ನವದೆಹಲಿ: ಭಾರತದ ರಾಜಾಶ್ರಯದಲ್ಲಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಆಪ್ತರ ವಿರುದ್ಧ ಹೂಡಲಾಗಿದ್ದ ನರಮೇಧ ಸೇರಿ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ನ.17ರಂದು ಬಾಂಗ್ಲಾ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ತೀರ್ಪು ಪ್ರಕಟಿಸಲಿದೆ. ತೀರ್ಪು ಪ್ರಕಟಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ದೇಶಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

10:52 PM (IST) Nov 17
2,000 ವರ್ಷ ಬಳಿಕ ಊಸರವಳ್ಳಿಯ 360 ಡಿಗ್ರಿ ಕಣ್ಣಿನ ರಹಸ್ಯ ಬಯಲು ಮಾಡಿದ ಸಂಶೋಧಕರು , ಸಿಸಿಟಿವಿ ಕ್ಯಾಮೆರಾ ರೀತಿ ಊಸರವಳ್ಳಿ ಕಣ್ಣುಗಳು ತಿರುತ್ತದೆ. ಇಷ್ಟೇ ಅಲ್ಲ ಒಂದೇ ಸಮಯದಲ್ಲಿ ಬೇರೆ ಬೇರೆ ಕಡೆ ನೋಡಲು ಸಾಧ್ಯವಾಗುತ್ತದೆ. ಈ ರಹಸ್ಯ ಬಯಲಾಗಿದೆ.
08:45 PM (IST) Nov 17
ಒಂದೇ ವರ್ಷದಲ್ಲಿ 3ನೇ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟಿ ಮೀರಾ, ಮತ್ತೆ ಸಿಂಗಲ್ ಸಿಗ್ನಲ್ ಸೂಚನೆ ಕೊಟ್ಟಿದ್ದಾರೆ. ಸ್ವತಃ ಮೀರಾ ವಾಸುದೇವನ್ ತಮ್ಮ ಡಿವೋರ್ಸ್ ಘೋಷಿಸಿದ್ದಾರೆ. ತಾನೀಗ ಸಿಂಗಲ್ ಎಂದು ಸೂಚನೆ ಕೊಟ್ಟಿದ್ದಾರೆ.
07:43 PM (IST) Nov 17
ದೆಹಲಿ ಸ್ಫೋಟದ ಮತ್ತೊಬ್ಬ ಉಗ್ರ ಜಸೀರ್ ಬಿಲಾಲ್ ಅರೆಸ್ಟ್, ಸ್ಫೋಟ ಬಾಂಬ್ಗೆ ಸೀಮಿತವಾಗಿರ್ಲಿಲ್ಲ, ತನಿಖೆ ತೀವ್ರಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿ ಬಯಲಾಗುತ್ತಿದೆ. ಇದೀಗ ಮತ್ತೊಬ್ಬನ ಬಂಧನ ಬೆನ್ನಲ್ಲೇ ದೆಹಲಿ ಸ್ಫೋಟಕ ಕೇವಲ ಬಾಂಬ್ಗೆ ಮಾತ್ರ ಸೀಮಿತವಾಗಿರಲಿಲ್ಲ ಅನ್ನೋದು ಬಯಲಾಗಿದೆ.
07:13 PM (IST) Nov 17
ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿದೆ. ಈ ಘಟನೆಯು ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ನಾಯಕ ಹುಸೇನ್ ದಲ್ವಾಯಿ ಅವರು ಇದನ್ನು ಜಮ್ಮು ಮತ್ತು ಕಾಶ್ಮೀರದಲ್ಲಿನ 'ಅನ್ಯಾಯ'ದ ಪರಿಣಾಮ ಎಂದಿದ್ದಾರೆ.
