Published : Dec 03, 2025, 07:06 AM ISTUpdated : Dec 03, 2025, 10:53 PM IST

India Latest News Live: ಐಪಿಎಲ್‌ ಹರಾಜಿಗೂ ಮುನ್ನ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ CSK ಮಾಜಿ ಬೌಲರ್‌!

ಸಾರಾಂಶ

ನವದೆಹಲಿ/ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಯತ್ತ ವಾಲಿ ಸರ್ಕಾರ ರಚಿಸಲಿದ್ದಾರೆಯೇ ಎಂಬ ಗುಲ್ಲು ಹರಡಿದೆ.ಹೇಮಂತ್‌ ಮತ್ತು ಅವರ ಪತ್ನಿ ಕಲ್ಪನಾ ದಿಲ್ಲಿಯಲ್ಲಿದ್ದು, ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಬಹುದು ಎಂಬ ಊಹಾಪೋಹಗಳು ಹರಡಿವೆ. ಜಾರ್ಖಂಡ್‌ನ ಒಟ್ಟು 81 ವಿಧಾನಸಭಾ ಸ್ಥಾನಗಳಲ್ಲಿ ಬಹುಮತಕ್ಕೆ 41 ಸ್ಥಾನಗಳು ಬೇಕು. ಜೆಎಂಎಂ 34 ಸ್ಥಾನ ಹೊಂದಿದ್ದು, ಕಾಂಗ್ರೆಸ್‌ ಹಾಗೂ ಇತರರ ಜತೆ ಸೇರಿ 56 ಶಾಸಕರ ಬಲದೊಂದಿಗೆ ಅಧಿಕಾರ ನಡೆಸುತ್ತಿದೆ.

ಬಿಜೆಪಿ 21 ಸ್ಥಾನಗಳನ್ನು ಹೊಂದಿದೆ. ಜೆಎಎಂ ಬಿಜೆಪಿ ಮೈತ್ರಿಯಾದರೆ ಬಲ 55ಕ್ಕೇರಲಿದೆ. ಎನ್‌ಡಿಎ ಭಾಗವಾದ ಎಲ್‌ಜೆಪಿ. ಎಜೆಎಸ್‌ಯು ಮತ್ತು ಜೆಡಿಯುನ ತಲಾ ಇಬ್ಬ ಶಾಸಕರ ಬೆಂಬಲ ದೊರೆತರೆ ಮೈತ್ರಿಬಲ 58ಕ್ಕೇರಲಿದೆ. ಇನ್ನು ಕಾಂಗ್ರೆಸ್‌ನ 16 ಶಾಸಕರಲ್ಲಿ 8 ಜನ ಪಕ್ಷ ಬಿಡಲಿದ್ದಾರೆ. ಆದರೆ ಅನರ್ಹತೆ ಭೀತಿ ಇರುವ ಕಾರಣ ಬೇರಾವ ಪಕ್ಷವನ್ನೂ ಸೇರದೇ ಪ್ರತ್ಯೇಕ ಘಟಕ ಘೋಷಿಸಿಕೊಳ್ಳುವ ಸಾಧ್ಯತೆ ಇದೆ ಎಂದೂ ಗುಲ್ಲು ಹರಡಿದೆ.

10:53 PM (IST) Dec 03

ಐಪಿಎಲ್‌ ಹರಾಜಿಗೂ ಮುನ್ನ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ CSK ಮಾಜಿ ಬೌಲರ್‌!

ಭಾರತೀಯ ಕ್ರಿಕೆಟಿಗ ಮೋಹಿತ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷಗಳ ವೃತ್ತಿಜೀವನದಲ್ಲಿ, ಅವರು ಭಾರತ, ಹರಿಯಾಣ, ಮತ್ತು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಗುಜರಾತ್ ಟೈಟಾನ್ಸ್‌ನಂತಹ ತಂಡಗಳನ್ನು ಪ್ರತಿನಿಧಿಸಿದ್ದರು. 

Read Full Story

10:09 PM (IST) Dec 03

ಕೊಹ್ಲಿ, ರುತುರಾಜ್‌ ಶತಕ ವ್ಯರ್ಥ, ದಕ್ಷಿಣ ಆಫ್ರಿಕಾದ ಸಾಂಘಿಕ ಹೋರಾಟದ ಎದುರು ಭಾರತಕ್ಕೆ ಸೋಲು

ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಅವರ ಶತಕಗಳ ಹೊರತಾಗಿಯೂ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿದೆ. ಏಡೆನ್ ಮಾರ್ಕ್‌ರಮ್ ಅವರ ಅಮೋಘ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.

