ನವದೆಹಲಿ : ಪಾಕಿಸ್ತಾನ ಮತ್ತು ಬಲೂಚಿಸ್ತಾನ ಪ್ರತ್ಯೇಕ ದೇಶಗಳು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದ ನಟ ಸಲ್ಮಾನ್ ಖಾನ್ರನ್ನು ಪಾಕಿಸ್ತಾನ ಸರ್ಕಾರ, ಉಗ್ರರ ನಿಗಾ ಪಟ್ಟಿಗೆ ಸೇರಿಸಿದೆ ಎಂದು ವರದಿಗಳು ಹೇಳಿವೆ. ದುಬೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಲ್ಮಾನ್, ‘ಹಿಂದಿ ಹಾಗೂ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾ ಇಲ್ಲಿ ಸೂಪರ್ಹಿಟ್ ಆಗುತ್ತದೆ. ಕಾರಣ, ಇಲ್ಲಿ ಬಲೂಚಿಸ್ತಾನ, ಪಾಕಿಸ್ತಾನ ಮ್ತತು ಅಫ್ಘಾನಿಸ್ತಾನದ ಜನರಿದ್ದಾರೆ’ ಎಂದಿದ್ದರು. ಇದನ್ನು ಬಲೂಚ್ ಪ್ರತ್ಯೇಕತಾವಾದಿಗಳು ಸ್ವಾಗತಿಸಿ, ‘ಹಲವು ರಾಷ್ಟ್ರಗಳು ಮಾಡದ ಕೆಲಸವನ್ನು ಅವರ ಮಾಡಿದ್ದಾರೆ’ ಎಂದು ಶ್ಲಾಘಿಸಿತ್ತು. ಇದಕ್ಕೆ ಭಾರತೀಯರೂ ಬೆಂಬಲ ನೀಡಿದ್ದರು.

10:29 PM (IST) Oct 27
Israels IAI poised to secure Rs 8,000 crore IAF mid-air refuellers deal ಭಾರತೀಯ ವಾಯುಪಡೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಇಸ್ರೇಲ್ನಿಂದ ಆರು ಮಿಡ್-ಏರ್ ರಿಫ್ಯೂಯಲಿಂಗ್ ವಿಮಾನಗಳನ್ನು ಖರೀದಿಸುವ ಸಾಧ್ಯತೆಯಿದೆ. ಸುಮಾರು 8,000 ಕೋಟಿ ರೂಪಾಯಿಗಳ ಈ ಒಪ್ಪಂದ ಇದಾಗಿದೆ.
10:22 PM (IST) Oct 27
ಮಂಥಾ ಚಂಡಮಾರುತ, ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ವೇಳಾಪಟ್ಟಿ ಬದಲಾವಣೆ, ಪ್ರಯಾಣಿಕರ ಸುರಕ್ಷತೆ ಗಮನಿಸಿ ರೈಲು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಯಾವ್ಯಾವ ರೈಲು ಸೇವೆಯಲ್ಲಿ ವ್ಯತ್ಯಯ.
09:45 PM (IST) Oct 27
ಛಟ್ ಪೂಜೆಗೆ ಶುಭ ಕೋರಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ, ಈ ರೀತಿ ಅವಮಾನ ಏಕೆ ಎಂದ ಬಿಜೆಪಿ? ರಾಹುಲ್ ಗಾಂಧಿ ಮಾಡಿದ ಶುಭಾಶಯ ಟ್ವೀಟ್ ತೀವ್ರ ಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ಶುಭಾಶಯ ಟ್ವೀಟ್ ವಿವಾದವಾಗಿದ್ದು ಹೇಗೆ?
09:31 PM (IST) Oct 27
India Exports to China Surge by 22% in FY26 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ್ದಕ್ಕೆ ಪ್ರತಿಯಾಗಿ, ಭಾರತವು ತನ್ನ ರಫ್ತುಗಳನ್ನು ಚೀನಾದತ್ತ ತಿರುಗಿಸಿದೆ. ಇದರಿಂದಾಗಿ 2025-26ರ ಮೊದಲಾರ್ಧದಲ್ಲಿ ಚೀನಾಕ್ಕೆ ಭಾರತದ ರಫ್ತು ಶೇ. 22ರಷ್ಟು ಹೆಚ್ಚಾಗಿದೆ.
