣಾಂತಿಕವಾಗಬಹುದು. ನೀರು ಶ್ವಾಸಕೋಶಕ್ಕೆ ಸೇರಿ ಉಸಿರುಗಟ್ಟುವಿಕೆ ಅಥವಾ ನ್ಯುಮೋನಿಯಾಗೆ ಕಾರಣವಾಗಬಹುದು.
Read Full Story

03:05 PM (IST) Apr 08

ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ

ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ, 234 ಸ್ಥಾನಗಳ ಪೈಕಿ ಇದೀಗ ಚುನನಾವಣೆ, ಫಲಿತಾಂಶಕ್ಕೂ ಮೊದಲೇ ಟಿವಿಕೆ ಒಂದು ಸ್ಥಾನ ಕಳೆದುಕೊಂಡಿದೆ.

 

Read Full Story

03:04 PM (IST) Apr 08

IPL 2026 - ಪ್ಲೇಆಫ್‌ಗೆ ಈ 4 ತಂಡಗಳು ಫಿಕ್ಸ್! ಸಿಎಸ್‌ಕೆ, ಕೆಕೆಆರ್, ಸನ್‌ರೈಸರ್ಸ್‌ ಕಥೆ ಏನು?

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಮೊದಲ ವಾರವೇ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿವೆ.

Read Full Story

02:13 PM (IST) Apr 08

Layoff Story - ಕೆಲಸ ಹೋದ್ರೆ ಹೋಯ್ತು ಬಿಡಿ! ಸರಿಯಾಗಿ ಪ್ಲಾನ್ ಮಾಡಿದ ಬೆಂಗಳೂರು ಒರಾಕಲ್ ಉದ್ಯೋಗಿಯ ಸಕ್ಸಸ್ ಸ್ಟೋರಿ ಇದು

ಐಟಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಲೇಆಫ್‌ಗಳು ನಡೆಯುತ್ತಿವೆ. ಕೆಲಸ ಕಳೆದುಕೊಂಡ ಅನೇಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಒರಾಕಲ್ ಕಂಪನಿಯ ಮಾಜಿ ಇಂಜಿನಿಯರ್ ಒಬ್ಬರು, ಕೆಲಸ ಹೋದರೂ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೀತಿ ವೈರಲ್ ಆಗಿದೆ.

Read Full Story

01:35 PM (IST) Apr 08

ಲವ್​ ಜಿಹಾದ್​ಗೆ ಒಳಗಾಗಿದ್ದ Miss India Earth ನಾಪತ್ತೆ! ಹಿಂದೂ ಧರ್ಮಕ್ಕೆ ವಾಪಸಾದ ಬೆನ್ನಲ್ಲೇ ನಿಗೂಢ ಕಣ್ಮರೆ

2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸೈಲಿ ಸುರ್ವೆ,  ನಾಲ್ಕು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. 'ಲವ್ ಜಿಹಾದ್' ಆರೋಪ ಮಾಡಿ,  ಹಿಂದೂ ಧರ್ಮಕ್ಕೆ ಮರಳಿದ್ದ ಅವರು, ಪತಿಯಿಂದ ದೌರ್ಜನ್ಯಕ್ಕೊಳಗಾಗಿದ್ದಾಗಿ ಹೇಳಿಕೊಂಡಿದ್ದರು.  ಪತಿಯ ಕುಟುಂಬವೇ  ಅಪಹರಿಸಿದೆ ಎಂದು ಪೋಷಕರು ದೂರು ನೀಡಿದ್ದಾರೆ.

Read Full Story

01:35 PM (IST) Apr 08

'ಯಾವುದೇ ಬ್ಯಾಕಪ್ ಇಲ್ಲದೇ ಕೆಲಸ ಬಿಟ್ಟೆ' - ಒಂದು ಲಕ್ಷದ ಸಂಬಳ ಬಿಟ್ಟು, ಕೇವಲ 14 ತಿಂಗಳಲ್ಲಿ 2 ಲಕ್ಷ ತಿಂಗಳಿಗೆ ಗಳಿಸಲು ಆರಂಭಿಸಿದ ಯುವತಿ!

ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ ಟ್ಯಾಕ್ಸ್ ಲಾಯರ್ ಮೆಹರ್ ವರ್ಮಾ, ಉದ್ಯೋಗದ ಒತ್ತಡದಿಂದ ಬೇಸತ್ತು ಕೆಲಸ ತೊರೆದರು. ಯಾವುದೇ ಬ್ಯಾಕಪ್ ಇಲ್ಲದೆ ಫ್ರೀಲ್ಯಾನ್ಸರ್ ಆಗಿ ಬದುಕು ಆರಂಭಿಸಿ, ಕೇವಲ 14 ತಿಂಗಳಲ್ಲಿ ತಿಂಗಳಿಗೆ ಎರಡು ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ಯಶಸ್ಸು ಕಂಡಿದ್ದಾರೆ.
Read Full Story

01:18 PM (IST) Apr 08

ದೆಹಲಿ ಕನ್ನಡ ಸಂಘದ ಚುನಾವಣೆಯಲ್ಲಿ 'ಗೂಬೆ'ಯಾಟ - ಗಿಫ್ಟ್‌ ಆಗಿ ಬಂದ ಪಂಚಲೋಹದ ಗೂಬೆ ಶುಭವೋ? ಅಶುಭವೋ?

ದೆಹಲಿ ಕನ್ನಡ ಸಂಘದ ಚುನಾವಣೆಯು ಗೂಬೆಯ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದರಿಂದ ವಿವಾದಕ್ಕೆ ಕಾರಣವಾಗಿದೆ. ಗೂಬೆ ಶುಭವೋ ಅಶುಭವೋ ಎಂಬ ಚರ್ಚೆಯ ನಡುವೆ, ದುಬಾರಿ ಉಡುಗೊರೆಗಳು ಮತ್ತು ಹಣ ಹಂಚಿಕೆ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.

Read Full Story

01:08 PM (IST) Apr 08

ಲಕ್ಷ ಲಕ್ಷ ಶುಲ್ಕ ಪಡೆದರೂ ಬೇಸಿಕ್ ಗ್ರಾಮರ್ ಮಿಸ್ಟೇಕ್ - DSP ಶಾಲೆಯ ಎಲ್‌ಕೆಜಿ ಮಗುವಿನ ಡೈರಿಯಲ್ಲಿ ನೂರೆಂಟು ತಪ್ಪು

ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿರುವ ಮಗಳ ಡೈರಿಯಲ್ಲಿ ಶಿಕ್ಷಕರು ಮಾಡಿದ ವ್ಯಾಕರಣ ದೋಷವನ್ನು ಪೋಷಕರೊಬ್ಬರು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ದುಬಾರಿ ಶುಲ್ಕ ಪಡೆದು ಕಳಪೆ ಶಿಕ್ಷಣ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story

12:55 PM (IST) Apr 08

ಕಿರಿಕ್ ಕಿಲಾಡಿ ಉತ್ತರ ಕೊಟ್ಟ ದೀಪಿಕಾ ಪಡುಕೋಣೆ; ಶಾಕಿಂಗ್‌ ಮೂಡ್‌ಗೆ ನೆಟ್ಟಿಗರನ್ನು ದೂಡಿದ ಸ್ಟಾರ್ ನಟಿ!

ದೀಪಿಕಾ ಅವರ ಈ ಒಂದು ಕಾಮೆಂಟ್ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ಅಭಿಮಾನಿಗಳು ಡಿಪ್ಪಿಯ ಬೆಂಬಲಕ್ಕೆ ನಿಂತಿದ್ದಾರೆ. "ದೀಪಿಕಾ ಅವರು ರಣವೀರ್ ಜೊತೆಯೇ ವಾಸಿಸುತ್ತಾರೆ, ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಂದನ್ನೂ ತೋರಿಸಿಕೊಳ್ಳುವ ಅಗತ್ಯವಿಲ್ಲ" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Read Full Story

12:36 PM (IST) Apr 08

'56 ಇಂಚಿನ ಎದೆ ಈಗ ಕುಗ್ಗಿದೆ' - ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕ್ ಪಾತ್ರದ ಬಗ್ಗೆ ಕಾಂಗ್ರೆಸ್ ಫಸ್ಟ್ ರಿಯಾಕ್ಷನ್!

ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಮೋದಿ ಸರ್ಕಾರದ ವಿದೇಶಾಂಗ ನೀತಿ ಬಗ್ಗೆ ತೀವ್ರ ಟೀಕೆ.. ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯಾಗಿಸುವಲ್ಲಿ ಮೋದಿ ವಿಫಲ, ಇದು ಭಾರತದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ ಎಂದಿದ್ದಾರೆ.

Read Full Story

11:48 AM (IST) Apr 08

ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ - ಕೊಡವರ ಮನಗೆದ್ದ Rashmika Mandanna ಪತಿ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯು ಕೊಡಗಿನ ವಿರಾಜಪೇಟೆಯಲ್ಲಿ ತಮ್ಮ ವಿವಾಹದ ರಿಸೆಪ್ಷನ್ ಹಮ್ಮಿಕೊಂಡಿದ್ದರು. ಈ ಸಮಾರಂಭದಲ್ಲಿ ರಶ್ಮಿಕಾ ಕೊಡವ ಸಂಪ್ರದಾಯದಂತೆ ಮಿಂಚಿದರೆ, ವಿಜಯ್ ದೇವರಕೊಂಡ ಕನ್ನಡದಲ್ಲಿ ಮಾತನಾಡಿ ಎಲ್ಲರನ್ನೂ, ವಿಶೇಷವಾಗಿ ರಶ್ಮಿಕಾರನ್ನು ಅಚ್ಚರಿಗೊಳಿಸಿದರು.
Read Full Story

11:39 AM (IST) Apr 08

ಡಿವೋರ್ಸ್‌ ಪಡೆದ ಮಗಳ ಅದ್ದೂರಿ ಸ್ವಾಗತದ ಹಿಂದೆ ಕರಾಳ ಮುಖ - ನಿವೃತ್ತ ಜಡ್ಜ್ ಪುತ್ರಿಯ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಮಾವ

ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದ ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶರ ಕಥೆ ವೈರಲ್ ಆಗಿತ್ತು. ಆದರೆ, ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಯುವತಿಯ ಮಾಜಿ ಪತಿಯ ಕುಟುಂಬವು ತಮ್ಮ ಮೇಲಾದ ದೌರ್ಜನ್ಯ ಮತ್ತು ಸಾಮಾಜಿಕ ಅವಮಾನದ ಬಗ್ಗೆ ಮಾತನಾಡಿದ್ದಾರೆ. 

Read Full Story

11:12 AM (IST) Apr 08

ತ್ರಿಷಾ ಲೈಫ್ ಹಾಳು ಮಾಡಲು ಸ್ಕೆಚ್? ರಾಂಗ್ ಆಗಿರೋ ತ್ರಿಷಾ ಆಡಿರೋ ಮಾತು ಈಗ ಎಲ್ಲೆಡೆ ವೈರಲ್!

ತಮ್ಮ ಬಗ್ಗೆ ಹಬ್ಬಿರುವ ಈ ಅಸಂಬದ್ಧ ಸುದ್ದಿಗಳ ಬಗ್ಗೆ ಅಂತಿಮವಾಗಿ ಮೌನ ಮುರಿದಿರುವ ತ್ರಿಶಾ, ಇನ್ಸ್ಟಾಗ್ರಾಮ್‌ನಲ್ಲಿ ಅತ್ಯಂತ ಚಾಣಾಕ್ಷತನದಿಂದ ಮತ್ತು ಹಾಸ್ಯದ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಬರೆದುಕೊಂಡಿರುವ ಮಾತುಗಳು ಈಗ ವೈರಲ್ ಆಗಿವೆ. ಏನ್ ಹೇಳಿದ್ದಾರೆ ತ್ರಿಷಾ?