Read Full Story

09:16 PM (IST) Dec 03

ನನಗಿಂತ ಸುಂದರವಾಗಿ ಕಾಣ್ತಿದ್ದಾರೆ ಅಂತಾ ಮಗನನ್ನೂ ಬಿಡದೆ 4 ಮಕ್ಕಳನ್ನು ಕೊಂದ ಮಹಿಳೆ!

ಹರಿಯಾಣದ ಪಾಣಿಪತ್‌ನಲ್ಲಿ, ಮದುವೆ ಸಮಾರಂಭವೊಂದರಲ್ಲಿ ತನ್ನ 6 ವರ್ಷದ ಸೊಸೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂಬ ಅಸೂಯೆಯೇ ಈ ಕೃತ್ಯಕ್ಕೆ ಕಾರಣವಾಗಿತ್ತು.

Read Full Story

07:31 PM (IST) Dec 03

ಈ ಜಿಲ್ಲೆಯಲ್ಲಿ ಕಳೆದ 20 ವರ್ಷದಲ್ಲಿ ಒಬ್ಬರು ನಿಧನರಾಗಿಲ್ಲ, ಅಚ್ಚರಿ ಸೀಕ್ರೆಟ್ ಬಹಿರಂಗ

ಈ ಜಿಲ್ಲೆಯಲ್ಲಿ ಕಳೆದ 20 ವರ್ಷದಲ್ಲಿ ಒಬ್ಬರು ನಿಧನರಾಗಿಲ್ಲ, ಅಚ್ಚರಿ ಸೀಕ್ರೆಟ್ ಬಹಿರಂಗ, ಇಷ್ಟೇ ಅಲ್ಲ ಇಲ್ಲಿನ ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆಗೂ ಹೋಗಿಲ್ಲ, ಒಬ್ಬರೂ ಸ್ಥಳಾಂತರಗೊಂಡಿಲ್ಲ. ಈ ರಹಸ್ಯ ಬಯಲಾಗಿದೆ.

Read Full Story

07:14 PM (IST) Dec 03

ಸಮಂತಾ ಲೈಫ್ ಬದಲಾಯಿಸಿದ ವ್ಯಕ್ತಿ ಯಾರು ಗೊತ್ತಾ? ಸ್ಯಾಮ್ ಎಮೋಷನಲ್ ಪೋಸ್ಟ್

ಸಮಂತಾ ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಮದುವೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಸಮಯದಲ್ಲಿ, ತನ್ನ ಜೀವನವನ್ನೇ ಬದಲಾಯಿಸಿದ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಅವರು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

Read Full Story

06:19 PM (IST) Dec 03

ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಗಿಲ್ ವೈಸ್ ಕ್ಯಾಪ್ಟನ್, ಆದ್ರೆ ಒಂದು ಕಂಡೀಷನ್!

ಡಿಸೆಂಬರ್ 09 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ.  

Read Full Story

05:16 PM (IST) Dec 03

'ಭಾರತ ವಿಭಜನೆ ಆಗುವವರೆಗೂ ನಮಗೆ ನೆಮ್ಮದಿಯಿಲ್ಲ.' ದ್ವೇಷಕಾರಿದ ಬಾಂಗ್ಲಾದೇಶದ ನಿವತ್ತ ಜನರಲ್‌

ನಿವೃತ್ತ ಬಾಂಗ್ಲಾದೇಶಿ ಬ್ರಿಗೇಡಿಯರ್ ಜನರಲ್ ಅಬ್ದುಲ್ಲಾಹಿ ಅಮನ್ ಅಜ್ಮಿ ಭಾರತ ವಿರೋಧಿ ಭಾವನೆಯ ದೀರ್ಘ ಇತಿಹಾಸವನ್ನು ಹೊಂದಿದ್ದಾರೆ. ಸೆಪ್ಟೆಂಬರ್ 2024 ರಲ್ಲಿ, ಅಬ್ದುಲ್ಲಾಹಿ ಅಮನ್ ಅಜ್ಮಿ ಭಾರತವು 1971 ರಲ್ಲಿ ಬಾಂಗ್ಲಾದೇಶದ ಮೇಲೆ ರಾಷ್ಟ್ರಗೀತೆಯನ್ನು ಹೇರಿತು ಎಂದು ಹೇಳಿದ್ದಾರೆ.