07:05 PM (IST) Nov 17
ಹೀನಾಯ ಸೋಲು ಕಂಡರೂ 1 ಸ್ಥಾನದಿಂದ ತೇಜಸ್ವಿ ಯಾದವ್ಗೆ ವಿರೋಧ ಪಕ್ಷ ನಾಯಕ ಪಟ್ಟ, ಆರ್ಜೆಡಿ ಶಾಸಕರು ತೇಜಸ್ವಿ ಯಾದವ್ ವಿರೋಧ ಪಕ್ಷ ನಾಯಕ ಎಂದು ಆಯ್ಕೆ ಮಾಡಿದ್ದಾರೆ. 243ರಲ್ಲಿ 25 ಸ್ಥಾನ ಗೆದ್ದಿರುವ ಆರ್ಜೆಡಿಗೆ ವಿರೋಧ ಪಕ್ಷ ನಾಯಕನಾಗಲು ಸಾಧ್ಯವೇ?
06:30 PM (IST) Nov 17
Saudi Arabia Tragedy: ಸೌದಿ ಅರೇಬಿಯಾದಲ್ಲಿ ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಭಾರತೀಯ ಉಮ್ರಾ ಯಾತ್ರಿಕರ ಬಸ್, ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿದೆ. ಈ ಭೀಕರ ದುರಂತದಲ್ಲಿ ಹೈದರಾಬಾದ್ನ ಒಂದೇ ಕುಟುಂಬದ 18 ಮಂದಿ ಸೇರಿದಂತೆ ಒಟ್ಟು 42 ಜನ ಸಾವನ್ನಪ್ಪಿದ್ದಾರೆ.
06:26 PM (IST) Nov 17
ಬೆಂಗಳೂರು: ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಒಂದು ಪಕ್ಕಾ ಪ್ಲಾನ್ನೊಂದಿಗೆ ಮುನ್ನುಗ್ಗುತ್ತಿದೆ. ಮುಂಬರುವ ಮಿನಿ ಹರಾಜಿನಲ್ಲಿ ಪ್ರಮುಖ ನಾಲ್ಕು ಆಲ್ರೌಂಡರ್ ಮೇಲೆ ಧೋನಿ ಪಡೆ ಕಣ್ಣಿಟ್ಟಿದೆ. ಯಾರವರು? ನೋಡೋಣ ಬನ್ನಿ.
06:16 PM (IST) Nov 17
ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸ್ತನ ಕ್ಯಾನ್ಸರ್ಗೆ ಗಡ್ಡೆಗಳು ಮಾತ್ರ ಲಕ್ಷಣವಲ್ಲ. ವೈದ್ಯರು ಕಿತ್ತಳೆ ಹಣ್ಣಿಗೆ ಹೋಲಿಸಿ ವಿವರಿಸಿದಂತೆ, ಸ್ತನದ ಬಣ್ಣ ಬದಲಾವಣೆ, ತೊಟ್ಟಿನಿಂದ ಸ್ರಾವ, ಮತ್ತು ನಿರಿಗೆಗಳಂತಹ ಐದು ಪ್ರಮುಖ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
05:56 PM (IST) Nov 17
ತಾಂತ್ರಿಕ ದೋಷ, 39 ಸಾವಿರ ಗ್ರ್ಯಾಂಡ್ ವಿಟಾರಾ ಕಾರು ಹಿಂಪಡೆಯಲು ಮುಂದಾದ ಮಾರುತಿ ಸುಜುಕಿ, 2022ರಲ್ಲಿ ಕಾರು ಲಾಂಚ್ ಆದ ಬಳಿಕ ಗರಿಷ್ಠ ಸಂಖ್ಯೆ ಕಾರುಗಳನ್ನು ಹಿಂಪಡೆಯಲು ಮಾರುತಿ ಮುಂದಾಗಿದೆ. ಕಾರಿನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆ ಏನು?
05:36 PM (IST) Nov 17
Fans pull Akon's pants video: ಬೆಂಗಳೂರಿನಲ್ಲಿ ನಡೆದ ಸಂಗೀತ ರಸಮಂಜರಿಯಲ್ಲಿ, ಅಮೆರಿಕನ್ ಗಾಯಕ ಅಕಾನ್ಗೆ ಅಭಿಮಾನಿಗಳು ಅವರ ಪ್ಯಾಂಟ್ ಎಳೆದು ಮುಜುಗರ ಉಂಟುಮಾಡಿದ್ದಾರೆ. ಆದರೂ, ಅಕಾನ್ ತಾಳ್ಮೆ ಕಳೆದುಕೊಳ್ಳದೆ ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ.
