Published : Oct 27, 2025, 07:04 AM ISTUpdated : Oct 27, 2025, 10:29 PM IST

India Latest News Live: ಇಸ್ರೇಲ್‌ಗೆ 8 ಸಾವಿರ ಕೋಟಿ ಮಿಡ್-ಏರ್ ರಿಫ್ಯೂಯಲಿಂಗ್ ವಿಮಾನ ಒಪ್ಪಂದ ನೀಡಲಿರುವ ಭಾರತೀಯ ವಾಯುಸೇನೆ!

ಸಾರಾಂಶ

ನವದೆಹಲಿ : ಪಾಕಿಸ್ತಾನ ಮತ್ತು ಬಲೂಚಿಸ್ತಾನ ಪ್ರತ್ಯೇಕ ದೇಶಗಳು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದ ನಟ ಸಲ್ಮಾನ್‌ ಖಾನ್‌ರನ್ನು ಪಾಕಿಸ್ತಾನ ಸರ್ಕಾರ, ಉಗ್ರರ ನಿಗಾ ಪಟ್ಟಿಗೆ ಸೇರಿಸಿದೆ ಎಂದು ವರದಿಗಳು ಹೇಳಿವೆ. ದುಬೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಲ್ಮಾನ್‌, ‘ಹಿಂದಿ ಹಾಗೂ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾ ಇಲ್ಲಿ ಸೂಪರ್‌ಹಿಟ್‌ ಆಗುತ್ತದೆ. ಕಾರಣ, ಇಲ್ಲಿ ಬಲೂಚಿಸ್ತಾನ, ಪಾಕಿಸ್ತಾನ ಮ್ತತು ಅಫ್ಘಾನಿಸ್ತಾನದ ಜನರಿದ್ದಾರೆ’ ಎಂದಿದ್ದರು. ಇದನ್ನು ಬಲೂಚ್‌ ಪ್ರತ್ಯೇಕತಾವಾದಿಗಳು ಸ್ವಾಗತಿಸಿ, ‘ಹಲವು ರಾಷ್ಟ್ರಗಳು ಮಾಡದ ಕೆಲಸವನ್ನು ಅವರ ಮಾಡಿದ್ದಾರೆ’ ಎಂದು ಶ್ಲಾಘಿಸಿತ್ತು. ಇದಕ್ಕೆ ಭಾರತೀಯರೂ ಬೆಂಬಲ ನೀಡಿದ್ದರು.

Mid Air Refueling Aircraft

10:29 PM (IST) Oct 27

ಇಸ್ರೇಲ್‌ಗೆ 8 ಸಾವಿರ ಕೋಟಿ ಮಿಡ್-ಏರ್ ರಿಫ್ಯೂಯಲಿಂಗ್ ವಿಮಾನ ಒಪ್ಪಂದ ನೀಡಲಿರುವ ಭಾರತೀಯ ವಾಯುಸೇನೆ!

Israels IAI poised to secure Rs 8,000 crore IAF mid-air refuellers deal ಭಾರತೀಯ ವಾಯುಪಡೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಇಸ್ರೇಲ್‌ನಿಂದ ಆರು ಮಿಡ್-ಏರ್ ರಿಫ್ಯೂಯಲಿಂಗ್ ವಿಮಾನಗಳನ್ನು ಖರೀದಿಸುವ ಸಾಧ್ಯತೆಯಿದೆ. ಸುಮಾರು 8,000 ಕೋಟಿ ರೂಪಾಯಿಗಳ ಈ ಒಪ್ಪಂದ ಇದಾಗಿದೆ.

Read Full Story

10:22 PM (IST) Oct 27

ಮಂಥಾ ಚಂಡಮಾರುತ, ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ವೇಳಾಪಟ್ಟಿ ಬದಲಾವಣೆ

ಮಂಥಾ ಚಂಡಮಾರುತ, ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ವೇಳಾಪಟ್ಟಿ ಬದಲಾವಣೆ, ಪ್ರಯಾಣಿಕರ ಸುರಕ್ಷತೆ ಗಮನಿಸಿ ರೈಲು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಯಾವ್ಯಾವ ರೈಲು ಸೇವೆಯಲ್ಲಿ ವ್ಯತ್ಯಯ.

