Published : Sep 21, 2025, 07:22 AM ISTUpdated : Sep 21, 2025, 11:48 PM IST

India Latest News Live: ಜಗಳಕ್ಕಿಳಿದ ಪಾಕ್ ಬೌಲರ್ಸ್‌ಗೆ ಬ್ಯಾಟ್ ಜೊತೆಗೆ ಅವರದ್ಧೇ ಭಾಷೆಯಲ್ಲಿ ಉತ್ತರ ಕೊಟ್ಟ ಅಭಿಷೇಕ್

ಸಾರಾಂಶ

ನ್ಯೂಯಾರ್ಕ್/ವಾಷಿಂಗ್ಟನ್: ಗಣೇಶ ಚತುರ್ಥಿ ಮುನ್ನಾ ದಿನ ಭಾರತೀಯ ಉತ್ಪನ್ನಗಳ ಮೇಲೆ ಶೇ.50ರಷ್ಟು ತೆರಿಗೆ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ನವರಾತ್ರಿಗೂ ಮುನ್ನ ಭಾರತದ ಮೇಲೆ ಹೊಸ ಪ್ರಹಾರ ನಡೆಸಿದ್ದಾರೆ. ಭಾರತದ ಐಟಿ ಕಂಪನಿಗಳು ಮತ್ತು ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಎಚ್ 1ಬಿ ವೀಸಾ ಶುಲ್ಕ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಅದರಂತೆ, ಇನ್ನು ಮುಂದೆ ಎಚ್-1ಬಿ ವೀಸಾ ಪ್ರಾಯೋಜಕತ್ವ ಕಾರ್ಯಕ್ರಮದಡಿ ವಿದೇಶಿ ನೌಕರರಿಗೆ ಉದ್ಯೋಗ ನೀಡುವ ಕಂಪನಿಗಳು ವಾರ್ಷಿಕವಾಗಿ 88 ಲಕ್ಷ ರು. ಶುಲ್ಕ ಪಾವತಿಸುವುದು ಕಡ್ಡಾಯ. ಈ ಕುರಿತು ಟ್ರಂಪ್ ಅಧಿಸೂಚನೆ ಹೊರಡಿಸಿದ್ದು, ಸೆ.21ರ ಬೆಳಗಿನ ಜಾವ 12.01 ನಿಮಿಷದಿಂದ ಹೊಸ ನಿಯಮ ಜಾರಿಗೆ ಬರಲಿದೆ. ಈ ಹೊಸ ಗೊಂದಲ ಸೃಷ್ಟಿಸಿದ ಬಳಿಕ ಅಮೆರಿಕ ಸರ್ಕಾರ ಇದಕ್ಕೆ ಸ್ಪಷ್ಟನೆ ನೀಡಿದ್ದು, 'ನಿಯಮ ಇನ್ನು ಮುಂದಿನ ದಿನಗಳಲ್ಲಿ ವಿತರಣೆ ಆಗುವ ಎಚ್.1- ಬಿ ವೀಸಾಗಳಿಗೆ ಮಾತ್ರ ಅನ್ವಯ ಆಗಲಿದೆ. ಹಾಲಿ ಅಮೆರಿಕದಲ್ಲೇ ಇರುವ ಉದ್ಯೋಗಿಗಳ ನವೀಕರಣಕ್ಕೆ ಅನ್ವಯ ಆಗದು' ಎಂದು ಸ್ಪಷ್ಟನೆ ನೀಡಿದೆ. ಈವರೆಗೆ ಈ ವೀಸಾ ಶುಲ್ಕ 1.75 ಲಕ್ಷದಿಂದ 4 ಲಕ್ಷ ರು.ವರೆಗೆ ಇತ್ತು. ಇದೀಗ ಆ ಶುಲ್ಕವನ್ನು ಸುಮಾರು 40 ಪಟ್ಟು ಹೆಚ್ಚಿಸಲು ಟ್ರಂಪ್ ನಿರ್ಧರಿಸಿದ್ದಾರೆ.

 

11:48 PM (IST) Sep 21

ಜಗಳಕ್ಕಿಳಿದ ಪಾಕ್ ಬೌಲರ್ಸ್‌ಗೆ ಬ್ಯಾಟ್ ಜೊತೆಗೆ ಅವರದ್ಧೇ ಭಾಷೆಯಲ್ಲಿ ಉತ್ತರ ಕೊಟ್ಟ ಅಭಿಷೇಕ್

ಜಗಳಕ್ಕಿಳಿದ ಪಾಕ್ ಬೌಲರ್ಸ್‌ಗೆ ಬ್ಯಾಟ್ ಜೊತೆಗೆ ಅವರದ್ಧೇ ಭಾಷೆಯಲ್ಲಿ ಉತ್ತರ ಕೊಟ್ಟ ಅಭಿಷೇಕ್, ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಅಭಿಶೇಕ್ ಶರ್ಮಾ ಹಾಗೂ ಪಾಕಿಸ್ತಾನ ಬೌಲರ್ಸ್ ನಡುವಿನ ಮಾತಿನ ಚಕಮಕಿ ಸದ್ದು ಮಾಡುತ್ತಿದೆ.