05:17 PM (IST) Nov 17
ಮೊದಲ ಕೆಲಸಕ್ಕೆ ಸೇರಿದ ಮೂರೇ ಗಂಟೆಯಲ್ಲಿ ರಾಜೀನಾಮೆ, ಅಚ್ಚರಿಗೊಳಿಸಿದ ಯುವಕನ ನಿರ್ಧಾರ, ರೆಡ್ಡಿಟ್ ಪೋಸ್ಟ್ನಲ್ಲಿ ಕೆಲಸಕ್ಕ ರಿಸೈನ್ ಮಾಡಿದ ಕಾರಣವನ್ನು ಹೇಳಿದ್ದಾರೆ. ಹಲವರು ಯುವಕನ ನಿರ್ಧಾರ ಬೆಂಬಲಿಸಿದ್ದಾರೆ.
05:10 PM (IST) Nov 17
ಬಿಹಾರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೇರಿದೆ. ಈ ಫಲಿತಾಂಶದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟ ಕಿಶೋರ್, ಇದು ಪ್ರಜಾಪ್ರಭುತ್ವದ ಕೊಲೆ ಎಂದು ಕರೆದಿದ್ದು, ಚುನಾವಣಾ ಆಯುಕ್ತರನ್ನು 'ಭ್ರಷ್ಟಬೀಜಾಸುರ' ಎಂದು ಟೀಕಿಸಿದ್ದಾರೆ.
04:29 PM (IST) Nov 17
ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಪತಿಯೊಬ್ಬ ಜೂಜಾಟದಲ್ಲಿ ತನ್ನ ಪತ್ನಿಯನ್ನು ಪಣಕ್ಕಿಟ್ಟು ಸೋತಿದ್ದಾನೆ. ಬಳಿಕ, ಆತನ ತಂದೆ, ಮೈದುನ ಸೇರಿದಂತೆ ಸಂಬಂಧಿಕರು ಮಹಿಳೆಯ ಮೇಲೆ ಸಾಮೂಹಿಕ ಅ*ತ್ಯಾಚಾರ ಎಸಗಿದ್ದಾರೆ.
04:21 PM (IST) Nov 17
ಅತ್ಯಾಕರ್ಷಕ ಟಾಟಾ ಸಿಯೆರಾ ಕಾರಿನ ಬೆಲೆ ಎಷ್ಟು? 11 ಸಾವಿರಕ್ಕೆ ಅನ್ಅಫೀಶಿಯಲ್ ಬುಕಿಂಗ್ ಆರಂಭ , ಜನ ಕಾರು ಬುಕಿಂಗ್ ಮಾಡಲು ಮುಗಿ ಬೀಳುತ್ತಿದ್ದಾರೆ. ಇದರ ಫೀಚರ್, ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತೆ ಜೊತೆಗೆ ಇದರ ಬೆಲೆ ಪ್ರಮುಖ ಆಕರ್ಷಕಣೆಯಾಗಿದೆ.
04:17 PM (IST) Nov 17
Mehbooba Mufti controversial statement: ದೆಹಲಿ ಕಾರ್ ಬಾಂಬ್ ಸ್ಫೋಟಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಜೆಕೆಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
03:46 PM (IST) Nov 17
ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾಗೆ ನಕಲಿ ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ತಲಾ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2017ರ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದ ಮಗನಿಗೆ ನಕಲಿ ಜನನ ಪ್ರಮಾಣಪತ್ರದ ಆಧಾರದ ಮೇಲೆ ಪ್ಯಾನ್ ಕಾರ್ಡ್ ಪಡೆದ ಆರೋಪ ಸಾಬೀತಾಗಿದೆ.
