Published : Nov 19, 2025, 07:34 AM ISTUpdated : Nov 19, 2025, 10:20 PM IST

India Latest News Live: ಆಪರೇಷನ್‌ ಸಿಂದೂರ್‌ ವೇಳೆ ರಫೇಲ್‌ ಮಾರಾಟ ಒಪ್ಪಂದ ಹಾಳು ಮಾಡಲು ಚೀನಾದಿಂದ ಕ್ಯಾಂಪೇನ್‌ - ಅಮೆರಿಕ ವರದಿ

ಸಾರಾಂಶ

ತಿರುಪತಿ: ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ದ್ವಾರ ದರ್ಶನದಲ್ಲಿ ಕಾಲ್ತುಳಿತ ಮತ್ತು ಅಹಿತಕರ ಘಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಟಿಟಿಡಿ ಕೌಂಟರ್ ಟೋಕನ್ ವ್ಯವಸ್ಥೆಯನ್ನು ಡಿ.30ರಿಂದ ಜ.8ರವರೆಗೆ ರದ್ದುಗೊಳಿಸಿದೆ. ಕೇವಲ ಟಿಟಿಡಿ ವೆಬ್‌ಸೈಟ್‌, ಆ್ಯಪ್ ಮತ್ತು ವಾಟ್ಸಾ ಪ್‌ನಲ್ಲಿ ಟೋಕನ್ ಪಡೆದುಕೊಳ್ಳಬೇಕಿದೆ. ಈ ವರ್ಷ ಡಿ.31ಕ್ಕೆ ವೈಕುಂಠ ಏಕಾದಶಿ ಇದೆ. 10 ದಿನ ಕಾಲ 186 ತಾಸು ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ನೀಡ ಲಾಗುತ್ತದೆ. ಇದರಲ್ಲಿ 164 ಗಂಟೆ ಸಾಮಾನ್ಯ ದರ್ಶ ನದಲ್ಲಿ ಬರುವವರಿಗೆಂದು ಮೀಸಲಿರಿಸಲಾಗಿದೆ. ಕಳೆದ ವರ್ಷ ಇದೇ ವೇಳೆ ಕಾಲ್ತುಳಿತ ಉಂಟಾಗಿ 6 ಭಕ್ತರು ಅಸುನೀಗಿದ್ದರು.

rafale deal And China

10:20 PM (IST) Nov 19

ಆಪರೇಷನ್‌ ಸಿಂದೂರ್‌ ವೇಳೆ ರಫೇಲ್‌ ಮಾರಾಟ ಒಪ್ಪಂದ ಹಾಳು ಮಾಡಲು ಚೀನಾದಿಂದ ಕ್ಯಾಂಪೇನ್‌ - ಅಮೆರಿಕ ವರದಿ

ಭಾರತದ ರಫೇಲ್ ಯುದ್ಧ ವಿಮಾನ ಒಪ್ಪಂದವನ್ನು ಹಾಳು ಮಾಡಲು ಚೀನಾ ನಕಲಿ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸಿತ್ತು ಎಂದು ಅಮೆರಿಕದ ವರದಿಯೊಂದು ಬಹಿರಂಗಪಡಿಸಿದೆ. ರಫೇಲ್ ಹೊಡೆದುರುಳಿಸಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ತನ್ನದೇ ಯುದ್ಧ ವಿಮಾನಗಳನ್ನು ಪ್ರಚಾರ ಮಾಡಲು ಚೀನಾ ಯತ್ನಿಸಿತ್ತು ಹೇಳಿದೆ.

Read Full Story

09:07 PM (IST) Nov 19

ನಕಲಿ ಪ್ರೊಫೈಲ್‌, ಟ್ರೋಲರ್‌ಗಳ ಪತ್ತೆ ಹಚ್ಚಲು ಎಕ್ಸ್‌ ಪ್ರೊಫೈಲ್‌ನಲ್ಲಿ ಇನ್ಮುಂದೆ ದೇಶದ ಲೇಬಲ್‌ ಕಡ್ಡಾಯ!

ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್‌, ನಕಲಿ ಪ್ರೊಫೈಲ್‌ಗಳು ಮತ್ತು ಬಾಟ್‌ಗಳನ್ನು ನಿಯಂತ್ರಿಸಲು ಎಲ್ಲಾ ಬಳಕೆದಾರರ ಖಾತೆಗಳಲ್ಲಿ ದೇಶದ ಲೇಬಲ್‌ ಅನ್ನು ಕಡ್ಡಾಯಗೊಳಿಸಿದೆ. ಈ ಹೊಸ ಬದಲಾವಣೆಯು ಐಪಿ ವಿಳಾಸ ಆಧಾರದ ಮೇಲೆ ದೇಶವನ್ನು ಗುರುತಿಸಲಿದೆ.

Read Full Story

07:46 PM (IST) Nov 19

20ರಲ್ಲಿ ಮದ್ವೆಯಾಗಿ ಮಕ್ಕಳ ಮಾಡಿಕೊಳ್ಳಿ - ಝೋಹೋ ಶ್ರೀಧರ್ ಸಲಹೆಗೆ ಭಾರಿ ಟೀಕೆ

Sridhar Vembu marriage advice: ಝೋಹೋ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಅವರು ಯುವಕರು 20ರ ಹರೆಯದಲ್ಲಿಯೇ ಮದುವೆಯಾಗಿ ಮಕ್ಕಳನ್ನು ಪಡೆಯಬೇಕೆಂದು ಸಲಹೆ ನೀಡಿದ್ದಾರೆ. ಉಪಾಸನಾ ಕೊನ್ನಿಡೆಲ್ಲಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ನೀಡಿದ ಈ ಹೇಳಿಕೆಯು, ಈಗ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

06:24 PM (IST) Nov 19

ಹೆದ್ದಾರಿಗಳಲ್ಲಿ ಟೋಲ್ ತಪ್ಪಿಸ್ಬೇಕಾ? ಈ ಕಾರು ಖರೀದಿ ಮಾಡಿ..!

Lamborghini Hurricane India: ಟೋಲ್ ಕಟ್ಟದೇ ಯಾವುದೇ ವಾಹನಗಳು ಟೋಲ್‌ ಗೇಟ್‌ಗಳಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ ಏಕೆಂದರೆ ಟೋಲ್‌ ಮುಂದಿನ ಕಬ್ಬಿಣದ ರಾಡ್‌ಗಳನ್ನು ಟೋಲ್ ಕಟ್ಟಿದ ನಂತರವೇ ತೆರೆಯುತ್ತಾರೆ. ಆದರೂ ಇಲ್ಲೊಂದು ಕಾರು ಟೋಲ್ ಕಟ್ಟದೇ ಮುಂದೆ ಹೋಗಿದೆ ಅದು ಹೇಗೆ ಇಲ್ಲಿದೆ ನೋಡಿ ಸ್ಟೋರಿ…

Read Full Story

05:55 PM (IST) Nov 19

ಗೌತಮ್ ಗಂಭೀರ್ ತಲೆದಂಡ ಮಾಡ್ಬೇಕಾ? ಮೊದಲ ಸಲ ತುಟಿಬಿಚ್ಚಿದ ಸೌರವ್ ಗಂಗೂಲಿ!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸೋಲಿನ ಬಳಿಕ ಕೋಚ್ ಗೌತಮ್ ಗಂಭೀರ್ ಅವರನ್ನು ಕೆಳಗಿಳಿಸಬೇಕೆಂಬ ಕೂಗು ಎದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ, ಗಂಭೀರ್ ಮತ್ತು ನಾಯಕ ಗಿಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

Read Full Story

04:48 PM (IST) Nov 19

ನಕ್ಸಲ್ ಎನ್‌ಕೌಂಟರ್ - 2 ಬಾರಿಯ ಶೌರ್ಯ ಪ್ರಶಸ್ತಿ ಪುರಸ್ಕೃತ ಇನ್ಸ್‌ಪೆಕ್ಟರ್ ಅಶೀಶ್ ಶರ್ಮಾ ಹುತಾತ್ಮ

ಛತ್ತೀಸ್‌ಗಢದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಹಾಕ್ ಫೋರ್ಸ್‌ನ ಇನ್ಸ್‌ಪೆಕ್ಟರ್  2 ಬಾರಿ ಶೌರ್ಯ ಪ್ರಶಸ್ತಿ ವಿಜೇತ ಅಧಿಕಾರಿ ಅಶೀಶ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ.