Read Full Story

09:45 PM (IST) Oct 27

ಛಟ್ ಪೂಜೆಗೆ ಶುಭ ಕೋರಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ, ಈ ರೀತಿ ಅವಮಾನ ಏಕೆ ಎಂದ ಬಿಜೆಪಿ?

ಛಟ್ ಪೂಜೆಗೆ ಶುಭ ಕೋರಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ, ಈ ರೀತಿ ಅವಮಾನ ಏಕೆ ಎಂದ ಬಿಜೆಪಿ? ರಾಹುಲ್ ಗಾಂಧಿ ಮಾಡಿದ ಶುಭಾಶಯ ಟ್ವೀಟ್‌ ತೀವ್ರ ಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ಶುಭಾಶಯ ಟ್ವೀಟ್ ವಿವಾದವಾಗಿದ್ದು ಹೇಗೆ?

Read Full Story

09:31 PM (IST) Oct 27

ಚೀನಾದ ಸಹಾಯದೊಂದಿಗೆ ಸೈಲೆಂಟ್‌ ಆಗಿಯೇ ಅಮೆರಿಕಕ್ಕೆ ಬಹುದೊಡ್ಡ ಏಟು ನೀಡಿದ ಭಾರತ!

India Exports to China Surge by 22% in FY26 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ್ದಕ್ಕೆ ಪ್ರತಿಯಾಗಿ, ಭಾರತವು ತನ್ನ ರಫ್ತುಗಳನ್ನು ಚೀನಾದತ್ತ ತಿರುಗಿಸಿದೆ. ಇದರಿಂದಾಗಿ 2025-26ರ ಮೊದಲಾರ್ಧದಲ್ಲಿ ಚೀನಾಕ್ಕೆ ಭಾರತದ ರಫ್ತು ಶೇ. 22ರಷ್ಟು ಹೆಚ್ಚಾಗಿದೆ.

Read Full Story

08:33 PM (IST) Oct 27

ವಾಹನಗಳಿಂದ ತುಂಬಿದ್ದ ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡ್, ಕಾರು ಜಸ್ಟ್ ಮಿಸ್ ದೃಶ್ಯ ಸೆರೆ

ವಾಹನಗಳಿಂದ ತುಂಬಿದ್ದ ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡ್, ಕಾರು ಜಸ್ಟ್ ಮಿಸ್ ದೃಶ್ಯ ಸೆರೆ, ಕೂದಲೆಳೆ ಅಂತರದಲ್ಲಿ ಕಾರು ಅಪಘಾತದಿಂದ ಪಾರಾಗಿದೆ. ಭಯಾನಕ ದೃಶ್ಯ ಕಾರಿನ ಡ್ಯಾಶ್ ಕ್ಯಾಮ್‌ನಲ್ಲಿ ಸೆರೆಯಾಗಿದೆ.

Read Full Story

08:24 PM (IST) Oct 27

ಆಪಲ್‌, ಎನ್ವಿಡಿಯಾಗಿಂತ ನಿರೀಕ್ಷೆಗೂ ಮೀರಿ ಲಾಭ ಮಾಡಿದ ಓನ್ಲಿ ಫ್ಯಾನ್ಸ್‌!

OnlyFans Outperforms Apple & Nvidia ಓನ್ಲಿಫ್ಯಾನ್ಸ್, ಪ್ರತಿ ಉದ್ಯೋಗಿಗೆ 331 ಕೋಟಿ ರೂಪಾಯಿ ಗಳಿಸುವ ಮೂಲಕ ವಿಶ್ವದ ಅತ್ಯಂತ ಆದಾಯ-ಸಮರ್ಥ ಕಂಪನಿಯಾಗಿ ಹೊರಹೊಮ್ಮಿದೆ, ಇದು ಎನ್ವಿಡಿಯಾ ಮತ್ತು ಆಪಲ್‌ನಂತಹ ಟೆಕ್ ದೈತ್ಯರನ್ನು ಮೀರಿಸಿದೆ. 

