ಬಿಜೆಪಿ ನಾಯಕ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸತತ ಪ್ರತಿಭಟೆಗಳನ್ನು ಮಾಡುತ್ತಿರುವ ಸುವೆಂದು ಅಧಿಕಾರಿ ಕಾರು ಅಡ್ಡಗಟ್ಟಿ ದಾಳಿ ನಡೆಸಿದ ಘಟನೆ ಚಂದ್ರಕೋನಾದಲ್ಲಿ ನಡೆದಿದೆ. ಸುವೆಂದು ಬೆಂಗಾವಲು ವಾಹನಗಳನ್ನು ಅಡ್ಡಗಟ್ಟಿ ದಾಳಿ ಮಾಡಲಾಗಿದೆ. ಇದು ಟಿಎಂಸಿ ಪಕ್ಷದ ಗೂಂಡಾಗಳ ಕೃತ್ಯ ಎಂದು ಸುವೆಂದು ಅದಿಕಾರಿ ಆರೋಪಿಸಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಸೋಮನಾಥ ಮಂದಿರಕ್ಕೆ ಬೇಟಿ ನೀಡಿದ್ದಾರೆ. ಸೋಮನಾಥ ಮಂದಿರ ಮೇಲೆ ಮೊದಲ ದಾಳಿಯಾಗಿ 1000 ವರ್ಷಗಳು ಸಂದಿದೆ. ಇದರ ಹಿನ್ನಲೆಯಲ್ಲಿ ಸೋಮನಾಥ ಸ್ವಾಭಿಮಾನ ಪರ್ವ ಆಚರಿಸಲಾಗುತ್ತಿದೆ.

10:00 PM (IST) Jan 11
09:36 PM (IST) Jan 11
ಆರ್ಸಿಬಿಯ ಸ್ಟಾರ್ ಆಟಗಾರ ಯಶ್ ದಯಾಳ್ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಬೆನ್ನಲ್ಲೇ, ಇದೀಗ ತಂಡದ ಮಾಜಿ ಆಟಗಾರ ಸ್ವಸ್ತಿಕ್ ಚಿಕಾರ ಕೂಡ ವಿವಾದದಲ್ಲಿ ಸಿಲುಕಿದ್ದಾರೆ. ಸ್ವಸ್ತಿಕ್ ಚಿಕಾರ ಹಲವು ಯುವತಿಯರೊಂದಿಗೆ ನಡೆಸಿದ್ದಾರೆ ಎನ್ನಲಾದ ಸೋಶಿಯಲ್ ಮೀಡಿಯಾ ಚಾಟ್ಗಳ ಸ್ಕ್ರೀನ್ಶಾಟ್ಗಳು ವೈರಲ್ ಆಗಿದೆ.
06:36 PM (IST) Jan 11
ನಟಿ ಅನನ್ಯಾ ಪಾಂಡೆ ಸೋದರಸಂಬಂಧಿ ಅಲನ್ನಾ ಪಾಂಡೆ ಮತ್ತು ಪತಿ ಐವರ್ ತಮ್ಮ ಹೊಸ 5BHK ಮನೆಗೆ ಶಾಪಿಂಗ್ ಮಾಡಿದ್ದಾರೆ. 1 ಕೋಟಿ ರೂ. ಮೌಲ್ಯದ ಸ್ಟೌವ್ ಮತ್ತು 63 ಲಕ್ಷ ರೂ. ಮೌಲ್ಯದ ಮಾರ್ಬಲ್ಗಳಂತಹ ಐಷಾರಾಮಿ ವಸ್ತುಗಳನ್ನು ನೋಡಿದ್ದು, ಅವುಗಳ ಬೆಲೆ ಕೇಳಿ ಜನ ದಂಗಾಗಿದ್ದಾರೆ.
05:29 PM (IST) Jan 11
05:24 PM (IST) Jan 11
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು 'ವಿಕಸಿತ್ ಭಾರತ್' ಸಂವಾದದಲ್ಲಿ ತಾವು ಅಧಿಕೃತ ಕೆಲಸಕ್ಕಾಗಿ ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಬಳಸುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಕುಟುಂಬದ ಅಗತ್ಯಗಳಿಗೆ ಮಾತ್ರ ಫೋನ್ ಬಳಸುವುದಾಗಿ ಹೇಳಿದ್ದಾರೆ.
04:53 PM (IST) Jan 11
ವಡೋದರ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು 2026ರಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿವೆ. ಹೀಗಿರುವಾಗಲೇ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, 148 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾಗಿದ್ದಾರೆ.