Read Full Story

04:47 PM (IST) Nov 19

ಕೊನೆಗೂ ಟೊಯೋಟಾದಲ್ಲಿ ಇನ್ನೋವಾ ಪ್ರಾಬಲ್ಯ ಮುರಿದ ಈ ಕಾರು, ಅಕ್ಟೋಬರ್‌ನಲ್ಲಿ ಭರ್ಜರಿ ಸೇಲ್‌!

ಅಕ್ಟೋಬರ್ 2025 ರಲ್ಲಿ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ 11,555 ಯುನಿಟ್‌ಗಳ ಮಾರಾಟದೊಂದಿಗೆ ಇನ್ನೋವಾವನ್ನು ಹಿಂದಿಕ್ಕಿ ಕಂಪನಿಯ ನಂಬರ್ ಒನ್ ಕಾರಾಗಿ ಹೊರಹೊಮ್ಮಿದೆ. ಆದಾಗ್ಯೂ, ಒಟ್ಟಾರೆ ಆರ್ಥಿಕ ವರ್ಷದ ಮಾರಾಟದಲ್ಲಿ ಇನ್ನೋವಾ ಇನ್ನೂ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.
Read Full Story

04:12 PM (IST) Nov 19

ಬಂಗಾಳದಲ್ಲಿ SIR ಒತ್ತಡದಿಂದ ಇಲ್ಲಿಯವರೆಗೂ 28 ಸಾವು, ಮಮತಾ ಬ್ಯಾನರ್ಜಿ ಟ್ವೀಟ್‌!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ 'ಅಮಾನವೀಯ' ಒತ್ತಡದಿಂದಾಗಿ ಜಲಪೈಗುರಿಯಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 

Read Full Story

04:10 PM (IST) Nov 19

ಅದೊಂದೇ ಕಾರಣಕ್ಕೆ ಐಪಿಎಲ್‌ನಲ್ಲಿ ಡೆಲ್ಲಿ ತಂಡಕ್ಕೆ ನಾವು ಕೊಹ್ಲಿಯನ್ನು ಖರೀದಿಸಲಿಲ್ಲ! ಅಚ್ಚರಿ ಮಾಹಿತಿ ಬಿಚ್ಚಿಟ್ಟ ಸೆಹ್ವಾಗ್

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ಹರಾಜಿಗೂ ಮುನ್ನ ಡೆಲ್ಲಿ ಮೂಲದ ಕೊಹ್ಲಿ ಆರ್‌ಸಿಬಿ ಪಾಲಾಗಿದ್ದು ಹೇಗೆ ಎನ್ನುವುದು ಚರ್ಚೆಯಾಗುತ್ತಲೇ ಇರುತ್ತದೆ. ಇದಕ್ಕೆ ಸೆಹ್ವಾಗ್ ಉತ್ತರಿಸಿದ್ದಾರೆ.

Read Full Story

03:59 PM (IST) Nov 19

ನೀರು ಕುಡಿದಿದ್ದಕ್ಕೆ ಫೋಟೋಗ್ರಾಫರ್‌ಗೆ ಹೊಡೆದ ವರ - ಮದುವೆ ನಿಲ್ಲಿಸಿದ ವಧು

Bride's bold decision : ಮದುವೆ ಮಂಟಪದಲ್ಲಿಯೇ ಫೋಟೋಗ್ರಾಫರ್‌ಗೆ ವರ ಕಪಾಳಮೋಕ್ಷ ಮಾಡಿದ್ದಕ್ಕೆ ಸಿಟ್ಟಾದ ವಧು, ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.

Read Full Story

03:36 PM (IST) Nov 19

ಮದ್ಯವನ್ನು ಪೆಗ್‌ಗಳಲ್ಲೇ ಯಾಕೆ ಅಳೆಯುತ್ತಾರೆ? ಸೇಫ್ ಲಿಮಿಟ್ ಅಂದ್ರೆ ಏನು? 30 ml ಯಾಕೆ ಸ್ಟ್ಯಾಂಡರ್ಡ್?