 

Read Full Story

04:31 PM (IST) Dec 03

ಸಂಚಾರ ಸಾಥಿ ಆ್ಯಪ್ ಮೊಬೈಲ್‌ನಲ್ಲಿ ಪ್ರಿ ಇನ್ಟಾಲ್ ಕಡ್ಡಾಯವಲ್ಲ, ವಿವಾದ ಬಳಿಕ ಕೇಂದ್ರದ ಯೂಟರ್ನ್

ಸಂಚಾರ ಸಾಥಿ ಆ್ಯಪ್ ಮೊಬೈಲ್‌ನಲ್ಲಿ ಪ್ರಿ ಇನ್ಟಾಲ್ ಕಡ್ಡಾಯವಲ್ಲ, ವಿವಾದ ಬಳಿಕ ಕೇಂದ್ರದ ಯೂಟರ್ನ್ ಹೊಡೆದಿದೆ. ಸರ್ಕಾರದ ಸಂಚಾರಿ ಸಾಥಿ ಆ್ಯಪ್ ಫೋನ್ ಕದ್ದಾಲಿಕೆ, ಡೇಟಾ ಸೋರಿಕೆ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿತ್ತು.

Read Full Story

04:24 PM (IST) Dec 03

ವಿರಾಟ್ ಕೊಹ್ಲಿ ಖಾತೆಗೆ ಮತ್ತೊಂದು ಸೆಂಚುರಿ; ಚೊಚ್ಚಲ ಶತಕ ಚಚ್ಚಿದ ಋತುರಾಜ್ ಗಾಯಕ್ವಾಡ್!

ರಾಯ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಗಾಯಕ್ವಾಡ್ ಚೊಚ್ಚಲ ಶತಕ (105) ಬಾರಿಸಿದರೆ, ಕೊಹ್ಲಿ ತಮ್ಮ 53ನೇ ಏಕದಿನ ಶತಕವನ್ನು ಪೂರೈಸಿದರು. ಈ ಜೋಡಿಯ ಶತಕದ ಜೊತೆಯಾಟವು ಆರಂಭಿಕ ಕುಸಿತದ ನಂತರ ಭಾರತ ತಂಡಕ್ಕೆ ಆಸರೆಯಾಯಿತು

Read Full Story

04:13 PM (IST) Dec 03

ಲೈಂಗಿಕ ವಿಕೃತಿಯ ಮತ್ತೊಂದು ವಿಧ, ಇಂಪ್ರೆಗ್ನೇಷನ್ ಫೆಟಿಷಿಸಂ ಅಥವಾ ಬ್ರೀಡಿಂಗ್ ಕಿಂಕ್ ಎಂದರೇನು?

ಈ ಲೇಖನವು ಫೆಟಿಷಿಸಂ ಎಂಬ ಲೈಂಗಿಕ ವಿಕೃತಿಯ ಒಂದು ವಿಧವಾದ 'ಇಂಪ್ರೆಗ್ನೇಶನ್ ಫೆಟಿಷಿಸಂ' ಬಗ್ಗೆ ವಿವರಿಸುತ್ತದೆ. ಮಹಿಳೆಯನ್ನು ಗರ್ಭಿಣಿಯಾಗಿಸುವ ಕಲ್ಪನೆಯಿಂದ ಲೈಂಗಿಕ ಆನಂದ ಪಡೆಯುವ ಈ ಸ್ಥಿತಿಯ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Read Full Story

04:11 PM (IST) Dec 03

ಚುನಾವಣಾ ಬಾಂಡ್‌ ಟಾಟಾ ಗ್ರೂಪ್‌ನಿಂದ ಬಿಜೆಪಿಗೆ ಸಿಂಹಪಾಲು! ಕಾಂಗ್ರೆಸ್‌ ಗೆ ಕೇವಲ ಶೇ. 8.4 ಕೊಡುಗೆ

ಚುನಾವಣಾ ಬಾಂಡ್‌ ರದ್ದತಿಯ ನಂತರವೂ, ಚುನಾವಣಾ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆ ಹರಿವು ಮುಂದುವರೆದಿದೆ. 2024-25ರ ವರದಿ ಪ್ರಕಾರ, ಬಿಜೆಪಿಯು ₹959 ಕೋಟಿ ಪಡೆದು ಅತಿ ದೊಡ್ಡ ಫಲಾನುಭವಿಯಾಗಿದ್ದು, ಇದರಲ್ಲಿ ಟಾಟಾ  ಗ್ರೂಪ್‌ನ PET ಟ್ರಸ್ಟ್‌ನಿಂದಲೇ ₹757.6 ಕೋಟಿ ಬಂದಿದೆ. 