08:33 PM (IST) Oct 27
ವಾಹನಗಳಿಂದ ತುಂಬಿದ್ದ ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡ್, ಕಾರು ಜಸ್ಟ್ ಮಿಸ್ ದೃಶ್ಯ ಸೆರೆ, ಕೂದಲೆಳೆ ಅಂತರದಲ್ಲಿ ಕಾರು ಅಪಘಾತದಿಂದ ಪಾರಾಗಿದೆ. ಭಯಾನಕ ದೃಶ್ಯ ಕಾರಿನ ಡ್ಯಾಶ್ ಕ್ಯಾಮ್ನಲ್ಲಿ ಸೆರೆಯಾಗಿದೆ.
08:24 PM (IST) Oct 27
OnlyFans Outperforms Apple & Nvidia ಓನ್ಲಿಫ್ಯಾನ್ಸ್, ಪ್ರತಿ ಉದ್ಯೋಗಿಗೆ 331 ಕೋಟಿ ರೂಪಾಯಿ ಗಳಿಸುವ ಮೂಲಕ ವಿಶ್ವದ ಅತ್ಯಂತ ಆದಾಯ-ಸಮರ್ಥ ಕಂಪನಿಯಾಗಿ ಹೊರಹೊಮ್ಮಿದೆ, ಇದು ಎನ್ವಿಡಿಯಾ ಮತ್ತು ಆಪಲ್ನಂತಹ ಟೆಕ್ ದೈತ್ಯರನ್ನು ಮೀರಿಸಿದೆ.
08:09 PM (IST) Oct 27
ಅನೇಕರಿಗೆ ದೇಹದ ಎಲ್ಲಾ ಅಂಗಾಂಗಗಳು ಸರಿ ಇದ್ದರೂ ಅದಿಲ್ಲ ಇದಿಲ್ಲ ಎಂದು ಕೊರಗುತ್ತಾರೆ. ಆದರೆ ಈ ಮಗುವಿಗೆ ಎರಡು ಕೈಗಳು ಇಲ್ಲ ಕಾಲುಗಳು ಇಲ್ಲ. ಬಿಲ್ಲುಗಾರಿಕೆಗೆ ಎರಡು ಕೈಗಳು ಬಹಳ ಅಗತ್ಯ ಆದರೆ ಈಕೆ ಅವುಗಳಿಲ್ಲದೆಯೂ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಗೆದ್ದ ಪ್ಯಾರಾ ಒಲಿಂಪಿಯನ್.
07:37 PM (IST) Oct 27
ಮನೆ, ಭದ್ರತಾ ಸಿಬ್ಬಂದಿಗಳಿಗೆ ಅಮಿತಾಬ್ ಬಚ್ಚನ್ 10,000 ರೂ ಗಿಫ್ಟ್, ಜುಜುಬಿ ಎಂದ ನೆಟಿಜೆನ್ಸ್, ದೀಪಾವಳಿ ಸಂಭ್ರಮದಲ್ಲಿ ಅಮಿತಾಬ್ ಬಚ್ಚನ್ ಈ ಉಡುಗೊರೆ ನೀಡಿದ್ದರೆ. ಆದರೆ ಇದೀಗ ಪರ ವಿರೋಧ ಕಮೆಂಟ್ಗೆ ಕಾರಣವಾಗಿದೆ.
07:07 PM (IST) Oct 27
PM Kisan Samman Nidhi 21st Installment Date Fixed ಪಿಎಂ ಕಿಸಾನ್ ಯೋಜನೆಯ 21ನೇ ಕಂತು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕೆಲವು ರಾಜ್ಯಗಳಿಗೆ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಇ-ಕೆವೈಸಿ ಮತ್ತು ಆಧಾರ್ ಸೀಡಿಂಗ್ ಪೂರ್ಣಗೊಳಿಸದ ರೈತರಿಗೆ ಈ ಕಂತಿನ ಹಣ ಸಿಗುವುದಿಲ್ಲ.