ಮದ್ಯ ಅಥವಾ ವಿಸ್ಕಿಯನ್ನು ಪೆಗ್‌ಗಳಲ್ಲಿ ಅಳೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಮದ್ಯವನ್ನು ಅಳೆಯಲು 'ಪೆಗ್' ಎಂಬ ಪದವನ್ನೇ ಯಾಕೆ ಬಳಸುತ್ತಾರೆ? ಈ ಪದ ಎಲ್ಲಿಂದ ಬಂತು? ಸೇಫ್ ಲಿಮಿಟ್ ಅಂದ್ರೆ ಏನು? ಎಂಬಿತ್ಯಾದಿ ಆಸಕ್ತಿಕರ ವಿಷಯಗಳನ್ನು ಈಗ ತಿಳಿಯೋಣ.

 

Read Full Story

02:41 PM (IST) Nov 19

89ರ ಇಳಿವಯಸ್ಸಲ್ಲಿ ಜೊತೆಯಾಗಿ ಸಾವಿಗೆ ಶರಣಾದ ಖ್ಯಾತ ಸೆಲೆಬ್ರಿಟಿ ಅವಳಿಗಳು

Alice and Ellen Kessler story: ಯುರೋಪ್‌ನಲ್ಲಿ ನಟನೆ, ಗಾಯನ ಮತ್ತು ನೃತ್ಯದಿಂದ ಪ್ರಸಿದ್ಧರಾಗಿದ್ದ ಜರ್ಮನಿ ಮೂಲದ ಕೆಸ್ಲರ್ ಅವಳಿಗಳಾದ ಆಲಿಸ್ ಮತ್ತು ಎಲೆನ್, ತಮ್ಮ 89ನೇ ವಯಸ್ಸಿನಲ್ಲಿ ಜೊತೆಯಾಗಿ ಸಾವಿಗೆ ಶರಣಾಗಿದ್ದಾರೆ. 

Read Full Story

01:44 PM (IST) Nov 19

ಶುಭ್‌ಮನ್ ಗಿಲ್ ಎರಡನೇ ಟೆಸ್ಟ್ ಆಡ್ತಾರಾ? ಒಂದ್ವೇಳೆ ಅಲಭ್ಯರಾದ್ರೆ ಕನ್ನಡಿಗನಿಗೆ ಜಾಕ್‌ಪಾಟ್?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನವೆಂಬರ್ 22 ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಶುಭಮನ್ ಗಿಲ್ ಲಭ್ಯತೆ ಬಗ್ಗೆ ಅನುಮಾನ ಮೂಡಿದೆ. ಮೊದಲ ಟೆಸ್ಟ್‌ನಲ್ಲಿ ಕುತ್ತಿಗೆ ನೋವಿನಿಂದ ಹೊರಗುಳಿದಿದ್ದ ಗಿಲ್, ಗುವಾಹಟಿ ಟೆಸ್ಟ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ. 

Read Full Story

01:03 PM (IST) Nov 19

RCB for Sale ಬೆನ್ನಲ್ಲೇ ಕಾಂತಾರ, ಕೆಜಿಎಫ್ ಹಿಟ್ ಸಿನಿಮಾ ನೀಡಿದ ಹೊಂಬಾಳೆ ಫಿಲ್ಮ್ಸ್‌ ಅಖಾಡಕ್ಕೆ! ಫ್ಯಾನ್ಸ್‌ಗೆ ಗುಡ್ ನ್ಯೂಸ್?