 

Read Full Story

11:14 PM (IST) Sep 21

ಹಾಫ್ ಸೆಂಚುರಿ ಸಂಭ್ರಮದಲ್ಲಿ ಪೆಹಲ್ಗಾಂ ಉಗ್ರ ದಾಳಿ ಸಂತ್ರಸ್ತರ ಅಣಕಿಸಿದ ಫರ್ಹಾನ್, ಭಾರಿ ವಿವಾದ

ಹಾಫ್ ಸೆಂಚುರಿ ಸಂಭ್ರಮದಲ್ಲಿ ಪೆಹಲ್ಗಾಂ ಉಗ್ರ ದಾಳಿಗೆ ಬಲಿಯಾದವರ ಅಣಕಿಸಿದ್ರಾ ಫರ್ಹಾನ್? ಪಾಕಿಸ್ತಾನ ಕ್ರಿಕೆಟಿಗನ ಸಂಭ್ರಮ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಗನ್ ಫೈರಿಂಗ್ ಶೈಲಿಯ ಸಂಭ್ರಮದ ಮೂಲಕ ಫರ್ಹಾನ್ ನೀಡಿದ ಸಂದೇಶವೇನು?

Read Full Story

10:02 PM (IST) Sep 21

INDvsPAK ನಾಲ್ಕು ಕ್ಯಾಚ್ ಕೈಚೆಲ್ಲಿದ ಭಾರತ, ಲಾಭ ಪಡೆದು 171 ರನ್ ಸಿಡಿಸಿದ ಪಾಕಿಸ್ತಾನ

INDvsPAK ನಾಲ್ಕು ಕ್ಯಾಚ್ ಕೈಚೆಲ್ಲಿದ ಭಾರತ, ಲಾಭ ಪಡೆದು 171 ರನ್ ಸಿಡಿಸಿದ ಪಾಕಿಸ್ತಾನ, ಒಂದೆಡೆ ಕ್ಯಾಚ್ ಡ್ರಾಪ್, ಮತ್ತೊಂದೆಡೆ ಫರ್ಹಾನ್ ಅಬ್ಬರದ ನಡುವೆ ಭಾರತ ಸಂಘಟಿತ ಹೋರಾಟ ನೀಡಿದೆ.ಆದರೆ ಪಾಕಿಸ್ತಾನ ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಿದೆ.

Read Full Story

08:29 PM (IST) Sep 21

ಪಂದ್ಯ ಆರಂಭದಲ್ಲೇ ಎಡವಟ್ಟು ಮಾಡಿದ ಟೀಂ ಇಂಡಿಯಾ, ಆದರೂ ಪಾಕ್‌ಗೆ ಖುಲಾಯಿಸಿದ ಅದೃಷ್ಠ

ಪಂದ್ಯ ಆರಂಭದಲ್ಲೇ ಎಡವಟ್ಟು ಮಾಡಿದ ಟೀಂ ಇಂಡಿಯಾ, ಆದರೂ ಪಾಕ್‌ಗೆ ಖುಲಾಯಿಸಿದ ಅದೃಷ್ಠ, ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಶಾಕ್ ನೀಡುವ ಅವಕಾಶವನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಇದಕ್ಕೆ ನಾಯಕ ಸೂರ್ಯುಕಮಾರ್ ಯಾದವ್ ಪ್ರತಿಕ್ರಿಯೆ ಏನು?

Read Full Story

07:41 PM (IST) Sep 21

GST ಕಮ್ಮಿಯಾದ್ರೂ ಆ ಬೆಲೆಗೆ ವಸ್ತು ಕೊಡ್ತಿಲ್ವಾ? ಕೂಡಲೇ ಈ ನಂಬರ್​ಗೆ ಕರೆ ಮಾಡಿ ಕಂಪ್ಲೇಂಟ್​ ಮಾಡಿ...