04:49 PM (IST) Jan 11
ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಪಿಟ್ ಲೈನ್ ಪುನರ್ನಿರ್ಮಾಣ ಕಾರ್ಯದಿಂದಾಗಿ, ಜನವರಿ 16 ರಿಂದ ಮಾರ್ಚ್ 11 ರವರೆಗೆ ಹಲವು ರೈಲುಗಳ ಮೂಲ ಮತ್ತು ಅಂತ್ಯ ನಿಲ್ದಾಣಗಳನ್ನು ಬದಲಾಯಿಸಲಾಗಿದೆ. ಎರ್ನಾಕುಲಂ, ನಾಂದೇಡ್ ಮತ್ತು ಕಣ್ಣೂರು ಮಾರ್ಗದ ರೈಲುಗಳು ಸೇರಿದಂತೆ ಕೆಲವು ರೈಲು ಮಾರ್ಗಗಳ ಡಿಟೇಲ್ಸ್ ಇಲ್ಲಿದೆ.
04:38 PM (IST) Jan 11
ಇರಾನ್ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ದಾಳಿಯ ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ, ದಾಳಿ ನಡೆದರೆ ಅಮೆರಿಕದ ಸೇನಾನೆಲೆಗಳು ಮತ್ತು ಹಡಗುಗಳನ್ನು ಗುರಿಯಾಗಿಸುವುದಾಗಿ ಇರಾನ್ ಎಚ್ಚರಿಸಿದೆ.
04:20 PM (IST) Jan 11
ಕಣ್ಣು ತೆರೆ ಅಪ್ಪ, ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಬಿಡುವಿನ ವೇಳೆಯಲ್ಲಿ ಮಗಳ ಜೊತೆ ಮಗುವಾಗಿ ಆಟವಾಡುತ್ತಿದ್ದ ಪ್ರಶಾಂತ್ ತಮಂಗ್ ನಿಧನ ಪುಟ್ಟ ಅರಿಯಾಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
03:56 PM (IST) Jan 11
03:50 PM (IST) Jan 11
ಗ್ರೀನ್ಲ್ಯಾಂಡ್ಗೆ ಆಕ್ರಮಣ ಯೋಜನೆಗಳನ್ನು ಸಿದ್ಧಪಡಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶೇಷ ಪಡೆಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಹಿರಿಯ ಮಿಲಿಟರಿ ನಾಯಕರು, ಕಾನೂನು ಹಾಗೂ ಯುಎಸ್ ಕಾಂಗ್ರೆಸ್ನ ಅಡೆತಡೆಯನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
02:35 PM (IST) Jan 11
ದಿಢೀರ್ ಕುಸಿದು ಬಿದ್ದು ಇಂಡಿಯನ್ ಐಡೋಲ್ ವಿನ್ನರ್, ಗಾಯಕ ಹಾಗೂ ನಟ ಪ್ರಶಾಂತ್ ತಮಂಗ ಮೃತಪಟ್ಟಿದ್ದಾರೆ. ಅಪ್ಪನ ಸಾವಿನಿಂದ ಮುದ್ದಿನ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಿವುಡ್ ಸಿನಿಮಾದಲ್ಲೂ ಮಿಂಚಿದ್ದ ನಟ ಸಾವು ಹಲವರಿಗೆ ಶಾಕ್ ನೀಡಿದೆ.
02:12 PM (IST) Jan 11
ಢಾಕಾ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ತಿಕ್ಕಾಟ ಇದೀಗ ಮತ್ತೊಂದು ಹಂತ ತಲುಪಿದ್ದು, ಟಿ20 ವಿಶ್ವಕಪ್ ಟೂರ್ನಿಯಾಡಲು ನಾವು ಭಾರತಕ್ಕೆ ಬರುವುದಿಲ್ಲ ಎಂದು ಬಾಂಗ್ಲಾದೇಶ ಪಟ್ಟು ಹಿಡಿದಿದೆ. ಹೀಗಿರುವಾಗಲೇ ಬಾಂಗ್ಲಾದೇಶ ಮಾಜಿ ನಾಯಕನ ಮೇಲೆ ನಜ್ರುಲ್ ಇಸ್ಲಾಂ ಗಂಭೀರ ಆರೋಪ ಮಾಡಿದ್ದಾರೆ.
01:18 PM (IST) Jan 11
ವಡೋದರಾದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ, ಟಾಸ್ ಗೆದ್ದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರು ಬೌಲರ್ಗಳೊಂದಿಗೆ ಕಣಕ್ಕಿಳಿದಿರುವ ಭಾರತ. ಕಿವೀಸ್ ಪರ ಕ್ರಿಸ್ಟಿನ್ ಕ್ಲಾರ್ಕ್ ಪಾದಾರ್ಪಣೆ ಮಾಡಿದ್ದಾರೆ.
01:15 PM (IST) Jan 11
ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, ಮಂದಿರದ ಮೇಲೆ ಮೊದಲ ದಾಳಿಯಾಗಿ 1000 ವರ್ಷಗಳು ಉರುಳಿದೆ. ಸತತ ದಾಳಿಗೆ ಎದೆಯೊಡ್ಡಿ ನಿಂತ ಸೋಮನಾಥ ಮಂದಿರ ಭಾರತದ ಇತಿಹಾಸ ಹೇಳುತ್ತಿದೆ. ಈ ಸ್ವಾಭಿಮಾನ ಪರ್ವದಲ್ಲಿ ಮೋದಿ ಪಾಲ್ಗೊಂಡಿದ್ದಾರೆ.