Read Full Story

03:44 PM (IST) Dec 03

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!

ಐಪಿಎಲ್ 2026 ಸೀಸನ್‌ಗೂ ಮುನ್ನವೇ ದೊಡ್ಡ ಆಘಾತಗಳು ಎದುರಾಗುತ್ತಿವೆ. ಹಲವು ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸಿದ್ದ ಆಂಡ್ರೆ ರಸೆಲ್, ಫಾಫ್ ಡು ಪ್ಲೆಸಿಸ್ ಅವರಂತಹ ಸ್ಟಾರ್ ಆಟಗಾರರು ಲೀಗ್‌ನಿಂದ ದೂರವಾಗುತ್ತಿದ್ದಾರೆ. ಇದೀಗ ಮತ್ತಿಬ್ಬರು ಆಲ್ರೌಂಡರ್ಸ್‌ ಐಪಿಎಲ್ ಮಿನಿ ಹರಾಜಿನಿಂದ ಹಿಂದೆ ಸರಿದಿದ್ದಾರೆ.

Read Full Story

02:51 PM (IST) Dec 03

ಮೋದಿ ಚಾಯ್‌ವಾಲಾ ಎಐ ವಿಡಿಯೋ ಪೋಸ್ಟ್ ಮಾಡಿ ಪ್ರಧಾನಿ ಅವಮಾನಿಸಿದ ಕಾಂಗ್ರೆಸ್, ಬಿಜೆಪಿ ಗರಂ

ಮೋದಿ ಚಾಯ್‌ವಾಲಾ ಎಐ ವಿಡಿಯೋ ಪೋಸ್ಟ್ ಮಾಡಿ ಪ್ರಧಾನಿ ಅವಮಾನಿಸಿದ ಕಾಂಗ್ರೆಸ್, ಬಿಜೆಪಿ ಗರಂ, ಅಂತರಾಷ್ಟ್ರೀಯ ವೇದಿಕೆಯಲ್ಲಿ ಮೋದಿ ಚಾಯ್ ಚಾಯ್ ಎಂದು ಚಹಾ ಮಾರುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಕಾಂಗ್ರೆಸ್ ವಕ್ತಾರೆ ಪೋಸ್ಟ್ ಮಾಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

Read Full Story

01:42 PM (IST) Dec 03

ಈ ಬ್ಯಾಂಕ್‌ಗಳಲ್ಲಿ ಹಣ ಇಟ್ಟರೆ ಸುರಕ್ಷಿತ, ದೇಶದ 3 ಸೇಫೆಸ್ಟ್ ಬ್ಯಾಂಕ್ ಪಟ್ಟಿ ಪ್ರಕಟಿಸಿದ ಆರ್‌ಬಿಐ

ಈ ಬ್ಯಾಂಕ್‌ಗಳಲ್ಲಿ ಹಣ ಇಟ್ಟರೆ ಸುರಕ್ಷಿತ, ದೇಶದ 3 ಸೇಫೆಸ್ಟ್ ಬ್ಯಾಂಕ್ ಪಟ್ಟಿ ಪ್ರಕಟಿಸಿದ ಆರ್‌ಬಿಐ, ಹಣ ಉಳಿತಾಯ, ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಇತರ ಯಾವುದೇ ರೂಪದಲ್ಲಿ ಹಣ ಇಡಲು, ಹೂಡಿಕೆ ಮಾಡಲು ದೇಶದ ಮೂರು ಸುರಕ್ಷಿತ ಬ್ಯಾಂಕ್ ಪಟ್ಟಿಯನ್ನು ಆರ್‌ಬಿಐ ಬಿಡುಗಡೆ ಮಾಡಿದೆ.

 

Read Full Story

01:29 PM (IST) Dec 03

ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ; ತಂಡದಲ್ಲಿ 3 ಮೇಜರ್ ಚೇಂಜ್!

ರಾಯ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Read Full Story

01:19 PM (IST) Dec 03

ಬಿಹಾರದಲ್ಲಿ ವಿಶ್ವದ ಅತಿದೊಡ್ಡ ಗ್ರಾನೈಟ್‌ ಶಿವಲಿಂಗ! ವಿರಾಟ್ ರಾಮಾಯಣ ದೇವಾಲಯದ ಮಹತ್ವವೇನು ಗೊತ್ತಾ?