ಪ್ರಧಾನಿ ಮೋದಿ ಘೋಷಿಸಿದಂತೆ, ಜಿಎಸ್‌ಟಿ ದರಗಳನ್ನು ಕಡಿತಗೊಳಿಸಲಾಗಿದ್ದು, ಹಲವು ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಈ ತೆರಿಗೆ ಕಡಿತದ ಪ್ರಯೋಜನ ಗ್ರಾಹಕರಿಗೆ ಸಿಗದಿದ್ದರೆ, 'ಇಂಗ್ರಾಮ್' ಪೋರ್ಟಲ್ ಅಥವಾ 1915 ಸಹಾಯವಾಣಿ ಮೂಲಕ ದೂರು ಸಲ್ಲಿಸಲು ಸರ್ಕಾರ ವ್ಯವಸ್ಥೆ ಮಾಡಿದೆ.
Read Full Story

07:35 PM (IST) Sep 21

IND vs Pak ಪಾಕಿಸ್ತಾನ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ, ಮತ್ತೆ ನೆರೆ ರಾಷ್ಟ್ರಕ್ಕೆ ಮುಖಭಂಗ

IND vs Pak ಪಾಕಿಸ್ತಾನ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ, ಏಷ್ಯಾಕಪ್ ಸೂಪರ್ 4 ಹಂತದ ರೋಚಕ ಪಂದ್ಯಕ್ಕೆ ದುಬೈ ಕ್ರೀಡಾಂಗಣ ಸಜ್ಜಾಗಿದೆ. ಟಾಸ್ ವೇಳೆ ಮತ್ತೆ ಪಾಕಿಸ್ತಾನ ಮುಖಭಂಗ ಅನುಭವಿಸಿದೆ.

 

Read Full Story

07:16 PM (IST) Sep 21

ಜಾತಿ ಜಾತಿಗೆ ಮೀಸಲಾತಿ ಕೊಡವುದಲ್ಲ, ಅರ್ಥಿಕವಾಗಿ ಅವಶ್ಯಕತೆ ಇರುವರಿಗೆ ನೀಡಿ, ಸುಪ್ರಿಯಾ ಸುಳೆ

ಜಾತಿ ಜಾತಿಗೆ ಮೀಸಲಾತಿ ಕೊಡವುದಲ್ಲ, ಅರ್ಥಿಕವಾಗಿ ಅವಶ್ಯಕತೆ ಇರುವರಿಗೆ ನೀಡಿ, ಸುಪ್ರಿಯಾ ಸುಳೆ, ಅಜ್ಜ ಅಜ್ಜಿಗೆ ಸಿಕ್ಕಿದೆ, ಪೋಷಕರಿಗೆ ಸಿಕ್ಕಿದೆ, ಮಕ್ಕಳಿಗೂ ಸಿಗಲಿ ಅನ್ನೋದಲ್ಲ, ಯಾರಿಗೆ ಅಗತ್ಯ ಇದೆ, ಅವರಿಗೆ ನೀಡುವಂತಾಗಬೇಕು ಎಂದು ಸಂಸದೆ ಸುಪ್ರೀಯಾ ಸುಳೆ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

Read Full Story

07:13 PM (IST) Sep 21

ನಿಮ್ಮ ಹೆಂಡ್ತಿಯನ್ನು ಇವತ್ತಿನ್ನೂ ಹೊಗಳಲಿಲ್ವಾ? ಛೇ ದೊಡ್ಡ ತಪ್ಪು ಮಾಡಿಬಿಟ್ರಿ ಕಣ್ರೀ... ಕೆಲವೇ ಗಂಟೆ ಬಾಕಿ ಇದೆ ನೋಡಿ...

ಹಲವು ಪತಿಯಂದಿರು ತಮ್ಮ ಪತ್ನಿಯರನ್ನು ಹೊಗಳುವುದರಲ್ಲಿ ಕಂಜೂಸುತನ ತೋರುತ್ತಾರೆ. ಆದರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು 'ಪತ್ನಿಯನ್ನು ಹೊಗಳುವ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನದ ಮಹತ್ವ ಮತ್ತು ನಿಮ್ಮ ಪತ್ನಿಯನ್ನು ಏಕೆ ಪ್ರಶಂಸಿಸಬೇಕು ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