Read Full Story

08:09 PM (IST) Oct 27

ಕೈ ಕಾಲುಗಳೇ ಇಲ್ಲದ ಈ ಬಾಲಕಿ ಪ್ಯಾರಾ ಒಲಿಂಪಿಕ್‌ನಲ್ಲಿ 2 ಚಿನ್ನದ ಪದಕ ವಿಜೇತೆ

ಅನೇಕರಿಗೆ ದೇಹದ ಎಲ್ಲಾ ಅಂಗಾಂಗಗಳು ಸರಿ ಇದ್ದರೂ ಅದಿಲ್ಲ ಇದಿಲ್ಲ ಎಂದು ಕೊರಗುತ್ತಾರೆ. ಆದರೆ ಈ ಮಗುವಿಗೆ ಎರಡು ಕೈಗಳು ಇಲ್ಲ ಕಾಲುಗಳು ಇಲ್ಲ. ಬಿಲ್ಲುಗಾರಿಕೆಗೆ ಎರಡು ಕೈಗಳು ಬಹಳ ಅಗತ್ಯ ಆದರೆ ಈಕೆ ಅವುಗಳಿಲ್ಲದೆಯೂ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಗೆದ್ದ ಪ್ಯಾರಾ ಒಲಿಂಪಿಯನ್.

Read Full Story

07:37 PM (IST) Oct 27

ಮನೆ, ಭದ್ರತಾ ಸಿಬ್ಬಂದಿಗಳಿಗೆ ಅಮಿತಾಭ್ ಬಚ್ಚನ್ 10,000 ರೂ ಗಿಫ್ಟ್, ಜುಜುಬಿ ಎಂದ ನೆಟಿಜೆನ್ಸ್

ಮನೆ, ಭದ್ರತಾ ಸಿಬ್ಬಂದಿಗಳಿಗೆ ಅಮಿತಾಬ್ ಬಚ್ಚನ್ 10,000 ರೂ ಗಿಫ್ಟ್, ಜುಜುಬಿ ಎಂದ ನೆಟಿಜೆನ್ಸ್, ದೀಪಾವಳಿ ಸಂಭ್ರಮದಲ್ಲಿ ಅಮಿತಾಬ್ ಬಚ್ಚನ್ ಈ ಉಡುಗೊರೆ ನೀಡಿದ್ದರೆ. ಆದರೆ ಇದೀಗ ಪರ ವಿರೋಧ ಕಮೆಂಟ್‌ಗೆ ಕಾರಣವಾಗಿದೆ.

Read Full Story

07:07 PM (IST) Oct 27

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ 21ನೇ ಕಂತು ರಿಲೀಸ್‌ ಆಗೋ ದಿನಾಂಕ ಫಿಕ್ಸ್‌!

PM Kisan Samman Nidhi 21st Installment Date Fixed ಪಿಎಂ ಕಿಸಾನ್ ಯೋಜನೆಯ 21ನೇ ಕಂತು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕೆಲವು ರಾಜ್ಯಗಳಿಗೆ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಇ-ಕೆವೈಸಿ ಮತ್ತು ಆಧಾರ್ ಸೀಡಿಂಗ್ ಪೂರ್ಣಗೊಳಿಸದ ರೈತರಿಗೆ ಈ ಕಂತಿನ ಹಣ ಸಿಗುವುದಿಲ್ಲ.

Read Full Story

06:21 PM (IST) Oct 27

ನ.23ಕ್ಕೆ ಚೀಫ್ ಜಸ್ಟಿಸ್ ಬಿಆರ್ ಗವಾಯಿ ನಿವೃತ್ತಿ, ಮುಂದಿನ ಸಿಜೆಐ ಹೆಸರು ಸೂಚಿಸಿದ ಮುಖ್ಯ ನ್ಯಾಯಮೂರ್ತಿ

ನ.23ಕ್ಕೆ ಚೀಫ್ ಜಸ್ಟಿಸ್ ಬಿಆರ್ ಗವಾಯಿ ನಿವೃತ್ತಿ, ಮುಂದಿನ ಸಿಜೆಐ ಹೆಸರು ಸೂಚಿಸಿದ ಮುಖ್ಯ ನ್ಯಾಯಮೂರ್ತಿ, ನವೆಂಬರ್ 24ರಂದು ಸುಪ್ರೀಂ ಕೋರ್ಟ್ ಸಿಜೆಐ ಆಗಿ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳಲಿರುವ ಜಸ್ಟಿಸ್ ಯಾರು?

