Published : Aug 28, 2025, 07:29 AM ISTUpdated : Aug 28, 2025, 11:09 PM IST

MOTN Survey - ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯೇ ಬೆಸ್ಟ್‌, ಸನಿಹದಲ್ಲೂ ಇಲ್ಲ ರಾಹುಲ್!

ಸಾರಾಂಶ

ಪೆಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಪಾಕಿಸ್ತಾನ ನಡುವಿನ ಸಂಬಂಧ ಹಳಸಿದೆ. ಎಲ್ಲಾ ವ್ಯಾಪಾರ ವಹಿವಾಟುಗಳು ಬಂದ್ ಆಗಿದೆ. ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಲಾಗಿದೆ. ಇತ್ತ ಸಿಂಧೂ ನದಿ ಒಪ್ಪಂದವನ್ನೂ ರದ್ದುಗೊಳಿಸಲಾಗಿದೆ. ಇದರ ನಡುವೆ ಭಾರತ ಮಾನವೀಯತೆ ಮರೆದಿದೆ. ಭಾರಿ ಮಳೆ ಕಾರಣ ಭೀಕರ ಪ್ರವಾಹ ಸಂಭವಿಸಲಿದೆ ಎಂದು ಪಾಕಿಸ್ತಾನಕ್ಕೆ ಭಾರತಕ್ಕೆ ಎಚ್ಚರಿಸಿದೆ. ಈ ಮೂಲಕ ನದಿ ಪಾತ್ರದ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಭಾರತ ಸೂಚಿಸಿತ್ತು. ಮಂಗಳವಾರ ಹಾಗೂ ಬುಧವಾರ ಎರಡು ದಿನ ಸತತ ಅಲರ್ಟ್ ನೀಡಿ ಪಾಕಿಸ್ತಾನದ 1.5 ಲಕ್ಷ ಮಂದಿಯ ಜೀವ ಕಾಪಾಡಿದೆ. ದೇಶದ ಪ್ರಮುಖ ಬೆಳವಣಿಗೆಗಳ ಕ್ಷಣ ಕ್ಷಣದ ಲೈವ್ ಅಪ್‌ಡೇಟ್ ಇಲ್ಲಿದೆ.

MOTN Survey

11:09 PM (IST) Aug 28

MOTN Survey - ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯೇ ಬೆಸ್ಟ್‌, ಸನಿಹದಲ್ಲೂ ಇಲ್ಲ ರಾಹುಲ್!

2014 ರಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಲೋಕಸಭಾ ಚುನಾವಣೆ ನಡೆದರೆ ದೇಶವನ್ನು ಮುನ್ನಡೆಸುವ ಅತ್ಯಂತ ಜನಪ್ರಿಯ ಅಭ್ಯರ್ಥಿಯಾಗಿ ಉಳಿಯುತ್ತಾರೆ.

 

Read Full Story

11:05 PM (IST) Aug 28

ನಾಗರಹಾವು ಕಡಿತಕ್ಕೆ ಮೂಢನಂಬಿಕೆ ಚಿಕಿತ್ಸೆ - ವಿಡಿಯೋ ವೈರಲ್

ನಾಗರಹಾವು ಕಡಿತಕ್ಕೊಳಗಾದ ಮಹಿಳೆಗೆ ಆಸ್ಪತ್ರೆಗೆ ಕರೆದೊಯ್ಯುವ ಬದಲು ಗ್ರಾಮಸ್ಥರು ಬ್ಲಾಕ್ ಮ್ಯಾಜಿಕ್ ಮಾಡಿದ ವಿಡಿಯೋ ವೈರಲ್ ಆಗಿದೆ. ಹಾವು ಪುನಃ ವಿಷ ಹೀರಿಕೊಳ್ಳುವಂತೆ ಮಹಿಳೆಯ ಮೇಲೆ ಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಮೂಢನಂಬಿಕೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

10:46 PM (IST) Aug 28

MOTN Survey - ವಿಪಕ್ಷ ನಾಯಕ ಸ್ಥಾನಕ್ಕೆ ರಾಹುಲ್‌ ಗಾಂಧಿ ಅತ್ಯಂತ ಸೂಕ್ತ ಎಂದ ಜನ!

ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಜನರ ಆಯ್ಕೆಗಳಲ್ಲಿ ಇದ್ದರು, ಆದರೆ ವಿರೋಧ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿ ಈ ಎಲ್ಲರಿಗಿಂತ ಬೆಸ್ಟ್‌ ಎಂದಿದ್ದಾರೆ.

 

Read Full Story

10:28 PM (IST) Aug 28

Mood of the Nation - ಮೋದಿ ಜನಪ್ರಿಯತೆಯಲ್ಲಿ ಕುಸಿತ ನಿಜ ಎಂದ ಸರ್ವೆ!

ಆಗಸ್ಟ್ 2025 ರ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯ ಪ್ರಕಾರ, ಕಳೆದ ಆರು ತಿಂಗಳಲ್ಲಿ ಅವರ ಸರ್ಕಾರದ ಕಾರ್ಯಕ್ಷಮತೆ ಶೇಕಡಾ 10 ರಷ್ಟು ಕುಸಿತ ಕಂಡಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆ ಅತ್ಯಂತ ಜನಪ್ರಿಯ ನಾಯಕನಾಗಿ ಉಳಿದಿದೆ.

 

Read Full Story

10:13 PM (IST) Aug 28

ಮೋದಿ ಜೊತೆ Mood of the Nation, ಇಂದೇ ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎಗೆ 300 ಪ್ಲಸ್‌ ಸ್ಥಾನ

ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಇಂದೇ ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ ಪ್ರಬಲ ಪ್ರದರ್ಶನ ನೀಡುವ ಮತ್ತು 324 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.

 

Read Full Story

08:55 PM (IST) Aug 28

'ಈಗ ಶೇ.15ರಷ್ಟು ಹಿಂದೂಗಳು ಮಾತ್ರೇ ಇಲ್ಲಿ ಉಳಿದಿದ್ದಾರೆ..' ಸಂಭಲ್‌ ಹಿಂಸಾಚಾರ ವರದಿ ಬಹಿರಂಗ!

ಸ್ವಾತಂತ್ರ್ಯದ ಸಮಯದಲ್ಲಿ, ಸಂಭಲ್ ನಗರ ಪಾಲಿಕೆ ಪ್ರದೇಶದಲ್ಲಿ ಜನಸಂಖ್ಯೆಯ 55% ಮುಸ್ಲಿಮರು ಮತ್ತು 45% ಹಿಂದೂಗಳಾಗಿದ್ದರು ಎಂದು ವರದಿ ತಿಳಿಸಿದೆ.

 

Read Full Story

07:52 PM (IST) Aug 28

ಐದು ತಂತ್ರಜ್ಞಾನವನ್ನು ಭಾರತೀಯ ಕಂಪನಿಗಳಿಗೆ ಹಸ್ತಾಂತರ ಮಾಡಿದ ಇಸ್ರೋ!

ಇಸ್ರೋ ಅಭಿವೃದ್ಧಿಪಡಿಸಿದ ಐದು ಪ್ರಮುಖ ತಂತ್ರಜ್ಞಾನಗಳನ್ನು ಭಾರತೀಯ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಈ ವರ್ಗಾವಣೆಯು ಆಮದುಗಳನ್ನು ಕಡಿಮೆ ಮಾಡುವ ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

Read Full Story

07:23 PM (IST) Aug 28

'ಹಮ್‌ ದೋ, ಹಮಾರೇ 3..' ಪ್ರತಿ ಭಾರತೀಯರು ಮೂವರು ಮಕ್ಕಳು ಹೊಂದುವಂತೆ ಕರೆ ನೀಡಿದ ಆರೆಸ್ಸೆಸ್‌ ಮುಖ್ಯಸ್ಥ!