06:16 PM (IST) Sep 21

ಪ್ರೀತಿಸಿ ಮದುವೆಯಾದ ಜೋಡಿ ಸಂಸಾರಕ್ಕೆ ಹುಳಿ ಹಿಂಡಿದ ನಾಯಿ- ಬೆಕ್ಕು, 8 ತಿಂಗಳಿಗೆ ಡಿವೋರ್ಸ್

ಪ್ರೀತಿಸಿ ಮದುವೆಯಾದ ಜೋಡಿ ಸಂಸಾರಕ್ಕೆ ಹುಳಿ ಹಿಂಡಿದ ನಾಯಿ- ಬೆಕ್ಕು, 8 ತಿಂಗಳಿಗೆ ಡಿವೋರ್ಸ್, ಘಟನೆ ನಡೆದಿದೆ. ಮದುವೆಯಾಗಿ ಅನ್ಯೋನ್ಯವಾಗಿ ಸಂಸಾರ ನಡೆಸಲು ಮುಂದಾದ ಈ ಜೋಡಿಗೆ ತಮ್ಮ ಮುದ್ದಿನ ಸಾಕು ಪ್ರಾಣಿಗಳೇ ಮುಳ್ಳಾಗಿದ್ದು ಹೇಗೆ?

Read Full Story

06:16 PM (IST) Sep 21

ಕೇವಲ 2 ವರ್ಷದಲ್ಲಿ 900% ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್‌

ಮಲ್ಟಿಬ್ಯಾಗರ್ ಸ್ಟಾಕ್ ಕೇವಲ 2 ವರ್ಷಗಳಲ್ಲಿ ಹೂಡಿಕೆದಾರರಿಗೆ 900% ರಷ್ಟು ಲಾಭ ನೀಡಿದೆ. ಸೆಂಟ್ರಲ್ ಗುಜರಾತ್ ವಿಜ್ ಕಂಪನಿಯಿಂದ 265 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪ್ರಾಜೆಕ್ಟ್ ಪಡೆದ ನಂತರ ಕಂಪನಿಯ ಷೇರುಗಳ ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿದೆ.

Read Full Story

06:08 PM (IST) Sep 21

ಈ ಮಾಜಿ ಕ್ರಿಕೆಟಿಗ BCCI ನೂತನ ಅಧ್ಯಕ್ಷ! ಅರ್ಜಿ ಸಲ್ಲಿಸಿದ್ದು ಇವರೊಬ್ಬರೇ, ಅಧಿಕೃತ ಘೋಷಣೆ ಬಾಕಿ

ಬಿಸಿಸಿಐನ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಆಟಗಾರ ಮಿಥುನ್ ಮನ್ಹಾಸ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ದೇಶೀಯ ಕ್ರಿಕೆಟ್‌ನ ದಿಗ್ಗಜರಾದ ಮನ್ಹಾಸ್, ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯಾಗಲಿದ್ದು, ಈ ಹಿಂದೆ ಐಪಿಎಲ್ ತಂಡಗಳ ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ.
Read Full Story

05:48 PM (IST) Sep 21

ಅಗತ್ಯವಸ್ತು,ಮನೆ, ಟಿವಿ, ವಾಹನ ಖರೀದಿ ಇನ್ನು ಸುಲಭ, ಜನತೆಗೆ ಬಂಪರ್ ಗಿಫ್ಟ್ ಕೊಟ್ಟ ಮೋದಿ

ಅಗತ್ಯವಸ್ತು,ಮನೆ, ಟಿವಿ, ವಾಹನ ಖರೀದಿ ಇನ್ನು ಸುಲಭ, ಜನತೆಗೆ ಬಂಪರ್ ಗಿಫ್ಟ್ ಕೊಟ್ಟ ಮೋದಿ, ನಾಳೆಯಿಂದ ಕಾರು, ಬೈಕ್ ಖರೀದಿ, ಮನೆ ಕಟ್ಟುುವುದು ಕಷ್ಟವಲ್ಲ. ಈ ಕುರಿತ ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಮೋದಿ ಕೊಟ್ಟ ಗಿಫ್ಟ್ ಏನು?

Read Full Story

05:41 PM (IST) Sep 21

'ಹೇಗಾದರೂ ಮಾಡಿದ ಪಾಕಿಸ್ತಾನ ಎದುರು ಈತನಿಗೆ ಚಾನ್ಸ್ ಕೊಡಿ' - ಇರ್ಫಾನ್ ಪಠಾಣ್ ಹೀಗೆ ಹೇಳಿದ್ದು ಯಾರಿಗೆ?

ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಈ ಆಟಗಾರನಿಗೆ ಛಾನ್ಸ್ ಕೊಡಿ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿಕೊಂಡಿದ್ದಾರೆ.