12:41 PM (IST) Jan 11
ಕುಟುಂಬದ ಕಪಂನಿ, ಆಸ್ತಿ ತ್ಯಜಿಸಿ ಪ್ರೀತಿ ಆಯ್ಕೆ, ಹಳೇ ಸಿನಿಮಾಗಳಲ್ಲಿರುವಂತೆ ಪೋಷಕರು, ಕುಟುಂಬಸ್ಥರು ಆಫರ್ ಮುಂದಿಟ್ಟದ್ದರು. ಒಂದೋ ನಿನ್ನ ಪ್ರೀತಿ, ಇಲ್ಲಾ ಉದ್ಯಮ ಒಂದೇ ಆಯ್ಕೆ ಕೊಟ್ಟಿದ್ದರು. ಪ್ರೀತಿ ಆಯ್ಕೆಮಾಡಿಕೊಂಡು ಯಶಸ್ವಿ ಉದ್ಯಮ ಕಟ್ಟಿದ ಸಾಧಕನ ಕತೆ ಇದು
12:21 PM (IST) Jan 11
ವಡೋದರಾ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಹೀಗಿರುವಾಗಲೇ ಭಾರತ ತಂಡದಿಂದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದಾರೆ. ಹೀಗಾಗಿ ಮತ್ತೊಬ್ಬ ವಿಕೆಟ್ ಕೀಪರ್ ತಂಡ ಕೂಡಿಕೊಂಡಿದ್ದಾರೆ.
11:36 AM (IST) Jan 11
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ರೂ.450 ರ ಹೊಸ ಹಬ್ಬದ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು 36 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2 GB ಡೇಟಾ, ಅನಿಯಮಿತ ಕರೆಗಳನ್ನು ನೀಡುತ್ತದೆ. ಇದರ ಜೊತೆಗೆ, ಇನ್ನಷ್ಟು ಪ್ರಯೋಜನಗಳಿದ್ದು, ಅವುಗಳ ಡಿಟೇಲ್ಸ್ ಇಲ್ಲಿದೆ.
10:35 AM (IST) Jan 11
ನವದೆಹಲಿ: ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಳಪೆ ಪ್ರದರ್ಶನ ಬೆನ್ನಲ್ಲೇ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ತಮ್ಮ ಕೋಚ್ ಬದಲಿಸಲು ನಿರ್ಧರಿಸಿದ್ದಾರೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್ ಇಲ್ಲಿದೆ ನೋಡಿ.
10:24 AM (IST) Jan 11
08:50 AM (IST) Jan 11
08:35 AM (IST) Jan 11
ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಶಾಕ್, ಜನವರಿ 11ರಿಂದ ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿ ಆರಂಭಗೊಳ್ಳುತ್ತಿದೆ. ಆದರೆ ಪ್ಲೇಯಿಂಗ್ 11 ಆಯ್ಕೆ ಬಹುತೇಕ ಅಂತಿಮಗೊಂಡ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗ ಹೊರಬಿದ್ದಿದ್ದಾರೆ.
08:06 AM (IST) Jan 11
ಐಸಿಸ್ ಭಯೋತ್ಪಾದಕರ ಮೇಲೆ ಅಮೆರಿಕ ದಾಳಿ, ಸಿರಿಯಾದಲ್ಲಿ ಬೇರು ಬಿಟ್ಟಿರುವ ಐಸಿಸ್ ಉಗ್ರ ತಾಣಗಳ ಮೇಲೆ ಅಮೆರಿಕ ಸ್ಟ್ರೈಕ್ ನಡೆಸಿದೆ. ವಾಯುಪಡೆ, ನೌಕಾ ಪಡೆಗಳ ಮಿಸೈಲ್ ದಾಳಿಗೆ ಸಿರಿಯಾ ತತ್ತರಿಸಿದೆ.
07:43 AM (IST) Jan 11
ಟಿಎಂಸಿ ಪಕ್ಷದ ಧ್ವದಜ ಹಿಡಿದ ಕೆಲ ಗೂಂಡಾಗಳು ಕಾರು ತಡೆದು ದಾಳಿ ಮಾಡಿದ್ದಾರೆ. ಬಜೆಪಿ ನಾಯಕರ ಟಾರ್ಗೆಟ್ ಮಾಡಿ ಟಿಎಂಸಿ ಗೂಂಡಾಗಳು ದಾಳಿ ನಡೆಸುತ್ತಿದ್ದಾರೆ. ಪದೇ ಪದೇ ಈ ರೀತಿ ಘಟನೆಗಳು ಮರುಕಳಿಸುತ್ತಿದೆ ಎಂದು ಸುವೆಂದು ಅಧಿಕಾರಿ ಆರೋಪಿಸಿದ್ದಾರೆ.