ಹೈದರಾಬಾದ್: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಬಯ್ಯರಾಮ್ ಮಂಡಲದ ರಾಯ್ಕುಂಟ್ ಗ್ರಾಮದಲ್ಲಿ ನಡೆದ ಘಟನೆಯೊಂದು ಪ್ರಜಾಪ್ರಭುತ್ವದ ಮೂಲತತ್ವದ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹುಟ್ಟಿನಿಂದಲೇ ಕಿವುಡ ಮತ್ತು ಮೂಕಳಾಗಿದ್ದ ಅಂಗವಿಕಲ ಮಹಿಳೆ ಮಂಜುಳಾ, ಕಾಂಗ್ರೆಸ್ ಶಾಸಕ ಕೊರ್ಮಾ ಕನಕಯ್ಯ ಅವರ ಕಾಲಿಗೆ ಬಿದ್ದು ತನ್ನ ಪಿಂಚಣಿಗಾಗಿ ಬೇಡಿಕೊಂಡಿದ್ದಾರೆ. ಆದ್ರೆ ಶಾಸಕರು ಯಾವುದೇ ಅಲುಗಾಡದೇ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

09:39 PM (IST) Oct 23
ರನ್ವೇನಿಂದ ಟೇಕ್ ಆಫ್ ಬೆನ್ನಲ್ಲೇ ಪತನಗೊಂಡ PA-31T1 ವಿಮಾನ, ಅಪಘಾತದ ದೃಶ್ಯ ಸೆರೆ, ವಿಮಾನದಲ್ಲಿ ಇಂಧನ ಭರ್ತಿ ಇದ್ದ ಕಾರಣ ಪತನಗೊಳ್ಳುತ್ತಿದ್ದಂತೆ ಸ್ಫೋಟಗೊಂಡು ಕೆಲವೇ ಕ್ಷಣದಲ್ಲಿ ಹೊತ್ತಿ ಉರಿದಿದೆ. ಇಬ್ಬರ ಮೃತಪಟ್ಟಿರುವುದನ್ನು INAC ಖಚಿತಪಡಿಸಿದೆ.
08:53 PM (IST) Oct 23
ನಿಶ್ಚಿತಾರ್ಥ ರಿಂಗ್ ಹಾಸ್ಯ ಮಾಡಿ ಎಡವಟ್ಟು, ವಿರೋಧದ ಬಳಿಕ ಅಮೇಜಾನ್ ಪ್ರೈಮ್ ಇಂಡಿಯಾ ಕ್ಷಮೆ ಕೇಳಿದೆ. ಅಷ್ಟಕ್ಕೂ ಏನಿದು ಘಟನೆ, ಅಮೆಜಾನ್ ಇಂಡಿಯಾ ಕೈಸುಟ್ಟುಕೊಂಡಿದ್ದು ಯಾಕೆ? ಕ್ಷಮೆ ಕೇಳುವ ಪರಿಸ್ಥಿತಿ ಯಾಕೆ ಬಂತು?
08:02 PM (IST) Oct 23
ಮಹಿಳಾ ವಿಶ್ವಕಪ್, ಸ್ಮೃತಿ ಮಂಧನಾ-ರಾವಲ್ ದಾಖಲೆ, ನ್ಯೂಜಿಲೆಂಡ್ಗೆ 341 ರನ್ ಟಾರ್ಗೆಟ್ ಕೊಟ್ಟ ಭಾರತ ಮಹಿಳಾ ತಂಡ, ಆರಂಭಿಕರಿಬ್ಬರ ಅಬ್ಬರದಿಂದ ಭಾರತ ಬೃಹತ್ ಟಾರ್ಗೆಟ್ ನೀಡಿದೆ. ಇಷ್ಟೇ ಅಲ್ಲ ಹಲವು ದಾಖಲೆ ನಿರ್ಮಾಣವಾಗಿದೆ.
07:26 PM (IST) Oct 23
ತಾಯಿ ಎದೆಹಾಲು ಕುಡಿದಿದ್ದರೆ ಬಾ ಯುದ್ದಕ್ಕೆ, ಪಾಕ್ ಸೇನಾ ಮುಖ್ಯಸ್ಥ ಮನೀರ್ ಆಫ್ಘಾನ್ ಸವಾಲು, ಅಫ್ಘಾನಿಸ್ತಾನದ ಎಚ್ಚರಿಕೆಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಏರ್ಸ್ಟ್ರೈಕ್ ಮೂಲಕ ಅಫ್ಘಾನಿಸ್ತಾನ ಬೆದರಿಸುವ ತಂತ್ರ ಮಾಡಿದ್ದ ಪಾಕಿಸ್ತಾನ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
06:40 PM (IST) Oct 23
ಹಳಿ ಪಕ್ಕದಲ್ಲಿ ರೀಲ್ಸ್ ಸಾಹಸ, ವಿಡಿಯೋ ಮಾಡುತ್ತಿದ್ದಂತೆ ಯುವಕನಿಗೆ ಡಿಕ್ಕಿಯಾದ ರೈಲು, ಲೈಕ್ಸ್ ಹಾಗೂ ವಿಡಿಯೋ ವೈರಲ್ ಆಗಲು ಅಪಾಯಾಕಾರಿ ಸಾಹಸಕ್ಕೆ ಮುಂದಾದ ಯುವಕನಿಗೆ ಏನಾದ?