 

Read Full Story

05:14 PM (IST) Sep 21

ಮೋದಿ ಭಾಷಣ Live, ನವರಾತ್ರಿ ಹಬ್ಬಕ್ಕೆ ದೇಶದ ಜನತೆಗೆ ಸಿಹಿ ಹಂಚಿದ ಪ್ರಧಾನಿ

ಮೋದಿ ಭಾಷಣ Live, ನವರಾತ್ರಿ ಹಬ್ಬಕ್ಕೆ ದೇಶದ ಜನತೆಗೆ ಸಿಹಿ ಹಂಚಿದ ಪ್ರಧಾನಿ, ದೇಶದ ಕ್ರಾಂತಿಕಾರ ಜಿಎಸ್‌ಟಿ ಪರಿಷ್ಕರಣೆ ಕುರಿತು ಮೋದಿ ಮಾತನಾಡಿದ್ದು, ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಪ್ರಧಾನಿ ಮೋದಿ ಬಾಷಣದಲ್ಲಿ ಹೇಳಿದ್ದೇನು?

 

Read Full Story

05:13 PM (IST) Sep 21

Trump ಕೊನೆಯ ಅಧ್ಯಕ್ಷ- USA ಛಿದ್ರ... ಮಮತಾ ದೀದಿ- ನಿತೀಶ್​ ಮುಗಿದ ಅಧ್ಯಾಯ.. ಭಾರತ 2 ವರ್ಷದಲ್ಲಿ...

ಡೊನಾಲ್ಡ್ ಟ್ರಂಪ್ ಕೊನೆಯ ಅಧ್ಯಕ್ಷರಾಗಲಿದ್ದಾರೆ. ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ವೀಟೋ ಪವರ್ ಸಿಗಲಿದ್ದು, ಮಮತಾ ಬ್ಯಾನರ್ಜಿ ಮತ್ತು ನಿತೀಶ್ ಕುಮಾರ್ ಅವರ ರಾಜಕೀಯ ಯುಗಾಂತ್ಯವಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಏನಿದು ವಿಷಯ?

 

Read Full Story

04:52 PM (IST) Sep 21

ಎಣ್ಣೆಯಾಟಕ್ಕೆ ಬಿಲ್‌ ಬೋರ್ಡ್ ಏರಿದ ಕುಡುಕ - ಸಾಯಲೆತ್ನಿಸಿದವನ ರಕ್ಷಿಸಿ ಸರಿಯಾಗಿ ತದುಕಿದ ಪೊಲೀಸರು

Drunk Mans Stunt: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಎತ್ತರದ ಬಿಲ್‌ಬೋರ್ಡ್ ಮೇಲೇರಿ ಮಲಗಿದ್ದಾನೆ. ಬಳಿಕ ಪೊಲೀಸರು ಕ್ರೇನ್ ತರಿಸಿ ಆತನನ್ನು ರಕ್ಷಿಸಿದ್ದಾರೆ.  ಚೀನಾದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಡುಕರು ಕಾರನ್ನು ತಳ್ಳಿಕೊಂಡು ಹೋದ ಘಟನೆ ನಡೆದಿದೆ.

Read Full Story

04:17 PM (IST) Sep 21

Asia Cup 2025 Super-4 - ಪಾಕ್ ಎದುರಿನ ಹೈವೋಲ್ಟೇಜ್‌ ಮ್ಯಾಚ್‌ಗೆ ಭಾರತ ತಂಡದಲ್ಲಿ ಎರಡು ಚೇಂಜ್! ಇಲ್ಲಿದೆ ಸಂಭಾವ್ಯ ತಂಡ

ದುಬೈ: ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಬಹುತೇಖ ಕನ್ಫರ್ಮ್ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

04:10 PM (IST) Sep 21

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ - ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ?

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (DGML) ನೇತೃತ್ವದ ಈ ಯೋಜನೆಯು, ದೇಶದ ಚಿನ್ನದ ಆಮದನ್ನು ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

Read Full Story

03:24 PM (IST) Sep 21

ಸಂಜೆ 5 ಗಂಟೆಗೆ ಜನರನ್ನುದ್ದೇಶಿಸಿ ಮೋದಿ ಭಾಷಣ, ಮತ್ತೊಂದು ಮಹತ್ವದ ಘೋಷಣೆ ಇದೆಯಾ?

ಸಂಜೆ 5 ಗಂಟೆಗೆ ಜನರನ್ನುದ್ದೇಶಿಸಿ ಮೋದಿ ಭಾಷಣ, ಮತ್ತೊಂದು ಮಹತ್ವದ ಘೋಷಣೆ ಇದೆಯಾ? ಆತಂಕ ಕುತೂಹಲ ಮನೆ ಮಾಡಿದೆ. ನೋಟ್ ಬ್ಯಾನ್ ಸೇರಿದಂತೆ ಹಲವು ಘೋಷಣೆಗಳು ಇದೇ ರೀತಿಯ ಜನರನ್ನುದ್ದೇಶಿ ನಡೆಸಿದ ಭಾಷಣದಲ್ಲೇ ಘೋಷಣೆಯಾಗಿತ್ತು. ಆದರೆ ಈ ಬಾರಿಯ ಮೋದಿ ಭಾಷಣದ ಪ್ರಮುಖ ಅಂಶವೇನು?