03:27 PM (IST) Nov 17
18ನೇ ಐಪಿಎಲ್ನಲ್ಲಿನ ನೀರಸ ಪ್ರದರ್ಶನದ ನಂತರ, ರಾಜಸ್ಥಾನ ರಾಯಲ್ಸ್ 2026ರ ಟೂರ್ನಿಗೆ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ ಬಳಿಕ, ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ಅವರನ್ನು ತಂಡದ ಹೊಸ ಹೆಡ್ಕೋಚ್ ಆಗಿ ನೇಮಿಸಲಾಗಿದೆ.
03:13 PM (IST) Nov 17
ಹೂಡಿಕೆ ವೇದಿಕೆ ಗ್ರೋವ್ನ ಸಹ-ಸಂಸ್ಥಾಪಕ ಲಲಿತ್ ಕೇಶ್ರೆ, ಕಂಪನಿಯ ಷೇರು ಮಾರುಕಟ್ಟೆ ಯಶಸ್ಸಿನ ನಂತರ ಬಿಲಿಯನೇರ್ ಕ್ಲಬ್ ಸೇರಿದ್ದಾರೆ. ಮಧ್ಯಪ್ರದೇಶದ ರೈತನ ಮಗನಾಗಿ, ಐಐಟಿ ಬಾಂಬೆಯಲ್ಲಿ ಓದಿ, ಫ್ಲಿಪ್ಕಾರ್ಟ್ನಲ್ಲಿ ಕೆಲಸ ಮಾಡಿ, ನಂತರ ಗ್ರೋವ್ ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ.
02:38 PM (IST) Nov 17
ಬಾಂಗ್ಲಾದೇಶದ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರು ಹಲವರ ಸಾವಿಗೆ ಕಾರಣವಾದ ವಿದ್ಯಾರ್ಥಿ ದಂಗೆ ಪ್ರಕರಣದಲ್ಲಿ ದೋಷಿ ಎಂದು ಅಲ್ಲಿನ ಢಾಕಾದ ವಿಶೇಷ ನ್ಯಾಯ ಮಂಡಳಿಯೂ ಘೋಷಿಸಿದ್ದು, ಮರಣದಂಡನೆ ಶಿಕ್ಷೆ ಘೋಷಿಸಿದೆ.
01:09 PM (IST) Nov 17
01:01 PM (IST) Nov 17
12:57 PM (IST) Nov 17
street food vendor income: ಇಲ್ಲೊಬ್ಬರು ಬೀದಿ ಬದಿ ಮೊಮೊ ಮಾರುವ ಯುವಕನೋರ್ವ ದಿನಕ್ಕೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ. ವೀಡಿಯೋ ನೋಡಿದವರು ಅವರ ಆದಾಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
11:57 AM (IST) Nov 17
Groom killed bride: ಮದುವೆಗೆ ಕೆಲವೇ ಗಂಟೆಗಳ ಮೊದಲು ಸೀರೆ ಮತ್ತು ಹಣದ ವಿಚಾರಕ್ಕೆ ನಡೆದ ಜಗಳದಲ್ಲಿ ವರನೇ ವಧುವನ್ನು ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ. ಒಂದೂವರೆ ವರ್ಷಗಳಿಂದ ಲಿವಿಂಗ್ ಟುಗೆದರ್ನಲ್ಲಿದ್ದ ಈ ಜೋಡಿಯ ಮದುವೆ ನಿಗದಿಯಾಗಿತ್ತು, ಆದರೆ ಜಗಳ ವಿಕೋಪಕ್ಕೆ ತಿರುಗಿ ಈ ದುರಂತ ಸಂಭವಿಸಿದೆ.
11:22 AM (IST) Nov 17
Gold And Silver Price Down: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತವಾಗಿ ಕುಸಿತ ಕಂಡುಬಂದಿದೆ. ಈ ಲೇಖನವು ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ನಿಖರ ದರ ಹಾಗೂ ಬೆಳ್ಳಿ ಬೆಲೆಯ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
11:08 AM (IST) Nov 17
ಸೌದಿ ಅರೇಬಿಯಾದಲ್ಲಿ ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಭಾರತೀಯ ಉಮ್ರಾ ಯಾತ್ರಿಕರ ಬಸ್, ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಹೈದರಾಬಾದ್ ಮೂಲದ 46ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.