ಮೂರು ಮಕ್ಕಳನ್ನು ಹೊಂದುವುದು ಸೂಕ್ತ ಎಂದು ವೈದ್ಯರು ನನಗೆ ಹೇಳಿದ್ದಾರೆ, ಏಕೆಂದರೆ ಇದು ಮನೆಯೊಳಗೆ ತಮ್ಮಲ್ಲಿ ಅಹಂಕಾರವನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಕಲಿಯಲು ಅವರಿಗೆ ಸಹಾಯ ಮಾಡುತ್ತದೆ" ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.

 

Read Full Story

06:07 PM (IST) Aug 28

ಚೆನ್ನೈನಲ್ಲಿರುವ ನನ್ನ ಮನೆಯಿಂದ ನನ್ನನ್ನೇ ಹೊರಹಾಕಿದ - ಭಾವಿ ಪತಿ ವಿರುದ್ಧ ಗಾಯಕಿ ಸುಚಿತ್ರಾ ಗಂಭೀರ ಆರೋಪ

ಹಲವು ವಿವಾದಿತ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿರುವ ತಮಿಳು ಸಿನಿಮಾರಂಗದ ಗಾಯಕಿ ಹಾಗೂ ನಟಿ ಸುಚಿತ್ರಾ ಈಗ ತನ್ನ ಭಾವಿ ಪತಿ ವಿರುದ್ಧ ಭಾರಿ ಆರೋಪ ಮಾಡಿದ್ದಾರೆ. ಆತ ನನ್ನನ್ನು ರೆಸ್ಲರ್‌ ಶೋಗಳಲ್ಲಿ ಸ್ಪರ್ಧಾಳುಗಳು ಪರಸ್ಪರ ಹೊಡೆಯುವಂತೆ ಥಳಿಸುತ್ತಿದ್ದ ಎಂದು ದೂರಿದ್ದಾರೆ.

Read Full Story

03:55 PM (IST) Aug 28

ಚೀನಾದ ಅವಲಂಬನೆ ಕಡಿಮೆ ಮಾಡಲು, ಭಾರತದಲ್ಲೇ TBM ಅಭಿವೃದ್ಧಿಗೆ ಮುಂದಾದ ಬೆಂಗಳೂರಿನ ಬೆಮೆಲ್‌!

ಸುರಂಗ ಕೊರೆಯುವ ಯಂತ್ರಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲು ವಿನ್ಯಾಸ ಸಲಹಾ ಸಂಸ್ಥೆಗಾಗಿ ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಇತ್ತೀಚೆಗೆ ಇಒಐ ಆಹ್ವಾನಿಸಿದೆ.

Read Full Story

02:39 PM (IST) Aug 28

ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಾ ನೀಟ್ ಪರೀಕ್ಷೆ ಪಾಸ್ ಮಾಡಿದ ಒಡಿಶಾದ ಶುಭಂ

ಬೆಂಗಳೂರಿನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಯುವಕ ಶುಭಂ ಶಬರ್ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಹಗಲು ದುಡಿಮೆ, ರಾತ್ರಿ ಅಧ್ಯಯನ ಮಾಡುವ ಮೂಲಕ ಶುಭಂ ಈ ಸಾಧನೆ ಮಾಡಿದ್ದಾರೆ.
Read Full Story

01:01 PM (IST) Aug 28

ಹೈಕ್ಲಾಸ್‌ ಜನರ ಮುಖವಾಡ ತೆರೆದಿಟ್ಟ ಹೌಸ್ ಕೀಪರ್ - ಐಐಟಿ ಬಾಂಬೆ ಪ್ರೊಫೆಸರ್ ಪೋಸ್ಟ್ ಭಾರಿ ವೈರಲ್

ಐಐಟಿ ಬಾಂಬೆಯಲ್ಲಿ ಹೌಸ್ ಕೀಪಿಂಗ್ ಮಾಡುವ ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆಗಳನ್ನು ಐಐಟಿ ಬಾಂಬೆಯ ತಂತ್ರಜ್ಞರೊಬ್ಬರ ಜೊತೆ ಹಂಚಿಕೊಂಡಿದ್ದಾರೆ.ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ.