Read Full Story

06:12 PM (IST) Oct 27

ಶ್ರೇಯಸ್ ಅಯ್ಯರ್ ಗಾಯದ ಕುರಿತಂತೆ ಮಹತ್ವದ ಅಪ್‌ಡೇಟ್ ಕೊಟ್ಟ ಬಿಸಿಸಿಐ! ಐಸಿಯುನಿಂದ ಶಿಫ್ಟ್

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರ ಗುಲ್ಮದಲ್ಲಿ ಗಾಯವಾಗಿರುವುದು ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಗಿದೆ. ಸದ್ಯ ತೀವ್ರ ನಿಗಾ ಘಟಕದಿಂದ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

Read Full Story

06:07 PM (IST) Oct 27

ಕೆಲಸ ಇಲ್ಲ, ಹಣವಿಲ್ಲ, ಯಾರಾದ್ರೂ ಸಹಾಯ ಮಾಡಿ; ಸೋಶಿಯಲ್‌ ಮೀಡಿಯಾದಲ್ಲಿ ಅಂಗಲಾಚಿದ ಸ್ಟಾರ್‌ ಹೀರೋಯಿನ್‌!

Actress Sandhya Mridul Appeals for Work 'ಪೇಜ್ 3' ಖ್ಯಾತಿಯ ಬಾಲಿವುಡ್ ನಟಿ ಸಂಧ್ಯಾ ಮೃದುಲ್ ತಮಗೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಡಿಮೆ ಫಾಲೋವರ್ಸ್ ಇರುವುದೇ ತಮಗೆ ಅವಕಾಶಗಳು ತಪ್ಪಿಹೋಗಲು ಕಾರಣ ಎಂದಿದ್ದಾರೆ.

Read Full Story

06:02 PM (IST) Oct 27

ಮಾನಸಿಕ ಅಸ್ವಸ್ಥ ಭಿಕ್ಷುಕಿ ಬಳಿ ಲಕ್ಷಕ್ಕೂ ಅಧಿಕ ಹಣ ಪತ್ತೆ

beggar savings: ದಶಕದಿಂದ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕ ಮಹಿಳೆಯ ಬಳಿ ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಪತ್ತೆಯಾಗಿದೆ. ಮಾನಸಿಕ ಅಸ್ವಸ್ಥೆಯಾಗಿದ್ದ ಆಕೆಯನ್ನು ಸ್ಥಳಾಂತರಿಸಲು ಯತ್ನಿಸಿದಾಗ, ಆಕೆ ಬಳಿ ಇದ್ದ ಎರಡು ಚೀಲಗಳಲ್ಲಿ ಅಪಾರ ಪ್ರಮಾಣದ ಹಣ ಇರುವುದು ಬೆಳಕಿಗೆ ಬಂದಿದೆ.

Read Full Story

05:50 PM (IST) Oct 27

ಭಾರತ ಎದುರಿನ ಟೆಸ್ಟ್ ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ! ಟೀಂ ಇಂಡಿಯಾ ಸೋಲಿಸಲು ಮಾಸ್ಟರ್ ಪ್ಲಾನ್

ಮುಂದಿನ ತಿಂಗಳು ಭಾರತ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ತೆಂಬಾ ಬವುಮಾ ನಾಯಕನಾಗಿ ತಂಡಕ್ಕೆ ಮರಳಿದ್ದು, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್ ಮತ್ತು ಸೆನುರಾನ್ ಮುತ್ತುಸ್ವಾಮಿ ಅವರನ್ನೊಳಗೊಂಡ ಸ್ಪಿನ್ ವಿಭಾಗ ತಂಡ ಹೊಂದಿದೆ.