ಬಿಹಾರದ ಚಂಪಾರಣ್ಯದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗುತ್ತಿದೆ. 33 ಅಡಿ ಎತ್ತರ ಮತ್ತು 210 ಟನ್ ತೂಕದ ಈ ಶಿವಲಿಂಗವನ್ನು ತಮಿಳುನಾಡಿನಿಂದ ಬೃಹತ್ ಟ್ರೇಲರ್ ಮೂಲಕ ಸಾಗಿಸಲಾಗುತ್ತಿದ್ದು, ಇದು ಐತಿಹಾಸಿಕ ಘಟನೆಯಾಗಿದೆ.
Read Full Story

01:12 PM (IST) Dec 03

ಡಿಸೆಂಬರ್ 7ಕ್ಕೆ ಸ್ಮೃತಿ ಮಂಧನಾ, ಪಲಾಶ್ ಮುಚ್ಚಲ್ ಮದುವೆ? ಕುಟುಂಬಸ್ಥರು ಹೇಳಿದ್ದೇನು?

ಡಿಸೆಂಬರ್ 7 ರಂದು ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ನಡೆಯಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೆಡ್ಡಿಂಗ್ ಕಾರ್ಡ್ ಒಂದು ವೈರಲ್ ಆಗಿದೆ. ಈ ಮದುವೆ ಸುದ್ದಿಗೆ ಕುಟುಂಬ ಸದಸ್ಯರು ಪ್ರತಿಕ್ರಿಯಿಸಿದ್ದಾರೆ. ಪೂರ್ತಿ ವಿವರ ಇಲ್ಲಿದೆ.

Read Full Story

01:01 PM (IST) Dec 03

ಎಸೆದು ಹೋದ ನವಜಾತ ಶಿಶುವಿಗೆ ರಾತ್ರಿಯಿಡಿ ಕಾವಲು ಕುಳಿತ ಬೀದಿ ನಾಯಿ, ಮನಕಲುಕುವ ಘಟನೆ

ಎಸೆದು ಹೋದ ನವಜಾತ ಶಿಶುವಿಗೆ ರಾತ್ರಿಯಿಡಿ ಕಾವಲು ಕುಳಿತ ಬೀದಿ ನಾಯಿ, ಮನಕಲುಕುವ ಘಟನೆ, ಆಗಷ್ಟೇ ಹುಟ್ಟಿದ ನವಜಾತ ಶಿಶು ಅದು. ಆ ತಾಯಿ ಅಲ್ಲೆ ಬಿಟ್ಟು ತೆರಳಿದ್ದಾಳೆ. ಡಿಸೆಂಬರ್ ತಿಂಗಳ ಕೊರೆವ ಚಳಿಯಲ್ಲಿ ಅನಾಥವಾಗಿ ಬಿದ್ದಿದ್ದ ಶಿಶುವಿಗೆ ಬೀದಿ ನಾಯಿಗಳು ಕಾವಲು ಕುಳಿತ ಘಟನೆ ನಡೆದಿದೆ.

Read Full Story

12:18 PM (IST) Dec 03

ಬ್ಯಾಂಕ್‌ನಲ್ಲಿರುವ 67 ಸಾವಿರ ಕೋಟಿ ರೂಗೆ ಮಾಲೀಕರೇ ಇಲ್ಲ, ಇದರಲ್ಲಿ ನಿಮ್ಮ ಹಣ ಇದೆಯ ಚೆಕ್ ಮಾಡಿ

ಬ್ಯಾಂಕ್‌ನಲ್ಲಿರುವ 67 ಸಾವಿರ ಕೋಟಿ ರೂಗೆ ಮಾಲೀಕರೇ ಇಲ್ಲ, ಇದರಲ್ಲಿ ನಿಮ್ಮ ಹಣ ಇದೆಯ ಚೆಕ್ ಮಾಡಿ, ಆರ್‌ಬಿಐ ಈ ರೀತಿ ಹಣ ವಾಪಸ್ ನೀಡಲು ಎಲ್ಲಾ ಪ್ರಯತ್ನ ಮಾಡುತ್ತಿದೆ. ಕೋಟಿ ಕೋಟಿ ರೂಪಾಯಿಗಳ ಪೈಕಿ ನಿಮ್ಮ ಹಣವೂ ಇದ್ದರೆ ಸುಲಭವಾಗಿ ನಿಮ್ಮ ಸಕ್ರೀಯ ಖಾತೆಗೆ ವರ್ಗಾಯಿಸಲು ಸಾಧ್ಯವಿದೆ.