06:01 PM (IST) Oct 23
ವಿಮಾನ ಪ್ರಯಾಣಿಕರು ಇನ್ಮುಂದೆ ಈ ವಸ್ತು ಇಟ್ಟುಕೊಳ್ಳುವಂತಿಲ್ಲ, ಶೀಘ್ರದಲ್ಲೇ ಹೊಸ ರೂಲ್ಸ್ ಜಾರಿಯಾಗುತ್ತಿದೆ. DGCA ಈ ಕುರಿತು ಮಹತ್ವದ ಸಭೆ ನಡೆಸಿದೆ. ಇತ್ತೀಚೆಗೆ ನಡೆದ ಘಟನಯೇ ಈ ಬದಲಾವಣೆಗೆ ಕಾರಣ. ಅಷ್ಟಕ್ಕೂ ವಿಮಾನ ಪ್ರಯಾಣದ ವೇಳೆ ಬ್ಯಾನ್ ಮಾಡಲಿರುವ ವಸ್ತು ಯಾವುದು?
05:57 PM (IST) Oct 23
05:24 PM (IST) Oct 23
ಅಡಿಲೇಡ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಮ್ಯಾಥ್ಯೂ ಶಾರ್ಟ್ ಮತ್ತು ಕೂಪರ್ ಕಾನೊಲಿ ಅವರ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 2 ವಿಕೆಟ್ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಸರಣಿಯನ್ನು ತನ್ನದಾಗಿಸಿಕೊಂಡಿದೆ.
05:19 PM (IST) Oct 23
04:59 PM (IST) Oct 23
ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಅಕ್ಟೋಬರ್ 23ರಿಂದಲೇ ಹೊಸ ಸಮಯ ಜಾರಿಗೆ ಬಂದಿದೆ. ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಬದಲಾವಣೆಗೆ ಕಾರಣ ನೀಡಿದೆ.
04:00 PM (IST) Oct 23
ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿನ ಬೆಲೆಯಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿಗೆ ಭಾರಿ ಬೇಡಿಕೆ ಹೆಚ್ಚಾಗಿರುವ ಕಾರಣ ಇದೀಗ ಬೆಲೆ ಪರಿಷ್ಕರಿಸಲಾಗಿದೆ.
03:59 PM (IST) Oct 23
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಸೌರವ್ ಗಂಗೂಲಿಯನ್ನು ಹಿಂದಿಕ್ಕಿ ಭಾರತದ ಪರ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇದರೊಂದಿಗೆ, ಏಕದಿನದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಆಟಗಾರ ಎಂಬ ಗಂಗೂಲಿಯ ದಾಖಲೆಯನ್ನು ಮುರಿದಿದ್ದಾರೆ.
02:57 PM (IST) Oct 23
ಲಾಲು ಪುತ್ರ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ, ಇಂಡಿಯಾ ಒಕ್ಕೂಟ ಘೋಷಣೆ ಮಾಡಿದೆ. ಸೀಟು ಹಂಚಿಕೆ ಜಟಾಪಟಿ ನಡುವೆ ಕೊನೆಗೂ ಇಂಡಿಯಾ ಒಕ್ಕೂಟ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿದೆ. ಇದೀಗ ಎನ್ಡಿಎಗೆ ನಿಮ್ಮ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದೆ.
02:40 PM (IST) Oct 23
ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ದಿಢೀರ್ ಎನ್ನುವಂತೆ ತನ್ನ ಏಕದಿನ ತಂಡದ ನಾಯಕರಾದ ಮೊಹಮ್ಮದ್ ರಿಜ್ವಾನ್ ಕೆಳಗಿಳಿಸಿ, ಶಾಹೀನ್ ಅಫ್ರಿದಿಗೆ ಪಟ್ಟ ಕಟ್ಟಿದೆ. ದಿಢೀರ್ ಈ ಬೆಳವಣಿಗೆ ನಡೆದಿದ್ದು ಯಾಕೆ ಎನ್ನುವ ವಿಚಾರ ಈಗ ಬಯಲಾಗಿದೆ.