Read Full Story

05:16 PM (IST) Oct 27

ಬಂದೇ ಬಿಡ್ತು ಕೇಂದ್ರದ ಭಾರತ್​ ಟ್ಯಾಕ್ಸಿ - ಕಮಿಷನ್​ಗೆ ಕಡಿವಾಣ- ಪ್ರಯಾಣಿಕರು, ಚಾಲಕರು ಖುಷಿಯೋ ಖುಷಿ

ಖಾಸಗಿ ಕ್ಯಾಬ್‌ಗಳ ಕಮಿಷನ್ ಹಾವಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರವು 'ಭಾರತ್ ಟ್ಯಾಕ್ಸಿ' ಸೇವೆಯನ್ನು ಆರಂಭಿಸುತ್ತಿದೆ. ಈ ಯೋಜನೆಯು ಚಾಲಕರಿಗೆ ಶೂನ್ಯ ಕಮಿಷನ್ ಮತ್ತು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಒದಗಿಸುವ ಗುರಿ ಹೊಂದಿದೆ. ನವೆಂಬರ್‌ನಿಂದ  ಸೇವೆ ಪ್ರಾರಂಭವಾಗಲಿದೆ.

Read Full Story

04:59 PM (IST) Oct 27

ಮುಂದಿನ ಸಿನಿಮಾ ಕುರಿತು ಪೋಸ್ಟ್ ಮಾಡಿ ದುರಂತ ಅಂತ್ಯಕಂಡ ಜಮ್ತಾರಾ ಸೀಸನ್ 2 ಖ್ಯಾತಿಯ ನಟ

ಮುಂದಿನ ಸಿನಿಮಾ ಕುರಿತು ಪೋಸ್ಟ್ ಮಾಡಿ ದುರಂತ ಅಂತ್ಯಕಂಡ ಜಮ್ತಾರಾ ಸೀಸನ್ 2 ಖ್ಯಾತಿಯ ನಟ, ಕೇವಲ 25ರ ಹರೆಯದ ಯುವ ನಟ ಸಚಿನ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್. ಕೆಲಸ, ಸಿನಿಮಾ ಎರಡಲ್ಲೂ ಸೈ ಎನಿಸಿಕೊಂಡಿದ್ದ ನಟ ಬದುಕು ಅಂತ್ಯಗೊಳಿಸಿದ್ದೇಕೆ?

Read Full Story

04:33 PM (IST) Oct 27

ಆಸ್ಟ್ರೇಲಿಯಾ ಎದುರಿನ ಸೆಮೀಸ್‌ಗೂ ಮುನ್ನ ಭಾರತಕ್ಕೆ ಬಿಗ್ ಶಾಕ್! ಈ ಗೇಮ್‌ ಚೇಂಜರ್‌ ಆಡೋದೇ ಡೌಟ್

ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ ಭಾರತಕ್ಕೆ ಹಿನ್ನಡೆಯಾಗಿದ್ದು, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.

Read Full Story

04:06 PM (IST) Oct 27

ಸಿಎಂ ಯೋಗಿ ಮಹತ್ವದ ನಿರ್ಧಾರ ಘೋಷಣೆ, ಮುಸ್ತಾಫಾಬಾದ್ ಗ್ರಾಮ ಇನ್ನು ಕಬೀರ್ ಧಾಮ

ಸಿಎಂ ಯೋಗಿ ಮಹತ್ವದ ನಿರ್ಧಾರ ಘೋಷಣೆ, ಮುಸ್ತಾಫಾಬಾದ್ ಗ್ರಾಮ ಇನ್ನು ಕಬೀರ್ ಧಾಮ ಎಂದು ಮರುನಾಮಕರಣ ಮಾಡಲಾಗಿದೆ. ಮುಸ್ಲಿಮರೇ ಇಲ್ಲದ ಗ್ರಾಮಕ್ಕೆ ಮುಸ್ಲಿಂ ಹೆಸರಿಗಿಂತ ಅಲ್ಲಿನ ಸಂಸ್ಕೃತಿ, ಐತಿಹಾಸಿಕ ಪರಂಪರೆಗೆ ಅನುಗುಣವಾಗಿರಬೇಕು ಎಂದಿದ್ದಾರೆ.