Read Full Story

03:16 PM (IST) Sep 21

ಪಾಂಡಗಳ ಮುದ್ದು ಮಾಡೋ ಕೆಲಸ 30 ಲಕ್ಷ ಸಂಬಳ - ಅರ್ಹತೆ ಏನು?

ಚೀನಾದ ಸಿಚುವಾನ್‌ನಲ್ಲಿರುವ ಪಾಂಡಾ ಸಂರಕ್ಷಣಾ ಕೇಂದ್ರವು ಪಾಂಡಾಗಳನ್ನು ಮುದ್ದಾಡಿ, ಆರೈಕೆ ಮಾಡುವ ಕೆಲಸಕ್ಕೆ ವಾರ್ಷಿಕ 30 ಲಕ್ಷ ರೂ. ಸಂಬಳವನ್ನು ನೀಡುತ್ತಿದೆ. ಈ ಉದ್ಯೋಗದ ಜೊತೆ ವಸತಿ ಮತ್ತು ಕಾರಿನಂತಹ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ 'ಕನಸಿನ ಉದ್ಯೋಗ' ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

03:10 PM (IST) Sep 21

25 ಥಿಯೇಟರ್‌ನಲ್ಲಿ ಬಿಡುಗಡೆ; ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಲಿಲ್ಲ!

ಹಾರರ್ ಸಿನಿಮಾ ಇಂದಿಗೂ ವಿಶ್ವದ ಅತ್ಯಂತ ಭಯಾನಕ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ. ಶಾಪಗ್ರಸ್ಥ ಎಂದು ಕರೆಯಲ್ಪಡುವ ಈ ಚಿತ್ರವು ಹಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿತ್ತು ಮತ್ತು ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಸುಮಾರು 3800 ಕೋಟಿ ರೂ. ಗಳಿಸಿತ್ತು. 

Read Full Story

02:54 PM (IST) Sep 21

ಈ ಪ್ಲಾಟ್‌ಫಾರಂನಲ್ಲಿ ಫ್ರೀ ಆಗಿ ಭಾರತ-ಪಾಕಿಸ್ತಾನ ಮ್ಯಾಚ್ ನೋಡಿ! ಒಂದು ಕ್ಲಿಕ್‌ನಲ್ಲಿ ಕಂಪ್ಲೀಟ್ ಡೀಟೈಲ್ಸ್‌

ಬೆಂಗಳೂರು: ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಸೂಪರ್-4 ಪಂದ್ಯಗಳ ಆರಂಭವಾಗಿವೆ. ಇನ್ನು ಇವತ್ತು ಭಾರತ-ಪಾಕಿಸ್ತಾನ ಮ್ಯಾಚ್ ನಡೆಯಲಿದೆ. ಈ ಪಂದ್ಯವನ್ನು ನೀವು ಉಚಿತವಾಗಿ ವೀಕ್ಷಿಸಬಹುದು. ಅದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Read Full Story

01:00 PM (IST) Sep 21

ಗಂಡಸ್ರು ಡಿಸ್ಟರ್ಬ್​ ಆಗ್ತಾರೆ, ಹೆಂಗಸ್ರು ಹೊಟ್ಟೆ ಉರ್ಕೊಳ್ತಾರೆ ಅಂತ ಇವಳಿಗೆ ಕೆಲ್ಸನೇ ಸಿಗ್ತಿಲ್ವಂತೆ! ಏನ್​ ಹೇಳಿದ್ದಾಳೆ ಕೇಳಿ

ದಾದಿಯಾಗುವ ಕನಸು ಕಂಡಿದ್ದ ಅಲೆ ಗೌಚಾ ಎಂಬ ಯುವತಿಗೆ ತನ್ನ ಅತಿಯಾದ ಸೌಂದರ್ಯವೇ ಮುಳುವಾಗಿದೆ. 50ಕ್ಕೂ ಹೆಚ್ಚು ಸಂದರ್ಶನಗಳಲ್ಲಿ ತಿರಸ್ಕೃತಗೊಂಡ ನಂತರ, ಆಕೆ ಸೋಷಿಯಲ್ ಮೀಡಿಯಾದಲ್ಲಿ ಯಶಸ್ಸು ಕಂಡುಕೊಂಡಿದ್ದು, ತನ್ನ ಸೌಂದರ್ಯದಿಂದಾಗಿ ಮಹಿಳೆಯರು ತನಗೆ ಕೆಲಸ ನೀಡಲು ಹಿಂಜರಿದರು ಎಂದು ಹೇಳಿಕೊಂಡಿದ್ದಾಳೆ.
Read Full Story