Read Full Story

11:32 AM (IST) Aug 28

ಗಣೇಶನ 'ಏಕದಂತಾಯ' ಹಾಡು ಹಾಡುತ್ತಾ ನಾನೊಬ್ಬ ಸನಾತನಿ ಎಂದ ಸ್ಪ್ಯಾನಿಶ್ ತರುಣ

ಪೋಲ್ಯಾಂಡ್‌ನ ಓರ್ವಯುವಕ ಗಣೇಶ ಚತುರ್ಥಿಗೆ 'ಏಕದಂತಾಯ ವಕ್ರತುಂಡಾಯ' ಹಾಡನ್ನು ಹಾಡುವ ಮೂಲಕ ಶುಭಾಶಯ ತಿಳಿಸಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಜನ್ಮತಃ ಕ್ರೈಸ್ತನಾಗಿದ್ದರೂ ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟಿರುವುದಾಗಿ ತಿಳಿಸಿದ್ದಾನೆ.

Read Full Story

07:58 AM (IST) Aug 28

ಅಮೆರಿಕ ಸುಂಕ ಬೆದರಿಕೆ ನಡುವೆ ಭಾರತಕ್ಕೆ ಭರ್ಜರಿ ಸುದ್ದಿ! 2038 ರ ವೇಳೆಗೆ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ, EY ವರದಿ ಬಹಿರಂಗ

EY ವರದಿಯ ಪ್ರಕಾರ, 2038 ರ ವೇಳೆಗೆ ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಯುವ ಜನಸಂಖ್ಯೆ ಮತ್ತು ದೃಢವಾದ ದೇಶೀಯ ಬೇಡಿಕೆ ಈ ಬೆಳವಣಿಗೆಗೆ ಪ್ರಮುಖ ಕಾರಣಗಳು. ಅಮೆರಿಕದ ಸುಂಕಗಳು ಭಾರತದ ಮೇಲೆ ಕಡಿಮೆ ಪರಿಣಾಮ ಬೀರುತ್ತವೆ.
Read Full Story

07:50 AM (IST) Aug 28

ಹಾಸ್ಟೆಲ್‌ನಲ್ಲಿ ದೂರು ಹೇಳಿದ್ದಕ್ಕೆ ಐರನ್ ಬಾಕ್ಸ್ ಬಿಸಿ ಮಾಡಿ ಬಾಲಕನ ಹೊಟ್ಟೆಗಿಟ್ಟ ಸಹಪಾಠಿಗಳು

ಆಂಧ್ರಪ್ರದೇಶದ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ಇಸ್ತ್ರಿ ಪೆಟ್ಟಿಗೆಯಿಂದ ಮತ್ತೊಬ್ಬ ಬಾಲಕನಿಗೆ ಸುಟ್ಟಿದ್ದಾರೆ. ತಾಯಿ ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Read Full Story

07:29 AM (IST) Aug 28

ಉಕ್ಕಿ ಹರಿದ ತವಿ ನದಿ, ಪಾಕಿಸ್ತಾನದಲ್ಲಿ ಪ್ರವಾಹ

ತವಿ ನದಿ ಉಕ್ಕಿ ಹರಿದಿದೆ. ಮೇಘ ಸ್ಫೋಟದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಜಮ್ಮು ಮೂಲಕ ಹರಿಯುವ ತವಿ ನದಿ ಪಾಕಿಸ್ತಾನದ ಚೆನಾಬ್‌ನಿಂದ ಹಾದು ಹೋಗಲಿದೆ. ನದಿಯ ಅಪಾಯವನ್ನು ಭಾರತ ಸತತವಾಗಿ ಪಾಕಿಸ್ತಾನಕ್ಕೆ ಅಲರ್ಟ್ ನೀಡಿ ಮಾನವೀಯತೆ ಮೆರೆದಿದೆ.

 


More Trending News