Read Full Story

03:48 PM (IST) Oct 27

ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ನಡೆದ 3 ತಿಂಗಳ ಬಳಿಕ ದೊಡ್ಡ ನಿರ್ಧಾರ ಮಾಡಿದ ಅನಾಯಾ ಬಂಗಾರ್‌

ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಯ ಮೂರು ತಿಂಗಳ ನಂತರ, ಸಂಜಯ್ ಬಂಗಾರ್ ಪುತ್ರಿ ಅನಯಾ ಬಂಗಾರ್ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಹಿಂದೆ ಆರ್ಯನ್ ಆಗಿ ಕ್ರಿಕೆಟ್ ಆಡುತ್ತಿದ್ದ ಅವರು, ಈಗ ಅನಯಾ ಆಗಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.
Read Full Story

03:28 PM (IST) Oct 27

ರಣಜಿ ಟ್ರೋಫಿ ಇತಿಹಾಸದಲ್ಲೇ ಅತಿ ಕಿರು ಮ್ಯಾಚ್! 90 ಓವರ್‌ನೊಳಗೆ ಮ್ಯಾಚ್ ಖತಂ

ಅಸ್ಸಾಂ ಮತ್ತು ಸರ್ವಿಸಸ್ ನಡುವಿನ ರಣಜಿ ಪಂದ್ಯವು ಕೇವಲ 540 ಎಸೆತಗಳಲ್ಲಿ ಮುಕ್ತಾಯಗೊಂಡು, ರಣಜಿ ಇತಿಹಾಸದಲ್ಲೇ ಅತಿ ಕಿರು ಪಂದ್ಯ ಎಂಬ ದಾಖಲೆ ಬರೆದಿದೆ. ಇದೇ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಸರ್ವಿಸಸ್ ತಂಡದ ಇಬ್ಬರು ಬೌಲರ್‌ಗಳು ಹ್ಯಾಟ್ರಿಕ್ ವಿಕೆಟ್ ಪಡೆದು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
Read Full Story

03:02 PM (IST) Oct 27

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ ಅಥ್ಲೀಟ್ ರೋಹಿನಿ ಶವವಾಗಿ ಪತ್ತೆ, ಹಲವು ಅನುಮಾನ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ ಅಥ್ಲೀಟ್ ರೋಹಿನಿ ಶವವಾಗಿ ಪತ್ತೆ, ಹಲವು ಅನುಮಾನ, ಜಿಯು ಜಿಸ್ತು ಅಥ್ಲೀಟ್ ಸಾವು ಕ್ರೀಡಾಲೋಕವನ್ನೇ ಅಚ್ಚರಿಗೊಳಿಸಿದೆ. ಹಲವು ಪ್ರಶಸ್ತಿ, ಪದಕ ಗೆದ್ದಿರುವ ರೋಹಿನಿ ಮೃತದೇಹ ಪತ್ತೆಯಾಗಿದ್ದು ಎಲ್ಲಿ?

Read Full Story

01:51 PM (IST) Oct 27

ಶ್ರೇಯಸ್ ಅಯ್ಯರ್‌ಗೆ ಆಗಿದ್ದು ಮಾರಣಾಂತಿಕ ಗಾಯ! ಐಸಿಯುನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗನಿಗೆ ಚಿಕಿತ್ಸೆ

ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಕ್ಕೆಲುಬಿನ ಗಾಯದಿಂದಾಗಿ ಆಂತರಿಕ ರಕ್ತಸ್ರಾವ ಉಂಟಾಗಿದ್ದು, ಅವರನ್ನು ಸಿಡ್ನಿಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ.  