12:55 PM (IST) Sep 21

Asia Cup 2025 - ಭಾರತ-ಪಾಕ್ ಸೂಪರ್ 4 ಪಂದ್ಯ ಎಷ್ಟು ಗಂಟೆಯಿಂದ ಆರಂಭ? ಲೈವ್ ಎಲ್ಲಿ ನೋಡಬಹುದು?

2025ರ ಏಷ್ಯಾಕಪ್ ಸೂಪರ್-4 ಹಂತದಲ್ಲಿ ಸೂರ್ಯಕುಮาร์ ಯಾದವ್ ನೇತೃತ್ವದ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲಿದೆ. ಗ್ರൂಪ್ ಹಂತದಲ್ಲಿ ಈಗಾಗಲೇ ಪಾಕಿಸ್ತಾನವನ್ನು ಸೋಲಿಸಿರುವ ಟೀಂ ಇಂಡಿಯಾ, ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ.
Read Full Story

12:55 PM (IST) Sep 21

ರೈತರಿಗೂ ಬಂಪರ್ - ಜಿಎಸ್‌ಟಿ ಇಳಿಕೆಯ ಬಳಿಕ ಟ್ರ್ಯಾಕ್ಟರ್, ಕೃಷಿಯಂತ್ರಗಳ ದರದಲ್ಲಿ ಭಾರಿ ಇಳಿಕೆ..!

ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ದರ ನಾಳೆಯಿಂದ ಜಾರಿಯಾಗಲಿದ್ದು, ರೈತರು ಬಳಸುವ ಟ್ರ್ಯಾಕ್ಟರ್, ಸ್ಪ್ರಿಂಕ್ಲರ್‌ಗಳು, ಕೊಯ್ಲು ಯಂತ್ರಗಳ ಮೇಲಿನ ಜಿಎಸ್‌ಟಿ ದರ ಗಣನೀಯವಾಗಿ ಇಳಿಕೆಯಾಗಿದೆ. ಇದರೊಂದಿಗೆ, ವೈದ್ಯಕೀಯ ಉಪಕರಣ, ಕೆಲವು ಅಗತ್ಯ ಔಷಧಿಗಳ ಮೇಲಿನ ತೆರಿಗೆ ಸಹ ಕಡಿಮೆ ಮಾಡಲಾಗಿದೆ.

Read Full Story

11:58 AM (IST) Sep 21

ನಾಳೆಯಿಂದ ಜಿಎಸ್‌ಟಿ 2.0 ಅನ್ವಯ - ಕಾರಿನ ಬೆಲೆ ₹1 ಲಕ್ಷವರೆಗೆ ದರ ಇಳಿಕೆ, ದಸರಾ ಹಬ್ಬಕ್ಕೆ ಸಿಗಲಿದೆ ಸೂಪರ್ ಆಫರ್!

ಕೇಂದ್ರ ಸರ್ಕಾರದ ಜಿಎಸ್‌ಟಿ ಇಳಿಕೆ ನಿರ್ಧಾರದಿಂದಾಗಿ 1200 cc ಗಿಂತ ಕಡಿಮೆ ಸಾಮರ್ಥ್ಯದ ಹಲವು ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

Read Full Story

11:13 AM (IST) Sep 21

ಮರ್ಸಿಡಿಸ್ ಬೇಂಜ್ ಕಾರ್ ಇದೆ ಕಾಮನ್‌ಸೆನ್ಸ್ ಇಲ್ಲ - ರಸ್ತೆಗೆ ಕಸ ಎಸೆದ ಮಹಿಳೆ ಪ್ರಶ್ನಿಸಿದ್ದಕ್ಕೆ ಉದ್ಧಟತನದ ವರ್ತನೆ

Lack of Civic Sense: ಭಾರತದಲ್ಲಿ ಅನಕ್ಷರಸ್ಥರಿಗಿಂತ ಕೆಲ ಸುಶಿಕ್ಷಿತರೇ ಅನಾಗರಿಕರಂತೆ ವರ್ತಿಸುತ್ತಾರೆ. ಮರ್ಸಿಡಿಸ್ ಕಾರ್‌ನಲ್ಲಿ ಸಾಗುತ್ತಿದ್ದ ಯುವತಿ ತನ್ನ ಕಾರಿನಲ್ಲಿದ್ದ ಕಸವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ. ಇದನ್ನು ಪ್ರಶ್ನಿಸಿದ್ದಕ್ಕೆ ಉದ್ಧಟತನದ ಉತ್ತರ ನೀಡಿದ್ದಾಳೆ. 