Read Full Story

10:34 AM (IST) Apr 08

ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಕೋಮಾದಲ್ಲಿ - ಕೋಂ ನಗರದಲ್ಲಿ ಚಿಕಿತ್ಸೆ

Mojtaba Khamenei health update: ಅಮೆರಿಕ-ಇಸ್ರೇಲ್ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

Read Full Story

08:19 AM (IST) Apr 08

ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್‌ ಗೆಲುವಿನ ಗುರಿ; ಆದ್ರೆ ಗುಜರಾತ್ ಟೈಟಾನ್ಸ್ ಎದುರು ಮ್ಯಾಚ್ ನಡಿಯೋದೇ ಅನುಮಾನ!

ಐಪಿಎಲ್‌ನಲ್ಲಿ ಸತತ ಎರಡು ಗೆಲುವುಗಳಿಂದ ಬೀಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌, ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಗುಜರಾತ್ ಟೈಟಾನ್ಸ್ ಗೆಲುವಿನ ಹಾದಿಗೆ ಮರಳಲು ಹೋರಾಡಲಿದೆ. ಆದರೆ, ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ.
Read Full Story

08:13 AM (IST) Apr 08

ಹೋರ್ಮುಜ್‌ನಿಂದ ಇರಾನ್‌ಗೆ ಪ್ರತಿ ತಿಂಗಳು 42000 ಕೋಟಿ ಆದಾಯ - 15 ದಿನದಲ್ಲಿ 2ನೇ ಸಲ ಇಂಧನ ದರ ಏರಿಸಿದ ಚೀನಾ

ಹೋರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಿರುವ ಇರಾನ್, ಹಡಗುಗಳಿಂದ ಶುಲ್ಕ ವಸೂಲಿ ಮಾಡಿ ತಿಂಗಳಿಗೆ ₹42,000 ಕೋಟಿ ಆದಾಯ ಗಳಿಸುತ್ತಿದೆ. ಇದೇ ವೇಳೆ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಚೀನಾವು 15 ದಿನಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸಿದೆ.
Read Full Story

08:05 AM (IST) Apr 08

IPL 2026 - ನಿನ್ನೆ ತಡರಾತ್ರಿ ನಡೆದ ರಾಜಸ್ಥಾನ ರಾಯಲ್ಸ್-ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಮಳೆಯಿಂದ 11 ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್‌ಗಳ ಜಯ ಸಾಧಿಸಿತು. ಯಶಸ್ವಿ ಜೈಸ್ವಾಲ್ ಅವರ ಅಜೇಯ 77 ಮತ್ತು ವೈಭವ್ ಸೂರ್ಯವಂಶಿ ಅವರ ಸ್ಫೋಟಕ 39 ರನ್‌ಗಳ ನೆರವಿನಿಂದ ರಾಜಸ್ಥಾನ ಹ್ಯಾಟ್ರಿಕ್ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
Read Full Story

07:24 AM (IST) Apr 08

ಹೋರ್ಮುಜ್ ಜಲಸಂಧಿ ತೆರೆಯಬೇಕೆಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗೊತ್ತುವಳಿಗೆ ರಷ್ಯಾ, ಚೀನಾ ಬ್ರೇಕ್

ಅಮೆರಿಕದ ದಾಳಿಯಿಂದಾಗಿ ಇರಾನ್ ಹೋರ್ಮುಜ್ ಜಲಸಂಧಿ ಮುಚ್ಚಿದ್ದು, ಇದನ್ನು ತೆರೆಯಲು ವಿಶ್ವಸಂಸ್ಥೆಯಲ್ಲಿ ಮಂಡಿಸಿದ ಗೊತ್ತುವಳಿಗೆ ರಷ್ಯಾ ಮತ್ತು ಚೀನಾ ವಿಟೋ ಚಲಾಯಿಸಿವೆ. ಈ ನಡುವೆ, ಸರ್ವನಾಶದ ಎಚ್ಚರಿಕೆ ನೀಡಿದ ಅಮೆರಿಕದೊಂದಿಗೆ ಇರಾನ್ ಮಾತುಕತೆಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿದೆ ಎಂದು ವರದಿಯಾಗಿದೆ.

Read Full Story

More Trending News