06:21 PM (IST) Oct 27
ನ.23ಕ್ಕೆ ಚೀಫ್ ಜಸ್ಟಿಸ್ ಬಿಆರ್ ಗವಾಯಿ ನಿವೃತ್ತಿ, ಮುಂದಿನ ಸಿಜೆಐ ಹೆಸರು ಸೂಚಿಸಿದ ಮುಖ್ಯ ನ್ಯಾಯಮೂರ್ತಿ, ನವೆಂಬರ್ 24ರಂದು ಸುಪ್ರೀಂ ಕೋರ್ಟ್ ಸಿಜೆಐ ಆಗಿ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳಲಿರುವ ಜಸ್ಟಿಸ್ ಯಾರು?
06:12 PM (IST) Oct 27
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರ ಗುಲ್ಮದಲ್ಲಿ ಗಾಯವಾಗಿರುವುದು ಸ್ಕ್ಯಾನಿಂಗ್ನಲ್ಲಿ ಪತ್ತೆಯಾಗಿದೆ. ಸದ್ಯ ತೀವ್ರ ನಿಗಾ ಘಟಕದಿಂದ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
06:07 PM (IST) Oct 27
Actress Sandhya Mridul Appeals for Work 'ಪೇಜ್ 3' ಖ್ಯಾತಿಯ ಬಾಲಿವುಡ್ ನಟಿ ಸಂಧ್ಯಾ ಮೃದುಲ್ ತಮಗೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಡಿಮೆ ಫಾಲೋವರ್ಸ್ ಇರುವುದೇ ತಮಗೆ ಅವಕಾಶಗಳು ತಪ್ಪಿಹೋಗಲು ಕಾರಣ ಎಂದಿದ್ದಾರೆ.
06:02 PM (IST) Oct 27
beggar savings: ದಶಕದಿಂದ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕ ಮಹಿಳೆಯ ಬಳಿ ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಪತ್ತೆಯಾಗಿದೆ. ಮಾನಸಿಕ ಅಸ್ವಸ್ಥೆಯಾಗಿದ್ದ ಆಕೆಯನ್ನು ಸ್ಥಳಾಂತರಿಸಲು ಯತ್ನಿಸಿದಾಗ, ಆಕೆ ಬಳಿ ಇದ್ದ ಎರಡು ಚೀಲಗಳಲ್ಲಿ ಅಪಾರ ಪ್ರಮಾಣದ ಹಣ ಇರುವುದು ಬೆಳಕಿಗೆ ಬಂದಿದೆ.
05:50 PM (IST) Oct 27
ಮುಂದಿನ ತಿಂಗಳು ಭಾರತ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ತೆಂಬಾ ಬವುಮಾ ನಾಯಕನಾಗಿ ತಂಡಕ್ಕೆ ಮರಳಿದ್ದು, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್ ಮತ್ತು ಸೆನುರಾನ್ ಮುತ್ತುಸ್ವಾಮಿ ಅವರನ್ನೊಳಗೊಂಡ ಸ್ಪಿನ್ ವಿಭಾಗ ತಂಡ ಹೊಂದಿದೆ.
05:16 PM (IST) Oct 27
ಖಾಸಗಿ ಕ್ಯಾಬ್ಗಳ ಕಮಿಷನ್ ಹಾವಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರವು 'ಭಾರತ್ ಟ್ಯಾಕ್ಸಿ' ಸೇವೆಯನ್ನು ಆರಂಭಿಸುತ್ತಿದೆ. ಈ ಯೋಜನೆಯು ಚಾಲಕರಿಗೆ ಶೂನ್ಯ ಕಮಿಷನ್ ಮತ್ತು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಒದಗಿಸುವ ಗುರಿ ಹೊಂದಿದೆ. ನವೆಂಬರ್ನಿಂದ ಸೇವೆ ಪ್ರಾರಂಭವಾಗಲಿದೆ.
04:59 PM (IST) Oct 27
ಮುಂದಿನ ಸಿನಿಮಾ ಕುರಿತು ಪೋಸ್ಟ್ ಮಾಡಿ ದುರಂತ ಅಂತ್ಯಕಂಡ ಜಮ್ತಾರಾ ಸೀಸನ್ 2 ಖ್ಯಾತಿಯ ನಟ, ಕೇವಲ 25ರ ಹರೆಯದ ಯುವ ನಟ ಸಚಿನ್ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನೀಯರ್. ಕೆಲಸ, ಸಿನಿಮಾ ಎರಡಲ್ಲೂ ಸೈ ಎನಿಸಿಕೊಂಡಿದ್ದ ನಟ ಬದುಕು ಅಂತ್ಯಗೊಳಿಸಿದ್ದೇಕೆ?