Read Full Story

01:48 PM (IST) Oct 27

ಹೃದಯಾಘಾತಕ್ಕೆ ಬಲಿಯಾದ ಪುತ್ರ - ತಂದೆಯ ಸ್ಥಾನದಲ್ಲಿ ನಿಂತು ವಿಧವೆ ಸೊಸೆಯ ಮದ್ವೆ ಮಾಡಿದ ಮಾವ

Father in law takes dad Responsibility: ವ್ಯಕ್ತಿಯೊಬ್ಬರು ತಮ್ಮ ಮಗನ ಸಾವಿನ ನಂತರ ವಿಧವೆಯಾದ ಸೊಸೆಗೆ ತಂದೆಯ ಸ್ಥಾನದಲ್ಲಿ ನಿಂತು ಮರುಮದುವೆ ಮಾಡಿಸಿದ್ದಾರೆ. ಮದುವೆಯ ನಂತರ ಮಗಳನ್ನು ಕಳುಹಿಸಿಕೊಡುವ ತಂದೆಯಂತೆ ಬಿಕ್ಕಿ ಅತ್ತ ಈ ಮಾವನ ಕಾರ್ಯಕ್ಕೆ ಸಮಾಜದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Read Full Story

01:27 PM (IST) Oct 27

'ರಾತ್ರಿಯಾಗುತ್ತಲೇ ಹೆಂಡ್ತಿ ಹಾವಾಗ್ತಾಳೆ- ಕಾಪಾಡಿ' ಎಂದು ದೂರು ಕೊಟ್ಪ ಪತಿ - ತನಿಖೆಗೆ ಹೋದ ಪೊಲೀಸರಿಗೆ ಶಾಕ್​

ಉತ್ತರ ಪ್ರದೇಶದಲ್ಲಿ, ತನ್ನ ಪತ್ನಿ ರಾತ್ರಿಯಲ್ಲಿ ಹಾವಾಗಿ ಬದಲಾಗುತ್ತಾಳೆ ಎಂದು ಪತಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದ. ಆದರೆ, ಪೊಲೀಸರ ತನಿಖೆಯಿಂದ  ಗೊತ್ತಾದದ್ದೇ ಬೇರೆ. ಏನಿದು ಸ್ಟೋರಿ? 

Read Full Story

12:51 PM (IST) Oct 27

ರೋಹಿತ್ ಶರ್ಮಾ ನಿವೃತ್ತಿ ವಿಚಾರ - ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ಕೊಟ್ಟ ಹಿಟ್‌ಮ್ಯಾನ್ ಬಾಲ್ಯದ ಕೋಚ್!

ಮುಂಬೈ: ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಕ್ರಿಕೆಟ್ ಭವಿಷ್ಯ ಏನು ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ಹಿಟ್‌ಮ್ಯಾನ್ ಬಾಲ್ಯದ ಕೋಚ್ ದಿನೇಶ್ ಲಾಡ್, ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದಿನೇಶ್ ಲಾಡ್ ಏನಂದ್ರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

 

Read Full Story

12:14 PM (IST) Oct 27

ತಲೆಗೆ ಬೀಗ ಹೆಂಡ್ತಿ ಕೈಲಿ ಕೀ - ಕೊನೆಗೂ 26 ವರ್ಷಗಳ ಸಿಗರೇಟ್ ಚಟದಿಂದ ಹೊರಬಂದ ವ್ಯಕ್ತಿ

ಟರ್ಕಿಯ ಇಬ್ರಾಹಿಂ ಯುಸೆಲ್ ಎಂಬುವವರು ತಮ್ಮ 26 ವರ್ಷಗಳ ಧೂಮಪಾನದ ಚಟವನ್ನು ಬಿಡಲು ಒಂದು ವಿಚಿತ್ರ ದಾರಿ ಹಿಡಿದು ಅದರಲ್ಲಿ ಯಶಸ್ವಿಯಾಗಿದ್ದಾರೆ.. ಈ ಘಟನೆಯು ದೃಢ ಸಂಕಲ್ಪವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.

Read Full Story

12:10 PM (IST) Oct 27

ಶತಕ ಸಿಡಿಸಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮೇಲೆ ತಿರುಗಿಬಿದ್ದ ಟೀಂ ಇಂಡಿಯಾ ಮಾಜಿ ನಾಯಕ!

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಇದೀಗ, ಬಿಸಿಸಿಐ ಆಯ್ಕೆ ಸಮಿತಿ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದರ ಜತೆಗೆ ವಯಸ್ಸು ಕೇವಲ ನಂಬರ್ ಅಷ್ಟೇ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

 

Read Full Story

11:29 AM (IST) Oct 27

ಮುಂಬೈ ಬಗ್ಗುಬಡಿದ ಬೆಂಗಳೂರು ಟಾರ್ಪಿಡೋಸ್‌ ಪ್ರೈಮ್‌ ವಾಲಿಬಾಲ್ ಲೀಗ್ ಚಾಂಪಿಯನ್!