ಆರ್‌ಸಿಬಿ ತಂಡ ಮಾರಾಟಕ್ಕಿದೆ ಎಂಬ ಸುದ್ದಿಯ ಬೆನ್ನಲ್ಲೇ, 'ಕೆಜಿಎಫ್' ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಅದನ್ನು ಖರೀದಿಸಲಿದೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿಯ ಸತ್ಯಾಸತ್ಯತೆ, ಹೊಂಬಾಳೆ-ಆರ್‌ಸಿಬಿ ನಡುವಿನ ಈಗಿನ ಸಂಬಂಧ ಮತ್ತು ಸುಮಾರು 17,000 ಕೋಟಿ ರೂ. ಬ್ರ್ಯಾಂಡ್ ಮೌಲ್ಯದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Read Full Story

11:49 AM (IST) Nov 19

ಜಿಪ್‌ ಲೈನ್ ಅಪಘಾತವಾಗಿದೆ ಎಂದು ಸುಳ್ಳು ಎಐ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನ ಬಂಧನ

Wayanad zipline fake AI video: ಕೇರಳದ ವಯನಾಡ್‌ನಲ್ಲಿ ತಾಯಿ ಮತ್ತು ಮಗು ಜಿಪ್‌ಲೈನ್ ಅಪಘಾತಕ್ಕೀಡಾಗಿದ್ದಾರೆ ಎಂದು ಬಿಂಬಿಸುವ ನಕಲಿ ಎಐ ವೀಡಿಯೋವನ್ನು ಸೃಷ್ಟಿಸಿ ಹಂಚಿಕೊಂಡ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಜನರಲ್ಲಿ ಭೀತಿ ಹುಟ್ಟಿಸಿತ್ತು.

Read Full Story

11:09 AM (IST) Nov 19

ಆಸ್ಟೇಲಿಯಾದಲ್ಲಿ ಭಾರತೀಯ ಮೂಲದ 8 ತಿಂಗಳ ಗರ್ಭಿಣಿಯ ಪ್ರಾಣ ತೆಗೆದ ವೇಗದ BMW ಕಾರ್

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 8 ತಿಂಗಳ ಗರ್ಭಿಣಿಯಾಗಿದ್ದ ಭಾರತೀಯ ಮೂಲದ ಸಮನ್ವಯ ಧಾರೇಶ್ವರ್ ಅವರು ವೇಗದ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಅವರ ಹುಟ್ಟಲಿರುವ ಮಗು ಕೂಡ ಮೃತಪಟ್ಟಿದ್ದು, 19 ವರ್ಷದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

09:50 AM (IST) Nov 19

ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಗಿಟ್ ಔಟ್; ಮತ್ತೆ ಕ್ಯಾಪ್ಟನ್ ಆಗ್ತಾರಾ ರೋಹಿತ್ ಶರ್ಮಾ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಮತ್ತು ಟಿ20 ತಂಡಗಳ ಆಯ್ಕೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ಶುಭ್‌ಮನ್ ಗಿಲ್ ಇಲ್ಲದಿದ್ದರೆ, ಕೆ ಎಲ್ ರಾಹುಲ್ ಅಥವಾ ಪಂತ್ ಪೈಕಿ ಯಾರು ನಾಯಕತ್ವ ವಹಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಇದೇ ವೇಳೆ ರೋಹಿತ್ ಶರ್ಮಾ ವಾಪಸಾತಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

Read Full Story

09:34 AM (IST) Nov 19

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌; ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ!

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ, ಭಾರತ ಎ ತಂಡ ಒಮಾನ್ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹರ್ಷ್ ದುಬೆ ಅವರ ಅಜೇಯ 53 ರನ್‌ಗಳ ನೆರವಿನಿಂದ 136 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿದ ಭಾರತ, ಈ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
Read Full Story

08:18 AM (IST) Nov 19

ರಣಜಿ ಟ್ರೋಫಿ - ಚಂಡೀಗಢಕ್ಕೆ ಸೋಲಿನ ಶಾಕ್ ಕೊಟ್ಟ ಕರ್ನಾಟಕ!

ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡವು ಚಂಡೀಗಢ ವಿರುದ್ಧ ಇನ್ನಿಂಗ್ಸ್ ಹಾಗೂ 185 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್ ಮತ್ತು ಶಿಖರ್ ಶೆಟ್ಟಿ ಅವರ ಮಾರಕ ದಾಳಿಯ ನೆರವಿನಿಂದ, ರಾಜ್ಯ ತಂಡವು 7 ಅಂಕಗಳನ್ನು ಗಳಿಸಿ 'ಬಿ' ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
Read Full Story

More Trending News