Read Full Story

12:03 PM (IST) Dec 03

ವಿಜಯ್ ಹಜಾರೆ ಟ್ರೋಫಿಗೆ ವಿರಾಟ್ ಕೊಹ್ಲಿ - ಅನಿರೀಕ್ಷಿತ ಯು-ಟರ್ನ್!

ಬಿಸಿಸಿಐನ ಹೊಸ ನಿಯಮದಂತೆ, ಆರಂಭದಲ್ಲಿ ದೇಶೀಯ ಕ್ರಿಕೆಟ್ ಆಡಲು ನಿರಾಸಕ್ತಿ ತೋರಿದ್ದ ವಿರಾಟ್ ಕೊಹ್ಲಿ ಇದೀಗ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ. ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಡೆಲ್ಲಿ ತಂಡದ ಪರವಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.  

Read Full Story

11:13 AM (IST) Dec 03

ರಾಯ್ಪುರದಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ಎರಡನೇ ಒನ್‌ಡೇ ಮ್ಯಾಚ್; ಸರಣಿ ಗೆಲ್ಲುವ ವಿಶ್ವಾಸದಲ್ಲಿ ಟೀಂ ಇಂಡಿಯಾ!

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ರಾಯ್ಪುರದಲ್ಲಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಮಿಂಚಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೇಲೆ ಎಲ್ಲರ ಕಣ್ಣಿದೆ. ಬೌಲಿಂಗ್ ಹಾಗೂ ಮಧ್ಯಮ ಕ್ರಮಾಂಕದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸರಣಿ ಗೆಲ್ಲುವತ್ತ ಭಾರತ ನೋಡುತ್ತಿದೆ.

Read Full Story

08:14 AM (IST) Dec 03

ಪಂಚಾಯ್ತಿ ಎಲೆಕ್ಷನ್ - ಕೇರಳ ಬಿಜೆಪಿಯಿಂದ ಸೋನಿಯಾ ಗಾಂಧಿ ಸ್ಪರ್ಧೆ!

ಕೇರಳದ ಇಡುಕ್ಕಿ ಜಿಲ್ಲೆಯ ಪಂಚಾಯಿತಿ ಚುನಾವಣೆಯಲ್ಲಿ 'ಸೋನಿಯಾ ಗಾಂಧಿ' ಎಂಬ ಹೆಸರಿನ ಮಹಿಳೆಯೊಬ್ಬರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನಿಷ್ಠಾವಂತ ತಂದೆಯಿಂದ ಈ ಹೆಸರು ಪಡೆದ ಅವರು,  ಬಿಜೆಪಿಯಿಂದ ಕಣಕ್ಕೆ ಈ ವಿಶಿಷ್ಟ ಹೆಸರು ಚುನಾವಣಾ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿಸಿದೆ.

Read Full Story

07:32 AM (IST) Dec 03

ಆಪರೇಷನ್ ಸಿಂದೂರ್ ವೇಳೆ ಭಾರತ ಧ್ವಂಸ ಮಾಡಿದ್ದ ಪಾಕ್ ವಾಯುನೆಲೆ ಮರು ನಿರ್ಮಾಣ!

'ಆಪರೇಷನ್‌ ಸಿಂದೂರ' ವೇಳೆ ಭಾರತದ ಕ್ಷಿपಣಿ ದಾಳಿಯಿಂದ ಹಾನಿಗೊಳಗಾಗಿದ್ದ ತನ್ನ ಸುಕ್ಕೂರ್ ವಾಯುನೆಲೆಯನ್ನು ಪಾಕಿಸ್ತಾನ ಮರುನಿರ್ಮಾಣ ಮಾಡುತ್ತಿದೆ. ಉಪಗ್ರಹ ಚಿತ್ರಗಳು, ಯುಎವಿಗಳಿಗೆ ಮುಖ್ಯ ನೆಲೆಯಾಗಿದ್ದ ಹ್ಯಾಂಗರ್‌ನ ಪುನರ್ನಿರ್ಮಾಣವನ್ನು ಖಚಿತಪಡಿಸಿವೆ. ಇ

Read Full Story

More Trending News