ಹೈದರಾಬಾದ್‌ನಲ್ಲಿ ನಡೆದ ಪ್ರೈಮ್ ವಾಲಿಬಾಲ್ ಲೀಗ್‌ನ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ, ಬೆಂಗಳೂರು ಟಾರ್ಪಿಡೋಸ್ ತಂಡವು ಮುಂಬೈ ಮೆಟಿಯೋರ್ಸ್ ತಂಡವನ್ನು 15-13, 16-4, 15-13 ನೇರ ಸೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.  

Read Full Story

11:21 AM (IST) Oct 27

15 ವರ್ಷದ ದಾಂಪತ್ಯಕ್ಕೆ ವಿದಾಯ - ವಿಚ್ಚೇದನದತ್ತ ಮುಖ ಮಾಡಿದ ಕಿರುತೆರೆಯ ಸ್ಟಾರ್ ಜೋಡಿ

Jay Bhanushali Mahhi Vij: ಜಯ್ ಭಾನ್ಸುಲಿ ಹಾಗೂ ಮಹಿ ವಿಜ್ ಹಿಂದಿ ಕಿರುತೆರೆ ಲೋಕದ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಅವರಿಬ್ಬರು ಮದುವೆಯಾದಾಗ ಅವರ ಸಾವಿರಾರು ಅಭಿಮಾನಿಗಳು ಸ್ವರ್ಗವೇ ಧರೆಗಿಳಿದಂತೆ ಖುಷಿ ಪಟ್ಟಿದ್ದರು. ಆದರೆ ಈಗ ಈ ದಂಪತಿಗಳು ದೂರಾಗಿದ್ದಾರೆ ಎಂದು ವರದಿಯಾಗಿದೆ.

Read Full Story

10:49 AM (IST) Oct 27

ಪ್ರೊ ಕಬಡ್ಡಿ - ಮಿನಿ ಕ್ವಾಲಿಫೈರ್‌ನಲ್ಲಿ ಬೆಂಗ್ಳೂರಿಗೆ ರೋಚಕ ಸೋಲು, ಬುಲ್ಸ್‌ಗಿಂದು ಮಾಡು ಇಲ್ಲವೇ ಮಡಿ ಪಂದ್ಯ!

ಪ್ರೊ ಕಬಡ್ಡಿ ಲೀಗ್‌ನ ಮಿನಿ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟನ್ಸ್ ವಿರುದ್ಧ 32-37 ಅಂಕಗಳಿಂದ ವೀರೋಚಿತ ಸೋಲನುಭವಿಸಿತು. ಈ ಸೋಲಿನಿಂದಾಗಿ ಬುಲ್ಸ್ ನೇರವಾಗಿ ಎಲಿಮಿನೇಟರ್ 3ಕ್ಕೆ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿದೆ.

Read Full Story

10:18 AM (IST) Oct 27

ರಣಜಿ ಟ್ರೋಫಿ - ಶಿವಮೊಗ್ಗದಲ್ಲಿ ಅಬ್ಬರಿಸಿದ ಕರುಣ್ ನಾಯರ್; ಗೋವಾ ಎದುರು ಕರ್ನಾಟಕ ಬೃಹತ್ ಮೊತ್ತ

ಗೋವಾ ವಿರುದ್ಧದ ರಣಜಿ ಪಂದ್ಯದಲ್ಲಿ ಕರುಣ್ ನಾಯರ್ ಅವರ ಅಜೇಯ 174 ರನ್‌ಗಳ ನೆರವಿನಿಂದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 371 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ, ಎರಡನೇ ದಿನದಾಟದಂತ್ಯಕ್ಕೆ ಗೋವಾ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿ, 343 ರನ್‌ಗಳ ಹಿನ್ನಡೆಯಲ್ಲಿದೆ.

Read Full Story

More Trending News