Read Full Story

11:06 AM (IST) Sep 21

Asia Cup 2025 Super-4 - ಭಾರತ ಸೋಲಿಸಲು ಮಾಸ್ಟರ್ ಪ್ಲಾನ್ ಮಾಡಿದ ಪಾಕ್! ಇದು ವರ್ಕೌಟ್ ಆಗುತ್ತಾ?

ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಶತಾಯಗತಾಯ ಭಾರತ ಎದುರು ಗೆಲ್ಲಬೇಕು ಎಂದು ಶಪಥ ಮಾಡಿರುವ ಪಾಕಿಸ್ತಾನ ಇದೀಗ, ಸೂಪರ್ 4 ಪಂದ್ಯಕ್ಕೂ ಮುನ್ನ ಹೊಸ ಮಾಸ್ಟರ್ ಪ್ಲಾನ್ ಹಾಗೂ ಹೊಸ ಮನೋಭಾವದೊಂದಿಗೆ ಕಣಕ್ಕಿಳಿಯಲು ತೀರ್ಮಾನಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

09:58 AM (IST) Sep 21

ದುಬೈನಲ್ಲಿಂದು ಮತ್ತೆ ಭಾರತ vs ಪಾಕ್ ಕದನ! ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಸೂರ್ಯ ಪಡೆ

ಏಷ್ಯಾಕಪ್ ಸೂಪರ್-4 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಗುಂಪು ಹಂತದಲ್ಲಿ ಸುಲಭ ಜಯ ಸಾಧಿಸಿದ್ದ ಭಾರತ ಈ ಪಂದ್ಯದಲ್ಲೂ ಫೇವರಿಟ್ ಆಗಿದ್ದು, ಪಾಕಿಸ್ತಾನ ತಂಡ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಕಳೆದ ಪಂದ್ಯದ ಹೈಡ್ರಾಮ ಈ ಪಂದ್ಯದಲ್ಲೂ ಮುಂದುವರೆಯುವ ಸಾಧ್ಯತೆಯಿದೆ.
Read Full Story

09:07 AM (IST) Sep 21

ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಮಂಧನಾ! ಕೊಹ್ಲಿ ದಾಖಲೆ ನುಚ್ಚುನೂರು

ಸ್ಮೃತಿ ಮಂಧನಾ ಆಸ್ಟ್ರೇಲಿಯಾ ವಿರುದ್ಧ ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿ, ಭಾರತೀಯ ಕ್ರಿಕೆಟ್‌ನಲ್ಲಿ (ಪುರುಷ ಮತ್ತು ಮಹಿಳಾ) ವಿರಾಟ್ ಕೊಹ್ಲಿಯವರ ವೇಗದ ಶತಕದ ದಾಖಲೆಯನ್ನು ಮುರಿದರು. ಮಂಧನಾ ಅವರ ಈ ಹೋರಾಟದ ಹೊರತಾಗಿಯೂ, ಬೃಹತ್ ಮೊತ್ತದ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತು.

Read Full Story

08:13 AM (IST) Sep 21

Top News Today - 33 ಕ್ರಿಶ್ಚಿಯನ್‌ ಜಾತಿಗೆ ಕೊಕ್‌, ಉದ್ದು, ಶೇಂಗಾಗೆ ಬೆಂಬಲ ಬೆಲೆ, ಬೆಳಗಾವಿಯಲ್ಲಿ ತಿರುಪತಿ ದೇಗುಲ

todays news roundup: ಅಮೆರಿಕಾ ಎಚ್‌1 ಬಿ ವೀಸಾ ಗಡುವು ವಿಸ್ತರಣೆ, ಕೇಂದ್ರ ಸರ್ಕಾರದಿಂದ ಉದ್ದು ಶೇಂಗಾಕ್ಕೆ ಬೆಂಬಲ ಬೆಲೆ, GST ಕಡಿತದ ಬಳಿಕೆ ಕೆಎಂಎಫ್ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ, ಬೆಳಗಾವಿಯಲ್ಲಿ ತಿರುಪತಿ ದೇಗುಲ ನಿರ್ಮಾಣ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ಇಂದಿನ ಪ್ರಮುಖ ಸುದ್ದಿಗಳು

Read Full Story

More Trending News