01:06 PM (IST) Oct 23
ಆರಂಭಿಕ ಆಘಾತದ ಹೊರತಾಗಿಯೂ, ರೋಹಿತ್ ಶರ್ಮಾ (73) ಮತ್ತು ಶ್ರೇಯಸ್ ಅಯ್ಯರ್ (61) ಅವರ ಅರ್ಧಶತಕಗಳ ನೆರವಿನಿಂದ ಭಾರತ ಚೇತರಿಸಿಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್, ಕೊನೆಯಲ್ಲಿ ಹರ್ಷಿತ್ ರಾಣಾ ಅವರ ಉಪಯುಕ್ತ ಆಟದಿಂದ ಟೀಂ ಇಂಡಿಯಾ, ಆಸ್ಟ್ರೇಲಿಯಾಕ್ಕೆ 265 ರನ್ಗಳ ಸವಾಲಿನ ಗುರಿ ನೀಡಿದೆ.
12:53 PM (IST) Oct 23
ಕೌನ್ ಬನೇಗಾ ಕರೋರ್ಪತಿಯಲ್ಲಿ ಅಮಿತಾಭ್ ಬಚ್ಚನ್ ಜೊತೆ ಅಧಿಕಪ್ರಸಂಗದಿಂದ ವರ್ತಿಸಿ ಟೀಕೆಗೆ ಗುರಿಯಾಗಿದ್ದ ಬಾಲಕ ಇಷಿತ್ ಭಟ್ ಕೊನೆಗೂ ಕ್ಷಮೆ ಕೋರಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್ಗೆ ಒಳಗಾದ ನಂತರ, ಆತಂಕದಿಂದ ತನ್ನ ವರ್ತನೆ ತಪ್ಪಾಯಿತು ಎಂದಿದ್ದಾನೆ.
12:34 PM (IST) Oct 23
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸತತ ಎರಡನೇ ಬಾರಿಗೆ ಶೂನ್ಯಕ್ಕೆ ಔಟಾದ ವಿರಾಟ್ ಕೊಹ್ಲಿ, ತಮ್ಮ ನೆಚ್ಚಿನ ಅಡಿಲೇಡ್ ಮೈದಾನದಲ್ಲಿ ನಿರಾಸೆ ಮೂಡಿಸಿದ್ದಾರೆ. ಪೆವಿಲಿಯನ್ಗೆ ಮರಳುವಾಗ ಅಭಿಮಾನಿಗಳಿಗೆ ಗುಡ್ ಬೈ ಹೇಳುವಂತೆ ಸನ್ನೆ ಮಾಡಿದ್ದು ಚರ್ಚೆಯನ್ನು ಹುಟ್ಟುಹಾಕಿದೆ.
11:25 AM (IST) Oct 23
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲೂ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದ್ದಾರೆ. ಅಡಿಲೇಡ್ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಡಕೌಟ್ ಆಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸತತ ಎರಡು ಏಕದಿನ ಪಂದ್ಯಗಳಲ್ಲಿ ರನ್ ಗಳಿಸದೆ ಔಟಾಗಿದ್ದಾರೆ.
11:13 AM (IST) Oct 23
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡ, ಸೆಮಿಫೈನಲ್ ರೇಸ್ನಲ್ಲಿ ಉಳಿಯಲು ನ್ಯೂಜಿಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ತಂಡವು ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶ ಸಾಧ್ಯವಿದೆ.
11:03 AM (IST) Oct 23
ಭಾರತದಲ್ಲಿ ಕಳೆದ ಆರು ದಿನಗಳಿಂದ ಚಿನ್ನದ ಬೆಲೆ ಸತತವಾಗಿ ಇಳಿಕೆಯಾಗುತ್ತಿದೆ. ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 8 ಸಾವಿರ ರೂ.ಗೂ ಅಧಿಕ ಕುಸಿತವಾಗಿದ್ದು, ಬೆಳ್ಳಿ ದರವೂ ಗಣನೀಯವಾಗಿ ಕಡಿಮೆಯಾಗಿದೆ.
10:46 AM (IST) Oct 23
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ಪವರ್ಪ್ಲೇನಲ್ಲೇ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ವಿಕೆಟ್ಗಳನ್ನು ಕಳೆದುಕೊಂಡ ಭಾರತ, ರೋಹಿತ್, ಶ್ರೇಯಸ್ ಅಯ್ಯರ್ ಜೊತೆಯಾಟದಿಂದ ಚೇತರಿಸಿಕೊಳ್ಳಲು ಯತ್ನಿಸುತ್ತಿದೆ.
10:30 AM (IST) Oct 23
19 ವರ್ಷದ ಲಲಿತ್ ಮತ್ತು 35 ವರ್ಷದ ವಿವಾಹಿತೆ ಆರತಿ ಅಕ್ರಮ ಸಂಬಂಧ ಹೊಂದಿದ್ದರು. ದೀಪಾವಳಿ ರಾತ್ರಿ ಎಲ್ಲರೂ ಸಂಭ್ರಮದಲ್ಲಿರುವಾಗ ಮನೆಯಿಂದ ಜೂಟ್ ಆಗಿದ್ದಾರೆ. ವಿವಾಹಿತೆಯಾಗಿರುವ ಆರತಿ ಎರಡು ಮಕ್ಕಳ ತಾಯಿ.
08:57 AM (IST) Oct 23
08:36 AM (IST) Oct 23