04:33 PM (IST) Oct 27
ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ಗೂ ಮುನ್ನ ಭಾರತಕ್ಕೆ ಹಿನ್ನಡೆಯಾಗಿದ್ದು, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
04:06 PM (IST) Oct 27
ಸಿಎಂ ಯೋಗಿ ಮಹತ್ವದ ನಿರ್ಧಾರ ಘೋಷಣೆ, ಮುಸ್ತಾಫಾಬಾದ್ ಗ್ರಾಮ ಇನ್ನು ಕಬೀರ್ ಧಾಮ ಎಂದು ಮರುನಾಮಕರಣ ಮಾಡಲಾಗಿದೆ. ಮುಸ್ಲಿಮರೇ ಇಲ್ಲದ ಗ್ರಾಮಕ್ಕೆ ಮುಸ್ಲಿಂ ಹೆಸರಿಗಿಂತ ಅಲ್ಲಿನ ಸಂಸ್ಕೃತಿ, ಐತಿಹಾಸಿಕ ಪರಂಪರೆಗೆ ಅನುಗುಣವಾಗಿರಬೇಕು ಎಂದಿದ್ದಾರೆ.
03:48 PM (IST) Oct 27
03:28 PM (IST) Oct 27
03:02 PM (IST) Oct 27
ಏಷ್ಯನ್ ಗೇಮ್ಸ್ನಲ್ಲಿ ಭಾರತ ಪ್ರತಿನಿಧಿಸಿದ ಅಥ್ಲೀಟ್ ರೋಹಿನಿ ಶವವಾಗಿ ಪತ್ತೆ, ಹಲವು ಅನುಮಾನ, ಜಿಯು ಜಿಸ್ತು ಅಥ್ಲೀಟ್ ಸಾವು ಕ್ರೀಡಾಲೋಕವನ್ನೇ ಅಚ್ಚರಿಗೊಳಿಸಿದೆ. ಹಲವು ಪ್ರಶಸ್ತಿ, ಪದಕ ಗೆದ್ದಿರುವ ರೋಹಿನಿ ಮೃತದೇಹ ಪತ್ತೆಯಾಗಿದ್ದು ಎಲ್ಲಿ?
01:51 PM (IST) Oct 27
ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಕ್ಕೆಲುಬಿನ ಗಾಯದಿಂದಾಗಿ ಆಂತರಿಕ ರಕ್ತಸ್ರಾವ ಉಂಟಾಗಿದ್ದು, ಅವರನ್ನು ಸಿಡ್ನಿಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ.
01:48 PM (IST) Oct 27
Father in law takes dad Responsibility: ವ್ಯಕ್ತಿಯೊಬ್ಬರು ತಮ್ಮ ಮಗನ ಸಾವಿನ ನಂತರ ವಿಧವೆಯಾದ ಸೊಸೆಗೆ ತಂದೆಯ ಸ್ಥಾನದಲ್ಲಿ ನಿಂತು ಮರುಮದುವೆ ಮಾಡಿಸಿದ್ದಾರೆ. ಮದುವೆಯ ನಂತರ ಮಗಳನ್ನು ಕಳುಹಿಸಿಕೊಡುವ ತಂದೆಯಂತೆ ಬಿಕ್ಕಿ ಅತ್ತ ಈ ಮಾವನ ಕಾರ್ಯಕ್ಕೆ ಸಮಾಜದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
01:27 PM (IST) Oct 27
ಉತ್ತರ ಪ್ರದೇಶದಲ್ಲಿ, ತನ್ನ ಪತ್ನಿ ರಾತ್ರಿಯಲ್ಲಿ ಹಾವಾಗಿ ಬದಲಾಗುತ್ತಾಳೆ ಎಂದು ಪತಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದ. ಆದರೆ, ಪೊಲೀಸರ ತನಿಖೆಯಿಂದ ಗೊತ್ತಾದದ್ದೇ ಬೇರೆ. ಏನಿದು ಸ್ಟೋರಿ?
12:51 PM (IST) Oct 27
ಮುಂಬೈ: ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಕ್ರಿಕೆಟ್ ಭವಿಷ್ಯ ಏನು ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ಹಿಟ್ಮ್ಯಾನ್ ಬಾಲ್ಯದ ಕೋಚ್ ದಿನೇಶ್ ಲಾಡ್, ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದಿನೇಶ್ ಲಾಡ್ ಏನಂದ್ರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
12:14 PM (IST) Oct 27
ಟರ್ಕಿಯ ಇಬ್ರಾಹಿಂ ಯುಸೆಲ್ ಎಂಬುವವರು ತಮ್ಮ 26 ವರ್ಷಗಳ ಧೂಮಪಾನದ ಚಟವನ್ನು ಬಿಡಲು ಒಂದು ವಿಚಿತ್ರ ದಾರಿ ಹಿಡಿದು ಅದರಲ್ಲಿ ಯಶಸ್ವಿಯಾಗಿದ್ದಾರೆ.. ಈ ಘಟನೆಯು ದೃಢ ಸಂಕಲ್ಪವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
12:10 PM (IST) Oct 27
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಇದೀಗ, ಬಿಸಿಸಿಐ ಆಯ್ಕೆ ಸಮಿತಿ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದರ ಜತೆಗೆ ವಯಸ್ಸು ಕೇವಲ ನಂಬರ್ ಅಷ್ಟೇ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
11:29 AM (IST) Oct 27
ಹೈದರಾಬಾದ್ನಲ್ಲಿ ನಡೆದ ಪ್ರೈಮ್ ವಾಲಿಬಾಲ್ ಲೀಗ್ನ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ, ಬೆಂಗಳೂರು ಟಾರ್ಪಿಡೋಸ್ ತಂಡವು ಮುಂಬೈ ಮೆಟಿಯೋರ್ಸ್ ತಂಡವನ್ನು 15-13, 16-4, 15-13 ನೇರ ಸೆಟ್ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
11:21 AM (IST) Oct 27
Jay Bhanushali Mahhi Vij: ಜಯ್ ಭಾನ್ಸುಲಿ ಹಾಗೂ ಮಹಿ ವಿಜ್ ಹಿಂದಿ ಕಿರುತೆರೆ ಲೋಕದ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಅವರಿಬ್ಬರು ಮದುವೆಯಾದಾಗ ಅವರ ಸಾವಿರಾರು ಅಭಿಮಾನಿಗಳು ಸ್ವರ್ಗವೇ ಧರೆಗಿಳಿದಂತೆ ಖುಷಿ ಪಟ್ಟಿದ್ದರು. ಆದರೆ ಈಗ ಈ ದಂಪತಿಗಳು ದೂರಾಗಿದ್ದಾರೆ ಎಂದು ವರದಿಯಾಗಿದೆ.
10:49 AM (IST) Oct 27
ಪ್ರೊ ಕಬಡ್ಡಿ ಲೀಗ್ನ ಮಿನಿ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟನ್ಸ್ ವಿರುದ್ಧ 32-37 ಅಂಕಗಳಿಂದ ವೀರೋಚಿತ ಸೋಲನುಭವಿಸಿತು. ಈ ಸೋಲಿನಿಂದಾಗಿ ಬುಲ್ಸ್ ನೇರವಾಗಿ ಎಲಿಮಿನೇಟರ್ 3ಕ್ಕೆ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿದೆ.
10:18 AM (IST) Oct 27
ಗೋವಾ ವಿರುದ್ಧದ ರಣಜಿ ಪಂದ್ಯದಲ್ಲಿ ಕರುಣ್ ನಾಯರ್ ಅವರ ಅಜೇಯ 174 ರನ್ಗಳ ನೆರವಿನಿಂದ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 371 ರನ್ಗಳ ಸವಾಲಿನ ಮೊತ್ತ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ, ಎರಡನೇ ದಿನದಾಟದಂತ್ಯಕ್ಕೆ ಗೋವಾ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿ, 343 ರನ್ಗಳ ಹಿನ್ನಡೆಯಲ್ಲಿದೆ.